<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6035880729059442700</id><updated>2012-02-02T00:18:05.325-08:00</updated><title type='text'>ಮಧುವನ</title><subtitle type='html'>ನೆನಪುಗಳ ವನದಲ್ಲಿ ಸಂಚರಿಸುವಾಗ ಕಂಡ ಸುಂದರ ದೃಶ್ಯಕಾವ್ಯಗಳನ್ನು ದಾಖಲಿಸುವ ಪ್ರಯತ್ನವೇ ಈ ಮಧುವನ.</subtitle><link rel='http://schemas.google.com/g/2005#feed' type='application/atom+xml' href='http://madhu-vana.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6035880729059442700/posts/default?max-results=100'/><link rel='alternate' type='text/html' href='http://madhu-vana.blogspot.com/'/><link rel='hub' href='http://pubsubhubbub.appspot.com/'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><generator version='7.00' uri='http://www.blogger.com'>Blogger</generator><openSearch:totalResults>33</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6035880729059442700.post-8582092499707964438</id><published>2011-12-20T21:52:00.000-08:00</published><updated>2011-12-20T22:00:42.431-08:00</updated><title type='text'>ಬದಲಾವಣೆ</title><content type='html'>ಬದಲಿಸಬೇಕಂತೆ ಹಳೆಯ ಬಚ್ಚಲಮನೆಯ&lt;br /&gt;ಜಾರೋ ಕಲ್ಲು,ಮಸಿಹಿಡಿದ ಗೋಡೆ&lt;br /&gt;ಕಿರ್ರೆನುವ ಬಾಗಿಲು,ಸುರಿವ ಸೂರು&lt;br /&gt;ಒಂದೇ ಎರಡೇ,ನಡೆದೀತು ಎಷ್ಟು ದಿನ? ಒಂದೇ ವರಾತ&lt;br /&gt;&lt;br /&gt;ನೋಡಿ ಆ ಹಂಡೆ,ಓಬೀರಾಯನ ಕಾಲದ್ದು&lt;br /&gt;ಛೇ! ಒಂಚೂರೂ ಪ್ರಜ್ಞೆಯಿಲ್ಲ ನಿಮಗೆ&lt;br /&gt;ಕರೆಂಟು ದೀಪವಿಲ್ಲ, ಬಟ್ಟೆಗೆ ಜಾಗವಿಲ್ಲ&lt;br /&gt;ಕಿವಿ ಮೇಲೆ ಬಿದ್ದೀತೆ ನನ್ನ ಗೊಣಗಾಟ? ಹೇಳಿ ಪ್ರಯೋಜನವಿಲ್ಲ&lt;br /&gt;&lt;br /&gt;ನೋಡಿದ್ದೀರಾ ಅವರ ಮನೆಯ ಬಾಥ್ರೂಮು?&lt;br /&gt;ಥಳಥಳಿಸುವ ಟೈಲ್ಸುಗಳು, ದಂತದ ಹೊಳಪಿನಬೇಸಿನ್ನು,&lt;br /&gt;ಝಗಮಗಿಸುವ ಲೈಟುಗಳು! ಗೊತ್ತೆ&lt;br /&gt;ಈಗೆಲ್ಲ ಅವನ್ನು ನೋಡಿಯೇ ಅಳೆಯುತ್ತಾರೆ ನಿಮ್ಮ ರಸಿಕತೆಯ&lt;br /&gt;&lt;br /&gt;ತೆಗೆಯಿರಿ ಈ ಪ್ಲಾಸ್ಟಿಕ್ ನಲ್ಲಿ, ಬರೀ ತಣ್ಣೀರು ಇದರಲ್ಲಿ&lt;br /&gt;ಅದರ ಪೈಪು ಬೇರೆ, ನೋಡಿ ಗೋಡೆಯೆಲ್ಲ ಹಾಳು&lt;br /&gt;ನೋಡಿಲ್ಲವೇ ಹೊಸ ಜಾಗ್ವಾರು,ಹಿಂಡ್ವೇರು?&lt;br /&gt;ಎಡಕ್ಕೆ ಬಿಸಿನೀರು, ಮೇಲೆ ಶವರ್ರು,ಇದ್ದೇ ಇದೆಯಲ್ಲ ತಣ್ಣೀರು&lt;br /&gt;&lt;br /&gt;ನಿಜ, ಬದಲಾಗಿವೆ ನಮ್ಮ ದೃಷ್ಟಿ, ಸೌಂದರ್ಯ ಪ್ರಜ್ಞೆ&lt;br /&gt;ಹಳೆಯದೆ? ಛೀ! ಕಿತ್ತು ಬೀಸಾಕಿ ನಿರ್ದಾಕ್ಷಿಣ್ಯವಾಗಿ&lt;br /&gt;ಮನೆ ತುಂಬಿಸಿಕೊಳ್ಳಿ ಹೊಚ್ಚ ಹೊಸದರ ಹೊಳಪ&lt;br /&gt;ದುಡಿಯುವುದೆಲ್ಲ ಉಳಿಸಲೇ? ಭ್ರಾಂತು ನಿಮಗೆ, ರಾಜನಂತೆ ಬದುಕಿ&lt;br /&gt;&lt;br /&gt;ಹೊಸದೆಂದ ಮಾತ್ರಕೆ ಬೇರೆಯಾಗಬಹುದೇ ಅನುಭೂತಿ&lt;br /&gt;ಬದಲಾದೀತೆ ನೀರಿನ ಬಿಸಿ, ಹೊಗೆಯ ಹಸಿ?&lt;br /&gt;ಬೇಕೆಂದಾಗ ನವೀಕರಿಸಬಹುದು ಹಳೆಯದನೆಲ್ಲ&lt;br /&gt;ಅನ್ನುವರಿಗೆಲ್ಲ ಒಂದೇ ಪ್ರಶ್ನೆ, ಹೊಸತಾಗಿಸ ಬಲ್ಲಿರೇ ಹಳೆಯ ನೆನಪ?&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-8582092499707964438?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/8582092499707964438/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=8582092499707964438' title='4 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/8582092499707964438'/><link rel='self' type='application/atom+xml' href='http://www.blogger.com/feeds/6035880729059442700/posts/default/8582092499707964438'/><link rel='alternate' type='text/html' href='http://madhu-vana.blogspot.com/2011/12/blog-post.html' title='ಬದಲಾವಣೆ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>4</thr:total></entry><entry><id>tag:blogger.com,1999:blog-6035880729059442700.post-5683160836418847793</id><published>2011-05-09T22:41:00.000-07:00</published><updated>2011-05-09T23:59:37.654-07:00</updated><title type='text'>ಮೊದಲ ಪುಟಕು ಕೊನೆಯ ಪುಟಕೂ</title><content type='html'>&lt;div align="justify"&gt;ಸಾಲಾಗಿ ಅರಳಿ ನಿಂತ ಗುಲ್ ಮೊಹರ್ ಮರಗಳ ಎಡೆಯಲ್ಲಿ, ಮುಳುಗುತ್ತಿರುವ ಸೂರ್ಯ ಆಗಾಗ ಇಣುಕಿ ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಹೇಗೆ ಶುರು ಮಾಡುವುದೆಂದೇ ತಿಳಿಯದೆ ಇಬ್ಬರೂ ಬರೀ ನೆಲ ನೋಡುತ್ತ ನಡೆಯುತ್ತ ಹಾದಿ ಸವೆಸಿದ್ದೆವು. ಮದುವೆ ನಿಶ್ಚಯವಾದ ಮೇಲೆ ಮೊದಲನೇ ಬಾರಿ ಹೊರಗೆ ಭೇಟಿಯಾಗಿದ್ದು ಇವತ್ತು. ಒಂದಿಷ್ಟು ತವಕ, ಉತ್ಸಾಹ, ಉಲ್ಲಾಸ ಎಲ್ಲ ಸೇರಿ ವಾತಾವರಣದ ಬಿಸಿ ಏರಿಸಿದ್ದವು. ಅದರ ಸೂಚನೆ ಹಿಡಿದುಕೊಂಡೇ, ಗಾಳಿ ತಂಪಾಗಿ ಬೀಸುತ್ತಿದೆಯೇನೋ ಎಂದೆನಿಸಲು ಶುರುವಾಗಿತ್ತು. ಮೊದಲು ಮಾತಾಡಿದ್ದೇ ಅವಳು. "ಹೇಗಿದೆ ನನ್ನ ಡ್ರೆಸ್?" ನನ್ನ ಕಣ್ಣುಗಳನ್ನೇ ದಿಟ್ಟಿಸಿ ಕೇಳಿದ ಪ್ರಶ್ನೆಗೆ ನಾನು ತುಸು ಅವಾಕ್ಕಾಗಿದ್ದು ನಿಜ. "ಚೆನ್ನಾಗಿದೆ" ಎಂದಷ್ಟೇ ಉತ್ತರಿಸಲು ಸಾಧ್ಯವಾಗಿದ್ದು. ಮುಂದೆ ಮಾತಾಡಿದ್ದೆಲ್ಲ ಅವಳೇ ಜಾಸ್ತಿ. ಹೊಟೆಲ್ಲಿನಲ್ಲಿ ಊಟಕ್ಕೆ ಕುಳಿತಾಗಲೂ ಅಷ್ಟೇ. ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿದ್ದ ಅವಳ ಮುಖಚರ್ಯೆ, ಯಾವುದನ್ನೋ ವಿವರಿಸುವಾಗ ಕೈ ಬೆರಳುಗಳನ್ನೆಲ್ಲ ತಿರುಗಿಸುವ ರೀತಿ, ಗಾಳಿಗೆ ಮುನ್ನುಗ್ಗಿ ಬರುತ್ತಿದ ಮುಂಗುರುಳುಗಳನ್ನೆಲ್ಲ ಹಿಂದೊತ್ತಿ ಸಿಕ್ಕಿಸುವ ಪರಿ, ಎಲ್ಲ ನೋಡುತ್ತ ನಾನು ಕಳೆದೇ ಹೋಗಿದ್ದೆ. ಮಧುರವಾದ ಅನುಭೂತಿಯೊಂದದ ಗುಂಗಿನೊಳಗೆ ಸಿಕ್ಕು ಮನಸ್ಸು, ತೇಲಿ ತೇಲಿ ಹೋಗಿತ್ತು.&lt;br /&gt;- ಸುಹಾಸ್, ಜನವರಿ ೧೯&lt;br /&gt;&lt;br /&gt;ಹನ್ನೊಂದನೇ "ಬಿ" ಕ್ರಾಸ್ ಇನ್ನೂ ದಾಟಿರಲಿಲ್ಲ, ಶುರುವಾಗಿತ್ತು ಮುಸಲಧಾರೆ. ಹೃದಯದೊಳಗೆ ಹೇಳದೇ ಕೇಳದೇ ಶುರುವಾಗುವ ಪ್ರೀತಿಯಂತೆಯೇ, ಒಂದಿನಿತೂ ಸೂಚನೆ ಕೊಡದೇ. ಕೈಯಲ್ಲಿದ್ದಿದ್ದು ಒಂದೇ ಕೊಡೆ. ಮಳೆಹನಿಗಳು ಸಂಪೂರ್ಣವಾಗಿ ತೋಯಿಸುವ ಮುಂಚೆ ಇಬ್ಬರೂ ಅದರೊಳಗೆ ತೂರಿಕೊಂಡಿದ್ದಾಗಿತ್ತು. ಸುಮ್ಮನೆ ಅವಳ ಕಣ್ಣುಗಳನ್ನೊಮ್ಮೆ ನೋಡಿದ್ದೆ, ಧೈರ್ಯ ಮಾಡಿ. ಅವುಗಳಲ್ಲಿ ಪ್ರತಿಫಲಿಸುತ್ತಿದ್ದುದು ನಾಚಿಕೆಯೋ, ಆತಂಕವೋ ಥಟ್ಟನೆ ಗುರುತಿಸಲಾಗಿರಲಿಲ್ಲ. ಕಾಲುಗಳು ಮನಸ್ಸಿನೊಳಗೆ ಬೇಯುತ್ತಿರುವ ತುಮುಲಗಳನ್ನು ಲಕ್ಷಿಸದೇ, ತಮ್ಮಷ್ಟಕ್ಕೆ ಅವರ ಕೆಲಸ ಮುಂದುವರಿಸಿದ್ದವು. ಅನಿರೀಕ್ಷಿತವಾಗಿ ಒದಗಿ ಬಂದ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಗಲಿಬಿಲಿಗೊಂಡಿದ್ದೆ. ಅವಳ ಮೈಯ್ಯ ಘಮ, ಮೊದಲ ಮಳೆ ಹೊತ್ತು ತಂದ ಮಣ್ಣ ಸುವಾಸನೆಯ ಜೊತೆ ಬೆರೆತು ಅನಿರ್ವಚನೀಯವಾದ ವಾತಾವರಣವೊಂದನ್ನು ಸೃಷ್ಟಿ ಮಾಡಿತ್ತು. ನಡೆವಾಗಲೊಮ್ಮೆ ಅವಳ ಕಿರುಬೆರಳ ತುದಿ ನನ್ನ ಕೈಯನ್ನೊಮ್ಮೆ ಸವರಿರಬೇಕು. ಮೈಯಲ್ಲೊಮ್ಮೆ ಮಿಂಚಿನ ಸಂಚಾರ!. ಅಂಥ ಮಳೆಯ ಛಳಿಯಲ್ಲೂ ಬೆವೆತುಹೋಗಿದ್ದೆ. ಸಾವರಿಸಿಕೊಳ್ಳಲು ಹಲವು ಕ್ಷಣಗಳೇ ಬೇಕಾಗಿದ್ದವು. ನನ್ನಲ್ಲಾದ ಭಾವೋದ್ವೇಗದ ಅರಿವು ಅವಳಿಗೂ ಗೊತ್ತಾಗಿರಬೇಕು. ಪುಟ್ಟದ್ದೊಂದು ತುಂಟ ನಗು ತುಟಿಯಂಚಲ್ಲಿ ಅರಳಿ ಮರೆಯಾಗಿದ್ದು, ಕೇವಲ ನನ್ನ ಭ್ರಮೆಯಾಗಿರಲಿಕ್ಕಿಲ್ಲ!. ಎಂಟು ಹತ್ತು ಹೆಜ್ಜೆ ಹಾಕುವುದರಲ್ಲಿ ಅವಳ ಮನೆ ಮುಟ್ಟಾಗಿತ್ತು. ಆದರೆ ಆ ಕ್ಷಣಗಳಲ್ಲಿ ಅನುಭವಿಸಿದ ರೋಮಾಂಚನವನ್ನು ಶಬ್ದಗಳಲ್ಲಿ ಹಿಡಿದಿಡಲು ಕಲ್ಪನಾಶಕ್ತಿ ಸಾಕಾಗಲಿಕ್ಕಿಲ್ಲ. ದೇವಲೋಕದ ಅಪ್ಸರೆಯೊಬ್ಬಳು ಇಹವ ಮರೆಸಿ ನಂದನವನದ ಸಂಚಾರ ಮಾಡಿಸಿದಂತೆ, ಜಡವ ತೊಡೆದು ಉಲ್ಲಾಸದ ಹೊಳೆ ಹರಿಸುವ ಅಮೃತ ಸಿಂಚನದಂತೆ. ಬಾಗಿಲ ತೆರೆದು, ಕೈ ಬೀಸಿ ಒಳಗೆ ನಡೆದವಳ ತುಂಬುಗಣ್ಣುಗಳಲ್ಲಿ ಸಂತಸದ ಹೊಳಹು ದಟ್ಟವಾಗಿ ಹೊಳೆಯುತ್ತಿತ್ತು.&lt;br /&gt;- ಸುಹಾಸ್, ಫೆಬ್ರುವರಿ ೨೭&lt;br /&gt;&lt;br /&gt;ಪ್ರೀತಿಯ ಕೋಮಲ ಬಾಹುಗಳಲ್ಲಿ ಸಿಲುಕಿಕೊಂಡವರಿಗೆ ಜಗತ್ತೆಲ್ಲ ಸುಂದರವಾಗಿ ಕಾಣುತ್ತದೆಂಬ ಸಂಗತಿ ಸುಳ್ಳಲ್ಲ. ಹೂವು ಅರಳುವ ಸೊಬಗು, ಹಕ್ಕಿ ಹಾಡುವ ಹಾಡು, ಹರಿವ ನದಿಯ ಸದ್ದು, ಇರುಳ ಬೆಳಗುವ ತಾರೆ, ಎಲ್ಲ ಪ್ರೀತಿಯ ಚಿರ ನೂತನತೆಯನ್ನು ಸಂಕೇತಿಸುವಂತೆ ಭಾಸವಾಗುತ್ತವೆ. ವೀಣೆಯ ತಂತಿಯನ್ನು ಮೀಟಲು ಬೆರಳುಗಳು ಹವಣಿಸುತ್ತವೆ, ಅರಿವಿಲ್ಲದೆಯೇ ಕೊರಳು ಹೊಸಹಾಡಿಗೆ ದನಿಯಾಗುತ್ತದೆ. ಕಣ್ಸನ್ನೆಗಳು ಹೊಸ ಭಾಷೆ ಕಲಿಸುತ್ತವೆ, ಕವಿತೆಗಳು ಹೊಸ ಅರ್ಥ ಹೊಳೆಯಿಸುತ್ತವೆ. ಮಾತುಗಳು ಮೆದುವಾಗುತ್ತವೆ, ಮೌನ ಎಂದಿಗಿಂತ ಹೆಚ್ಚು ಸುಂದರವೆನ್ನಿಸುತ್ತದೆ. ಅಮೃತವಾಹಿನಿಯಂತೆ ಮಾನವನ ಎದೆಯಿಂದ ಎದೆಗೆ ಸದಾ ಹರಿಯುತಿರುವ ಈ ಭಾವಕೆ ಬೇರೆ ಮಿಗಿಲುಂಟೇ? ಗೆಳತಿಯ ಸಿಹಿಮಾತಿಗಾಗಿ ಕಾತುರವಾಗಿ ಕಾಯುವ ಕ್ಷಣಗಳಲ್ಲಿ ಅನುಭವಿಸುವ ಚಡಪಡಿಕೆಗಳಿಗೆ, ನಗುವ ಹಂಚಿಕೊಂಡು ಜಗವ ಮರೆತ ಕ್ಷಣಗಳಿಗೆ ಬೆಲೆ ಕಟ್ಟಲು ಸಾಧ್ಯವಾದೀತೆ?&lt;br /&gt;- ಸುಹಾಸ್, ಮಾರ್ಚ್ ೮&lt;br /&gt;&lt;br /&gt;"ಒಲವು ದೇವರ ಹೆಸರು, ಚೆಲುವು ಹೂವಿನ ಬದುಕು". ಚೆಲುವ, ಒಲವ ಬಾಳು ನಿಮ್ಮದಾಗಲಿ, ಹಾರೈಸಿದರು ಹಿರಿಯರೊಬ್ಬರು. ಎಂಥ ಸುಂದರ ಆಶೀರ್ವಾದ!. ಹೇಳಿಕೊಳ್ಳಲಾಗದಷ್ಟು ಹಿಗ್ಗು ಎದೆಯ ಕಣಕಣದಲ್ಲೂ. ಬಾಳಿನ ಹೊಸ ಘಟ್ಟವೊಂದನ್ನು ಪ್ರವೇಶಿಸಿದ ಸಂಭ್ರಮ, ಹೊಸದಾದ ಜವಾಬ್ದಾರಿಯೊಂದ ನಿಭಾಯಿಸುವ ವಾಗ್ದಾನ, ಪರಸ್ಪರ ನಂಬಿಕೆಯ ಮೇಲೆ ಸುಖದ ಸೌಧ ಕಟ್ಟುವ ಭರವಸೆ ಎಲ್ಲ ಮಿಳಿತವಾಗಿ ಹಿತವಾದ ರಸಾನುಭೂತಿಯನ್ನು ಕಟ್ಟಿಕೊಟ್ಟಿದ್ದವು. ಎಷ್ಟೆಲ್ಲ ಹಿರಿಯರ, ಬಂಧುಗಳ, ಆಪ್ತರ ಸಂತಸದಲ್ಲಿ ಒಳಗೊಂಡು, ಅವರೆಲ್ಲರ ಶುಭ ಹಾರೈಕೆಗಳಿಗೆ ಧನ್ಯರಾದೆವು!. "ಸವಿತಾ-ಸುಹಾಸ್" ಒಳ್ಳೇ ಜೋಡಿ, ಅನುರೂಪವಾಗಿ ಬಾಳಿ. ಎಲ್ಲರೂ ಆಶೀರ್ವದಿಸಿದ್ದರು. ವೈದಿಕರ ವೇದ ಘೋಷಗಳು ಕಿವಿಯಲ್ಲಿ ಇನ್ನೂ ಗುನುಗುಣಿಸುತ್ತಲೇ ಇದ್ದಂತಿದೆ. ಹೋಮದ ಹೊಗೆಯ ಉರಿ ಕಣ್ಣಲ್ಲೇ ಸಿಕ್ಕಿಹಾಕಿಕೊಂಡಂತಿದೆ. ಧಾರೆ ಎರೆಯುವ ಹೊತ್ತಲ್ಲಿ, ಬೊಗಸೆಯಲ್ಲಿ ಅವಳ ಕೈಯನ್ನು ತುಂಬಿಕೊಂಡಾಗ, ಕೈ ನಡುಗಿದ್ದು ನೆನೆದರೆ ಈಗಲೂ ಮೈ ಝುಂ ಎನ್ನುತ್ತದೆ. ಕೊರಳಿಗೆ ಅರಿಸಿಣದ ದಾರ ಕಟ್ಟುವಾಗ, ನನ್ನ ಕೈಯ ಬಿಸುಪು ಅವಳಿಗೆ ರೋಮಾಂಚನ ತಂದಿರಬಹುದೆಂಬ ತುಂಟ ಊಹೆ ತುಟಿಯಂಚಲಿ ಕಿರುನಗೆಯೊಂದನ್ನು ಮೂಡಿಸುತ್ತದೆ. ಮುಂದೆಲ್ಲೋ ಬದುಕ ದಾರಿಯಲ್ಲಿ ನಿಂತು ಹಿಂತಿರುಗಿ ನೋಡಿದಾಗ, ಈ ದಿನ ಉಜ್ವಲವಾಗಿ ಹೊಳೆದು ಮನಕೆ ಸಂತಸವೀಯುವುದರಲ್ಲಿ ಸಂದೇಹವೇ ಇಲ್ಲ.&lt;br /&gt;- ಸುಹಾಸ್, ಮಾರ್ಚ್ ೨೯&lt;br /&gt;&lt;br /&gt;"ವಯಸ್ಸಿಗೆ ಮೀರಿದ ಪ್ರೌಢತೆಯಿದೆ" ಅಂದುಕೊಂಡಿದ್ದು ಇವಳಿಗೇನಾ? ಪುಟ್ಟ ಮಕ್ಕಳಾದರೂ ಇಷ್ಟೊಂದು ಹಠಮಾಡಲಿಕ್ಕಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ಯಾಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಾಳೆ? ಪದೇ ಪದೇ, "ನನ್ನನ್ನು ನೀವು ನಿಜವಾಗಿ ಪ್ರೀತಿಸುತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ" ಎಂಬ ಮೂದಲಿಕೆ ಬೇರೆ. ಇವಳಿಗೆ ನಿಜವಾಗಿ ಇದ್ದದ್ದು ಕೀಳರಿಮೆಯೋ, ಅಥವಾ ವಿಪರೀತ ಅಭದ್ರತೆಯೋ ಕಾಣೆ. ಯಾವುದು ಪ್ರೀತಿ, ಯಾವುದು ನಿಜವಾದ ಕಾಳಜಿ, ಯಾವುದು ಗದರುವಿಕೆ ಎಂದೇ ಗೊತ್ತಾಗದಷ್ಟು ಮುಗ್ಧಳೇ ಹಾಗಾದರೆ? ಯಾರ ಎದಿರು ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಪರಿಜ್ಞಾನವೂ ಇರುವ ಹಾಗೆ ಕಾಣುತ್ತಿಲ್ಲ. ಇವತ್ತು ಅಪರೂಪಕ್ಕೆ ಮನೆಗೆ ಬಂದ ಅತಿಥಿಗಳ ಎದುರು, ಯಾವುದೋ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು, ಹೇಗೆ ಊಟದ ಬಟ್ಟಲನೆಸೆದು ಹೋದಳಲ್ಲ, ಎಷ್ಟು ಕೆಟ್ಟದೆನಿಸಿತ್ತು. ತಲೆ ಮೇಲೆ ಎತ್ತಲಾಗದಷ್ಟು ಅವಮಾನ. ಅವರೆಲ್ಲ ಏನು ಅಂದುಕೊಂಡಿರಬಹುದು. ಮೊನ್ನೆ ಕಾರಲ್ಲಿ ಹೋಗುತ್ತಿರುವಾಗ ಯಾವುದೋ ಅಂಗಡಿಯಲ್ಲಿ ಪ್ರದರ್ಶನಕ್ಕಿದ್ದ ಸೀರೆ ಬೇಕೇ ಬೇಕು ಎಂದೆಲ್ಲ ರಂಪ ಮಾಡಿ, ನಡು ಬೀದಿಯಲ್ಲಿ ಕಾರನ್ನು ನಿಲ್ಲಿಸುವಂತೆ ಮಾಡಿದ್ದನ್ನು ಮರೆಯಲಾದೀತೆ? ಅಥವಾ "ನೀವು ಬೇಕೆಂದೇ ಆಫೀಸಿನಿಂದ ತಡ ಮಾಡಿ ಬರುತ್ತಿದ್ದೀರಿ" ಎಂದು ಮುನಿಸಿಕೊಂಡು ಊಟ ಬಿಟ್ಟ ದಿನಗಳ ಲೆಕ್ಕ ಇಡಲಾದೀತೆ?. ಕೆಲವೊಮ್ಮೆ ನಾನು ಕೊಟ್ಟ ಸಲಿಗೆಯೇ ಜಾಸ್ತಿ ಆಗಿರಬೇಕೆಂದೆನಿಸಲು ಶುರುವಾಗಿಬಿಡುತ್ತದೆ. ಇಲ್ಲ, ಇನ್ನೂ ಚಿಕ್ಕ ವಯಸ್ಸು, ವಾತಾವರಣ ಹೊಸದು. ಸ್ವಲ್ಪ ಸಮಯ ಬೇಕು ಅವಳಿಗೂ, ಅಂದೆನಿಸಿ ಹೇಗೋ ಮರೆಯಲು ಪ್ರಯತ್ನಿಸುತ್ತೇನೆ.