Wednesday, November 17, 2010

ಆಶಾ ಭಾವ

ಸೋಲು ಗೆಲುವು ಸಹಜ ಬಾಳು
ನೋವು ನಲಿವು ಅದರ ಬಿಂಬ
ಮಾವು ಬೇವು ಸಮನೆ ಮೇಳೆ
ತಾನೆ ಸವಿಯ ನಿಜದ ಸ್ವಾದ

ಬದುಕು ಬರೀ ಹೂವ ಹಾಸಿಗೆಯೆ?
ಹಲವು ಮುಳ್ಳ ಕಠಿಣ ಹಾದಿ
ಭರವಸೆಗಳೇ ನಾಳಿನಾಸರೆ
ಸಾವಿರ ಸಿರಿಗನಸುಗಳಿಗೆ ನಾಂದಿ

ಶಿಶಿರದಲಿ ಎಲೆಯುದುರಿಸಿಯೂ ಗಿಡ
ಚಿಗುರದೇ ಮತ್ತೆ ವಸಂತದಲಿ?
ಸಾವಿರದಲೆಗಳ ಎದುರಿಸಿಯೂ ದಡ
ನಿಲ್ಲದೇ ನಿಶ್ಚಲ ಛಲದಲ್ಲಿ?

ನಿನ್ನೆಗಳಾ ಕಹಿ ಇಂದಿಗೇ ಮರೆತು
ಬೆಳಕ ದಾರಿಯನು ಹುಡುಕಬೇಕು
ಕಹಿನೆನಪಿಗೆ ಸಿಹಿಲೇಪವ ಬೆರೆಸಿ
ಕತ್ತಲೆಯ ಮೀರಲಿ ಬದುಕು

8 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
ಚೆಂದ ಕವನ, ಇಷ್ಟ ಆತು, ಬರೀತಿರು.

sunaath said...

ಭಲೆ, ಮಧು! ಬಾಳಿಗೆ ಭರವಸೆ ನೀಡುವ ಚೇತೋಹಾರಿ ಕವನವನ್ನು ಸರಳವಾದ ಸಾಲುಗಳಲ್ಲಿ ಮೂಡಿಸಿದ್ದೀರಿ. ತುಂಬ ಇಷ್ಟವಾಯ್ತು.

ತೇಜಸ್ವಿನಿ ಹೆಗಡೆ said...

Madhu,

Simple and sweet poem :)

ಮನಸಿನ ಮಾತುಗಳು said...

Nice one.. :-)

ಮನಮುಕ್ತಾ said...

ಚೆ೦ದದ ಸಾಲುಗಳು..
keep writing..

Unknown said...

ಶಾಂತಲಕ್ಕ, ಕಾಕಾ, ತೇಜಕ್ಕಾ, ದಿವ್ಯಾ,ಮನಮುಕ್ತಾ,

ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

ವಾಣಿಶ್ರೀ ಭಟ್ said...

nice...

nanna blogigomme banni

Kavery said...

nice lines....