&lt;br /&gt;- ಸುಹಾಸ್, ಮೇ ೧೬&lt;br /&gt;&lt;br /&gt;ಪ್ರೀತಿಯಿಲ್ಲದವರ ಜೊತೆ ಹೇಗೋ ಬಾಳಬಹುದು, ನಂಬಿಕೆಯಿಲ್ಲದವರ ಮಧ್ಯೆ ಬದುಕುವುದು ಹೇಗೆ? ನಂಬಿಕೆ, ವಿಶ್ವಾಸಗಳ ತಳಹದಿಯ ಮೇಲೆ ನಿಲ್ಲ ಬೇಕಾದ ಸಂಬಂಧ, ಅಪನಂಬಿಕೆಯ ಅವಕೃಪೆಗೆ ತುತ್ತಾದರೆ ಬೆಳೆಯುವುದು ಹೇಗೆ? ಮನುಷ್ಯರು ಇಷ್ಟು ಬೇಗ ಬದಲಾಗಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ನೋಡಿದೊಡನೆಯೇ ಸಂಭ್ರಮ ಸುರಿಸುತ್ತಿದ್ದ ಕಣ್ಣುಗಳು ಈಗ ಅನುಮಾನದ ನೋಟದ ಮೊನೆಯಿಂದ ಇರಿಯುತಿವೆ. ಕಾಳಜಿ ತೋರುತ್ತಿದ್ದ ಮಾತುಗಳು, ಶುದ್ಧ ಕೃತಕವೆಂದೆನಿಸಲು ಶುರುವಾಗಿದೆ. ರೋಮಾಂಚನ ತರಿಸುತ್ತಿದ್ದ ಅಪ್ಪುಗೆಗಳಲ್ಲಿನ ಬಿಸುಪು, ತೀರ ಉಸಿರುಕಟ್ಟಿಸಲು ಶುರುವಾಗಿದೆ. ತಾನು ಹೇಳಿದ್ದನ್ನೇ ಸಾಧಿಸಬೇಕೆಂಬ ಹಠಮಾರಿತನ, ವಿವೇಚನೆಯಿಲ್ಲದೆ ಮಾಡುವ ಜಗಳಗಳು, ವಸ್ತುಗಳ ಮೇಲಿನ ಅತಿಯಾದ ವ್ಯಾಮೋಹ, ನನ್ನನ್ನು ತೀರ ಹತಾಶೆಗೆ ದೂಡಿ ಬಿಟ್ಟಿವೆ. ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ನಿದ್ದೆ ಮಾಡಿದಂತೆ ನಟಿಸುವವರನ್ನು ಎಬ್ಬಿಸಲಾದೀತೆ? ನಾನು ನೋಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವವರನ್ನು ದಾರಿಗೆ ತರಲಾದೀತೆ? ಮಾತೆತ್ತಿದರೆ, "ನಾನಿರುವುದೇ ಹೀಗೆ, ಏನು ಬೇಕಾದರೂ ಮಾಡಿಕೊಳ್ಳಿ" ಎಂದು ಸಿಟ್ಟು ಮಾಡಿಕೊಳ್ಳುವವರಿಗೆ, ಹೊಂದಾಣಿಕೆಯ ಪ್ರಥಮ ಪಾಠಗಳನ್ನು ಹೇಳಿಕೊಡುವವರಾರು? ದಾಂಪತ್ಯದಲ್ಲಿ, ಸೋತೇ ಒಬ್ಬರನೊಬ್ಬರು ಗೆಲ್ಲಬೇಕೆಂಬ ಅಲಿಖಿತ ನಿಯಮವೊಂದಿದೆ ಅನ್ನುವುದರ ಅರಿವು ಸಹಜವಾಗಿಯೇ ಬರಬೇಕೇ ವಿನಹ ಯಾರೂ ಹೇಳಿಕೊಡುವದರಿಂದಲ್ಲ. ಅಲ್ಲವೇ?&lt;br /&gt;- ಸುಹಾಸ್, ಆಗಸ್ಟ್ ೧೬&lt;br /&gt;&lt;br /&gt;"ರಸವೇ ಜನನ, ವಿರಸ ಮರಣ, ಸಮರಸವೇ ಜೀವನ" ಅನ್ನುತ್ತದೆ ಕವಿವಾಣಿ. ಸಮರಸ ಸಾಧಿಸಲು ಮೂಲವಾಗಿ ಬೇಕಾದ್ದ ನಂಬಿಕೆಯನ್ನೇ ಕಳೆದುಕೊಂಡ ಮೇಲೆ ಸಂಬಂಧವನ್ನು ಉಳಿಸಿಕೊಂಡು ಹೋಗುವುದರಲ್ಲಿ ಯಾವ ಅರ್ಥವಿದೆ? "ಹೊಂದಾಣಿಕೆ ಹೆಣ್ಣಿಗೇಕೆ ಮಾತ್ರ ಅನಿವಾರ್ಯ?" ಎಂದು ಪದೇ ಪದೇ ವಾದಿಸಿ ಪ್ರತಿರೋಧಿಸುತ್ತಿದ್ದ ಅವಳ ಮನಸ್ಸಿನಲ್ಲಿ ಇರುವುದಾದರೂ ಏನು ಅನ್ನುವುದನ್ನು ಅರಿಯಲು ಯತ್ನಿಸಿ ಸೋತುಹೋಗಿದ್ದೇನೆ. "ಹೊಂದಾಣಿಕೆ ಬರೀ ಹೆಣ್ಣಿಗೊಂದೇ ಅನಿವಾರ್ಯವಲ್ಲ. ಹೆಣ್ಣು ಗಂಡುಗಳಿಗಿಬ್ಬರಿಗೂ. ನಿನ್ನ ಸಂತೋಷಕ್ಕಾಗಿ ಈಗ ನಾನು ಎಷ್ಟೊಂದು ಬದಲಾಗಿದ್ದೇನೆ ನೋಡು" ಎಂಬ ಮಾತು ಅವಳ ಕಿವಿಯ ಮೇಲೇ ಬೀಳುತಿಲ್ಲ. "ಮಧುರವಾದ ಸಂಬಂಧದ ಸೌಧ ಕೇವಲ ಸ್ವಚ್ಚಂದ ಪ್ರೇಮದ ಬುನಾದಿಯೊಂದರಿಂದಲೇ ಕಟ್ಟಲು ಬರುವುದಿಲ್ಲ, ವಿಶ್ವಾಸ ನಂಬಿಕೆಗಳೆಂಬ ಗಟ್ಟಿ ಗೋಡೆಗಳೂ, ಸಣ್ಣ ಪುಟ್ಟ ತ್ಯಾಗಗಳೆಂಬ ಕಿಟಕಿಗಳೂ, ಬಂಧು ಬಳಗದವರೆಲ್ಲ ಜೊತೆ ನಗುತ ಬಾಳುವ ವಿಶಾಲ ಹೃದಯದ ಹೆಬ್ಬಾಗಿಲು, ಇವಿಲ್ಲದೇ ಹೋದರೆ ಎಂಥ ಮನೆಯೂ ಸುಭದ್ರವಲ್ಲ" ಎಂದೆಲ್ಲ ತಿಳಿಸಲು ಹೋಗಿ ವಿಫಲನಾಗಿದ್ದೇನೆ. ತಿಳುವಳಿಕೆಯ ಮಾತು ಹೇಳಲು ಯತ್ನಿಸಿದಾಗಲೆಲ್ಲ, ತಾಳ್ಮೆ ಕಳೆದುಕೊಂಡು ಕೂಗಿ ರಂಪವೆಬ್ಬಿಸುವ ಪರಿಗೆ ಹತಾಶನಾಗಿ ಕೈ ಚೆಲ್ಲಿದ್ದೇನೆ. ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ನನ್ನ ಮೇಲೆ ಹೊರಿಸುತ್ತಿದ್ದ ವಿಚಿತ್ರ ಆರೋಪಗಳನ್ನೆಲ್ಲ ತುಟಿ ಮುಚ್ಚಿ ಸಹಿಸಿದ್ದೇನೆ. ನನ್ನ ತಾಳ್ಮೆಯ ಕಟ್ಟೆ ಎಲ್ಲಿ ಒಡೆದುಹೋಗುತ್ತದೆಯೋ ಎಂದು ಹೆದರಿ ಕಿವಿ ಮುಚ್ಚಿಕೊಂಡ ಸಂದರ್ಭಗಳೂ ಇಲ್ಲದಿಲ್ಲ. ಮದುವೆಗೆ ಮುಂಚೆ ಕಟ್ಟಿದ್ದ ಕನಸುಗಳು, ಪ್ರೀತಿಯ ಭಾವಗಳು, ಕಣ್ಣೆದುರು ಬಂದು ಅಣಕಿಸುತ್ತ ವಿಚಿತ್ರ ತಳಮಳ, ಸಂಕಟವನ್ನು ತರಿಸುತ್ತಿವೆ. ನನ್ನೆಲ್ಲ ಪ್ರೀತಿ ವಿಶ್ವಾಸಗಳಿಗೆ ಅವಳು ಅರ್ಹಳಿರಲಿಲ್ಲವೇ, ಎಂಬ ಭಾವನೆ ಮನಸ್ಸನ್ನು ಕೊರೆದು ಘಾಸಿಮಾಡುತಿದೆ. ಹೃದಯದಲ್ಲಿ ಸುಡುತ್ತಿರುವ ದುಃಖದ ಬೇಗೆಗಳು ನನ್ನನ್ನು ಯಾವ ಮನೋಸ್ಥಿತಿಗೆ ದೂಡಿಬಿಡುತ್ತೇವೆಯೋ ಎಂಬ ಆತಂಕದಲ್ಲೇ ಬದುಕುತ್ತಿದ್ದೇನೆ.&lt;br /&gt;- ಸುಹಾಸ್, ಅಕ್ಟೋಬರ್ ೧೧&lt;br /&gt;&lt;br /&gt;ವಿಪರೀತ ಗಾಳಿ, ಮಳೆ! ದೀಪವನ್ನೂ ಹಾಕದೆ ಹಾಗೇ, ಕತ್ತಲಲ್ಲಿ ಶೂನ್ಯ ದಿಟ್ಟಿಸುತ್ತ ಕುಳಿತಿದ್ದೇನೆ. ಮಳೆಗೆ ಮಧುರ ನೆನಪ ಹೊತ್ತು ತರುವ ಜೊತೆಗೆ, ಯಾತನೆಯ ದುಃಖವನ್ನೂ ಜಾಸ್ತಿ ಮಾಡುವ ಸಾಮರ್ಥ್ಯವಿದೆಯೆಂಬುದು ಇವತ್ತೇ ಗೊತ್ತಾಗಿದ್ದು. ಉಬ್ಬರದಲ್ಲಿ ತೇಲಿ ತೇಲಿ ಬಂದು ದಡಕ್ಕಪ್ಪಳಿಸುವ ತೆರೆಗಳಂತೆ, ನೆನಪುಗಳು ಬೇಡವಂದರೂ ಮನಸ್ಸಿಗೆ ಬಂದು ಬಂದು ಅಪ್ಪಳಿಸುತ್ತಿವೆ. ಕಳೆದುದ್ದೆಲ್ಲವೂ ಕೆಟ್ಟ ಸ್ವಪ್ನದಂತೆ ಭಾವಿಸಿ ಮರೆತುಬಿಡಬೇಕೆಂಬ ಅದಮ್ಯ ಆಸೆ ಮನದಲ್ಲಿ ಹುಟ್ಟುತ್ತಿದೆಯಾದರೂ, ಹೃದಯ ಅದನ್ನು ಪ್ರತಿರೋಧಿಸುತ್ತಿದೆ. ಎಷ್ಟೆಲ್ಲ ದಿನ ಕಾಯ್ದಿದ್ದೆ? ಇಲ್ಲ, ಈಗ ಸರಿಹೋಗಬಹುದು, ಈಗ ಸರಿ ಹೋಗಬಹುದು, ಮತ್ತೆ ಹಿಂದಿನ ದಿನಗಳು ಮರಳಬಹುದು ಎಂದೆಲ್ಲ. ಎಲ್ಲ ಆಸೆಗಳು ಹುಸಿಯಾದವು! ಒಂದು ಮಾತನ್ನಾಡದೆಯೇ, ಎಲ್ಲವನ್ನೂ ಧಿಕ್ಕರಿಸಿ ನಡೆದುಬಿಟ್ಟಳಲ್ಲ! "ಮುಚ್ಚಿದ ಬಾಗಿಲ ಮುಂದೆ ನಿಂತು ಕಾದಿದ್ದು" ನನ್ನದೇ ಮೂರ್ಖತನವಿರಬೇಕು. ಅವಳ ಹುಂಬ ಧೈರ್ಯದ ನಿರ್ಧಾರಕ್ಕೂ, ಹುಚ್ಚು ಕೋಪದ ಆವೇಷಕ್ಕೂ , ಇವೆಲ್ಲ ಉಂಟು ಮಾಡಬಹುದಾದ ಪರಿಣಾಮಗಳ ಕಲ್ಪನೆ ಇರಲು ಖಂಡಿತ ಸಾಧ್ಯವಿಲ್ಲ. ಇರಲಿ. ಯಾವತ್ತೋ, ಯೌವ್ವನದ ಬಿಸಿಯೆಲ್ಲ ಆರಿದ ಮೇಲೆ ವಾಸ್ತವದ ಕಟುಸತ್ಯ ಅವಳನ್ನು ಕಾಡಬಹುದು. ಕಳೆದುಹೋದ ಪ್ರೀತಿಯ ಜಾಡನ್ನು ನೆನೆದು, ಅವಳೂ ಕೊರಗಬಹುದು.&lt;br /&gt;&lt;br /&gt;ಮನಸ ಕಲ್ಲಾಗಿಸಬೇಕು ಈಗ. ಅವಳನ್ನು ಪ್ರೀತಿಸದಷ್ಟೇ ತೀವ್ರವಾಗಿ,ಮರೆಯಬೇಕು. ಉತ್ಕಟವಾಗಿ ಅನುಭವಿಸಿದ್ದ ಪ್ರೀತಿ, ಕಣ್ಣ ತುಂಬಿಕೊಂಡ ಕನಸುಗಳು, ಬಣ್ಣ ಬಣ್ಣದ ಸಂಭ್ರಮಗಳು, ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಬತ್ತಲಾಗಬೇಕು. ಮರಳಿ ಬದುಕ ಕಟ್ಟಬೇಕು, ಕನಸ ಹಂಬಲಿಸಬೇಕು. ಬತ್ತಿ ಹೋದ ಕಣ್ಣುಗಳಲ್ಲಿ ಹೊಸ ಆಸೆಯ ದೀಪವನ್ನು ಮತ್ತೆ ಹಚ್ಚಬೇಕು, ಘಾಸಿಗೊಂಡ ಹೃದಯಕ್ಕೆ ಮತ್ತೆ ಜೀವನಪ್ರೀತಿಯ ಅಮೃತವೆರೆಯಬೇಕು.&lt;br /&gt;&lt;br /&gt;ಮಳೆ ನಿಂತಿರಬೇಕು ಹೊರಗೆ. ಒಂದೆರಡು ಸಣ್ಣ ಮಳೆಹನಿಗಳು ಸುರಿದು ಹೋದ ಮಳೆಯನ್ನು ಇನ್ನೂ ಜೀವಂತವಿಡುವ ವ್ಯರ್ಥ ಪ್ರಯತ್ನ ನಡೆಸಿದ್ದವು. ನಿಧಾನವಾಗಿ ಎದ್ದು ದೀಪ ಹಾಕಿದೆ. ಝಗ್ಗನೆ ಬೆಳಕು ಬೆಳಗಿ, ಕತ್ತಲೆಯನ್ನೆಲ್ಲ ಹೊರದೋಡಿಸಿತು.&lt;br /&gt;- ಸುಹಾಸ್, ಡಿಸೆಂಬರ್ ೨೩&lt;br /&gt;&lt;br /&gt;&lt;br /&gt;ಬರಹಕ್ಕೆ ಸುಂದರ ಶೀರ್ಷಿಕೆಯೊಂದನ್ನು ಸೂಚಿಸಿದ &lt;span&gt;&lt;a href="http://manasa-hegde.blogspot.com/"&gt;ಮಾನಸ&lt;/a&gt;ದೊಡತಿಗೆ&lt;/span&gt; ಧನ್ಯವಾದಗಳು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-5683160836418847793?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/5683160836418847793/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=5683160836418847793' title='12 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/5683160836418847793'/><link rel='self' type='application/atom+xml' href='http://www.blogger.com/feeds/6035880729059442700/posts/default/5683160836418847793'/><link rel='alternate' type='text/html' href='http://madhu-vana.blogspot.com/2011/05/blog-post.html' title='ಮೊದಲ ಪುಟಕು ಕೊನೆಯ ಪುಟಕೂ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>12</thr:total></entry><entry><id>tag:blogger.com,1999:blog-6035880729059442700.post-6748048069238145009</id><published>2011-03-25T23:50:00.000-07:00</published><updated>2011-03-26T03:44:32.386-07:00</updated><title type='text'>ಕೌಳಿ ಹಣ್ಣು</title><content type='html'>&lt;div align="justify"&gt;ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹೋಗೋದಿಕ್ಕೆ ಪ್ಲಾನ್ ಮಾಡ್ತಾ ಇದ್ದಾರೆ. ಬಸ್ಸು ಟ್ರೈನ್ ಗಳಲ್ಲಿ ಅಷ್ಟು ಸುಲಭವಾಗಿ ಟಿಕೆಟ್ ಸಿಕ್ತಾ ಇಲ್ಲ. ಸೆಖೆ ಜಾಸ್ತಿಯಾಗಿ, ರಾತ್ರಿಗಳಲ್ಲಿ ಫ್ಯಾನ್ ಇಲ್ದೆ ನಿದ್ರೆ ಬರ್ತಾ ಇಲ್ಲ. "ರಾತ್ರಿಯಲ್ಲಿ ಹೋಗೋದಿಲ್ಲ, ಹಗಲಲ್ಲಿ ಕೊಡೋದಿಲ್ಲ, ಏನು ಹೇಳಿ ನೋಡೋಣ?" ಅಂತ ಶೋಭಕ್ಕ ಆಗ್ಲೇ ಒಗಟು ಕೇಳ್ತಾ ಇದ್ದಾಳೆ. ಒಟ್ಟಿನಲ್ಲಿ ಈ ಸಲದ ಬೇಸಿಗೆ, ಕ್ರಿಕೆಟ್ ವರ್ಡ್ ಕಪ್ ಗಿಂತಲೂ ರೋಚಕವಾಗುವುದರಲ್ಲಿ ನನಗೇನೂ ಅನುಮಾನ ಕಾಣ್ತಾ ಇಲ್ಲ.&lt;br /&gt;&lt;br /&gt;ಕಾಲಗಳನ್ನೆಲ್ಲ ತಕ್ಕಡಿಲಿಟ್ಟು ತೂಗಿದರೆ ಬೇಸಿಗೆಗಾಲದ ವ್ಯಾಲ್ಯೂನೇ ಜಾಸ್ತಿ ಅನ್ನುವುದು ನನ್ನ ಅನಿಸಿಕೆ. ಮಕ್ಕಳಿಗೆ ರಜೆ ಸೀಸನ್, ತಿರುಗೋವ್ರಿಗೆ ಮದುವೆ, ನೆಂಟರ ಮನೆ ಸೀಸನ್, ಬಾಯಲ್ಲಿ ನೀರೂರಿಸಲು ಮಾವಿನ ಹಣ್ಣಿನ ಸೀಸನ್, ನೋಡಿ ಹೀಗೆ ಸಾಲಾಗಿ ಪಟ್ಟಿ ಮಾಡ್ತಾ ಹೋಗಬಹುದು. ಉಳಿದ ಕಾಲಗಳಿಗಿಂತ ಜಾಸ್ತಿ "ಹ್ಯಾಪನಿಂಗ್" ಕಾಲ ಅಂದ್ರೆ ಬೇಸಿಗೆನೇ. ಮಳೆಗಾಲದಲ್ಲಿ ಕೆಲಸ ಒಂದೂ ಆಗಲ್ಲ. ಛಳಿಗಾಲದಲ್ಲಿ ಬೆಳಿಗ್ಗೆನೇ ಬೇಗ ಆಗಲ್ಲ. ಹಾಗಾಗಿ ನಾವು ಜಾಸ್ತಿ ಚಟುವಟಿಕೆಯಿಂದ ಇರುವ ಕಾಲ ಕೂಡ ಬೇಸಿಗೆಗಾಲವೇ. ಬಯಲುಸೀಮೆ ಜನ ಸ್ವಲ್ಪ ನನ್ನ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಬಹುದೇನೋ, ಆದರೆ ಕರಾವಳಿ, ಅರೆಮಲೆನಾಡು, ಮಲೆನಾಡು ಜನ ಅಂತೂ ತಲೆ ಹಾಕೇ ಹಾಕ್ತಾರೆ ಅನ್ನೋ ಭರವಸೆ ನನಗಿದೆ.&lt;br /&gt;&lt;br /&gt;ಬೇಸಿಗೆ ರಜೆಲಿ (ಈಗಿನ ಕಾಲದ ಸಮ್ಮರ್ ವೆಕೇಷನ್ನು!) ಏನ್ ಮಾಡ್ತೀರಿ ಅಂಥ ನೀವು ನಿಮ್ಮ ಪರಿಚಯದ ಯಾವುದೋ ಮಕ್ಕಳನ್ನು ಕೇಳೇ ಕೇಳಿರ್ತೀರಿ ಅಂತ ನನಗೆ ಗೊತ್ತು. ಅದಕ್ಕೆ ನಿಮಗೆ ತರೇವಾರಿ ಉತ್ತರಗಳು ಸಿಕ್ಕಿರಬಹುದು. ಊರಿಗೆ ಹೋಗ್ತೀನಿ ಅಂತಲೋ, ಸ್ವಿಮ್ಮಿಂಗ್ ಕ್ಲಾಸ್ ಗೆ ಹೋಗ್ತೀನಿ ಅಂತಲೋ ಇಲ್ಲ ಸಮ್ಮರ್ ಕ್ಯಾಂಪ್ ಗೆ ಹೋಗ್ತೀನಿ ಅಂತಲೋ ಇಷ್ಟೇ. ವಿಪರ್ಯಾಸ ಅಂದರೆ ನಾವು ಚಿಕ್ಕವರಿದ್ದಾಗ ಇಂಥ ಪ್ರಶ್ನೆಗಳನ್ನೆಲ್ಲ ಯಾರೂ ಜಾಸ್ತಿ ಕೇಳ್ತಿರಲಿಲ್ಲ. ಅಕಸ್ಮಾತ್ ಯಾರಾದ್ರೂ ಬಾಯಿ ತಪ್ಪಿ ಕೇಳಿದ್ರೆ ನಾವು ಅತ್ಯಂತ ಸೀರಿಯಸ್ಸಾಗಿ "ಈ ಸಲ ಚಂದ್ರಣ್ಣನ ಮನೆ ಬ್ಯಾಣದಲ್ಲಿ ರಾಶಿ ಸಂಪಿಗೆ ಹಣ್ಣು ಆಜು. ನೋಡವು" ಎಂದೋ, ಅಥವಾ "ಕೆರೆ ಏರಿ ಮೇಲೆ ಇದ್ದಲಾ, ಪುನ್ನೇರಲ ಗಿಡಾ, ಹೋದ ವರ್ಷ ಬರೀ ಎರಡು ಹೆಣೀಗೆ ಕಾಯಿ ಬಿಟ್ಟಿತ್ತು. ಈ ಸಲ ಭರ್ತಿ ಬಿಡ ಲಕ್ಷಣ ಇದ್ದು" ಎಂದೋ, ಅಥವಾ "ಗೇರು ಪೀಕ ನೋಡಿದ್ಯ ಈ ಸಲ? ಚೊಲೋ ಬಂಜು. ಹಿಂದಿನ ಬೆಟ್ಟದಲ್ಲಿ ಕೆಂಪು, ಹಳದಿ ಎರಡೂ ನಮ್ನಿ ಹಣ್ಣು ಬಂಜು. ಸುಮಾರು ಕೇ.ಜಿ ಗೇರ್ ಬೀಜಾ ಒಟ್ಟು ಮಾಡ್ಲಕ್ಕು ಈ ಸಲ" ಅಂತೆಲ್ಲಾ ಹೇಳಿ ನಮ್ಮ ಮಹದೋದ್ದೇಶಗಳ ಚಿಕ್ಕ ಪರಿಚಯವನ್ನು ಸಾದರ ಪಡಿಸುತ್ತಿದ್ದೆವು. ಪ್ರಶ್ನೆ ಕೇಳಿದವರು ನಮ್ಮ ಉತ್ತರವನ್ನು ಒಂದೋ ಮೆಚ್ಚಿ "ಜೋರಲೋ ಮಾರಾಯಾ" ಎಂದು ಬೆನ್ನು ತಟ್ಟುತ್ತಿದ್ದರು ಇಲ್ಲಾ "ಯಾಕಾದ್ರೂ ಕೇಳಿದೀನಪ್ಪಾ" ಎಂಬಂಥ ಮುಖ ಮಾಡಿ ತೆಪ್ಪಗಿರುತ್ತಿದ್ದರು.&lt;br /&gt;&lt;br /&gt;ಬಿಸಿಲಲ್ಲಿ ಅಡ್ಡಾಡುವುದು ಬಹುಷಃ ಎಲ್ಲ ಕಾಲದಲ್ಲೂ ಮಕ್ಕಳಿಗೆ ಅತ್ಯಂತ ಪ್ರಿಯವಾದ ಕೆಲಸವೇನೋ. "ಎಂಥಾ ಬಿಸಿಲಲ್ಲಿ ತಿರಗ್ತ್ರಾ ಹುಡಗ್ರಾ, ಸುಮ್ನೆ ಮನೆಲ್ಲಿ ಇರಿ" ಅನ್ನೋ ಶಬ್ದ ಕಿವಿ ಮೇಲೆ ಬಿದ್ದರೆ ಸಾಕು ನಾವೆಲ್ಲ ಕುನ್ನಿಮರಿ ತರ ರಬ್ಬಿಕೊಂಡು, ಅಲ್ಲೇ ನುಸುಳಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದೆವೇ ಹೊರತು ಮನೆಯೊಳಗೆ ಮಾತ್ರ ಸುತಾರಾಂ ಹೋಗುತ್ತಿರಲಿಲ್ಲ. ಬೆಟ್ಟ,ಗುಡ್ಡ,ತೋಟ, ಹೊಳೆ ಇವೆಲ್ಲ ವರುಷಾನುಗಟ್ಟಲೆಯಿಂದ ನಮ್ಮ ದಿವ್ಯ ಸಾನಿಧ್ಯವನ್ನೇ ಬರಕಾಯುತ್ತಿರುವಂತೆ ಅನಿಸಿ ನಾವು ಅವುಗಳ ಮಡಿಲಲ್ಲಿ ಪುನೀತವಾಗುತ್ತಿದ್ದೆವು. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಹೊರಬಿದ್ದ ನಾವು ಗೊತ್ತು ಗುರಿಯಿಲ್ಲದೇ ತಿರುಗಿ ತಿರುಗಿ ಊರೆಲ್ಲ ಗಸ್ತು ಹೊಡೆದು ಇನ್ನೇನು ಕತ್ತಲಾಗಿ ಏನೂ ಕಾಣದಂಥ ಅನಿವಾರ್ಯತೆ ಉಂಟಾದಾಗ ಮಾತ್ರ ಮನೆಗೆ ತಿರುಗಿ ಬರುತ್ತಿದ್ದೆವು. ಅಷ್ಟರಲ್ಲಿ ಏನೇನು ಮಾಡಿದೆವು ಅನ್ನುವುದನ್ನು ಬರೆಯಲು ಹೊರಟರೆ ಬಹುಷಃ ಯುಡಿಯೂರಪ್ಪನವರು ಇಲ್ಲಿಯವರೆಗೆ ಭೇಟಿಕೊಟ್ಟ(ದೇಣಿಗೆ ಕೊಟ್ಟ) ದೇವಸ್ಥಾನಗಳ ಪಟ್ಟಿಗಿಂತ ಜಾಸ್ತಿಯಾಗುವುದರಿಂದ(?) ಬರೆಯುವ ಸಾಹಸ ಮಾಡುತ್ತಿಲ್ಲ,ಕ್ಷಮಿಸಿ.&lt;br /&gt;&lt;br /&gt;ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲ ಅಂದ ತಕ್ಷಣ ಅತ್ಯಂತ ಪ್ರಿಯವಾದದ್ದನ್ನು ಬರೆಯದಿರಲು ಸಾಧ್ಯವಿಲ್ಲವಲ್ಲ? ಬರೆದೇ ತೀರಬೇಕು. ನಮ್ಮನೆಯಿಂದ ಕೂಗಳತೆ ದೂರದಲ್ಲಿರುವ ಡಾಮರು ರಸ್ತೆಗೆ ತಾಗಿಗೊಂಡು ಸಾಲಾಗಿ ಬೆಳೆದ ಕೌಳಿ ಗಿಡಗಳ ಹಿಂಡು ನಮಗೆಲ್ಲ ಅತ್ಯಂತ ಪ್ರಿಯವಾದದ್ದು. ವಡಗೇರೆ ಶಂಕ್ರಣ್ಣನ ಮನೆಯಿಂದ ಶುರುವಾದದ್ದು ಹೀಪನಳ್ಳಿ ಕತ್ರಿ ಕಳೆದು ಮೆಣಸಿನಕೇರಿ ಕತ್ರಿ ದಾಟಿ ಹೆಗಡೆಕಟ್ಟೆ ಕ್ರಾಸ್ ನ ತನಕವೂ ಅವ್ಯಾಹತವಾಗಿ ರೋಡ್ ನ ಎರಡೂ ಬದಿ ಬೆಳೆದುನಿಂತಿದ್ದವು. ವರ್ಷದ ಬಹಳಷ್ಟು ಕಾಲ ಅವು ಕೇವಲ ಮುಳ್ಳಿನ ಬೇಲಿ ತರಹದ "ಮಟ್ಟಿ"ಗಳು ಅಷ್ಟೇ. ಇನ್ನೇನು ಮಾರ್ಚ ಶುರುವಾಗಬೇಕು, ಚಿಕ್ಕ ಚಿಕ್ಕ ಬಿಳಿ ಹೂವುಗಳನ್ನು ತಳೆದು, ದಾರಿಯುದ್ದಕ್ಕೂ ಹಸಿರು ಬಿಳಿ ಬಣ್ಣದ ಚಾದರವನ್ನು ಹೊದ್ದು ಹೋಗಿ ಬರುವ ಪ್ರಯಾಣಿಕರನ್ನು ಸ್ವಾಗತಿಸುವಂತೆ ತೋರುತ್ತಿದ್ದವು. ಕೌಳಿ ಒಂದು ತರಹದ ಮುಳ್ಳಿನ ಗಿಡ ಅಂತಲೇ ಹೇಳಬಹುದು. ಅಷ್ಟೇನೂ ಎತ್ತರಕ್ಕೆ ಬೆಳೆಯದೇ ಒಂದು ತರಹದ ಪೊದೆಯ ತರ ಹರಡಿಕೊಂಡು ಇರುತ್ತವೆ. ಅದರ ಮುಳ್ಳು ಅತ್ಯಂತ ಚೂಪಾಗಿದ್ದು ಚುಚ್ಚಿದರೆ ದಿನಗಟ್ಟಲೇ ನೋವು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಅದರ ಕಾಯಿ ಅತೀ ಹುಳಿಯಾಗಿದ್ದು(ತಿಂದರೆ ಮುಖ ಸಿಂಡರಿಸುವಷ್ಟು), ಹಣ್ಣು ಸಿಹಿ ಮಿಶ್ರಿತ ಹುಳಿ ಹೊಂದಿರುತ್ತದೆ. ಕೌಳಿಕಾಯಿ ಉಪ್ಪಿನಕಾಯಿ ಅತ್ಯಂತ ಜನಪ್ರಿಯವಾಗಿದ್ದು, ಬಹಳ ಜನರ ಪ್ರಶಂಸೆಗೂ ಪಾತ್ರವಾಗಿದೆ.&lt;br /&gt;&lt;br /&gt;ಮಾರ್ಚ ಮುಗಿದು ಎಪ್ರಿಲ್ ಶುರುವಾಗುತ್ತ ಇದ್ದಂತೆ ಹಸಿರು ಬಿಳಿ ಕಾಯಿಗಳು ಕಂದು ಬಣ್ಣಕ್ಕೆ ತಿರುಗಿ ನಿಧಾನಕ್ಕೆ ಹಣ್ಣಾಗಲು ಶುರುವಾಗುತ್ತದೆ. ನಮ್ಮ ಹದ್ದಿನ ಕಣ್ಣು ಅವೆಲ್ಲನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತವೆ ಎಂದು ಮತ್ತೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲಲ್ಲಿ ಸೈಕಲ್ ಸವಾರರು, ಕಾರಲ್ಲಿ ಹೋಗುವವರು ತಮ್ಮ ವಾಹನವನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ರೋಡಿಗೆ ಸ್ವಲ್ಪ ಎತ್ತರದಲ್ಲಿರುವ ದಿಬ್ಬವನ್ನು ಹತ್ತಿ ಏನನ್ನೋ ಹುಡುಕುತ್ತಿರುವುದು ಈ ಸಮಯದಲ್ಲಿ ಸರ್ವೇ ಸಾಮಾನ್ಯ. ಎಷ್ಟು ಜನರು ಬಂದರೂ, ನಮಗೇನೂ ಆತಂಕವಾಗುವುದಿಲ್ಲ. ಏಕೆಂದರೆ ಆಯಕಟ್ಟಿನ ಜಾಗಗಳೆಲ್ಲ ನಮಗೆ ಗೊತ್ತಿರುತ್ತಲ್ಲ! ಅವರೆಲ್ಲ ಎಷ್ಟೇ ತಿಣುಕಾಡಿದರೂ ನಮಗೆ ಗೊತ್ತಿರುವಷ್ಟು ಒಳ್ಳೆಯ ಹಣ್ಣು ಸಿಗುವುದಿಲ್ಲ. ಅನೇಕ ವರ್ಷಗಳ ಅನುಭವದಿಂದ ಗಳಿಸಿಕೊಂಡ "ಸ್ಕಿಲ್" ಅದು.&lt;br /&gt;&lt;br /&gt;ಯಾವುದೋ ಒಂದು ಶುಭ ಮುಹೂರ್ತವನ್ನು ನಿರ್ಧರಿಸಿಕೊಂಡ ನಂತರ ನಾವು ಒಂದೆರಡು ಪ್ಲಾಸ್ಟಿಕ್ ಕೊಟ್ಟೆಗಳನ್ನು ಹಿಡಿದು ಅನುವಾಗುತ್ತಿದ್ದೆವು. ಎಲ್ಲ ಗಿಡಗಳ ಮೇಲೂ ಮುಗಿ ಬೀಳುತ್ತಿರಲ್ಲಿಲ್ಲ. ಮೊದಲೇ ನಿರ್ಧರಿಸಿಕೊಂಡ, ಉಳಿದವರಿಗ್ಯಾರಿಗೂ ಸುಲಭವಾಗಿ ಭೇದಿಸಲಾಗದ ಪೊದೆಗಳ ಮೇಲೆ ಮಾತ್ರ ನಮ್ಮ ಕಣ್ಣು. ಕಷ್ಟದ ಹಾದಿಯ ತುದಿಗೆ ಸಂತೋಷವಿದೆ ಎನ್ನುವುದು ಇವತ್ತಿಗೂ ಸತ್ಯವೇ ಅಲ್ಲವೆ? ಮಾಮೂಲಿ ಹಣ್ಣುಗಳ ಥರ ಮರ ಹತ್ತೋ, ಉದ್ದನೆಯ ಕೋಲು ಉಪಯೋಗಿಸೋ ಕೊಯ್ಯಬಹುದಾದ ಹಣ್ಣು ಇದು ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಮೇಲೆ ನನಗೆ ಸಂಪೂರ್ಣ ಸಹಾನುಭೂತಿಯಿದೆ. ಏಕೆಂದರೆ ಮೊದಲೇ ಹೇಳಿದಂತೆ ಗಿಡವೆಲ್ಲ ಮುಳ್ಳು ಮಯ. ಒಂಥರಾ ಪೊದೆ ಪೊದೆಗಳ ತರ ಗಿಡ ಬೇರೆ. ಮೇಲಿನಿಂದ ನೋಡಿದರೆ ಹಣ್ಣುಗಳು ಸುಲಭವಾಗಿ ಕೈಗೆಟುಕುವಂತೆ ಕಾಣುತ್ತವೆ. ಸರಿಯಾದ ವಿಧಾನವಿಲ್ಲದೇ ಕೊಯ್ಯಲು ಹೋದಿರೋ, ಎರಡು ದಿನ ನೀವು ನೋವು ಶನಿ ಅನುಭವಿಸುವುದು ನಿಶ್ಚಿತ. ಮೊದಲು ಗಿಡವನ್ನು ಅಥವಾ ಪೊದೆಯನ್ನು ನಿಧಾನವಾಗಿ ಅವಲೋಕಿಸಬೇಕು. ಗುರಿಯನ್ನು ತಲುಪಲು ಯಾವ ವಿಧಾನವನ್ನು ಅನುಸರಿಸಬೇಕೆಂಬುದರ ಸರಿಯಾದ ಉಪಾಯ ನಿಮ್ಮಲ್ಲಿರಬೇಕು. ಪೊದೆಯ ಮುಂದಿನ ಭಾಗದಿಂದಲೋ, ಹಿಂದಿನಿಂದಲೋ, ಅಥವಾ ಬದಿಯಿಂದಲೋ ನುಗ್ಗುವುದು ನಿಶ್ಚಯವಾದ ಮೇಲೆ, ನಿಧಾನಕ್ಕೆ ಮುಳ್ಳುಗಳ ಚಕ್ರವ್ಯೂಹವನ್ನು ಭೇದಿಸಬೇಕು. ಇದು ಧಾಳಿಯ ಅತ್ಯಂತ ಮಹತ್ವದ ಘಟ್ಟ. ಇಲ್ಲಿ ನಮಗೆ ಅಥವಾ ನಮ್ಮ ಸೈನ್ಯಕ್ಕೆ ಸ್ವಲ್ಪ ನೋವು, ಹಿನ್ನಡೆ ನಿಶ್ಚಿತ. ಆದರೂ ಕುಗ್ಗದೇ, ಮುನ್ನುಗ್ಗಬೇಕು. ಚಕ್ರವ್ಯೂಹ ಭೇದಿಸಿದರೆ ನಿಮಗೆ ಒಂದು ಆಯಕಟ್ಟಿನ ಜಾಗ ಸಿಗುವುದು ಗ್ಯಾರಂಟಿ. ಇಲ್ಲಿ ಸ್ವಲ್ಪ ವಿಶ್ರಮಿಸಿ, ನಮ್ಮ ಸ್ಟ್ರಾಟಜಿ ಯನ್ನು ಪುನರ್ ಅವಲೋಕಿಸಬಹುದು. ಮುಂದಿನ ನಡೆ ಸ್ವಲ್ಪ ನಿಧಾನಕ್ಕೆ ಸಾಗುತ್ತದೆ. ಮಿಲಿಟರಿ ಸೈನ್ಯದ ತರ ನಿಧಾನಕ್ಕೆ ಗುರಿಯತ್ತ ತೆವಳಿ, ಅಕ್ಕ ಪಕ್ಕದ ಮುಳ್ಳುಗಳನ್ನು ಗಮನಿಸುತ್ತಾ,ನಿಧಾನಕ್ಕೆ ಎದ್ದು, ಅದೆಲ್ಲೋ ಎರಡು ಹೆಣೆಗಳ ನಡುವೆ ಅಡಗಿಕೊಂಡು ಕೂತಿದ್ದ ಕಪ್ಪನೆಯ ಮಿರಿಮಿರಿ ಮಿಂಚುವ ಹಣ್ಣನ್ನು ಕೊಯ್ದು, ಯಾವ ವೇಗದಲ್ಲಿ ನಿಮ್ಮ ಕೈಯನ್ನು ತೂರಿದ್ದೀರೊ, ಅದೇ ವೇಗದಲ್ಲಿ ಹಿಂತೆಗೆದುಕೊಂಡು, ಇನ್ನೊಂದು ಕೈಯ್ಯಲ್ಲಿರುವ ಪ್ಲಾಸ್ಟಿಕ್ ಕೊಟ್ಟೆಯೊಳಗೆ ಹಣ್ಣನ್ನು ಸೇರಿಸಿದರೆ ಗೆದ್ದಂತೆ. ಇಂಥ ಹಲವಾರು ನಡೆಗಳ ಬಳಿಕ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಲವಾರು ಹಣ್ಣುಗಳು ನಗುತ್ತ ಕುಳಿತಿರುತ್ತವೆ (ಅದರ ಎರಡರಷ್ಟು ನಮ್ಮ ಹೊಟ್ಟೆಯೊಳಗೆ ಆಗಲೇ ಸೇರಿರುತ್ತವೆ, ಆ ಮಾತು ಬೇರೆ). ಧಾಳಿ ಯಶಸ್ವಿಯಾಗಿ ಮುಗಿದ ಮೇಲೆ ಮತ್ತೊಮ್ಮೆ ಚಕ್ರವ್ಯೂಹ ಭೇದಿಸಿ ಹೊರಬಂದರೆ ನಿರಾಳ. ಒಂದು ಸಾರ್ತಿ ಮೈ ಕೈಗಾದ ತರಚು, ಕಾಲಿನ ಮುಳ್ಳು ಇವನ್ನೆಲ್ಲ ಪರಿಶೀಲಿಸಿ, ಸ್ವಲ್ಪ ವಿಶ್ರಮಿಸಿ, ಇಷ್ಟೆಲ್ಲ ಪರಿಶ್ರಮ ಪಟ್ಟಿದ್ದು ನಿಜಕ್ಕೂ ಸಾರ್ಥಕ ಎಂದು ನಮ್ಮನ್ನೇ ನಂಬಿಸಲು ಮತ್ತೆರಡು ಹಣ್ಣನ್ನು ಬಾಯಿಗೆಸೆದು ಚಪ್ಪರಿಸುತ್ತಾ ಸೈನ್ಯ ಮುಂದೆ ಸಾಗುತ್ತದೆ. ಈಗ ಹೇಳಿ, ಯಾವ ಮಿಲಿಟರಿ ಕಾರ್ಯಾಚರಣೆಗಿಂತ ಭಿನ್ನ ನಮ್ಮ ಪರಾಕ್ರಮ?&lt;br /&gt;&lt;br /&gt;ಎಂಥಾ ಹುಚ್ಚು? ಆ ಹುಳಿ ಹುಳಿ ಹಣ್ಣನ್ನು ತಿನ್ನಲು ಇಷ್ಟೊಂದು ಪರಿಶ್ರಮವೇ? ಎಂದು ನೀವು ಆಶ್ಚರ್ಯ ಪಡಬಹುದು (ಮನೆಯಲ್ಲಿ ನಮ್ಮ ಹಿರಿಯರ ಅಭಿಪ್ರಾಯ ಇದಕ್ಕಿಂತ ತೀರ ಭಿನ್ನವೇನೂ ಇರುತ್ತಿರಲಿಲ್ಲ ಎನ್ನುವುದು ವಿಪರ್ಯಾಸ). ಕೈ ಕೆಸರಾದರೆ ಬಾಯಿ ಮೊಸರು ಎಂದು ಹಿರಿಯರು ಹೇಳಿಲ್ಲವೇ?. ಹಾಂ ಮರೆತಿದ್ದೆ, ಕೌಳಿ ಕಾಯಿ ಅಥವಾ ಹಣ್ಣುಗಳನ್ನು ಕೊಯ್ದಾಗ ಅವುಗಳ ತೊಟ್ಟಲ್ಲಿ ಬಿಳಿ ಬಣ್ಣದ ಹಾಲೊಂದು ಒಸರುತ್ತದೆ. ನಮ್ಮ ಕಾರ್ಯಾಚರಣೆ ಮುಗಿದಾಗ ನಮ್ಮ ಕೈಯೆಲ್ಲ ಆ ಅಂಟಿನಿಂದ ಸಂಪೂರ್ಣ ಕೆಸರಾಗಿ ಅದನ್ನು ತೆಗೆಯಲು ನಾವು ಒಂದರ್ಧ ಎಣ್ಣೆ ತಟ್ಟೆಯನ್ನೋ, ಸಾಕಷ್ಟು ಚಿಮಣಿ ಎಣ್ಣೆಯನ್ನೋ ಖರ್ಚು ಮಾಡಬೇಕಾಗಿ ಬರುತ್ತಿತ್ತು .ಹಾಗೆ ನೋಡಿದರೆ ನಮ್ಮ ಕೈ ಅಕ್ಷರಶಃ ಕೆಸರಾಗಿರುತ್ತಿತ್ತು. ಎಷ್ಟೋ ಸಲ ಕಾಲು,ತಲೆಗೆಲ್ಲ ಮುಳ್ಳು ಚುಚ್ಚಿಸಿಕೊಂಡು ವಾರಗಟ್ಟಲೆ ತೊಂದರೆ ಪಟ್ಟಿದ್ದಿದೆ. ಮನೆಯಲ್ಲಿ ಎಷ್ಟೋ ಸಲ ಬೈಯ್ಯಿಸಿಕೊಂಡರೂ, ನೋವು ಅನುಭವಿಸಿಯೂ, ಹಣ್ಣಿನ ರುಚಿ ಪ್ರತೀ ವರ್ಷವೂ ನಮ್ಮನ್ನು ಅಲ್ಲಿ ಎಳೆಯುತ್ತಿತ್ತು. ಬೇಸಿಗೆ ರಜೆಯ ಪ್ರಮುಖ ಆಕರ್ಷಣೆ ನನಗಂತೂ ಅದೇ ಆಗಿತ್ತು.&lt;br /&gt;&lt;br /&gt;ಮೊನ್ನೆ ಮಾರ್ಚಲ್ಲಿ ಊರಿಗೆ ಹೋದಾಗ ನೋಡುತ್ತೇನೆ ಏನಾಶ್ಚರ್ಯ? ರೋಡಿನ ಎರಡುದ್ದಕ್ಕೂ ಒಂದೇ ಒಂದು ಕೌಳಿ ಮಟ್ಟಿಯ ಕುರುಹಿಲ್ಲ. ರೋಡ್ ಅಗಲ ಮಾಡುತ್ತಾರಂತೆ, ಅದಕ್ಕೆ ಅಕ್ಕ ಪಕ್ಕದಲ್ಲಿರುವ ಗಿಡ, ಪೊದೆಗಳನ್ನೆಲ್ಲ ನಿರ್ದ್ಯಾಕ್ಷಿಣ್ಯವಾಗಿ ಸಂಪೂರ್ಣವಾಗಿ ಸವರಿಬಿಟ್ಟಿದ್ದಾರಂತೆ. ಎಂಥ ವಿಪರ್ಯಾಸ! ಒಂದು ತಲೆಮಾರಿನ ಬೇಸಿಗೆ ರಜೆಯ ಖುಷಿಯ ನೆನಪುಗಳನ್ನೆಲ್ಲ ನಿರ್ನಾಮ ಮಾಡಿದ ಪಾಪ ಅವರನ್ನು ತಟ್ಟದೇ ಬಿಟ್ಟೀತೆ? ಮನಸ್ಸೆಲ್ಲ ವಿಷಾದಮಯ!. ಎಷ್ಟೊಂದು ವರ್ಷಗಳಿಂದ ರಸ್ತೆಯಂಚಿನ ಸೌಂದರ್ಯವನ್ನು ಹೆಚ್ಚಿಸಿದ್ದಲ್ಲದೇ, ಏನೇನೂ ಪ್ರತಿಯಾಗಿ ಬಯಸದೇ, ಎಷ್ಟೋ ಪ್ರಯಾಣಿಕರ, ನಮ್ಮಂಥ ಅನೇಕ ಜನಕೆ ಸಂತಸ ನೀಡಿದ್ದ ಗಿಡಗಳನ್ನು ನೆನೆಸಿಕೊಂಡರೆ ನಿಜವಾಗಿ ಬೇಸರವಾಗುತ್ತದೆ. ಕೌಳಿ ಮಟ್ಟಿಗಳೆಲ್ಲವನ್ನು ಕಳೆದುಕೊಂಡು ಬಿಸಿಲಲ್ಲಿ ಬೇಯುತ್ತಿರುವ ರಸ್ತೆ ಪಕ್ಕದ ದಿಬ್ಬಗಳು ಮೂಕವಾಗಿ ರೋದಿಸುತ್ತದ್ದಂತೆ ಅನಿಸಿ ಅಲ್ಲಿ ಜಾಸ್ತಿ ಹೊತ್ತು ನಿಲ್ಲಲಾಗಲಿಲ್ಲ. ಈ ಸಲದ ಬೇಸಿಗೆ, ವಾತಾವರಣವೊಂದೇ ಅಲ್ಲ, ಮನಸ್ಸನ್ನೂ ಶುಷ್ಕವಾಗಿಸುತ್ತದೆಯೋ ಎಂದು ಗಾಭರಿಯಾಯ್ತು. &lt;/div&gt;&lt;div align="justify"&gt;&lt;/div&gt;&lt;div align="justify"&gt;&lt;br /&gt; &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-6748048069238145009?l=madhu-vana.blogspot.com' alt='' /&gt;&lt;/div&gt;</content><link rel='enclosure' type='text/html' href='http://shreeshum.blogspot.com/2009/05/blog-post_12.html' length='0'/><link rel='replies' type='application/atom+xml' href='http://madhu-vana.blogspot.com/feeds/6748048069238145009/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=6748048069238145009' title='5 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/6748048069238145009'/><link rel='self' type='application/atom+xml' href='http://www.blogger.com/feeds/6035880729059442700/posts/default/6748048069238145009'/><link rel='alternate' type='text/html' href='http://madhu-vana.blogspot.com/2011/03/blog-post_25.html' title='ಕೌಳಿ ಹಣ್ಣು'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>5</thr:total></entry><entry><id>tag:blogger.com,1999:blog-6035880729059442700.post-4353478261881013478</id><published>2011-03-18T03:06:00.000-07:00</published><updated>2011-03-18T03:18:12.119-07:00</updated><title type='text'>ಹೊಸ ಚಿಗುರು</title><content type='html'>ಪುಟ್ಟ ಪಾದ ದಿಟ್ಟ ನೋಟ&lt;br /&gt;ತೊದಲ ನುಡಿವ ಹಕ್ಕಿ ಕಂಠ&lt;br /&gt;ಮುಗ್ಧ ನಯನ, ಸ್ನಿಗ್ಧ ನಗು&lt;br /&gt;ಬೆರಗು ಬಿನ್ನಾಣಕೊಂದು ಹೆಸರು&lt;br /&gt;&lt;br /&gt;ತುಟಿಯ ಬಿರಿಯೆ ತುಂಟ ಹಾಸ&lt;br /&gt;ಹರಿಸಿ ಸುತ್ತ ಖುಶಿಯ ಹೊಳೆಯ&lt;br /&gt;ಇಳಿಸಿ ಇಳೆಗೆ ಸ್ವರ್ಗ ಲೋಕ&lt;br /&gt;ಮರೆಸಿ ಸಕಲ ದುಃಖ ದುಗುಡ&lt;br /&gt;&lt;br /&gt;ನಲಿವು ನಗೆಯ ಹೊನಲು ನಿತ್ಯ&lt;br /&gt;ಯಾಕೆ ಬೇಕು ಜಗದ ಮಿಥ್ಯ?&lt;br /&gt;ಮೈಯ ಮುರಿವ ಸೊಬಗೇ ನೃತ್ಯ&lt;br /&gt;ಉರಿವ ಸೂರ್ಯನಷ್ಟೆ ಸತ್ಯ&lt;br /&gt;&lt;br /&gt;ಹೊಸದು ಆಸೆ ಹೊಸದು ಕನಸು&lt;br /&gt;ಮಮತೆಯೊಡಲ ಬೆಳಗಿ ಜೀವ&lt;br /&gt;ಹರುಷ ಭಾವ ತುಂಬಿ ಎದೆಯ&lt;br /&gt;ಎನಿತು ಧನ್ಯ ಬಾಳ ಪಯಣ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-4353478261881013478?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/4353478261881013478/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=4353478261881013478' title='5 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/4353478261881013478'/><link rel='self' type='application/atom+xml' href='http://www.blogger.com/feeds/6035880729059442700/posts/default/4353478261881013478'/><link rel='alternate' type='text/html' href='http://madhu-vana.blogspot.com/2011/03/blog-post.html' title='ಹೊಸ ಚಿಗುರು'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>5</thr:total></entry><entry><id>tag:blogger.com,1999:blog-6035880729059442700.post-4974829339033586297</id><published>2010-11-17T01:08:00.000-08:00</published><updated>2010-11-17T01:12:13.335-08:00</updated><title type='text'>ಆಶಾ ಭಾವ</title><content type='html'>ಸೋಲು ಗೆಲುವು ಸಹಜ ಬಾಳು&lt;br /&gt;ನೋವು ನಲಿವು ಅದರ ಬಿಂಬ&lt;br /&gt;ಮಾವು ಬೇವು ಸಮನೆ ಮೇಳೆ&lt;br /&gt;ತಾನೆ ಸವಿಯ ನಿಜದ ಸ್ವಾದ&lt;br /&gt;&lt;br /&gt;ಬದುಕು ಬರೀ ಹೂವ ಹಾಸಿಗೆಯೆ?&lt;br /&gt;ಹಲವು ಮುಳ್ಳ ಕಠಿಣ ಹಾದಿ&lt;br /&gt;ಭರವಸೆಗಳೇ ನಾಳಿನಾಸರೆ&lt;br /&gt;ಸಾವಿರ ಸಿರಿಗನಸುಗಳಿಗೆ ನಾಂದಿ&lt;br /&gt;&lt;br /&gt;ಶಿಶಿರದಲಿ ಎಲೆಯುದುರಿಸಿಯೂ ಗಿಡ&lt;br /&gt;ಚಿಗುರದೇ ಮತ್ತೆ ವಸಂತದಲಿ?&lt;br /&gt;ಸಾವಿರದಲೆಗಳ ಎದುರಿಸಿಯೂ ದಡ&lt;br /&gt;ನಿಲ್ಲದೇ ನಿಶ್ಚಲ ಛಲದಲ್ಲಿ?&lt;br /&gt;&lt;br /&gt;ನಿನ್ನೆಗಳಾ ಕಹಿ ಇಂದಿಗೇ ಮರೆತು&lt;br /&gt;ಬೆಳಕ ದಾರಿಯನು ಹುಡುಕಬೇಕು&lt;br /&gt;ಕಹಿನೆನಪಿಗೆ ಸಿಹಿಲೇಪವ ಬೆರೆಸಿ&lt;br /&gt;ಕತ್ತಲೆಯ ಮೀರಲಿ ಬದುಕು&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-4974829339033586297?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/4974829339033586297/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=4974829339033586297' title='8 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/4974829339033586297'/><link rel='self' type='application/atom+xml' href='http://www.blogger.com/feeds/6035880729059442700/posts/default/4974829339033586297'/><link rel='alternate' type='text/html' href='http://madhu-vana.blogspot.com/2010/11/blog-post.html' title='ಆಶಾ ಭಾವ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>8</thr:total></entry><entry><id>tag:blogger.com,1999:blog-6035880729059442700.post-5581525416018372722</id><published>2010-07-18T08:09:00.000-07:00</published><updated>2010-07-18T21:15:41.702-07:00</updated><title type='text'>ಆರ್ದ್ರ</title><content type='html'>&lt;div align="justify"&gt;ಆರಿದ್ರೆ ಮಳೆಯ ಇನ್ನೊಂದು ದೊಡ್ಡ ನೆಗಸು ಭೂಮಿಯನ್ನು ಅಪ್ಪಳಿಸಲು ಶುರುಮಾಡಿತ್ತು. ಕಪ್ಪಿಟ್ಟ ಆಕಾಶ, ಜೋರಾಗುತ್ತಿದ್ದ ಮಳೆ ಜಿರಲೆಯ ಶಬ್ದ, ಮಳೆ ಜೋರಾಗುವುದರ ಸೂಚನೆಯನ್ನು ಮೊದಲೇ ಕೊಟ್ಟಿದ್ದವು. ರಚ್ಚೆ ಹಿಡಿದ ಮಗುವಿನ ನಿರಂತರ ರೋದನದಂತೆ ಮಳೆ ಒಂದೇ ಸಮನೆ ಹೊಯ್ಯುತ್ತಲೇ ಇತ್ತು. ಮಳೆಯ ಆರ್ಭಟಕ್ಕೆ ಸುತ್ತಲಿನ ಪಕೃತಿಯ ಸಕಲ ಚರಾಚರ ವಸ್ತುಗಳೆಲ್ಲ ದಿಗ್ಮೂಢಗೊಂಡಂತೆ ಮೌನವಾಗಿ ನಿಂತು ಮಳೆಯ ನೀರಲ್ಲೇ ಮೀಯುತ್ತಿದ್ದವು. ಮಳೆಯ ’ಧೋ’ ಸದ್ದು ಜಾಸ್ತಿಯಾದಂತೆಲ್ಲ ಎದೆಯ ಮೂಲೆಯಲ್ಲೆಲ್ಲೋ ಅವ್ಯಕ್ತ ವೇದನೆ ಆವರಿಸಿಕೊಳ್ಳಲಾರಂಭಿಸಿತು. "ಕೊರ್ರೋ" ಎಂದೊದರುವ ಮಳೆ ಜಿರಲೆಯ ಧ್ವನಿ, ವೇದನೆಯ ಅಸ್ತಿತ್ವಕ್ಕೆ ವಿಚಿತ್ರವಾದ ಹಿನ್ನೆಲೆಯನ್ನು ಒದಗಿಸಲೇ ಇನ್ನೂ ಜೋರಾಗುತ್ತಿದೆಯೆನ್ನುವ ಸಂಶಯ ಮನದಲ್ಲಿ ಪಿಶಾಚಿಯಂತೆ ಕಾಡಲಾರಂಬಿಸಿತು. "ಇಲ್ಲ, ಇವೆಲ್ಲಗಳಿಂದ ನಾನು ಹೊರಬರಲೇ ಬೇಕು, ಏಷ್ಟು ದಿನ ಹೀಗೇ?" ಮನಸ್ಸು ಸಾವಿರದೊಂದನೇ ಬಾರಿ ಬುದ್ಧಿ ಹೇಳಿತು. ಮನಸ್ಸು ಹೇಳಿದ್ದನೆಲ್ಲ ಹೃದಯ ಕೇಳುವಂತಿದ್ದರೆ ಜಗತ್ತಿನಲ್ಲಿ ಯಾರಿಗೂ ಯಾತನೆಗಳೇ ಇರುತ್ತಿರಲಿಲ್ಲವೇನೋ.&lt;br /&gt;&lt;br /&gt;ಇದೇ ಮಳೆಯ ತರವೇ ಅಲ್ಲವೇ ಅವಳಲ್ಲಿ ರಚ್ಚೆ ಹಿಡಿದಿದ್ದು? ಅಷ್ಟು ದೈನೇಸಿಯಾಗಿ ಬೇಡಿಕೊಂಡರೂ ಅವಳ ಮನಸ್ಸಿನಲ್ಲಿ ಒಂದು ಚೂರೂ ಜಾಗ ಕೊಡಲಿಲ್ಲವೇಕೆ ಎಂದು ಈಗ ಯೋಚಿಸಿದರೆ ನನ್ನ ಆಗಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅನುಕಂಪವೂ, ಬೇಸರವೂ ಆಗುತ್ತದೆ. ಎಷ್ಟು ಕಠಿಣವಾಗಿ, ಕಡ್ಡಿ ಮುರಿದಂತೆ ಹೇಳಿಬಿಟ್ಟಳಲ್ಲ, "ವಿಕ್ಕಿ, ನಿನ್ನಲ್ಲಿ ಅಂಥದೇನಿದೆ ಅಂತ ನಾನು ನಿನ್ನನ್ನು ಇಷ್ಟಪಡಲಿ? ದಯವಿಟ್ಟು ನನಗೆ ತೊಂದರೆ ಕೊಡಬೇಡ". ಒಂದೇ ವಾಕ್ಯದಲ್ಲಿ ಮನಸು ಮುರಿದಿದ್ದಳು. ಆ ಕ್ಷಣದಲ್ಲೇ ಭೂಮಿ ಬಾಯ್ಕಳೆದು ನನ್ನನ್ನು ನುಂಗಬಾರದೇ ಎನ್ನಿಸಿತ್ತು. ನೆನೆಸಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ. ಬಾಯಲ್ಲಿ ಮಾತೊಂದೂ ಹೊರಟಿರಲಿಲ್ಲ. ಆ ಕ್ಷಣದಷ್ಟು ದುರ್ಬಲತೆಯನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ಅವಳು ನನ್ನ ಪ್ರೀತಿಯನ್ನು ಧಿಕ್ಕರಿಸಿದ ರೀತಿಗೋ, ಅಥವಾ ನನಗೆ ಅಪಾರ ಹೆಮ್ಮೆಯಿದ್ದ ನನ್ನ ವ್ಯಕ್ತಿತ್ವದ ಅಸ್ತಿತ್ವವನ್ನೇ ಅವಳು ಬೆದಕಿದ್ದಕ್ಕೋ ಗೊತ್ತಿಲ್ಲ, ಮನಸ್ಸಿಗೆ ವಿಪರೀತ ಘಾಸಿಯಾಗಿತ್ತು. ಅಂದಿನಿಂದ ಈ ಭಯಾನಕ ಯಾತನಾ ಜಗತ್ತಿಗೆ ಬಿದ್ದಿದ್ದೆ.&lt;br /&gt;&lt;br /&gt;ಎಷ್ಟು ಬೇಡ ಬೇಡವೆಂದರೂ ಮನಸ್ಸು ಮತ್ತೆ ಮತ್ತೆ ಅಲ್ಲೇ ಎಳೆಯುತ್ತಿತ್ತು. "ನಿನ್ನಲ್ಲಿ ಅಂಥದ್ದೇನಿದೆ?", ಎಷ್ಟು ಸಲೀಸಾಗಿ ಕೇಳಿಬಿಟ್ಟಳಲ್ಲ! ಆ ಪ್ರಶ್ನೆ ನನ್ನಲ್ಲಿ ಉಂಟು ಮಾಡಿದ ತಳಮಳಗಳ ಪರಿಣಾಮ ಅವಳಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಅಷ್ಟೆಲ್ಲ ದಿನ ನನ್ನ ಜೊತೆ ಸುತ್ತಾಡಿದ್ದು? ಕಣ್ಣಲ್ಲೇ ಪ್ರೀತಿ ತೋರಿದ್ದು? ಮಾತು ಸುಳ್ಳಾಡಬಹುದು, ಕಣ್ಣು? ನಟನೆಯಿದ್ದೀತಾ? ಅಷ್ಟು ದಿನ ಪ್ರೀತಿಯ ಸೆಲೆಯೇ ಉಕ್ಕಿ ಹರಿಯುತ್ತಲಿದೆ ಎಂದೆನಿಸುತ್ತಿದ್ದ ತುಂಬುಗಣ್ಣುಗಳಲ್ಲಿ ತಣ್ಣನೆಯ ಕ್ರೌರ್ಯವಿದ್ದೀತಾ? ಛೇ! ಇದ್ದಿರಲಿಕ್ಕಿಲ್ಲ. ಎಂತೆಲ್ಲ ಯೋಚನೆಗಳು? ಅವಳ ಬಗ್ಗೆ ಕೆಟ್ಟದಾಗಿ ಯೋಚಿಸಲೂ ಮನಸ್ಸು ಆಸ್ಪದ ಕೊಡುತ್ತಿಲ್ಲ. ಅವಳ ಬಗ್ಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮೋಹ ಉಳಿದುಕೊಂಡಿರಬೇಕು. ಅಷ್ಟೊಂದು ಉತ್ಕಟವಾಗಿಯಲ್ಲವೇ ನಾನು ಅವಳ ಮೋಹಕ್ಕೆ ಒಳಗಾಗಿದ್ದು? ನನಗೆ ಗೊತ್ತಿಲ್ಲದ ಹಾಗೆ ಕಣ್ಣು ಮಂಜು ಮಂಜು. ಕೆನ್ನೆಯ ಮೇಲೆ ತಾನಾಗಿಯೇ ಹರಿದು ಬಂದ ಕಣ್ಣೀರನ್ನು ಒರೆಸಿಕೊಂಡೆ.&lt;br /&gt;&lt;br /&gt;ಹೊರಗೆ ಮಳೆ ಕಮ್ಮಿಯಾಗುವ ಲಕ್ಷಣವೇ ಕಾಣಲಿಲ್ಲ. ಆರಿದ್ರೆ ಮಳೆ, ಹೋಗುವಾಗ ಜಾಸ್ತಿ ಹೊಯ್ಯುತ್ತದಂತೆ. ನಾಳೆಯಿಂದ ಪುನರ್ವಸು. ಇವತ್ತೇ ಆಕಾಶವೆಲ್ಲ ಖಾಲಿಯಾಗುವಂತೆ ಹೊಯ್ಯುತ್ತಲೇ ಇರುತ್ತೇನೆ ಎಂಬ ಹುನ್ನಾರವನ್ನು ನಡೆಸಿದೆಯೋ ಎಂಬಂತೆ ಮಳೆ ಪಿರಿಪಿರಿ ನಡೆಸಿತ್ತು. "ಆರಿದ್ರೆ ಮಳೆ ಆರದಂತೆ ಹೊಯ್ಯುತ್ತದೆ", ಅಮ್ಮ ಹೇಳಿದ್ದು ನೆನಪಾಯ್ತು. ಈ ಹಾಳಾದ ನೆನಪುಗಳೂ ಮಳೆಯಂತೇ. ಆರದಂತೆ ಮನಸ್ಸಿನ ಅಂಗಳದಲ್ಲಿ ಬಿಟ್ಟೂ ಬಿಟ್ಟೂ ಹೊಯ್ಯುತ್ತಲೇ ಇರುತ್ತವೆ. ಮನಸ್ಸಿನ ತುಂಬ ರಾಡಿಯೆಬ್ಬಿಸಿ.&lt;br /&gt;&lt;br /&gt;ಅವತ್ತು ಯಾಕೆ ಹಾಗೆ ಏನನ್ನೂ ಮಾತಾಡದೇ ಬಂದೆನೆಂಬುದು ಇಂದಿಗೂ ಸೋಜಿಗ. ಈಗ ಯೋಚಿಸಿದರೆ, ಅವತ್ತು ಅವಳ ಮಾತಿನ ಸ್ಥಿತಪ್ರಜ್ಞೆ ನನ್ನನ್ನು ಮೂಕವಾಗಿಸಿರಬೇಕೆಂದೇ ಅನ್ನಿಸುತ್ತದೆ. ಅವಳ ಮುಖದಲ್ಲಿ ಯಾವುದೇ ತರಹದ ದುಃಖವಾಗಲೀ, ಆಶ್ಚರ್ಯವಾಗಲೀ ಅಥವಾ ಸಿಟ್ಟಾಗಲೀ ಕಂಡಿರಲಿಲ್ಲ. ಎಲ್ಲ ಮೊದಲೇ ಗೊತ್ತಿದ್ದ ಹಾಗೆ, ಹೀಗೇ ಕೇಳುತ್ತಾನೆ ಎಂದು ಮುಂಚೆಯೇ ಊಹಿಸಿದ್ದ ಹಾಗೆ, ಎಲ್ಲವೂ ಪೂರ್ವ ನಿರ್ಧಾರಿತ ಯೋಜನೆಯ ಹಾಗೆ. ಯೋಚಿಸಲು ಒಂದು ನಿಮಿಷವೂ ತೆಗೆದುಕೊಂಡಿರಲಿಲ್ಲ. ಬಿಟ್ಟ ಬಾಣದ ಹಾಗೆ ಉತ್ತರ. ನಿಜ, ಅದೇ ನನ್ನ ಅಹಂಗೆ ಅಷ್ಟೊಂದು ಪೆಟ್ಟು ಕೊಟ್ಟಿದ್ದು. "ವಿಕ್ಕೀ, ನನಗೆ ಗೊತ್ತು, ನೀನು ನನಗೆ ಅರ್ಹನಿಲ್ಲ" ಎಂಬ ನೇರ ಮಾತು. ತುಟಿಯಂಚಲ್ಲಿ ಕಿರುನಗೆಯೊಂದು ಹಾದು ಹೋಯಿತು. ಎಲ್ಲ ಸನ್ನಿವೇಶಗಳಲ್ಲೂ ಎಲ್ಲರೂ ನಮ್ಮ ಅಹಂ ಅನ್ನು ಸಂತೋಷಪಡಿಸಬೇಕೆಂದು ನಾವು ಆಶಿಸುತ್ತೇವೆಲ್ಲ? ಪ್ರೀತಿಯ ಮಾತುಗಳಲ್ಲಿ, ಪ್ರೇಮ ಸಲ್ಲಾಪಗಳಲ್ಲಿ, ಹೊಗಳುವಿಕೆಯ ಮೆಚ್ಚುಗೆಗಳಲ್ಲಿ ಎಲ್ಲದರಲ್ಲೂ. ಕೊನೆಗೆ ಪ್ರೀತಿಯ ತಿರಸ್ಕಾರದಲ್ಲೂ!&lt;br /&gt;&lt;br /&gt;ಅವಳೇ ಅಲ್ಲವೇ ನನ್ನನ್ನು ಹುಡುಕಿಕೊಂಡು ಬಂದಿದ್ದು? ಕಾಲೇಜಿನ ಗ್ಯಾದರಿಂಗ್ ನ ಮರುದಿನ?. "ಎಷ್ಟೊಂದು ಚೆನ್ನಾಗಿ ಹಾಡುತ್ತೀರಿ ನೀವು?" ಅವತ್ತು ಅವಳ ಮಾತುಗಳು ಉಂಟು ಮಾಡಿದ ಪುಳಕ ಇವತ್ತಿಗೂ ಮರೆಯುವ ಹಾಗೇ ಇಲ್ಲ. ಅದೇ ಮುಗ್ಧ ನಗು, ಅದೇ ಪ್ರೀತಿಯ ಕಣ್ಣುಗಳು. ಮೊದಲ ಸಾರಿ ಯಾರಾದರೂ ನನ್ನನು ಹೊಗಳಿದ್ದು. ವಾಸ್ತವವೇ, ಕನಸೇ ಎಂದು ಅರಿವಾಗಲು ಸ್ವಲ್ಪ ಹೊತ್ತು ಹಿಡಿದಿತ್ತು. ಸಣ್ಣದೊಂದು ಸಂಕೋಚದ ನಗೆ ನಕ್ಕು ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕಿದ್ದೆ. "ಥ್ಯಾಂಕ್ಸೇ ಹೇಳಲಿಲ್ಲ ನೀವು?", ಅವಳು ಬಿಡುವ ತರಹ ಕಾಣಲಿಲ್ಲ. "ಬೇಡ ಬಿಡಿ, ಥ್ಯಾಂಕ್ಸ್ ಬದಲು ನನ್ಜೊತೆ ಒಂದು ಕಾಫಿ ಕುಡಿಬಹುದಲ್ವಾ?". ನನಗೋ ದಿಗಿಲು. ಇಷ್ಟೊಂದು ನೇರ ಮಾತು! ಹೃದಯ ಬಾಯಿಗೆ ಬಂದಂತೆ. ಯಾವತ್ತೂ ಹಾಗೆಲ್ಲ ಹುಡುಗಿಯರ ಜೊತೆ ಒಂಟಿಯಾಗಿ ಮಾತಾಡೇ ಅಭ್ಯಾಸವಿಲ್ಲ. ನನ್ನ ಭಯ ಅವಳಿಗೆ ಗೊತ್ತಾಗಿರಬೇಕು, "ಪರವಾಗಿಲ್ಲ, ನನ್ಜೊತೆ ಒಂದು ಕಾಫಿ ಕುಡಿದರೆ ಜಗತ್ತೇನೂ ಮುಳುಗಲ್ಲ,ಬನ್ನಿ", ಈ ಸಲ ಇನ್ನೂ ಅಧಿಕಾರಯುತ ಧ್ವನಿ. ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಅವಳನ್ನು ಹಿಂಬಾಲಿಸಿದ್ದೆ. ನಾನೇನು ಮಾತಾಡಿದ್ದೇನೋ, ಅವಳೇನು ಕೇಳಿದ್ದಳೋ ಒಂದೂ ನೆನಪಿಲ್ಲ. ಅವಳ ಕಣ್ಣುಗಳಲ್ಲಿ ಕರಗಿ ಹೋಗಿದ್ದೊಂದು ನೆನಪಿದೆ.&lt;br /&gt;&lt;br /&gt;ನನ್ನ ಖಾಯಂ ಸಂಗಾತಿಯಾಗಿದ್ದ ತಿರಸ್ಕಾರ, ಕೀಳರಿಮೆಗಳ ಸ್ನೇಹವನ್ನು ಮರೆತಿದ್ದೇ ಅವಳ ಸಂಗದಲ್ಲಿ. ಸಂಕೋಚದ ಮುದ್ದೆಯಾಗಿದ್ದ ನನ್ನನ್ನು ಆ ಚಿಪ್ಪಿನಿಂದ ಹೊರಗೆ ಬರಲು ಸಹಾಯಮಾಡಿದ್ದು ಅವಳ ಉಲ್ಲಾಸಭರಿತ ಮಾತುಗಳು, ಜೀವನೋತ್ಸಾಹ ಉಕ್ಕಿ ಹರಿಯುತ್ತಿದ್ದ ಕಣ್ಣುಗಳು. ನನ್ನ ಬದುಕಿನಲ್ಲಿ ಯಾವುದರ ಕೊರತೆಯಿತ್ತೋ ಅದನ್ನು ಸಂಪೂರ್ಣವಾಗಿ ತುಂಬಲು ಅವಳೊಬ್ಬಳಿಂದಲೇ ಸಾಧ್ಯವೆಂದು ನಾನು ಆಗ ನಂಬಿದ್ದೆ. ಅವಳ ಪ್ರೀತಿಯ ಮಾತುಗಳಿಗಾಗಿ ಎಷ್ಟು ಸಾರ್ತಿ ನಾನು ನನ್ನ ಸಂಕೋಚದ ಸಂಕೋಲೆಗಳನ್ನು ಮುರಿದು ಧಾವಿಸಿ ಓಡಿ ಬರುತ್ತಿದ್ದೇನೋ ನನಗೇ ತಿಳಿಯದು. ಅವಳು ಪ್ರಯತ್ನಪೂರ್ವಕವಾಗಿ ನನ್ನ ಕೀಳರಿಮೆಯನ್ನು ತೊಡೆಯಲು ಪ್ರೀತಿಯ ಮಾತುಗಳ ಸಹಾಯ ತೆಗೆದುಕೊಂಡಿದ್ದಳಾ ಅಥವಾ ಕೇವಲ ಅವಳ (ಪ್ರೀತಿಯ?) ಸಾನಿಧ್ಯ ನನ್ನಲ್ಲಿ ಅಷ್ಟೊಂದು ಆತ್ಮವಿಶ್ವಾಸವನ್ನು ಮೂಡಿಸಿತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ನಾನು ನನಗೇ ಅಚ್ಚರಿಯಾಗುವಷ್ಟು ಬದಲಾಗಿದ್ದಂತೂ ನಿಜ. ಅವಳೇ ಹೇಳಿದ್ದಳಲ್ಲ, "ವಿಕ್ಕಿ ನಿನ್ನ ಕಂಗಳಲ್ಲಿ ಈಗ ಅಪೂರ್ವವಾದ ಹೊಳಪೊಂದು ಕಾಣುತ್ತಿದೆ" ಅಂತ. ಆತ್ಮ ವಿಶ್ವಾಸದ ಸೆಲೆ ನನ್ನಲ್ಲೂ ಚಿಗುರತೊಡಗಿತ್ತು, ಅವಳೇ ಅದನ್ನ ಚಿವುಟಿ ಕೊಲ್ಲುವದರ ತನಕ!&lt;br /&gt;&lt;br /&gt;ಮಯೂರ ಯಾವತ್ತೋ ಹೇಳಿದ್ದು ಈಗ ನೆನಪಾಗುತ್ತಿದೆ. ಯಾಕೋ ಗೊತ್ತಿಲ್ಲ. "ವಿಕ್ಕಿ, ನೀನು ಹೀಗೆ ಡ್ರೆಸ್ ಮಾಡಿಕೊಂಡು, ಅದೇ ಹರಕಲು ಚೀಲವನ್ನು ಏರಿಸಿಕೊಂಡು ಎಲ್ಲ ಕಡೆ ತಿರುಗುತ್ತಿದ್ದರೆ, ಯಾವ ಹುಡುಗಿಯೂ ನಿನ್ನನ್ನು ಪ್ರೀತಿ ಮಾಡುವುದಿಲ್ಲ ನೋಡು" ಎಂದು. ನನ್ನನ್ನು ರೇಗಿಸಲು ಹೇಳಿದ್ದೋ ಅಥವಾ ಅವನಿಗೆ ಹೊಸದೊಂದು ಗರ್ಲ್ ಫ್ರೆಂಡ್ ದೊರಕಿದ ಅಹಂನಲ್ಲಿ ಹೇಳಿದ್ದೋ ಗೊತ್ತಿಲ್ಲ. ಆದರೆ ಸಿಟ್ಟು ನೆತ್ತಿಗೇರಿತ್ತು. "ಯಾರಾದ್ರೂ ನನ್ನನ್ನು ಪ್ರೀತಿ ಮಾಡಲೇಬೇಕು ಅಂತ ನಾನು ಬದುಕ್ತಾ ಇಲ್ಲ" ಸಟ್ಟಂತ ಹೇಳಿದ್ದೆ. ಅವನು ಮಾತು ತಿರುಗಿಸಿದ್ದ. "ಹಾಗಲ್ವೋ, ನೋಡು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಓಡಾಡ್ತಾ ಇದ್ರೆ ನಾಲ್ಕು ಜನ ಗುರುತಿಸ್ತಾರೆ, ಏನೋ ಒಂದು ಚಾರ್ಮ್ ಇರತ್ತೆ. ನಿನ್ನಲ್ಲಿ ಏನು ಬೇಕಾದರೂ ಮಾಡಬಲ್ಲ ಆತ್ಮ ವಿಶ್ವಾಸವಿದೆ ಅಂತ ಅನ್ನಿಸತ್ತೆ, ಯೋಚನೆ ಮಾಡು". ಒಳ್ಳೆಯ ಡ್ರೆಸ್ ಹಾಕಿಕೊಂಡರೆ ಆತ್ಮ ವಿಶ್ವಾಸ ಬೆಳೆಯುತ್ತದೆಯೋ, ಅಥವಾ ನಮ್ಮಲ್ಲಿ ಆತ್ಮ ವಿಶ್ವಾಸ ಪುಟಿಯುತ್ತಿದ್ದರೆ ಒಳ್ಳೆ ಡ್ರೆಸ್ ಮಾಡಿಕೊಳ್ಳಬೇಕೆಂಬ ಹಂಬಲ ತಾನೇ ತಾನಾಗೇ ಮೊಳೆಯುತ್ತದೆಯೋ ಅರ್ಥವಾಗಿರಲಿಲ್ಲ. ಅವೆರಡು ಒಂದಕ್ಕೊಂದು ಪೂರಕವೋ, ಅಥವಾ ಒಂದರ ಮೇಲೊಂದು ಅವಲಂಬಿತವೋ ಅವತ್ತಿಗೂ, ಇವತ್ತಿಗೂ ಗೊತ್ತಾಗಿಲ್ಲ.&lt;br /&gt;&lt;br /&gt;ಇಲ್ಲಿಯೂ ಅದೇ ಜಿಜ್ಞಾಸೆ. ಅವಳ ಪ್ರೀತಿ ಅಪೇಕ್ಷಿಸಲು ನಾನು ಪ್ರಯತ್ನಪಟ್ಟಿದ್ದು ನನ್ನಲ್ಲಿ ಹೊಸದಾಗಿ ಮೂಡಿದ ಆತ್ಮವಿಶ್ವಾಸದ ನೆಲೆಯಿಂದಲೋ, ಅಥವಾ ಅವಳ ಸಾನಿಧ್ಯ ತರಬಹುದಾದಂತಹ ಪ್ರೀತಿಯ ಬೆಳಕಿನಲ್ಲಿ, ನನಗೇ ಹೊಸದಾಗಿದ್ದ ನನ್ನ ವ್ಯಕ್ತಿತ್ವದ ಆಯಾಮವೊಂದನ್ನು ಹುಡುಕುವ ಸ್ವಾರ್ಥದಿಂದಲೋ? ಪ್ರೀತಿಯ ಕರುಣಾಸ್ಥಾಯಿಯಿಂದ ಆತ್ಮವಿಶ್ವಾಸ ಒಡಮೂಡಿದ್ದೋ ಅಥವಾ ಕೇವಲ ಅವಳ ಸಂಗದಿಂದ ಹುಟ್ಟಿರಬಹುದಾದ ಆತ್ಮವಿಶ್ವಾಸದ ಸೆಲೆ ನನ್ನದೇ ವ್ಯಕ್ತಿತ್ವದಲ್ಲಿ ಸುಪ್ತವಾಗಿದ್ದ ಪ್ರೀತಿಯ ಅಲೆಗಳನ್ನು ಉದ್ದೀಪನಗೊಳಿಸಿದ್ದೊ? ಎಷ್ಟೊಂದು ಗೋಜಲು ಗೋಜಲು! ಆದರೆ ಒಂದಂತೂ ನಿಜ. ಅವಳ ತಿರಸ್ಕಾರದಿಂದ ನಾನು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೆ. ನನ್ನ ಆತ್ಮವಿಶ್ವಾಸ ಮತ್ತೆ ಪಾತಾಳಕ್ಕಿಳಿದು ಹೋಗಿತ್ತು. ಯಾವ ಪ್ರೀತಿಯ ಭಾವ ನನ್ನ ಅಂತರಂಗದಲ್ಲಿ ಹೊಸ ಹುಮ್ಮಸ್ಸು, ಹೊಸ ವಿಶ್ವಾಸವನ್ನು ಹುಟ್ಟಿಸಿತ್ತೋ ಅದೇ ಮತ್ತೆ ಎಲ್ಲವನ್ನೂ ಮರೆಸಿ ಹಳೆಯ ಸ್ಥಿತಿಗೆ ನನ್ನನ್ನು ನೂಕಿದ ವಿಪರ್ಯಾಸಕ್ಕೆ ನಾನೇ ಸಾಕ್ಷಿಯಾಗಿದ್ದೆ. ಪ್ರೀತಿಯ ಮೋಹಕ ಜಗತ್ತಿನ ಆಸರೆಯನ್ನು ಪಡೆಯಹೋದವನು ಮನಸ್ಸುಗಳ ನಡುವಿನ, ಮನುಷ್ಯರ ನಡುವಿನ ನಂಬುಗೆಯ ಮೇಲೇ ವಿಶ್ವಾಸವಿಲ್ಲದ ಲೋಕದ ಕಾಳಚಕ್ರದಲ್ಲಿ ಕಳೆದುಹೋಗಿದ್ದೆ.&lt;br /&gt;&lt;br /&gt;ದೊಡ್ಡದೊಂದು ನಿಟ್ಟುಸಿರು ನನಗೆ ಅರಿವಿಲ್ಲದೆಯೇ ಹೊರಬಿತ್ತು. ಇಷ್ಟ್ಯಾಕೆ ವೇದನೆ ನೀಡುತ್ತಿವೆ ಹಳೆಯ ನೆನಪುಗಳು? ಪ್ರೀತಿಯ ಮೋಹಕ್ಕಿಂತ ಅದರ ತಿರಸ್ಕಾರದ ನೆನಪುಗಳ ವ್ಯಾಮೋಹವೇ ಹೆಚ್ಚು ಸಂವೇದಾನಾಶೀಲವೇ ಎಂಬ ಸಂಶಯ ಮನಸ್ಸಿನಲ್ಲೊಮ್ಮೆ ಮೂಡಿ ಮರೆಯಾಯಿತು. ಏನೇ ಆಗಲಿ, ಈ ವೇದನೆಗಳ ವ್ಯಾಪ್ತಿಯಿಂದ ಹೊರಬರಬೇಕಾದ ಅನಿವಾರ್ಯತೆ ನನಗೀಗ ನಿಧಾನವಾಗಿ ಅರಿವಾಗತೊಡಗಿತು. ಆವಾಗಿನ ತಳಮಳಗಳನ್ನೆಲ್ಲ ಈಗ ಸಮಚಿತ್ತದಲ್ಲಿ ನಿಂತು ನೋಡಿದರೆ ಹಲವಾರು ಹೊಸ ವಿಷಯಗಳೇ ಗೋಚರವಾಗಬಹುದೇನೋ. ಬಗೆ ಬಗೆ ಅನುಭವಗಳಿಂದ ನಾವು ಕಲಿಯಬೇಕಾಗಿದ್ದು ಇಷ್ಟೇನೇ ಅಥವಾ ಅವು ಉಂಟು ಮಾಡಿದ ಪರಿಣಾಮಗಳ ವಿಸ್ತಾರ ಇಷ್ಟೇ ಎಂದು ಹೇಗೆ ಹೇಳುವುದು? ಎಲ್ಲ ಅನುಭವಗಳನ್ನೂ ನಮ್ಮ ಮನಸ್ಸು ತನ್ನ ಬೌದ್ಧಿಕ ಮತ್ತು ವೈಚಾರಿಕತೆಯ ಪರಿಮಿತಿಯ ಮೂಸೆಯಲ್ಲಿ ಹಾಕಿ ವಿಶ್ಲೇಷಿಸಿ, ಅದರಿಂದ ಹಲವು ತನಗೆ ಸರಿತೋರಿದ ಅಥವಾ ಪ್ರಿಯವಾದ ಭಾವಗಳನ್ನು ನಿಶ್ಚಯಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾನು ಅನುಭವಿಸುತ್ತಿರುವ ವೇದನೆ, ನಾನೇ ಬಯಸಿ ಹಿಂದೆ ಹೋದ ಪ್ರೀತಿ ಮರೀಚಿಕೆಯಿಂದಲೇ ಹುಟ್ಟಿದ್ದರಿಂದ ಮನಸ್ಸಿಗೆ ಸ್ವಯಂವೇದ್ಯವಾಗಲು ಕಷ್ಟವಾಗಲಿಕ್ಕಿಲ್ಲ. ನಿಜ, ಆ ಭಾವನೆ ಸುಳಿದಂತೆ ಹೃದಯ ನಿರಾಳವಾಯಿತು. ಪ್ರೀತಿಯ ಭಾವ ನಿರಾಕರಣೆಯ ದುಃಖವನ್ನೂ, ತಿರಸ್ಕಾರದ ನೋವನ್ನೂ, ವೇದನೆಯ ವಾಸ್ತವದ ಜೊತೆಗೆ ಆತ್ಮವಿಶ್ವಾಸವನ್ನೂ ಕಲಿಸಬಲ್ಲದೆಂಬ ಭರವಸೆಯ ಭಾವ ಮನದಲ್ಲಿ ಉದಯಿಸಿ ಉಲ್ಲಾಸ ಮೂಡಿಸಿತು.&lt;br /&gt;&lt;br /&gt;ನಿಧಾನವಾಗಿ ಹೊರಗೆ ಕಣ್ಣು ಹಾಯಿಸಿದೆ. ಮಳೆಯ ಆರ್ಭಟ ಬಹಳಷ್ಟು ಕಮ್ಮಿಯಾಗಿತ್ತು. ಎಲ್ಲೋ ಒಂದೆರಡು ಮಳೆಹನಿಗಳು ಸುರಿದುಹೋದ ಮಳೆಯ ನೆನಪನ್ನು ಇನ್ನೂ ಜೀವಂತವಿಡುವ ಪ್ರಯತ್ನ ನಡೆಸಿದ್ದವು. ಶುಭ್ರವಾದ ಆಕಾಶವನ್ನು ಮುತ್ತಿ ಕಪ್ಪಿಡಲು ಹವಣಿಸುತ್ತಿದ್ದ ಮಳೆಮೋಡವನ್ನು ಭೇದಿಸಿಯಾದರೂ, ಭೂಮಿಯನ್ನು ತಲುಪಿ ತಮ್ಮ ಅಸ್ತಿತ್ವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದ ಸೂರ್ಯಕಿರಣಗಳ ಉತ್ಸಾಹ, ನನ್ನಲ್ಲಿ ಸ್ಪೂರ್ತಿಯನ್ನು ಹುಟ್ಟಿಸಲಾರಂಭಿಸಿತು. ಮೋಡಗಳ ಪ್ರತಿರೋಧವನ್ನು ಲೆಕ್ಕಿಸದೇ ಭೂಮಿಯನ್ನು ತಲುಪಿ ಕತ್ತಲೆಯ ಕೀಳರಿಮೆಯನ್ನು ಸಂಪೂರ್ಣವಾಗಿ ತೊಡೆದುಹಾಕುತ್ತೇವೆ ಎಂಬ ಆತ್ಮ ವಿಶ್ವಾಸದಿಂದ ಪ್ರಕಾಶಿಸುತ್ತಿರುವ ಹೊನ್ನಕಿರಣಗಳು, ಮರಳಿ ಉದಯಿಸುತ್ತಿದ್ದ ನನ್ನ ಮನದ ಹಂಬಲದ ಸಂಕೇತವೋ ಎನ್ನುವಂತೆ ಭಾಸವಾದವು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-5581525416018372722?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/5581525416018372722/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=5581525416018372722' title='7 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/5581525416018372722'/><link rel='self' type='application/atom+xml' href='http://www.blogger.com/feeds/6035880729059442700/posts/default/5581525416018372722'/><link rel='alternate' type='text/html' href='http://madhu-vana.blogspot.com/2010/07/blog-post.html' title='ಆರ್ದ್ರ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>7</thr:total></entry><entry><id>tag:blogger.com,1999:blog-6035880729059442700.post-419654144820686256</id><published>2010-04-22T01:18:00.000-07:00</published><updated>2010-04-22T01:59:32.038-07:00</updated><title type='text'>"ಬಾಳ ನರ್ತಕ" ಕವನ ಸಂಕಲನ ಬಿಡುಗಡೆ ಸಮಾರಂಭ</title><content type='html'>ಆತ್ಮೀಯರೇ,&lt;br /&gt;&lt;br /&gt;ನನ್ನ ತಂದೆಯವರು ಬರೆದ ಕೆಲವು ಕವನಗಳ ಪುಸ್ತಕರೂಪ, "ಬಾಳ ನರ್ತಕ" ದ ಬಿಡುಗಡೆ ಸಮಾರಂಭವನ್ನು ಇದೇ ಶನಿವಾರ ದಿನಾಂಕ ೨೪ ರಂದು ಶಿರಸಿ ತಾಲೂಕಿನ ಯಡಳ್ಳಿಯ "ವಿದ್ಯೋದಯ" ಸಭಾಭವನದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಏರ್ಪಡಿಸಿದ್ದೇವೆ. "ಆಗ್ರಾ ಗಾಯಕಿ ಕಲಾವೃಂದ" ಯಡಳ್ಳಿ ಇವರ ವತಿಯಿಂದ ಸಂಗೀತ ಸಂಜೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.&lt;br /&gt;&lt;br /&gt;&lt;br /&gt;&lt;a href="http://2.bp.blogspot.com/_dUxzF14Tgas/S9ANNX5mtmI/AAAAAAAAA4M/kQzyn5vovFU/s1600/Invitation_1.jpg"&gt;&lt;img id="BLOGGER_PHOTO_ID_5462880871405500002" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 228px; TEXT-ALIGN: center" alt="" src="http://2.bp.blogspot.com/_dUxzF14Tgas/S9ANNX5mtmI/AAAAAAAAA4M/kQzyn5vovFU/s320/Invitation_1.jpg" border="0" /&gt;&lt;/a&gt;&lt;br /&gt;&lt;br /&gt;&lt;div&gt;&lt;a href="http://4.bp.blogspot.com/_dUxzF14Tgas/S9ANM07S0dI/AAAAAAAAA4E/uLeSCaDGRO8/s1600/Invitation_2.jpg"&gt;&lt;img id="BLOGGER_PHOTO_ID_5462880862017343954" style="DISPLAY: block; MARGIN: 0px auto 10px; WIDTH: 320px; CURSOR: hand; HEIGHT: 226px; TEXT-ALIGN: center" alt="" src="http://4.bp.blogspot.com/_dUxzF14Tgas/S9ANM07S0dI/AAAAAAAAA4E/uLeSCaDGRO8/s320/Invitation_2.jpg" border="0" /&gt;&lt;/a&gt;&lt;br /&gt;&lt;div&gt;&lt;p&gt;ಸಹೃದಯ ಕಲಾಭಿಮಾನಿಗಳಿಗೆಲ್ಲ ಆದರದ ಸ್ವಾಗತ&lt;br /&gt;&lt;/p&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-419654144820686256?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/419654144820686256/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=419654144820686256' title='5 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/419654144820686256'/><link rel='self' type='application/atom+xml' href='http://www.blogger.com/feeds/6035880729059442700/posts/default/419654144820686256'/><link rel='alternate' type='text/html' href='http://madhu-vana.blogspot.com/2010/04/blog-post.html' title='&quot;ಬಾಳ ನರ್ತಕ&quot; ಕವನ ಸಂಕಲನ ಬಿಡುಗಡೆ ಸಮಾರಂಭ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_dUxzF14Tgas/S9ANNX5mtmI/AAAAAAAAA4M/kQzyn5vovFU/s72-c/Invitation_1.jpg' height='72' width='72'/><thr:total>5</thr:total></entry><entry><id>tag:blogger.com,1999:blog-6035880729059442700.post-3880142950560519328</id><published>2010-03-17T02:32:00.000-07:00</published><updated>2010-03-17T02:41:49.795-07:00</updated><title type='text'>ಸಂದಿಗ್ಧ</title><content type='html'>&lt;p align="justify"&gt;ಹಾಸಿಗೆಗೆ ತಲೆ ಕೊಟ್ಟರೆ ಸಾಕು, ಒತ್ತರಿಸಿಕೊಂಡು ಬರುವಷ್ಟು ನಿದ್ದೆ. ಒಂದು ವಾರದಿಂದ ಆಫೀಸ್ ಕೆಲಸದ ಒತ್ತಡ, ಡೆಡ್ ಲೈನಿನ ಆತಂಕ ಎಲ್ಲಾ ಸೇರಿ ತಲೆ ಚಿಟ್ಟು ಹಿಡಿದು ಹೋಗಿತ್ತು. ಇವತ್ತು ಸ್ವಲ್ಪ ನಿರಾಳ. ಅದಕ್ಕೇ ಇಷ್ಟೊಂದು ನಿದ್ದೆ ಬರ್ತಾ ಇರಬೇಕು. ಇನ್ನೇನು ದಿಂಬಿಗೆ ತಲೆ ಕೊಡಬೇಕು, ಅಷ್ಟರಲ್ಲೇ ಮಗಳು ಒಂದು ನೋಟ್ ಬುಕ್ ಹಿಡಿದುಕೊಂಡು ಬಂದಳು. "ಅಪ್ಪಾ, ವಿವೇಕಾನಂದರ ಬಗ್ಗೆ ಒಂದು ಭಾಷಣ ಬರ್ದುಕೊಡು, ಪ್ಲೀಸ್. ನಾಡಿದ್ದು ನಮ್ಮ ಸ್ಕೂಲಲ್ಲಿ ಕಾಂಪಿಟೇಶನ್ ಇದೆ. ನಾನು ಹೆಸ್ರು ಕೊಟ್ಟಿದ್ದೀನಿ" ಅಂತ. ಅವಳಿಗೂ ನಿದ್ದೆ ಜೋರಾಗಿ ಬಂದಿದೆ ಅಂತ ಅವಳ ಕಣ್ಣುಗಳೇ ಹೇಳುತ್ತಿದ್ದವು. ಸಾಮಾನ್ಯವಾಗಿ ಒಂಬತ್ತೂವರೆಗೆಲ್ಲಾ ಮಲಗುವವಳು ಇವತ್ತು ನನಗಾಗಿ ಹತ್ತು ಘಂಟೆಯ ತನಕ ಕಾಯ್ದಿದ್ದಾಳೆ.&lt;/p&gt;&lt;p align="justify"&gt;ನಾನು ತಕ್ಷಣಕ್ಕೆ ಏನೂ ಹೇಳಲಿಲ್ಲ. ಮನಸ್ಸೆಲ್ಲ ಖಾಲಿ ಖಾಲಿ. ನಾನು ಸುಮ್ಮನಿದ್ದುದನ್ನು ನೋಡಿ ಅವಳೇ ಶುರು ಮಾಡಿದಳು. "ಮೊನ್ನೆನೇ ಹೇಳಿದ್ರು ಸ್ಕೂಲಲ್ಲಿ. ಅಮ್ಮ ಹೇಳಿದ್ರು, ನೀನು ಚೆನ್ನಾಗಿ ಭಾಷಣ ಬರ್ದುಕೊಡ್ತೀಯಾ ಅಂತ. ಮೊನ್ನೆಯಿಂದ ನೀನು ಸಿಕ್ಕೇ ಇಲ್ಲಾ ನನಗೆ. ಅಮ್ಮಾ ನಂಗೆ ಪ್ರಾಮಿಸ್ ಮಾಡಿದ್ರು ನಿನ್ನೆನೇ ಬರೆಸಿ ಕೊಡ್ತಿನಿ ಅಂತ. ಇವತ್ತಾದ್ರೂ ರೆಡಿ ಆಗಿಲ್ಲ, ಏನು ಮಾಡ್ಲಿ ನಾನು?". ಅವಳ ಜೋಲು ಮೋರೆ ನೋಡಿ ನನಗೆ ತುಂಬಾ ಬೇಜಾರಾಯ್ತು. "ವಿವೇಕಾನಂದರ ಬಗ್ಗೆ ತುಂಬಾ ಗೊತ್ತು ನಿಂಗೆ ಅಂತ ಅಮ್ಮ ಹೇಳಿದ್ಳು. ಈಗ ಒಂದು ೧೦ ನಿಮಿಷದಲ್ಲಿ ಬರೆದು ಕೊಡಕ್ಕೆ ಆಗಲ್ವಾ?" ಒಂದು ಮುಗ್ಧ ಪ್ರಶ್ನೆ!. ನಾನು ನಿಟ್ಟುಸಿರು ಬಿಟ್ಟೆ. ಮಧ್ಯದಲ್ಲಿ ಇವಳದ್ದು ಸಂಧಾನ. "ಪುಟ್ಟಿ, ಅಪ್ಪಂಗೆ ತುಂಬಾ ಸುಸ್ತಾಗಿದೆ ಇವತ್ತು, ನಾಳೆ ಬರೆದುಕೊಟ್ರೆ ಆಗಲ್ವಾ?". "ನಾಳೆ ಬರೆದುಕೊಟ್ಟರೆ ನಾನು ಪ್ರಿಪೇರ್ ಆಗೋದು ಯಾವಾಗ?, ನಾಡಿದ್ದೇ ಕಾಂಪಿಟೇಶನ್ನು" ಅವಳ ಸಂದಿಗ್ಧ!. ಕೊನೆಗೆ ನಾನೇ ಸೂಚಿಸಿದೆ. "ಒಂದು ಕೆಲ್ಸ ಮಾಡೋಣ ಪುಟ್ಟೀ, ನಾಳೆ ಬೆಳಿಗ್ಗೆ ಬೇಗ ಎದ್ದು ಬರೆದುಕೊಡ್ತೀನಿ ಆಯ್ತಾ? ನಾಳೆನೆಲ್ಲಾ ನೀನು ಪ್ರಿಪೇರ್ ಆಗಬಹುದು." ಈಗ ಸ್ವಲ್ಪ ಗೆಲುವಾಯ್ತು ಅವಳ ಮುಖ. "ಮರೀಬೇಡಿ ಅಪ್ಪಾ ಬೆಳಿಗ್ಗೆ, ಗುಡ್ ನೈಟ್" ಅಂತ ವಾಪಾಸ್ ಹೋದಳು. &lt;/p&gt;&lt;p align="justify"&gt;"ನೀನ್ಯಾಕೆ ಮುಂಚೆನೇ ಹೇಳ್ಲಿಲ್ಲ ನಂಗೆ?" ನಾನು ಹೆಂಡತಿಯ ಮೇಲೆ ರೇಗಿದೆ. "ಸುಮ್ನೆ ನನ್ನ ಮೇಲೆ ಕೂಗ್ಬೇಡಿ ನೀವು. ನಿಮಗೆಲ್ಲಿ ಟೈಮ್ ಇತ್ತು? ದಿನಾ ರಾತ್ರಿ ಎಷ್ಟು ಗಂಟೆಗೆ ಬರ್ತಿದೀರಾ ಅಂತ ಗೊತ್ತು ತಾನೇ ನಿಮಗೆ? ನಿಮಗಿರೋ ಟೆನ್ಷನ್ನಲ್ಲಿ ಇದೊಂದು ಬೇರೆ ಕೇಡು ಅಂತ ಹೇಳ್ಲಿಲ್ಲ ನಾನು." ಅವಳಿಗೂ ರೇಗಿರಬೇಕು. ಸುಮ್ಮನೆ ಹಾಸಿಗೆ ಮೇಲೆ ಬಿದ್ದುಕೊಂಡೆ. ಒಂತರಾ ಅಸಹಾಯಕತನ, ಬೇಜಾರು, ದುಃಖ ಎಲ್ಲವೂ ಆವರಿಸಿಕೊಂಡಿತು ನನ್ನನ್ನು. ನಿದ್ದೆ ಸಂಪೂರ್ಣವಾಗಿ ಹಾರಿಹೋಗಿತ್ತು. ಮಗಳಿಗಾಗಿ ದಿನಕ್ಕೆ ಒಂದು ಅರ್ಧ ತಾಸಾದರೂ ಮೀಸಲಿಡಲು ನನಗೇಕೆ ಸಾಧ್ಯವಾಗುತ್ತಿಲ್ಲ? ಇತ್ತೀಚೆಗಂತೂ ಆಫೀಸಿಗೆ ಹೋದ ಮೇಲೆ ಮನೆ ಕಡೆ, ಮನೆಯವರ ಕಡೆ ಒಂಚೂರೂ ಗಮನ ಕೊಡಲೇ ಆಗುತ್ತಿಲ್ಲ, ಅಷ್ಟೆಲ್ಲ ಒತ್ತಡ. ನಿಜಕ್ಕೂ ಇಷ್ಟೆಲ್ಲಾ ಒತ್ತಡದಲ್ಲಿ ಕೆಲಸ ಮಾಡಲೇ ಬೇಕಾ? ಅಥವಾ ವಿನಾಕಾರಣ ನಾನೇ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇನಾ? ಒಂದೂ ತಿಳಿಯುತ್ತಿಲ್ಲ. "ನೀನು ಕೆಲಸ ಮತ್ತು ಸಂಸಾರ ಎರಡನ್ನೂ ನಿಭಾಯಿಸುವುದರಲ್ಲಿ ಸೋತಿದ್ದೀಯಾ" ಎಂದು ಮನಸ್ಸು ಪದೇಪದೇ ಹೇಳಲು ಶುರುಮಾಡಿತು. ಸುಮ್ಮನೆ ತಲೆಕೊಡವಿದೆ.&lt;/p&gt;&lt;p align="justify"&gt;ಹಾಸಿಗೆಯ ಮೇಲೆ ಬಿದ್ದುಕೊಂಡೇ ಯೋಚಿಸಲು ಶುರುಮಾಡಿದೆ. ಮನಸ್ಸು ಬೇಡವೆಂದರೂ ಹಿಂದೆ ಓಡಿತು. ನಾವು ಚಿಕ್ಕವರಿದ್ದಾಗ ಪ್ರತೀ ಸಲ ಸ್ವಾತಂತ್ರೋತ್ಸವಕ್ಕೂ, ಗಣರಾಜ್ಯ ದಿನದಂದೂ ಅಪ್ಪ ತಪ್ಪದೇ ಭಾಷಣ ಬರೆದುಕೊಡುತ್ತಿದ್ದರು. ಅದನ್ನು ಬಾಯಿಪಾಠ ಮಾಡಿಕೊಂಡು ಹೋಗಿ ನಾವು ಶಾಲೆಯಲ್ಲಿ ಹೇಳುತ್ತಿದ್ದೆವು. ಹೈಸ್ಕೂಲ್ ಗೆ ಬಂದ ಮೇಲೆ ಪ್ರತೀ ವರ್ಷವೂ ಮಾರಿಗುಡಿಯಲ್ಲಿ ಆಗುವ ನವರಾತ್ರಿ ಸ್ಪರ್ಧೆಯಲ್ಲಿ ಖಾಯಂ ಆಗಿ ಅಪ್ಪ ಬರೆದುಕೊಟ್ಟ ಪ್ರಬಂಧವನ್ನು ಬರೆದು ನಾನು ಪ್ರೈಜ್ ಗೆದ್ದಿದ್ದೆ. ಸ್ಕೂಲ್ ಮತ್ತು ಹೈಸ್ಕೂಲಿನಲ್ಲಿ ಆಗುವ ಯಾವುದೇ ತರಹದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅಪ್ಪ ನಮ್ಮನ್ನು ಯಾವಾಗಲೂ ಹುರಿದುಂಬಿಸುತ್ತಿದ್ದರು, ಅಲ್ಲದೇ ತಾವು ಜೊತೆಗೆ ಕುಳಿತು ಸಹಾಯಮಾಡುತ್ತಿದ್ದರು. ಅವರೂ ಶಾಲಾ ಶಿಕ್ಷಕರಾಗಿದ್ದುದು ಇವಕ್ಕೆಲ್ಲ ಮೂಲ ಪ್ರೇರಣೆಯಾಗಿದ್ದಿರಬೇಕು, ಆದರೆ ಈಗ ಯೋಚಿಸಿದರೆ ಅವರ ಶೃದ್ಧೆ ಮತ್ತು ಉತ್ಸಾಹ ಬೆರಗು ಹುಟ್ಟಿಸುವಷ್ಟು ಅಸಾಧಾರಣವಾಗಿತ್ತು. ಪ್ರತೀ ವರ್ಷ ನಡೆಯುವ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅವರು "ನೂಕ್ಲಿಯರ್ ರಿಯಾಕ್ಟರ್’ ಅಥವಾ ’ಗೋಬರ್ ಗ್ಯಾಸ್" ಮಾಡೆಲ್ ಮಾಡಿಕೊಡುವಾಗ ತೆಗೆದುಕೊಂಡ ಶ್ರಮ, ಉತ್ಸಾಹ, ಅಲ್ಲದೆ ಅವು ಹೇಗೆ ಕೆಲಸಮಾಡುತ್ತವೆ ಎಂಬುದರ ವಿವರಣೆ ಇಂದಿಗೂ ನನ್ನ ಕಣ್ಣ ಮುಂದಿದೆ. ಅವಕ್ಕೆಲ್ಲ ಪ್ರಥಮ ಸ್ಥಾನ ಬಂದಾಗ ನನಗಾದ ಸಂತೋಷ, ಮಾತುಗಳಲ್ಲಿ ಹಿಡಿಸಲಾರದಷ್ಟು!. ದಿನಪತ್ರಿಕೆಗಳಲ್ಲಿ ಬರುವ ಪದಬಂಧವನ್ನು ಬಿಡಿಸುವಾಗಲೆಲ್ಲ ಅವರು ನನ್ನನ್ನು ಕರೆದು ಹತ್ತಿರ ಕುರಿಸಿಕೊಳ್ಳುತ್ತಿದ್ದರು. ಅಲ್ಲದೆ ಆ ಶಬ್ದಗಳು ಹೇಗೆ ಉದ್ಭವವಾದವು ಎಂಬುದನ್ನೂ ವಿವರಿಸುತ್ತಿದ್ದರು. ಅವರ ಶಾಲಾ ಲೈಬ್ರರಿಯಿಂದ ಹಲವಾರು ಒಳ್ಳೆಯ ಕನ್ನಡ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ನಮ್ಮ ರಜಾಕಾಲದ ಬಹುಪಾಲನ್ನು ನಾವು ಅವನ್ನು ಓದಿಕಳೆಯುತ್ತಿದ್ದೆವು. ಹೀಗೆ ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲವನ್ನೂ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು.&lt;/p&gt;&lt;p align="justify"&gt;ಹಾಗಾದರೆ ನಮ್ಮ ಪಾಲಕರು ನಮಗೆ ಮೀಸಲಿಟ್ಟಷ್ಟು "ಕ್ವಾಲಿಟಿ ಟೈಮ್", ನಾವು ನಮ್ಮ ಮಕ್ಕಳಿಗೆ ಕೊಡುವುದು ಅಷ್ಟು ಕಷ್ಟವೇ? ನಾವೇ ಸೃಷ್ಟಿಸಿಕೊಂಡ ಅಥವಾ ನಮ್ಮ ಕೆಲಸದ ರೀತಿಯ ಮಾನಸಿಕ ಒತ್ತಡ, ರಸ್ತೆ ಟ್ರಾಫಿಕ್ಕಲ್ಲೇ ದಿನಕ್ಕೆ ಮೂರು ನಾಲ್ಕು ತಾಸು ಕಳೆಯುವ ಅನಿವಾರ್ಯತೆ, ನಮ್ಮಲ್ಲಿರುವ ಆಸಕ್ತಿ ಅಥವಾ ಶೃದ್ಧೆಯ ಕೊರತೆ ಇವೆಲ್ಲವೂ ಇದಕ್ಕೆ ಕಾರಣವಿರಬಹುದಾ?. ಕಾರಣ ಯಾವುದೇ ಇರಬಹುದು, ಆದರೆ ತಲೆಮಾರಿನಿಂದ ತಲೆಮಾರಿಗೆ ಹೀಗೆ ಅಭಿರುಚಿಗಳು ಮತ್ತು ಆಸಕ್ತಿಗಳು ಸೋರಿಹೋಗುತ್ತಾ ಇದ್ದರೆ ಮುಂದೆ ಜೀವನ ಬರೀ ಯಾಂತ್ರಿಕವಾಗುವುದಿಲ್ಲವೆ? ಯಾವಾಗ ಕೇಳಿದರೂ ’ನಂಗೆ ಈಗ ಟೈಮ್ ಇಲ್ಲ, ಬೇರೆ ಕೆಲಸಗಳಿವೆ" ಅನ್ನೋ ರೆಡಿಮೇಡ್ ಉತ್ತರವನ್ನು ಮನಸ್ಸು ಸದಾ ಕೊಡುತ್ತಲೇ ಇರುತ್ತದೆ. "ಸಂಗೀತವನ್ನು ಸೀರಿಯಸ್ಸಾಗಿ ಕಲೀಬೇಕು" ಅಂತ ೮ ತಿಂಗಳ ಹಿಂದೆ ಅನ್ಕೊಂಡಿದ್ದೆ. "ಸಿಗೋದೊಂದು ರವಿವಾರ,ಅವತ್ತೂ ಪ್ರಾಕ್ಟೀಸ್ ಮಾಡ್ತಾ ಕುಳಿತರೆ ಅಷ್ಟೇ" ಅಂತ ಮನಸ್ಸು ಕಾರಣ ಹೇಳಿತು. ಅಲ್ಲಿಗೆ ಅದರ ಕಥೆ ಮುಗೀತು. "ಹೊಸ ಮನೆಗೆ ಒಂದು ಚೆಂದನೆಯ ಪೇಂಟಿಂಗ್ ಬಿಡಿಸಿ ಹಾಲ್ ನಲ್ಲೇ ತೂಗುಹಾಕಬೇಕು" ಅಂತ ಪೇಪರ್,ಹೊಸ ಬಣ್ಣ ಎಲ್ಲಾ ತಂದಿದಾಯ್ತು, "ಸಿಕ್ಕಾಪಟ್ಟೆ ಸಣ್ಣ ಹಿಡಿದು ಮಾಡೋ ಕೆಲಸ ಈ ಚಿತ್ರ ಬರೆದು ಪೇಂಟಿಂಗು ಮಾಡೋದು, ಮುಂದಿನ ವಾರ ಟೈಮ್ ಮಾಡ್ಕೊಂಡು ಮಾಡಕ್ಕಾಗಲ್ವಾ?" ಅಂತ ಅಂದುಕೊಂಡಿದ್ದೇ ಸರಿ, ಆ ಮುಂದಿನವಾರ ಬಂದೇ ಇಲ್ಲ! ಯಾವುದೇ ಒಂದು ಅತೀ ತಾಳ್ಮೆ ಮತ್ತು ಶ್ರದ್ಧೆ ಬೇಡುವ ಕೆಲಸವನ್ನು ಸರಿಯಾಗಿ ಮಾಡಿದ್ದೇ ದಾಖಲೆಯಿಲ್ಲ. ಬರೀ ಸಮಯದ ಅಭಾವ ಇದಕ್ಕೆಲ್ಲ ಕಾರಣವಾಗಿರಬಹುದಾ? "ಹೌದು" ಅನ್ನಲು ಮನಸ್ಸು ಯಾಕೋ ಒಪ್ತಾ ಇಲ್ಲ! ಉತ್ತರ ಎಲ್ಲೋ ನನ್ನಲ್ಲೇ ಇದೆ. ಒಂಥರಾ ಎಲ್ಲವನ್ನೂ ಓದಿದ್ದೂ, ಪರೀಕ್ಷೆಯಲ್ಲಿ ಏನೂ ಬರೆಯಲಿಕ್ಕಾಗದ ವಿದ್ಯಾರ್ಥಿಯ ಪರಿಸ್ಥಿತಿಯಂತೆ ಮನಸು ವಿಲವಿಲ ಒದ್ದಾಡಿತು.&lt;/p&gt;&lt;p align="justify"&gt;ಈಗಿನ ಮಕ್ಕಳದಂತೂ ವಯಸ್ಸಿಗೆ ಮೀರಿದ ಮಾತು, ವರ್ತನೆ. ನಮ್ಮ ಅಪ್ಪ ಅಮ್ಮಂದಿರಿಗೆ ಹೀಗೆಲ್ಲ ಅನ್ನಿಸಿದ್ದು ನನಗೆ ಅನುಮಾನ. ಅವರ ಗ್ರಹಿಕಾ ಸಾಮರ್ಥ್ಯ ಕೂಡಾ ಜಾಸ್ತಿ. ಟೀವಿಯಲ್ಲಿ ಬರೋ ಕಾರ್ಯಕ್ರಮಗಳನ್ನು ನೋಡಿದ್ರೆ ಗೊತ್ತಾಗಲ್ವೆ? ಎಷ್ಟು ಬೇಗ ಹೇಳಿ ಕೊಟ್ಟಿದ್ದನೆಲ್ಲ ಕಲಿತುಬಿಡ್ತಾರೆ? ನಾಲ್ಕು ಜನರ ಎದುರು ನಿಂತು ಮಾತನಾಡುವುದಕ್ಕೂ, ಹಾಡುವುದಕ್ಕೂ ಒಂಚೂರು ಭಯವಿಲ್ಲ!. ಐದನೇತ್ತಿಯಲ್ಲಿದ್ದಾಗ ಅಪ್ಪ ಹೇಳಿಕೊಟ್ಟಿದ್ದ "ಸಾರೇ ಜಹಾಂಸೆ ಅಚ್ಛಾ"ವನ್ನು ಹಾಡನ್ನು ಯಾವುದೋ ಸ್ಪರ್ಧೆಯಲ್ಲಿ ಹಾಡಿ ಮುಗಿಸೋವಷ್ಟರಲ್ಲಿ ನಾನು ಬೆವೆತುಹೋಗಿದ್ದೆ. ಅದೂ ಕೊನೆ ಸಾಲನ್ನು ಮರೆತು ಹೇಗೋ ತಪ್ಪು ತಪ್ಪು ಹಾಡಿ ಅಪ್ಪನ ಹತ್ತಿರ ಬೈಸಿಕೊಂಡಿದ್ದೆ. ಈಗಿನ ಮಕ್ಕಳಿಗೆ ಸಿಗುತ್ತಿರುವ ಸವಲತ್ತು, ಅವಕಾಶ, ಅಪ್ಪ ಅಮ್ಮಂದಿರ ಪ್ರೋತ್ಸಾಹ ಎಲ್ಲ ಕಾರಣವಿರಬಹುದು, ಆದರೆ ಅವರ ಸಾಮರ್ಥ್ಯವನ್ನಂತೂ ಕಡೆಗಣಿಸುವ ಮಾತೇ ಇಲ್ಲ. ಬಹುಷಃ ಇದೂ ನನ್ನ ಆತಂಕಕ್ಕೂ ಒಂದು ಕಾರಣವಿರಬೇಕು. ಅವರ ಬೌದ್ಧಿಕ ಸಾಮರ್ಥ್ಯವನ್ನು ನಾವು ಸರಿಯಾದ ದಾರಿಯಲ್ಲಿ ತೊಡಗಿಸಿ ಮಾರ್ಗದರ್ಶನ ನೀಡುತ್ತಿದ್ದೇವೆಯಾ ಅನ್ನುವುದು. ಆ ಕೆಲಸವನ್ನು ಅಪ್ಪ ಎಷ್ಟು ಚೆನ್ನಾಗಿ ನಿರ್ವಹಿಸಿದ್ದರು ಅನ್ನುವುದನ್ನು ಈಗ ಯೋಚಿಸಿದರೆ ಅವರ ಬಗ್ಗೆ ಹೆಮ್ಮೆಯನಿಸುತ್ತದೆ. ಆದರೂ ಎಷ್ಟೋ ಸಲ ನಾವು ಅವರನ್ನು ನಿರಾಸೆಗೊಳಿಸಿದ್ದುಂಟು. "ತಬಲಾ ಸಾಥ್ ಕೊಡುವಷ್ಟಾದರೂ ತಬಲಾ ಕಲಿ" ಅಂದು ಅವರು ಎಷ್ಟು ಸಲ ಹೇಳಿದ್ದರೋ ಏನೋ? ಆವಾಗ ಅದು ತಲೆಯೊಳಗೆ ಇಳಿಯಲೇ ಇಲ್ಲ. ಈಗ ಅದರ ಬಗ್ಗೆ ಪಶ್ಚಾತಾಪವಿದೆ. "ನಾನು ಸರಿಯಾಗಿ ಸಾಧಿಸಲಾಗದಿದ್ದನ್ನು ಮಕ್ಕಳು ಕಲಿತು ಸಾಧಿಸಲಿ" ಅನ್ನುವ ಆಸೆ ಎಲ್ಲ ಪಾಲಕರಿಗೂ ಇರುತ್ತದೆಯಲ್ಲವೆ? ನಾಲ್ಕು ಜನರ ಮುಂದೆ ಅದರ ಬಗ್ಗೆ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿದ್ದ ಬೇಸರ, ಹತಾಶೆ ಆಗ ಗೊತ್ತಾಗುತ್ತಿರಲಿಲ್ಲ. ಈಗ ಅದರ ಅರಿವಾಗುತ್ತಿದೆ. "ಇವನ ಹತ್ತಿರ ಈಗ ಮೂರು ದಿನ ಕೇಳುವಷ್ಟು ಸಂಗೀತದ ಕಲೆಕ್ಷನ್ ಇದೆ" ಎಂದು ಈಗ ಅಪ್ಪ ಹೆಮ್ಮೆಯಿಂದ ಬೀಗುವಾಗ ಅವರ ಕಣ್ಣಲ್ಲಿನ ಹೊಳಪು ಖುಶಿ ಕೊಡುತ್ತದೆ. ಯಾವುದೋ ಅತೀ ಕ್ಲಿಷ್ಟವಾದ ರಾಗವನ್ನು ಅಪ್ಪನಿಗೆ ಕೇಳಿಸಿ, ಇದು ಹೀಗೆ ಎಂದು ವಿವರಿಸುವಾಗ ಅಪ್ಪನಿಗಾಗುವ ಸಂತೋಷ ಅವನು ಮಾತನಾಡದೆಯೂ ಗೊತ್ತಾಗುತ್ತದೆ. ಮಕ್ಕಳು ನಮ್ಮ ಆಸೆಗೆ ತಕ್ಕುದಾಗಿ ವಿಶಿಷ್ಟವಾದುದನ್ನು ಸಾಧಿಸಿದಾಗ ಆಗುವ ಸಂತಸದ ಮಹತ್ವ ಈಗ ನನಗೆ ಯಾರೂ ಹೇಳಿಕೊಡದೇ ಅರ್ಥವಾಗುತ್ತದೆ.&lt;/p&gt;&lt;p align="justify"&gt;ಎಲ್ಲಿಂದೋ ಶುರುವಾದ ಯೋಚನೆಗಳು ಎಲ್ಲಿಗೋ ಕರೆದುಕೊಂಡು ಹೋದವು. ಎಷ್ಟೋ ಗೊಂದಲಗಳಿದ್ದರೂ ಮನಸ್ಸು ಒಂದು ತಹಬದಿಗೆ ಬಂದ ಹಾಗೆ ಅನ್ನಿಸಿತು. "ನಿನ್ನ ಆತಂಕ ಅತ್ಯಂತ ಸಹಜ, ಅತಿಯಾಗಿ ಯೋಚಿಸುವುದನ್ನು ಬಿಡು, ಬರೀ ನೆಗೆಟಿವ್ ಆಗಿ ಯೋಚನೆ ಮಾಡುತ್ತಿದ್ದೀಯಾ" ಎಂದು ಮನಸ್ಸು ಎಚ್ಚರಿಸಲು ಶುರು ಮಾಡಿತು. ಬಹುಷಃ ನಾನು ಸುಮ್ಮನೆ ಆತಂಕಪಡುತ್ತಿದ್ದೇನೆ ಅನ್ನಿಸಿತು. ಎಲ್ಲ ಪಾಲಕರೂ ಈ ಸನ್ನಿವೇಶವನ್ನು ದಾಟಿಯೇ ಮುಂದೆ ಬಂದಿರುತ್ತಾರೆ. ನನ್ನ ಅಪ್ಪನಿಗೂ ಹೀಗೆ ಅನ್ನಿಸಿರಬಹುದು. "ಯೋಚನೆ ಮಾಡುವುದನ್ನು ಬಿಡು, ಯೋಚನೆಗಳನ್ನು ಕಾರ್ಯರೂಪಕ್ಕೆ ತಾ" ಎಂದು ಮನಸು ಹೇಳತೊಡಗಿತು. ನಿಜ, ಅಪ್ಪ ಹೇಳಿಕೊಟ್ಟ ರೀತಿಗಳು ನನಗೆ ಪಾಠವಾಗಬೇಕು. ಎಷ್ಟೋ ಸಲ ಹಾಗಾಗಿರುತ್ತದೆ. ನಾವು ಯಾರ್ಯಾರನ್ನೋ ನಮ್ಮ "ರೋಲ್ ಮಾಡೆಲ್" ಆಗಿ ಇಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಹತ್ತಿರವೇ ಇರುವ ನಮ್ಮವರ ಮಹತ್ವ ಗೊತ್ತಾಗುವುದೇ ಇಲ್ಲ. ನಮ್ಮ ಅಪ್ಪ, ಅಮ್ಮ, ಅಕ್ಕ, ತಮ್ಮಂದಿರಿಂದಲೇ ಕಲಿಯುವುದೇ ಬೇಕಾದಷ್ಟಿರುತ್ತವೆ. " ಅಂಗೈನಲ್ಲೇಬೆಣ್ಣೆ ಇಟ್ಟುಕೊಂಡು ಊರಲ್ಲೆಲ್ಲ ತುಪ್ಪ ಹುಡುಕಿದ ಹಾಗೆ" ನಾವು ಎಲ್ಲೋ ಸ್ಪೂರ್ತಿಗಾಗಿ ಹುಡುಕುತ್ತಲೇ ಇರುತ್ತವೆ. ಇಲ್ಲ, ಇನ್ನು ಮೇಲೆ ಎಷ್ಟು ಕಷ್ಟವಾದರೂ ಒಂದಷ್ಟು ಸಮಯವನ್ನು ಮಗಳಿಗಾಗಿಯೇ ಮೀಸಲಿಡುತ್ತೇನೆ ಎಂದು ಧೃಢ ನಿರ್ಧಾರ ಮಾಡಿಕೊಂಡೆ.&lt;/p&gt;&lt;p align="justify"&gt;ರಾತ್ರಿಯ ನೀರವವನ್ನು ಭೇದಿಸಿ ಒಂದೇ ಸಮನೆ ಮೊಬೈಲು ಕಿರ್ರನೆ ಕೀರಿ ನನ್ನ ಯೋಚನಾ ಸರಣಿಯನ್ನು ನಿಲ್ಲಿಸಿತು. ಹೆಂಡತಿ ಅಸ್ಪಷ್ಟವಾಗಿ ಗೊಣಗಿದ್ದು ಕೇಳಿತು. ಈ ರಾತ್ರಿಯಲ್ಲಿ ಯಾರಪ್ಪಾ ಫೋನ್ ಮಾಡಿದವರು ಅಂತ ಕುತೂಹಲದಲ್ಲಿ ನೋಡಿದರೆ ಸಂದೀಪ್, ನನ್ನ ಪ್ರಾಜೆಕ್ಟ ಮ್ಯಾನೇಜರು. ಮನಸ್ಸು ಏನೋ ಕೆಟ್ಟದನ್ನು ಊಹಿಸಿತು. ಈ ಮಧ್ಯರಾತ್ರಿ ಮ್ಯಾನೇಜರಿನಿಂದ ಫೋನ್ ಬರುವುದೆಂದರೆ ಒಳ್ಳೆ ಸುದ್ದಿಯಾಗಿರಲು ಸಾಧ್ಯವೇ? ಆಚೆಕಡೆಯಿಂದ ಸ್ವಲ್ಪ ಕಂಗಾಲಾದ ಧ್ವನಿ. ಏನೋ "ರಿಲೀಸ್ ಸ್ಟಾಪರ್" ಅಂತೆ, ತುಂಬಾ ಅರ್ಜೆಂಟ್ ಪ್ರಾಬ್ಲಮ್ಮು, ಬೆಳಿಗ್ಗೆ ಏಳು ಗಂಟೆಗೆ ಕಸ್ಟಮರ್ ಕಾಲ್ ಇದೆ. ಆರು-ಆರುವರೆಗೆ ಆಫೀಸ್ ಗೆ ಬರಲು ಬುಲಾವ್. ಏನೋ ಡಿಸ್ಕಸ್ ಮಾಡಬೇಕಂತೆ. ಸರಿ ಅಂತ ಫೋನ್ ಇಟ್ಟೆ. "ಬರ್ತೀನಿ, ಬರ್ತೀನಿ" ಅಂತ ಹೆದರಿಸುತ್ತಾ ಇದ್ದ ನಿದ್ರೆ ಈಗ ಸಂಪೂರ್ಣವಾಗಿ ಹೊರಟು ಹೋಯ್ತು. ಹಾಸಿಗೆಯಲ್ಲಿ ಸುಮ್ಮನೇ ಹೊರಳಾಡಲು ಮನಸ್ಸಾಗಲಿಲ್ಲ. ಎದ್ದು ಮುಖ ತೊಳೆದುಕೊಂಡು ಹಾಲ್ ಗೆ ಬಂದು ಕೂತೆ. ತಕ್ಷಣ ಪುಟ್ಟಿಯ ಭಾಷಣ ನೆನಪಾಯ್ತು. ಒಂದು ಬಿಳಿ ಹಾಳೆ ತೆಗೆದುಕೊಂಡು ಬರೆಯಲು ಶುರು ಮಾಡಿದೆ. ವಿವೇಕಾನಂದರ "ನಾಡಿಗೆ ಕರೆ" ಪುಸ್ತಕ ನೆನಪಾಯ್ತು. ಎಂಥಹ ಧೀಮಂತ ವ್ಯಕ್ತಿತ್ವ? "ಏಳಿ..ಏದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ" ಅವರದ್ದೇ ಮಾತುಗಳು. ಬಹುಷಃ ನನಗೇ ಹೇಳಿದ್ದಿರಬೇಕು. ಮೈಮೇಲೆ ಏನೋ ಆವೇಶ ಬಂದವರ ಹಾಗೆ ಬರೆಯುತ್ತಲೇ ಹೋದೆ.&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-3880142950560519328?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/3880142950560519328/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=3880142950560519328' title='5 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/3880142950560519328'/><link rel='self' type='application/atom+xml' href='http://www.blogger.com/feeds/6035880729059442700/posts/default/3880142950560519328'/><link rel='alternate' type='text/html' href='http://madhu-vana.blogspot.com/2010/03/blog-post.html' title='ಸಂದಿಗ್ಧ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>5</thr:total></entry><entry><id>tag:blogger.com,1999:blog-6035880729059442700.post-5294258846799201624</id><published>2009-09-21T05:47:00.000-07:00</published><updated>2009-09-21T05:50:15.727-07:00</updated><title type='text'>ಕತ್ತಲೆಯಿಂದ ಬೆಳಕಿನೆಡೆಗೆ</title><content type='html'>&lt;div align="justify"&gt;ಕರೆಂಟು(ವಿದ್ಯುತ್ ಶಕ್ತಿ), ಮಾನವ ಸಮಾಜದಲ್ಲಿ ಆದ ಅತ್ಯಂತ ಉಪಯೋಗಿ ಮತ್ತು ಕ್ರಾಂತಿಕಾರಕವಾದ ಸಂಶೋಧನೆ ಎಂದು ನೀವು ಬಲವಾಗಿ ನಂಬಿದ್ದಲ್ಲಿ, ನೀವೊಮ್ಮೆ ಅವಶ್ಯವಾಗಿ ನಮ್ಮೂರಿಗೆ ಬಂದು ಹೋಗಲೇ ಬೇಕು. ಯಾಕೆಂದರೆ ನಮ್ಮೂರಿನಲ್ಲಿ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯಗಳು ನಿಮಗೆ ದೊರೆಯುವುದಲ್ಲಿ ಸಂಶಯವೇ ಇಲ್ಲ.&lt;br /&gt;&lt;br /&gt;ನಾವು ಊರಿಗೆ ಹೋದಾಗ ಯಾವತ್ತೂ ಸಹ ಕರೆಂಟು ಇರುವುದೇ ಇಲ್ಲ. ನಾವೂ ಸಹ "ಕರೆಂಟ್ ಯಾವಾಗ ತೆಗೆದರು?, ಎಷ್ಟು ಹೊತ್ತಿಗೆ ಬರಬಹುದು?" ಎಂಬ ಪ್ರಶ್ನೆಗಳನ್ನು ಕೇಳುವ ಸಾಹಸ ಮಾಡುವುದಿಲ್ಲ.ಯಾಕೆಂದರೆ ಅಲ್ಲಿ ಯಾರಿಗೂ ಕರೆಂಟು ಬಂದಿದ್ದು ಮತ್ತು ಹೋಗಿದ್ದರ ಅರಿವು ಮತ್ತು ಜ್ನಾಪಕ ಇರುವುದು ಸಾಧ್ಯವೇ ಇಲ್ಲ. "ಟೈಮ್ ಎಂಡ್ ಟೈಡ್ ವೇಟ್ ಫಾರ್ ನನ್" ಎಂಬ ಆಂಗ್ಲ ಸೂಕ್ತಿಯನ್ನು ನಮ್ಮೂರಿನಲ್ಲಿ "ಟೈಮ್ ಎಂಡ್ ಕರೆಂಟ್ ವೇಟ್ ಫಾರ್ ನನ್" ಎಂದು ಅವಶ್ಯವಾಗಿ ಮಾರ್ಪಡಿಸಬಹುದು. ಅಪರೂಪಕ್ಕೊಮ್ಮೆ ಮನೆಯ ಮೇನ್ ಸ್ವಿಚ್ಚಲ್ಲಿ ಕೆಂಪು ದೀಪ ಉರಿಯುವುದನ್ನು ನೋಡಿದರೆ ನಮಗೆ ಖುಶಿಯಂತೂ ಖಂಡಿತವಾಗಿ ಆಗುವುದಿಲ್ಲ. ಆದರೆ ಆಶ್ಚರ್ಯವಾಗಿ "ಒಹ್, ಕರೆಂಟಿದ್ದು ಇವತ್ತು!" ಎಂಬ ಶಬ್ಧಗಳು ನಮ್ಮ ಬಾಯಿಂದ ನಮಗೆ ಗೊತ್ತಿಲ್ಲದಂತೆಯೇ ಹೊರಗೆಬಿದ್ದುಹೋಗಿರುತ್ತವೆ.&lt;br /&gt;&lt;br /&gt;ಬೆಂಗಳೂರಿನಂತ ನಗರಗಳಲ್ಲಿ ಜನರು ಎಷ್ಟರ ಮಟ್ಟಿಗೆ ಕರೆಂಟಿನ ಮೇಲೆ ಅವಲಂಬಿಸಿದ್ದಾರೆ ಎಂದು ಯೋಚಿಸಿದಾಗ ನನಗೆ ನಮ್ಮೂರಿನ ವಿದ್ಯುತ್ ಇಲಾಖೆಯ ಮೇಲೆ ಅಭಿಮಾನ ಉಕ್ಕಿ ಹರಿಯುತ್ತದೆ. ನೀವೇ ಯೋಚನೆ ಮಾಡಿ, ಬೆಳಿಗ್ಗೆ ಸ್ನಾನಕ್ಕೆ ಗೀಸರ್ರಿನಿಂದ ಹಿಡಿದು, ರಾತ್ರಿ ಟೀವಿ ನೋಡಿ ಮಲಗುವವರೆಗೂ ನಮಗೆ ಕರೆಂಟು ಎಲ್ಲದಕ್ಕೂ ಬೇಕೇ ಬೇಕು. ಒಂದು ಐದು ನಿಮಿಷ ಕರೆಂಟ್ ಇಲ್ಲದಿದ್ದರೂ ನಾವು ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಲೇ ಇರುತ್ತೇವೆ. ಜನರೆಲ್ಲವೂ ಹೀಗೆ ಯಾವುದೇ ವಸ್ತುವಿನ ಮೇಲೆ ಅತಿಯಾಗಿ ಅವಲಂಬಿಸಿವುದು ಉತ್ತಮ ನಾಗರೀಕ ಸಮಾಜದ ಲಕ್ಷಣಗಳಲ್ಲ ಎಂದೇ ನಾನು ಭಾವಿಸುತ್ತೇನೆ. ಗಾಂಧೀಜಿಯವರೂ ಇದನ್ನೇ ಅಲ್ಲವೇ ಹೇಳಿದ್ದು? "ನಮ್ಮ ಹಳ್ಳಿಗಳು ಎಲ್ಲಿಯ ತನಕ ಸ್ವಾವಲಂಬಿಗಳಾಗುವುದಿಲ್ಲವೋ, ಅಲ್ಲಿಯ ತನಕ ನಮ್ಮ ದೇಶದ ಉದ್ಧಾರ ಸಾಧ್ಯವಿಲ್ಲ" ಎಂದು? ಬಹುಷಃ ನಮ್ಮೂರಿನ ವಿದ್ಯುತ್ ಇಲಾಖೆಗೂ ಗಾಂಧೀಜಿಯ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮೇಲಿನಿಂದ ನಿಯಮಾವಳಿ ಬಂದಿರಬೇಕು. ಇಂತ ಉತ್ತಮ ನಿಯಮಗಳನ್ನು ಪಾಲಿಸಿ, ಉಳಿದವರಿಗೆಲ್ಲ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟ ನಮ್ಮೂರಿನ ವಿದ್ಯುತ್ ಇಲಾಖೆಯನ್ನು ಜನರು ವಿನಾಕಾರಣ ನಿಂದಿಸುವುದು ನೋಡಿದರೆ ನನಗೆ ನಮ್ಮ ಜನರು ಗಾಂಧೀಜಿಯ ತತ್ವಗಳನ್ನು ಪಾಲಿಸುತ್ತಲೇ ಇಲ್ಲವೆಂಬುದನ್ನು ಮತ್ತೆ ಮತ್ತೆ ಖಾತ್ರಿಯಾಗುತ್ತದೆ.&lt;br /&gt;&lt;br /&gt;"ದೀಪದ ಬುಡದಲ್ಲಿ ಕತ್ತಲೆ" ಎಂಬ ನಾಣ್ಣುಡಿಯನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ. ನಮ್ಮೂರನ್ನು ನೋಡಿದರೆ ನನಗೆ ಈ ಮಾತು ಅಕ್ಷರಶ ನಿಜವೆನ್ನಿಸುತ್ತದೆ. ನಮ್ಮೂರಿನ ಪಕ್ಕದಲ್ಲೇ ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್ ತಯಾರಿಸಿ ರಾಜ್ಯಕ್ಕೆಲ್ಲಾ ಹಂಚಲಾಗುತ್ತಿದೆ. ಇನ್ನು ಕಾಳಿ ನದಿಗೆ ಹಲವಾರು ಕಡೆ ಅಣೆಕಟ್ಟು ಕಟ್ಟಿ, ವಿದ್ಯುತ್ ತಯಾರಿಸುತ್ತಲೇ ಇದ್ದಾರೆ. ಇವೆಲ್ಲಾ ನಮ್ಮೂರಿಗೆ ಬಹಳ ಹತ್ತಿರವಿದ್ದುದರಿಂದಲೇ ನಮಗೆ ವಿದ್ಯುತ್ತನ್ನು ಕೊಡಲಾಗುತ್ತಿಲ್ಲ ಎಂದು ವಾದಿಸುವ ಅನೇಕ ನಿಷ್ಠುರವಾದಿಗಳ ಗುಂಪೊಂದು ನಮ್ಮೂರಿನಲ್ಲಿದೆ. ಅದಕ್ಕೆಂದೇ ಅವರು ತದಡಿಯಲ್ಲಿ ಸ್ತಾಪಿಸಲಾಗುತ್ತಿರುವ ಉಷ್ಣಸ್ಥಾವರದ ಬಗ್ಗೆ ಇಷ್ಟೊಂದು ಕಠಿಣ ನಿಲುವು ತಳೆದಿರುವುದು. ದೂರದ ಬಳ್ಳಾರಿಯಲ್ಲೋ, ಕೋಲಾರದಲ್ಲಿ ಇವನ್ನು ಸ್ಥಾಪಿಸಿದರೆ ನಮಗೂ ಕೊಂಚ ಉಪಯೋಗವಾಗಬಹುದು ಎಂಬ ದೂರಾಲೋಚನೆ ಈ ಗುಂಪಿನದು.&lt;br /&gt;&lt;br /&gt;ಇವೆಲ್ಲ ಕಾರಣಗಳಿಗೇ ಇರಬೇಕು, ನಮ್ಮೂರ ಜನರು ಕರೆಂಟ್ ಇರುವುದರ ಬಗ್ಗೆ ಮತ್ತೆ ಇಲ್ಲದರ ಬಗ್ಗೆ ಅಷ್ಟೊಂದೇನೂ ತಲೆ ಕೆಡಿಸಿಕೊಂಡಿಲ್ಲ. ತಲೆಕೆಡಿಸಿಕೊಂಡರೂ ಸಹ ಮಾಡಬಹುದಾಗಿದ್ದು ಏನೂ ಇಲ್ಲ ಎಂಬುದು ಅವರಿಗೆ ಯಾವಾಗಲೋ ತಿಳಿದುಹೋಗಿದೆ. ನಮಗೆಲ್ಲರಿಗೂ "ಅಭಾವ ವೈರಾಗ್ಯ" ಕಾಡುತ್ತಿದೆ ಎಂದು ನೀವು ಅಂದುಕೊಂಡಿದ್ದರೆ ಖಂಡಿತವಾಗಿಯೂ ಅದು ನಿಮ್ಮ ತಪ್ಪು ಕಲ್ಪನೆ ಎಂದು ಈಗಲೇ ಸ್ಪಷ್ಟ ಪಡಿಸಿಬಿಡುತ್ತೇನೆ. ನಿಜ ಹೇಳಬೇಕೆಂದರೆ ಕರೆಂಟ್ ಇದ್ದರೆ ಮಾತ್ರ ನಮಗೆ ಸದಾ ಕಿರಿಕಿರಿಯಾಗುತ್ತಲೇ ಇರುತ್ತದೆ. ನಾವ್ಯಾವುದೋ ಕುತೂಹಲಕಾರಿಯಾದ ಕ್ರಿಕೆಟ್ ಮ್ಯಾಚ್ ನೋಡಬೇಕಾದರೆ ಇನ್ನೇನು ಲಾಸ್ಟ್ ಓವರ್ ಇದೆ ಅನ್ನುವಾಗ ಕರೆಂಟ್ ಹೋಗುತ್ತದೆಯೋ ಇಲ್ಲವೋ ಅಂತ ಹೇಳಲು ಯಾವುದೇ ಕಾಮನ್ ಸೆನ್ಸಿನ ಅಗತ್ಯವೇ ಇಲ್ಲ!. ಯಾವುದೋ ಹಾಡಿನ ಸ್ಪರ್ಧೆಯಲ್ಲಿ ನಮ್ಮೂರಿನ ಯಾವುದೋ ಹುಡುಗಿ ಹಾಡುತ್ತಿದ್ದಾಳೆ, ಅದನ್ನು ಮಾತ್ರ ಮಿಸ್ ಮಾಡಿಕೊಳ್ಳಬಾರದು ಅಂದುಕೊಂಡರೆ ಇನ್ನೇನು ಅವಳು ಹಾಡಲು ಶುರು ಮಾಡಬೇಕು, ನಾವು ಬಿಟ್ಟಬಾಯಿ ತೆರೆದುಕೊಂಡು ನೋಡಲು ಕಾಯುತ್ತಿರುತ್ತೇವೆ, ಪಕ್! ಎಂದು ಕರೆಂಟು ಮಾಯ. "೧೨.೩೦ಗೆ ಸವಿರುಚಿ ಕಾರ್ಯಕ್ರಮ ಇದ್ದು, ಇವತ್ತು ಅದೆಂತೋ ಅತ್ತೆ-ಸೊಸೆ ಸ್ಪೆಶಲ್ ಇದ್ದಡಾ", ಎಂದು ಅಮ್ಮ ಅಡುಗೆ ಕೆಲಸವನ್ನೆಲ್ಲ ಬೇಗ ಮುಗಿಸಿ ಟೀವಿ ಮುಂದೆ ಕುಳಿತಿದ್ದಾಳೆ, ಸರಿಯಾಗಿ ೧೨.೨೫ಕ್ಕೆ ಕರೆಂಟು ಹೋಗಿದ್ದು ಮತ್ತೆ ಬರುವುದು ೧೨.೫೫ಕ್ಕೆ. ಅಮ್ಮ ಗಡಿಬಿಡಿಯಲ್ಲಿ ಟೀವಿ ಸ್ವಿಚ್ ಹಾಕಿದರೆ, "ವೀಕ್ಷಕರೆ, ನಿಮಗಾಗಿ ಬಿಸಿಬಿಸಿ ತಿಂಡಿ ತಯಾರು" ಎಂದು ನಿರೂಪಕಿ ಉಲಿಯುತ್ತಿರುತ್ತಾಳೆ. "ಈ ಹಾಳು ಕರೆಂಟು ಈಗ್ಲೇ ಹೋಗಕ್ಕಾಯಿತ್ತ ಹಂಗರೆ?" ಎಂದು ಅಮ್ಮನಿಂದ ಕರೆಂಟಿನವರಿಗೆ ಸಹಸ್ರನಾಮಾವಳಿ ಮಾತ್ರ ತಪ್ಪುವುದಿಲ್ಲ.&lt;br /&gt;&lt;br /&gt;ಇವೆಲ್ಲ ತೀರ ಕ್ಷುಲ್ಲಕ ವಿಷಯಗಳಾಯ್ತು. ಮನೆಗೆ ಯಾರೋ ಅಪರೂಪದ ನೆಂಟರು ಬರುತ್ತಿದ್ದಾರೆ ಎಂದು ಲೇಟಾಗಿ ಗೊತ್ತಾಗಿರುತ್ತದೆ. ಕರೆಂಟನ್ನೇ ನಂಬಿ ಏನೋ ಸ್ಪೆಷಲ್ ಮಾಡಬೇಕೆಂದು ಅಮ್ಮ ಅಂದುಕೊಂಡಿದ್ದರೆ, ಸರಿಯಾಗಿ ಇನ್ನೇನು ಮಿಕ್ಸಿ ಸ್ವಿಚ್ ಹಾಕಬೇಕು, ಕರೆಂಟು ಮಾಯ! ರುಬ್ಬುವುದಕ್ಕೆ ಅವಳು ಒರಳನ್ನೇ ನಂಬಬೇಕು, ಇಲ್ಲ ಸ್ಪೆಷಲ್ ಅಡುಗೆಯನ್ನೇ ಬಿಡಬೇಕು!. ಅಪ್ಪನಿಗೆ ಪೇಟೆಯಲ್ಲಿ ಬ್ಯಾಂಕಿನ ಕೆಲಸ ಲೇಟಾಗಿ ಜ್ನಾಪಕವಾಗಿದೆ. ಇನ್ನೇನು ಕಪಾಟು ತೆಗೆದು ಪಾಸ್ ಬುಕ್ ಹುಡುಕಬೇಕು, ಕರೆಂಟು ಮಾಯ! ಗಡಿಬಿಡಿಯಲ್ಲಿ ಟಾರ್ಚ್ ಅಪ್ಪನ ಕೈಗೇ ಸಿಗುತ್ತಿಲ್ಲ. ಎಲ್ಲಾ ಅಧ್ವಾನ!. ಆವಾಗ ನೋಡಬೇಕು ಒಬ್ಬೊಬ್ಬರನ್ನ, ಇನ್ನೇನು ಉಕ್ಕಲು ಸಿದ್ಧವಾಗಿರುವ ಜ್ವಾಲಾಮುಖಿಗಳು! ಮಧ್ಯೆ ನಾವೆಲ್ಲಾದರೂ ಸಿಕ್ಕಿಕೊಂಡೆವೋ ಮುಗೀತು ಕಥೆ.&lt;br /&gt;&lt;br /&gt;ಕರೆಂಟ್ ಇಲ್ಲದೇ ಇದ್ದ ದಿನ ಮಾತ್ರ ನಾವೆಲ್ಲ ನಿರಾಳವಾಗಿರುತ್ತೇವೆ, ಬೆಳಿಗ್ಗೆ ಬೆಳಿಗ್ಗೆಯೇ ಕರೆಂಟು ಇಲ್ಲದಿದ್ದರೆ ಅಮ್ಮನ ಮುಖದಲ್ಲಿ ಏನೋ ಸಮಾಧಾನ. ಆರಾಮಾಗಿ ಅವಳ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾಳೆ, ಮಧ್ಯ ಕರೆಂಟ್ ಬಂದರೂ ಸಹ ಅವಳು ಅಷ್ಟೇನೂ ಎಕ್ಸೈಟ್ ಆಗುವುದಿಲ್ಲ. ಯಾಕೆಂದರೆ ಅವಳಿಗೆ ಗೊತ್ತು, ಸಧ್ಯದಲ್ಲೇ ಅದು ಮತ್ತೆ ಹೋಗಲಿದೆ ಎನ್ನುವುದು. ನನಗೆ ನಿಜವಾಗಿಯೂ ಆಶ್ಚರ್ಯವಾಗುವುದು ಕರೆಂಟ್ ಲೈನ್ ಮೆನ್ ಗಳ ಅದ್ಭುತ ಕಾರ್ಯವೈಖರಿಗೆ. ಅವರು ಹೇಗೆ ಇಷ್ಟು ಹೊತ್ತಿಗೆ ಈ ಏರಿಯಾದಲ್ಲಿ ಕರೆಂಟು ತೆಗೆಯಬೇಕೆಂದು ನಿರ್ಧಾರಿಸುತ್ತಾರೋ ಏನೋ? ನಾವೇನೋ ಮಹತ್ವವಾದ ಕೆಲಸ ಮಾಡುತ್ತಿರುವ ಸೂಚನೆ ಅವರಿಗೆ ಹೇಗೆ ತಿಳಿಯುತ್ತದೆಯೋ ಏನೋ? ಎಂಬ ಪ್ರಶ್ನೆ ನನ್ನಲ್ಲಿ ಆಗಾಗ ಉದ್ಭವವಾಗುತ್ತಾ ಇರುತ್ತದೆ. ಅದೂ ಒಂದೇ ಏರಿಯಾದಲ್ಲಿ ಎಷ್ಟೊಂದು ಲೈನುಗಳು!, ಊರಿನ ಒಂದು ಪಾರ್ಶ್ವಕ್ಕಿರುವ ಮನೆಗಳಿಗೆಲ್ಲಾ ಸಂಪಖಂಡ ಲೈನು, ಇನ್ನೊಂದು ಪಾರ್ಶ್ವಕ್ಕಿರುವ ಮನೆಗಳಿಗೆಲ್ಲಾ ಸಿದ್ದಾಪುರ ಲೈನು, ನೆರೆಮನೆಯವರದು ಮಾತ್ರ ಶಿರಸಿ ಪಟ್ಟಣದ ಲೈನು! ಒಂದು ಲೈನಿನಲಿ ಕರೆಂಟಿದ್ದರೆ ಇನ್ನೊಂದರಲ್ಲಿ ಇಲ್ಲ! ಇಲ್ಲಿ ಕರೆಂಟು ಬಂದರೆ ಅಲ್ಲಿ ಹೋಗುತ್ತದೆ. ಒಟ್ಟಿನಲ್ಲಿ "ಬೇರೆಯವರ ದುಃಖ ನಮ್ಮ ಸಂತೋಷ" ಅನ್ನುವುದು ಇದಕ್ಕೇ ಇರಬೇಕು. ಲೈನ್ ಮೆನ್ ಗಳು ಇಷ್ಟೆಲ್ಲಾ ಲೈನುಗಳ ಮಧ್ಯೆ ಆಟವಾಡುತ್ತಾ, ಅಲ್ಲಿ ತೆಗೆದು, ಇಲ್ಲಿ ಹಾಕಿ, ಈ ಲೈನಿನಲ್ಲಿ ಎಷ್ಟು ಸಲ ತೆಗೆದೆವು, ಎಷ್ಟು ಸಾರ್ತಿ ಕೊಟ್ಟೆವು? ಮತ್ತೆ ಯಾವಾಗ ತೆಗಿಯಬೇಕು? ಎಂದೆಲ್ಲಾ ಲೆಕ್ಕಾಚಾರ ಮಾಡಬೇಕು. ಇವೆಲ್ಲ ಏನು ಮಕ್ಕಳಾಟದ ಕೆಲಸಗಳೇ? ಇಷ್ಟೆಲ್ಲ ತಲೆ ಖರ್ಚು ಮಾಡಿಯೂ ಸಲ ಜನರ ಕೈಲಿ ಬೈಸಿಕೊಳ್ಳುವ ಅವರ ಬಗ್ಗೆ ನನಗೆ ನಿಜವಾದ ಸಂತಾಪವಿದೆ.&lt;br /&gt;&lt;br /&gt;ಅಪರೂಪಕ್ಕೊಮ್ಮೆ ಇಡೀ ದಿನ ಕರೆಂಟಿದ್ದರೆ ಇನ್ನೂ ಕಿರಿಕಿರಿ. ನಾವೆಲ್ಲ ಕರೆಂಟು ಈಗ ಹೋಗಬಹುದು, ಆಗ ಹೋಗಬಹುದು ಎಂದು ಜಾತಕ ಪಕ್ಷಿಯಂತೆ ಕಾಯುತ್ತಲೇ ಇರುತ್ತೇವೆ. ಇದೊಂದು ವಿಚಿತ್ರವಾದ ಮಾನಸಿಕ ಹಿಂಸೆ. ಇವತ್ತು ಲೈನ್ ಮೆನ್ ಗಳಿಗೆ ರಜೆಯಿರಬೇಕೆಂದು ನಾವು ಮಾತಾಡಿಕೊಳ್ಳುತ್ತೇವೆ. ಇಲ್ಲದೇ ಹೋದರೆ ಇಡೀ ದಿನ ಕರೆಂಟಿರುವುದೆಂದರೆ ಏನು ತಮಾಷೆಯೆ? ಒಟ್ಟಿನಲ್ಲಿ ಲೈನ್ ಮೆನ್ ಗಳು ಅವರ ಕರ್ತವ್ಯವನ್ನು ಸರಿಯಾಗಿ ಮಾಡದಿದ್ದರೂ ನಮಗೆ ಕಿರಿಕಿರಿ ತಪ್ಪಿದ್ದಲ್ಲ.&lt;br /&gt;&lt;br /&gt;ಒಟ್ಟಿನಲ್ಲಿ ಅದರ ಅಸ್ತಿತ್ವದಲ್ಲೂ, ಅಭಾವದಲ್ಲೂ, ಅಭಾವದ ಅಸ್ತಿತ್ವದಲ್ಲೂ ಇಷ್ಟೆಲ್ಲ ಮಾನಸಿಕ ತೊಂದರೆ, ಕಿರಿಕಿರಿ ಕೊಡುವ ಕರೆಂಟನ್ನು ನಾವು ಇಷ್ಟಪಡುವುದಾದರೂ ಹೇಗೆ? ನೀವೇ ಹೇಳಿ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-5294258846799201624?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/5294258846799201624/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=5294258846799201624' title='10 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/5294258846799201624'/><link rel='self' type='application/atom+xml' href='http://www.blogger.com/feeds/6035880729059442700/posts/default/5294258846799201624'/><link rel='alternate' type='text/html' href='http://madhu-vana.blogspot.com/2009/09/blog-post.html' title='ಕತ್ತಲೆಯಿಂದ ಬೆಳಕಿನೆಡೆಗೆ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>10</thr:total></entry><entry><id>tag:blogger.com,1999:blog-6035880729059442700.post-668727842946461480</id><published>2009-07-23T02:41:00.000-07:00</published><updated>2009-07-23T03:00:44.893-07:00</updated><title type='text'>ರಾಖಿ ಸ್ವಯಂವರ</title><content type='html'>&lt;div align="justify"&gt;ನಾಣಿ ಆಫೀಸಿಗೆ ಬಂದಾಗಿನಿಂದ ಯಾಕೋ ಬಹಳ ಬೇಜಾರಲ್ಲಿ ಇದ್ದ ಹಾಗೆ ಕಾಣಿಸ್ತು. ೧೦ ಗಂಟೆ ಕಾಫಿಗೆ ಹೋದಾಗ ಸುಮ್ಮನೆ ಅವನನ್ನು ಮಾತಿಗೆಳೆದೆ. "ಯಾಕೋ ನಾಣಿ ಒಂತರಾ ಇದ್ದೀಯಾ?" ಅಂತ ಕೇಳಿದ್ದಕ್ಕೇ ಅವನಿಗೆ ತನ್ನ ದುಃಖವನ್ನು ತೋಡಿಕೊಳ್ಳಲು ಯಾರೋ ಇದ್ದಾರೆ ಅನ್ನಿಸಿತೋ ಏನೋ, ಸಣ್ಣ ಮುಖ ಮಾಡಿಕೊಂಡು "ನಿನ್ನೆ ರಾಖಿ ಕಾ ಸ್ವಯಂವರ್" ನೋಡಿದ್ಯಾ? ಎಂದು ಕೇಳಿದ. "ಅದೇನೂ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಅಲ್ಲವಲ್ಲಾ ನಾನು ಅಷ್ಟೊಂದು ಆಸಕ್ತಿಯಿಂದ ನೋಡೊದಿಕ್ಕೆ. ಯಾವಾಗೋ ಒಂದು ಸಲ ವಾರದ ಹಿಂದೆ ನೋಡಿದ್ದೆ ಕಣೋ, ಒಳ್ಳೇ ಕಾಮೆಡಿ ಸೀರಿಯಲ್ಲು ಬಿಡು" ಎಂದು ಉಡಾಫೆಯಾಗಿ ಮಾತು ಹಾರಿಸಿದೆ.&lt;br /&gt;&lt;br /&gt;"ಅಲ್ಲಾ ಕಣೋ, ಅದರಲ್ಲಿ ಅಂಥದೇನು ಇದೆ ಅಂತಾ ನೀನು ಬೇಜಾರು ಮಾಡಿಕೊಂಡಿರುವುದು? ನಾನೇನೋ ನಿಮ್ಮ ಊರು ಕಡೆಗೆ ತುಂಬಾ ಮಳೆಯಾಗ್ತಿದೆಯಲ್ಲಾ, ನಿಮ್ಮ ತೋಟಕ್ಕೆ ಏನಾದ್ರೂ ತೊಂದರೆಯಾಗಿದೆಯೇನೋ ಅಂದುಕೊಂಡೆ. ನೀನ್ಯಾವುದೋ ಸಿಲ್ಲಿ ವಿಷಯಕ್ಕೆಲ್ಲಾ ತಲೆ ಹಾಳು ಮಾಡಿಕೊಂದಿದ್ದಿಯಲ್ಲೋ" ಎಂದು ಅವನ ಗಾಯಕ್ಕೆ ಇನ್ನಷ್ಟು ಉಪ್ಪುಸುರಿದೆ.ನಾನು ಅವನು ಹೇಳಿದ್ದರಲ್ಲಿ ಒಂಚೂರೂ ಆಸಕ್ತಿ ತೋರದೇ, ಅವನನ್ನು ಹಳಿದಿದ್ದಕ್ಕೆ ಇನ್ನೂ ಬೇಜಾರಾಗಿರಬೇಕು. "ಹೋಗ್ಲಿ ಬಿಡು, ಹೋಗಿ ಹೋಗಿ ನಿನ್ನ ಕೈಲಿ ಹೇಳಿದ್ನಲ್ಲಾ" ಎಂದು ತನ್ನನ್ನೇ ದೂಷಿಸಿಕೊಂಡ.&lt;br /&gt;&lt;br /&gt;"ಏನಾಯ್ತೋ"?, ಈಗ ನಾನು ಸಂತೈಸುವ ಧ್ವನಿ ಮಾಡಿದೆ. "ಇಲ್ಲ ಕಣೋ, ಅವಳೆಷ್ಟು ಮುಗ್ಧ ಹುಡುಗಿ ಗೊತ್ತಾ? ಆದ್ರೆ ಅಲ್ಲಿ ಅವಳನ್ನು ಮದ್ವೆ ಆಗಕೆ ಬಂದಿರೋವ್ರೆಲ್ಲಾ ಒಬ್ಬರಿಗಿಂತ ಒಬ್ಬರು ದೊಡ್ಡ ನೌಟಂಕಿಗಳು ಕಣೋ, ಒಬ್ಬರೂ ಸರಿಯಿಲ್ಲ" ಎಂದು ಗೊಣಗಿದ. "ಓಹೋ ಹೀಗಾ ವಿಷಯ? ಗೊತ್ತಾಯ್ತು ಬಿಡು. ಅಲ್ಲಾ ಕಣೋ ನಾಣಿ, ನೀನು ಇಷ್ಟು ಸ್ಮಾರ್ಟ್ ಇದೀಯಾ, ರಾಖಿ ಅಂದ್ರೆ ಇಷ್ಟ ಬೇರೆ, ನೀನ್ಯಾಕೋ ಅದಕ್ಕೆ ಅಪ್ಲೈ ಮಾಡಿಲ್ಲಾ? ನೀನು ಹೋಗಿದ್ರೆ ನಿಂಗೇ ಅವಳು ಒಲಿಯೋದ್ರಲ್ಲಿ ಡೌಟೇ ಇರಲಿಲ್ಲ ನೋಡು" ಎಂದು ಛೇಡಿಸಿದೆ. "ಅಲ್ಲಿ ಸೌತ್ ಇಂಡಿಯಾದವ್ರನ್ನು ಯಾರನ್ನೂ ತಗೋಳ್ಲಿಲ್ಲ ಕಣೋ", ನಾಣಿ ಸೀರಿಯಸ್ಸಾಗೇ ಹೇಳಿದ. "ಹೌದೇನೋ?, ಇದು ತುಂಬಾ ಅನ್ಯಾಯನಪ್ಪಾ , ಎಂಡಿಟಿವಿ ಮೇಲೆ ಕೇಸ್ ಹಾಕ್ಬೇಕು ನೋಡು. ಏನಂದುಕೊಂಡು ಬಿಟ್ಟಿದಾರೆ ಅವ್ರು? ದಕ್ಷಿಣ ಭಾರತದವ್ರು ಎಲ್ಲಾ ರಾಖಿನ ಮದ್ವೆಯಾಗೊಕ್ಕೆ ನಾಲಾಯಕ್ಕಾ? ’ದಿಸ್ ಇಸ್ ಟೂ ಮಚ್’ ಎಂದು ನಾಣಿನ ಸಪೋರ್ಟ ಮಾಡಿದೆ.&lt;br /&gt;&lt;br /&gt;ನಾಣಿ ಈಗ ಸ್ವಲ್ಪ ಗೆಲುವಾದ. ಹೌದು ಕಣೋ, ಅಲ್ಲಿ ಬಂದಿರೋರೆಲ್ಲಾ ನಾರ್ಥ್ ಇಂಡಿಯಾದವರೇ. ಸಿಕ್ಕಾಪಟ್ಟೆ ದುಡ್ಡಿದ್ದವರು ಎಂದು ನಿಡುಸುಯ್ದ. "ಇನ್ನೇನು? ಯಾರೋ ದುಡ್ಡಿಲ್ಲದ ಬಿಕನಾಸಿನ ಮದ್ವೆ ಆಗ್ತಾಳಾ ಅವಳು?" ಅಂತ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದರೆ ನಾಣಿಯ ಸೂಕ್ಷ್ಮ ಮನಸಿಗೆ ಇನ್ನೂ ಬೇಜಾರು ಮಾಡುವುದು ಬೇಡವೆನಿಸಿತು. "ಅದಕ್ಯಾಕೆ ಇಷ್ಟೆಲ್ಲಾ ಬೇಜಾರು ಮಾಡ್ಕೊಂಡಿದೀಯೋ? ಅವಳನ್ನ ಮದ್ವೆ ಮಾಡ್ಕೊಳ್ಳೋವಂತ ದುರ್ಗತಿ ಯಾರಿಗಿದೆಯೋ, ಅವ್ರೇ ಮದ್ವೆ ಮಾಡ್ಕೋತಾರೆ ಬಿಡು" ಎಂದು ಸಮಾಧಾನ ಮಾಡಿದೆ. ನಾಣಿಗೆ ನನ್ನ ಕುಹಕ ಸರಿಯಾಗಿ ಅರ್ಥವಾಗಲಿಲ್ಲ. "ನಿನ್ನೆ ಶೋದಲ್ಲಿ ಏನಾಯ್ತು ಗೊತ್ತಾ?" ಎಂದು ಮತ್ತೆ ಫ್ಲಾಶ್ ಬ್ಯಾಕಿಗೆ ಹೋದ. ನಾನೂ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ಕೇಳಲು ಶುರುಮಾಡಿದೆ. ಅವನ್ಯಾರೋ "ಲವ್" ಅಂತೆ. ಎಲ್ಲಾರ ಎದುರಿಗೂ ಅವಳ ಹಣೆಗೆ ಮುತ್ತು ಕೊಟ್ಬಿಟ್ಟ ಕಣೊ. ಸ್ವಲ್ಪಾನೂ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ಲ, ಥೂ" ಎಂದು ಯಾರಿಗೋ ಉಗಿದ. ನನಗೆ ಇನ್ನೂ ತಮಾಷೆಯೆನಿಸಿತು. "ನಂಗೊಂದು ಡೌಟು ಕಣೋ, ರಾಖಿನೇ ಏನೋ ಮಾಡ್ತಿರಬೇಕು. ಎಲ್ಲಾರಿಗೂ ಯಾಕೆ ಹಾಗೆ ಮಾಡ್ಬೇಕು ಅನ್ನಿಸುತ್ತೋ ಏನೋ, ಅವ್ನು ಮಿಖಾ ಮೊದ್ಲು, ಬಿಗ್ ಬಾಸ್ ಅಲ್ಲಿ ಅಭಿಷೇಕ್, ಎಲ್ಲಾರೂ ಹಾಗೇ ಮಾಡಿದ್ರು ನೋಡು. ಅಥವಾ ಕ್ಯಾಮೆರಾ ಎದುರು ಬಂದ ಕೂಡಲೇ ಅವ್ರಿಗೆಲ್ಲಾ ಹಾಗೆ ಮಾಡಬೇಕು ಅನ್ನಿಸುತ್ತೋ ಏನೋ, ಪಾಪ" ಎಂದು ತಮಾಷೆ ಮಾಡಿದೆ. ನಾಣಿಗೆ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣಿಸಿತು. "ರಾಖಿ ಯಾಕೆ ಏನು ಮಾಡ್ತಾಳೆ? ಈ ಹುಡುಗರಿಗೆ ಸ್ವಲ್ಪಾನೂ ಕಂಟ್ರೋಲ್ ಅನ್ನೋದೇ ಇಲ್ಲ ನೋಡು. ಟೀವಿನಲ್ಲಿ ಎಷ್ಟೊಂದು ಜನ ತಮ್ಮನ್ನು ನೋಡ್ತಿದಾರೆ ಅನ್ನೋ ಖಬರೂ ಇಲ್ಲ" ಎಂದ. "ಅವ್ರು ಮಾಡ್ತಿರೋದೇ ತಮ್ಮನ್ನ ಜನರು ಟೀವಿಲಿ ನೋಡಲಿ ಅಂತ ಕಣೋ, ಅವ್ರೆಲ್ಲಾ ಏನು? ರಾಖಿನೂ ಇಷ್ಟೆಲ್ಲಾ ಮಾಡ್ತಿರೋದು ಯಾಕೆ? ಒಂದಷ್ಟು ಪ್ರಚಾರ ಸಿಗ್ಲಿ, ಸಿನೆಮಾಗಳಲ್ಲಂತೂ ಅವ್ಳಿಗೆ ಯಾರೂ ಚಾನ್ಸ್ ಕೊಡ್ತಾ ಇಲ್ಲ. ಹೀಗಾದ್ರೂ ಮಾಡಿ ಒಂದಷ್ಟು ದುಡ್ಡುಗಿಡ್ಡು ಮಾಡ್ಕೊಳ್ಳೊಣಾ ಅಂತ ಅಷ್ಟೇ!" ಎಂದು ನಾನು ಬೆಂಕಿಗೆ ಸ್ವಲ್ಪ ತುಪ್ಪ ಸುರಿದೆ. "ಅದು ಬೇರೆ ತಿಂಗಳುಗಟ್ಟಲೆ ಅಂಥಾ ಪ್ಯಾಲೆಸಿನಂತ ಹೋಟೆಲ್ಲಿನಲ್ಲಿ ವಸತಿ, ಊಟ, ಜೊತೆಗೆ ಏಳೆಂಟು ಹುಡುಗರ ಜೊತೆ ಫ್ಲರ್ಟ್ ಮಾಡೋ ಅವಕಾಶ, ಪುಕ್ಕಟೆ ಮದುವೆ, ಏನು ಚಾನ್ಸಪ್ಪಾ ಅವಳದ್ದು! ನಾಣಿ, ನಮ್ಮ ಮದುವೆನೂ ಎಂಡಿಟಿವಿಯವ್ರು ಮಾಡಿಕೊಡ್ತಾರಾ ಕೇಳೋ" ಎಂದು ರೇಗಿಸಿದೆ.&lt;br /&gt;&lt;br /&gt;ನಾಣಿ ಸ್ವಲ್ಪ ತಬ್ಬಿಬ್ಬಾದ. ವಿಷಯ ಎಲ್ಲಿಂದೆಲ್ಲೋ ಹೋಗುತ್ತಿದೆ ಅಂತ ಅನ್ನಿಸಲು ಶುರುವಾಗಿರಬೇಕು ಅವನಿಗೆ. "ಅದರಲ್ಲೇನಪ್ಪಾ ತಪ್ಪು? ಪ್ರಚಾರ ಪಡೆಯಲು ಯಾರ್ಯಾರೋ ಏನೇನೋ ಮಾಡ್ತಾರೆ. ತನಗೆ ಇಷ್ಟವಾದ ಹುಡುಗನನ್ನು ಆಯ್ಕೆ ಮಾಡೋ ಸ್ವಾತಂತ್ರವೂ ಇಲ್ವಾ? " ಎಂದು ಮರುಪ್ರಶ್ನೆ ಹಾಕಿದ. "ಇದೆಯಪ್ಪಾ ಇದೆ, ಇಂಡಿಯಾದಲ್ಲಿ ಯಾರಿಗೆ ಏನು ಬೇಕೋ ಮಾಡಬಹುದು, ಅನ್ನಿಸಿದನ್ನು ಎಲ್ಲರ ಎದುರಿಗೂ ಹೇಳಬಹುದು. ಮೊನ್ನೆ ನಮ್ಮ ಸೆಂಟ್ರಲ್ ಮಿನಿಸ್ಟರ್ರು ಹೇಳ್ಲಿಲ್ವಾ? " ಟೀವಿ ಜಾಸ್ತಿ ನೋಡಿದ್ರೆ ಮಕ್ಕಳಾಗೋದು ಕಮ್ಮಿ ಆಗುತ್ತೆ ಅಂತಾ? ಇನ್ನೋಬ್ರು ಮಿನಿಸ್ಟರ್ರು ಶಾಲೆಗಳಲ್ಲಿ ಪರೀಕ್ಷೆಗಳನ್ನೇ ತೆಗೆದುಬಿಡೋಣ ಅಂತ ಹೇಳಲಿಲ್ವಾ? ತಲೆಬುಡ ಇಲ್ಲದೆ ಮಾತಾಡ್ತಾರೆ. ಏನು ಬೇಕಾದ್ರೂ ಹೇಳಿ, ಏನು ಬೇಕಾದರೂ ಮಾಡಿ ದಕ್ಕಿಸೋಕೊಳ್ಳಬಹುದು ಬಿಡು ಈ ದೇಶದಲ್ಲಿ. ಸಾಮಾಜಿಕ ಜವಾಬ್ದಾರಿ, ಪ್ರಾಮಾಣಿಕ ಕಳಕಳಿ ಅನ್ನೋದೇ ಇಲ್ಲ ಯಾರಿಗೂ! ರಾಜಕಾರಣಿಗಳಿಗೂ ಇಲ್ಲ, ಸಿಲಿಬ್ರೆಟಿಗಳಿಗೂ ಇಲ್ಲ, ಎಲ್ಲರನ್ನೂ ನಿಗ್ರಹಿಸಬೇಕಾದ ಮೀಡಿಯಾದರಿಗಂತೂ ಮೊದಲೇ ಇಲ್ಲ. ಎಲ್ಲರೂ ಸೇರಿ ಜನರ ದಾರಿತಪ್ಪಿಸೋ ಕೆಲ್ಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡ್ತಾ ಇದಾರೆ" ನಾನು ಸ್ವಲ್ಪ ಅಸಹನೆಯಿಂದಲೇ ಹೇಳಿದೆ.&lt;br /&gt;&lt;br /&gt;"ಹೋಗ್ಲಿ ಬಿಡಪ್ಪಾ, ನಮಗ್ಯಾಕೆ ಅವ್ರ ಉಸಾಬರಿ? ನಮ್ಮ ಪಾಡಿಗೆ ನಾವಿದ್ರೆ ಆಯ್ತು ಬಿಡು" ಎಂದು ನಾಣಿ ಮೆತ್ತಗೆ ನನ್ನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ. ಇವನ ಹತ್ರ ಮಾತಾಡಿದರೆ ಉಪಯೋಗವಿಲ್ಲ ಎಂದೆನಿಸಿರಬೇಕು ಅವನಿಗೆ. ಹಾಗೆ ನೋಡಿದ್ರೆ, ಅವನ ಪ್ರಕಾರ ರಾಖಿಗೆ ಒಳ್ಳೇ ಗಂಡು ಹುಡುಕುವುದೂ ಕೂಡ ಬಹುದೊಡ್ಡ ಸಾಮಾಜಿಕ ಜವಾಬ್ದಾರಿನೇ. ಅವನಿಗೆ ಸಂಪೂರ್ಣವಾಗಿ ಸಮಾಧಾನವಾಗಿಲ್ಲವೆಂಬುದು ಅವನ ಮುಖದಲ್ಲೇ ಎದ್ದು ಕಾಣುತ್ತಿತ್ತು, ಆದರೆ ಮುಂದೆ ಮಾತಾಡಿದರೆ ತನ್ನ ಬುಡಕ್ಕೇ ಬರಬಹುದು ಎನ್ನಿಸಿತೆನೋ, ಸುಮ್ಮನಾದ.&lt;br /&gt;&lt;br /&gt;"ಇನ್ನೂ ಎಷ್ಟು ದಿನ ನಡೆಯುತ್ತಪ್ಪಾ, ಅವಳ ವಿಚಾರಣೆ? ಯಾವಾಗಂತೆ ಮದುವೆ?" ನಾನು ಕುತೂಹಲದಿಂದ ಕೇಳಿದೆ. "ಸಧ್ಯದಲ್ಲೇ ಆಗುತ್ತೆ ಬಿಡು. ಇನ್ನೇನು ಬರೀ ನಾಲ್ಕು ಜನ ಉಳ್ಕೊಂಡಿದಾರೆ ಅಷ್ಟೆ. ಅವ್ರ ಮನೆಗೆಲ್ಲಾ ಹೋಗಿ ಯಾರು ಬೆಸ್ಟು ಅಂತ ಡಿಸೈಡ್ ಮಾಡ್ತಾಳೆ, ಆಮೇಲೆ ಇನ್ನೇನು ಮದುವೆನೇ" ಎಂದ ನಾಣಿ. ಅವನ ಮನಸ್ಸಿನಲಿ ಇದ್ದಿದ್ದು ಸಮಾಧಾನವೋ, ಅಸೂಯೆಯೋ ಗೊತ್ತಾಗಲಿಲ್ಲ. "ಅಲ್ಲಾ ನಾಣಿ ಒಂದು ವಿಷಯ ಗೊತ್ತಾಗ್ತ ಇಲ್ಲ ನೋಡು ನನಗೆ. ಎಲ್ಲಾ ರಿಯಾಲಿಟಿ ಶೋಗಳಲ್ಲಿ ಪಬ್ಲಿಕ್ ವೋಟ್ ಮಾಡೋ ಅವಕಾಶ ಇರುತ್ತೆ ಅಲ್ವಾ? ಇದರಲ್ಲಿ ಯಾಕೆ ಇಲ್ಲಾ? ನಮಗೂ ಅವಳ ಗಂಡನನ್ನು ಆಯ್ಕೆ ಮಾಡೋದಿಕ್ಕೆ ಚಾನ್ಸು ಸಿಗಬೇಕು ಕಣೋ. ಛೇ" ಎಂದು ಅಣಕಿಸಿದೆ. ನಾಣಿಗೆ ಸಡನ್ನಾಗಿ ಜ್ನಾನೋದಯವಾಯ್ತು! "ಹೌದಲ್ವೋ, ಆ ಆಪ್ಷನ್ನೇ ಕೊಟ್ಟಿಲ್ಲ ನೋಡು ಎಂಡಿಟಿವಿಯವರು, ನಾವೇ ರಾಖಿಗೆ ಹೇಳ್ಬಹುದಿತ್ತು ಇಂಥವನನ್ನು ಮದ್ವೆ ಆಗು ಅಂತಾ. ಎಂತಾ ಅನ್ಯಾಯ, ಛೇ" ಎಂದು ಅಲವತ್ತುಗೊಂಡ. ಅವನ ತಳಮಳ ನೋಡಿ ನನಗೆ ನಗು ಬಂತು. "ಇನ್ನೇನು ಸ್ವಲ್ಪ ದಿನಕ್ಕೇ ಶೋ ಮುಗಿದುಹೋಗುತ್ತೆ. ಆಮೇಲೆ ರಾಖಿನ ನೋಡೋದಿಕ್ಕೇ ಆಗಲ್ಲ" ಎಂದು ಬೇಜಾರಲ್ಲಿ ಹೇಳಿದ. "ಚಿಂತೆ ಮಾಡಬೇಡ್ವೋ, ಇನ್ನೊಂದು ಸ್ವಲ್ಪ ದಿನ ಬಿಟ್ಟು ’ರಾಖಿ ಕಾ ಡೈವೋರ್ಸ್’ ಅಥವಾ ’ರಾಖಿ ಕಾ ಪುನರ್ ಸ್ವಯಂವರ್" ಅಂತಾ ಶೋ ಮತ್ತೆ ಬರುತ್ತೆ. ಆವಾಗ ಮತ್ತೆ ನೋಡುವೆಯಂತೆ ರಾಖಿನ" ಎಂದು ತಮಾಷೆ ಮಾಡಿದೆ. ನಾಣಿ ಪೆಚ್ಚು ನಗು ನಕ್ಕ. "ಇದನ್ನೇ ಮಾತಾಡ್ತಾ ಇದ್ದರೆ, ಕೆಲ್ಸಾ ಯಾರು ಮಾಡೋದು, ನಡಿ, ರಾಖಿನ ಯಾರು ಮದುವೆ ಆದರೆ ನಮಗೇನಂತೆ? ಬಾ" ಎಂದು ಬಲವಂತವಾಗಿ ನಾಣಿನ ಎಳೆದುಕೊಂಡು ಹೋದೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-668727842946461480?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/668727842946461480/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=668727842946461480' title='7 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/668727842946461480'/><link rel='self' type='application/atom+xml' href='http://www.blogger.com/feeds/6035880729059442700/posts/default/668727842946461480'/><link rel='alternate' type='text/html' href='http://madhu-vana.blogspot.com/2009/07/blog-post.html' title='ರಾಖಿ ಸ್ವಯಂವರ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>7</thr:total></entry><entry><id>tag:blogger.com,1999:blog-6035880729059442700.post-5629236194384528703</id><published>2009-03-03T04:22:00.000-08:00</published><updated>2009-03-03T06:53:18.866-08:00</updated><title type='text'>ಹಸಿರು ಹೀರೋ ಪೆನ್ನು.</title><content type='html'>&lt;div align="justify"&gt;ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲೇ ಪುಟ್ಟನಿಗೆ ಸಿಕ್ಕಾಪಟ್ಟೆ ಉತ್ಸಾಹ, ಬಹುಷಃ ಬರೀ ಅರ್ಧ ದಿನ ಅಷ್ಟೇ ಶಾಲೆ ಇರೋದು ಅನ್ನೋದ್ರಿಂದಾನೇ ಇರಬೇಕು. ಸಂಜೆ ಹೊತ್ತು ಪಕ್ಕದ್ಮನೆ ಮಲ್ಲಿ ಜೊತೆ ಒಂದ್ನಾಲ್ಕು ರೌಂಡ್ ಬ್ಯಾಡ್ಮಿಂಟನ್ ಆಡಬಹುದು ಅನ್ನೋ ಸಂತೋಷ ಬೇರೆ. ದಿನಾ ಸಂಜೆನೂ "ಹೋಮ್ ವರ್ಕ್ ಮಾಡೋ" ಅಂದು ಗೋಳು ಹೊಯ್ಕೊಳೊ ಅಮ್ಮನ ಕಾಟ ಬೇರೆ ಇರೋದಿಲ್ಲ. ಹಾಗಾಗಿ ಪುಟ್ಟನಿಗೆ ರವಿವಾರಕ್ಕಿಂತಲೂ ಶನಿವಾರನೇ ಅತ್ಯಂತ ಖುಶಿ ಕೊಡೋ ದಿನ. ಆದರೆ ಇವತ್ತು ಅವನಿಗೆ ಮನೆಗೆ ಬೇಗ ಹೋಗಬೇಕು ಅನ್ನಿಸಲು ಬೇರೆಯೇ ಕಾರಣವಿತ್ತು.&lt;br /&gt;&lt;br /&gt;ಜೋಷಿ ಮಾಸ್ತರ್ರು ಬೋರ್ಡ್ ಕಡೆ ತಿರುಗಿ ಭಾರತದ ನಕ್ಷೆಯಲ್ಲಿ ಗುಜರಾತಿನ ಹತ್ತಿರ ತಿದ್ದತಾ ಇದ್ದರು. ಅದನ್ನು ಗಮನಿಸೋ ಮನಸ್ಸು ಪುಟ್ಟನಿಗೆ ಇದ್ದಂತಿರಲಿಲ್ಲ. ಅವನು ಮನಸ್ಸು ಬೇರೆ ಯಾವುದೋ ವಿಷಯದ ಬಗ್ಗೆ ಗಿರಕಿ ಹೊಡೀತಾನೇ ಇತ್ತು. ಎಲ್ಲ ನಡೆದಿದ್ದು ಬೆಳಗಿನ ಎರಡನೇ ಗಣಿತದ ಪಿರಿಯಡ್ಡಲ್ಲಿ. ಪಕ್ಕಕ್ಕೆ ಕುಳಿತ ಸಂಧ್ಯಾನ ಸ್ಕೂಲ್ ಬ್ಯಾಗು ಸ್ವಲ್ಪ ತೆರೆದುಕೊಂಡಿತ್ತು, ಅದರ ಒಂದು ಮೂಲೆಯಲ್ಲಿ ಹಸಿರು ಕಲರಿನ ಹೀರೋ ಪೆನ್ನೊಂದು ಅಸ್ತವ್ಯಸ್ತವಾಗಿ ಬಿದ್ದುಕೊಂಡಿರುವುದು ಪುಟ್ಟನಿಗೆ ಕಂಡುಹೋಗಿತ್ತು. ಅದರ ಕ್ಯಾಪು ಒಂದು ಸ್ವಲ್ಪ ವಾರೆಯಾಗಿತ್ತು. ಆ ಪೆನ್ನನ್ನು ಪುಟ್ಟ ಸಾಕಷ್ಟು ಸಲ ಸಂಧ್ಯಾನ ಜ್ಯಾಮೆಟ್ರಿ ಬಾಕ್ಸಲ್ಲಿ ನೋಡಿದ್ದ.ಆದರೆ ಇವತ್ತು ಪೆನ್ನು ಬಾಕ್ಸಿನ ಹೊರಗಿತ್ತು. ಸಂಧ್ಯಾ ಪಕ್ಕಕ್ಕೆ ತಿರುಗಿ ಲೆಕ್ಕ ಬಿಡಿಸುತ್ತಾ ಇದ್ದಳು. ಪುಟ್ಟನಿಗೆ ತಾನು ಯಾಕೆ ಹಾಗೆ ಮಾಡಿದೆ ಅಂತ ಈಗ್ಲೂ ಗೊತ್ತಾಗ್ತಾನೇ ಇಲ್ಲ. ಆದರೆ ಆ ಕ್ಷಣಕ್ಕೆ ಮಾತ್ರ ಮೆಲ್ಲಗೆ ಕೈ ಹಾಕಿ ಆ ಹೀರೋ ಪೆನ್ನನ್ನು ತೆಗೆದು ತನ್ನ ಬ್ಯಾಗಿಗೆ ಸೇರಿಸಿಕೊಂಡಿದ್ದ.&lt;br /&gt;&lt;br /&gt;ಅವನ ಹತ್ರ ಪೆನ್ನೇ ಇಲ್ಲ ಅಂತೇನೂ ಇಲ್ಲ. ನಾಲ್ಕನೇತಿಯಲ್ಲಿ ಇದ್ದಾಗ ಅವನಪ್ಪ ಒಂದು ನೀಲಿ ಕಲರಿನ ಶಾಯಿ ಪೆನ್ನೊಂದನ್ನು ಕೊಡಿಸಿದ್ದರು. ಮೊದಲೊಂದು ವರ್ಷ ಆ ಪೆನ್ನು ಚೆನ್ನಾಗೇ ಬರೀತಿತ್ತು. ಅದರ ನಿಬ್ಬು ಒಂಥರಾ ಹಾಳೇನೇ ಹರೀತಾ ಇದೆ ಅಂತ ಬಹಳ ಅನಿಸಿದರೂ ಬರ್ತಾ ಬರ್ತಾ ಪುಟ್ಟನಿಗೆ ಅದು ಅಭ್ಯಾಸವಾಗಿ ಹೋಗಿತ್ತು. ಆದರೆ ಈಗೊಂದು ೮-೧೦ ತಿಂಗಳಿಂದ ಮಾತ್ರ ಯಾಕೋ ಅದು ಸಿಕ್ಕಾಪಟ್ಟೆ ತೊಂದರೆ ಕೊಡಲು ಶುರು ಮಾಡಿತ್ತು. ಬರೀತಾ ಬರೀತಾ ಸಡನ್ನಾಗಿ ನಿಂತೇ ಬಿಡುತ್ತಿತ್ತು. ಹಾಗಾದಾಗೆಲ್ಲಾ ಅದನ್ನು ನಾಲ್ಕು ಸಾರಿ ಕೊಡವಿ ಒಂದೆರಡು ಶಾಯಿ ಹುಂಡನ್ನು ಪಟ್ಟಿಯ ಮೇಲೋ, ಬೆಂಚಿನ ಮೇಲೋ ಬೀಳಿಸಿ, ನಿಬ್ಬನ್ನು ಅದಕ್ಕೆ ಒತ್ತಿ ಹಿಡಿದು ಶಾಯಿಯನ್ನು ಅದಕ್ಕೆ ಕುಡಿಸಿದರೆ ಮಾತ್ರ ಮತ್ತೆ ಪೆನ್ನು ಬರೆಯಲು ಶುರು ಮಾಡುತ್ತಿತ್ತು. ಪುಟ್ಟನ ಯಾವುದೇ ಪಟ್ಟಿ ತೆಗೆದು ನೋಡಿದ್ರೆ ಅಲ್ಲಲ್ಲಿ ಆ ಪೆನ್ನಿನ ಸಾಹಸದ ಕುರುಹು ಕಂಡೇ ಬಿಡುತ್ತದೆ.ಒಂದೆರಡು ಸಲ ಅವನ ಬಿಳಿ ಯುನೀಫಾರ್ಮ ಮೇಲೂ ಶಾಯಿ ಚೆಲ್ಲಿಕೊಂಡು ಅಮ್ಮನ ಕೈಲಿ ಬೈಸಿಕೊಂಡಿದ್ದ. ಅದು ಶುರುವಾಗಿ ತಿಂಗಳಲ್ಲೇ ಅವನು ಹೊಸಾ ಪೆನ್ನು ಬೇಕು ಅಂತ ಅಪ್ಪನ ಹತ್ರ ಬೇಡಿಕೆ ಇಟ್ಟಿದ್ದ. ಅವನಪ್ಪ ಅದನ್ನು ಅಷ್ಟೊಂದೇನೂ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಇನ್ನೂ ಒಂದು ವರ್ಷ ಅದರಲ್ಲೇ ನಿಭಾಯಿಸು ಅಂದು ಹೇಳಿ ಅವನನ್ನು ಸಾಗಹಾಕಿದ್ದರು. ಮೊನ್ನೆ ಮೊನ್ನೆ ಅದರ ಕಾಟ ಜಾಸ್ತಿಯಾದಾಗ ಮತ್ತೊಮ್ಮೆ ಪುಟ್ಟ ಬೇಡಿಕೆ ಇಟ್ಟಿದ್ದ. ಈ ಸಲ ಅವನಪ್ಪ ಸ್ಟ್ರಿಕ್ಟಾಗಿ "ನೀನು ಆರನೆತ್ತಿ ವಾರ್ಷಿಕ ಪರೀಕ್ಷೆಯಲ್ಲಿ ಹತ್ತು ನಂಬರೊಳಗೆ" ಬಂದರೆ ಮಾತ್ರ ಒಂದು ಹೀರೊ ಪೆನ್ನು ತೆಗೆಸಿಕೊಡುತ್ತೇನೆ ಎಂದು ಹೇಳಿಬಿಟ್ಟಿದ್ದರು. ಪುಟ್ಟನಿಗೆ ಏಕಕಾಲದಲ್ಲೇ ದುಃಖವೂ, ಸಂತೋಷವೂ ಆಗಿತ್ತು. ಸರಿಯಾಗಿ ಓದಿದರೆ ಕ್ಲಾಸಿನಲ್ಲಿ ಹತ್ತರೊಳಗೆ ಬರುವುದು ಅಷ್ಟೊಂದೇನೂ ಕಷ್ಟವಾಗಿರಲಿಲ್ಲ. ಹಾಗಾಗೇ ಅವನು ಕಳೆದ ತಿಂಗಳಿಂದ ಬೆಳಿಗ್ಗೆ ೬ ಗಂಟೆಗೇ ಎದ್ದು ಮುಕ್ಕಾಲು ತಾಸು ಓದಲು ಶುರುಮಾಡಿಬಿಟ್ಟಿದ್ದ, ಅವನಮ್ಮನಿಗೂ ಆಶ್ಚರ್ಯವಾಗುವಂತೆ.&lt;br /&gt;&lt;br /&gt;ಹೀರೊ ಪೆನ್ನು ಸಾಧಾರಣವಾದ ಪೆನ್ನಂತೂ ಅಲ್ಲ ಅನ್ನುವುದು ಪುಟ್ಟನಿಗೆ ಯಾವಾಗಲೋ ಖಾತ್ರಿಯಾಗಿ ಹೋಗಿತ್ತು. ಪಕ್ಕದ್ಮನೆ ಮಲ್ಲಿ ಹತ್ರ ವರ್ಷದ ಹಿಂದೇ ಹೀರೊ ಪೆನ್ನು ಇತ್ತು. ಅವನ ಕ್ಲಾಸಲ್ಲಿ ಹಲವಾರು ಹುಡುಗರ ಕೈಯಲ್ಲಿ ಹೀರೋ ಪೆನ್ನು ಆಗಲೇ ಇತ್ತು. ಅವರೆಲ್ಲರ ಬಾಯಲ್ಲಿ ಅದರ ಗುಣಗಾನಗಳನ್ನು ಕೇಳಿ ಕೇಳಿ ಪುಟ್ಟನಿಗೆ ತನ್ನ ಹತ್ತಿರನೂ ಒಂದು ಹೀರೊ ಪೆನ್ನು ಇರಬೇಕಿತ್ತೆಂದು ತೀವ್ರವಾಗಿ ಅನಿಸಲು ಶುರುವಾಗಿತ್ತು. ಪೆನ್ನಿನೊಳಗೇ ಹೊಕ್ಕಿಕೊಂಡಂತೆ ಇದ್ದ ಅದರ ನಿಬ್ಬು, ಮೆಲ್ಲಗೆ ಜಾರುವ ಅದರ ಕ್ಯಾಪು, ಎರಡೆರಡು ಕಲರ್ರಿನ ವಿನ್ಯಾಸ, ಬೆರಳು ಹಿಡಿವಲ್ಲಿನ ನುಣುಪು ಎಲ್ಲವೂ ಪುಟ್ಟನಿಗೆ ಬಹಳ ಇಷ್ಟವಾಗಿತ್ತು. ಶಾಯಿ ಕಕ್ಕುವುದು, ಮಧ್ಯದಲ್ಲೇ ನಿಂತುಬಿಡುವುದು, ಹಾಳೆಯನ್ನೇ ಕೊರೆಯುವಂತೆ ಓಡುವುದು ಇಂಥಹ ಕೆಟ್ಟ ಚಾಳಿಗಳೇನೂ ಅದಕ್ಕೆ ಇಲ್ಲ ಅನ್ನುವುದನ್ನು ಅವನು ಹಲವು ಸಹಪಾಠಿಗಳ ಬಾಯಲ್ಲಿ ಕೇಳಿತಿಳಿದುಕೊಂಡಿದ್ದ. ಮಲ್ಲಿ ಹತ್ರ ಕಾಡಿಬೇಡಿ, ಒಂದು ಸಲ ತಾನೂ ಅವನ ಪೆನ್ನು ತೆಗೆದುಕೊಂಡು ಬರೆಯಲು ಪ್ರಯತ್ನ ಪಟ್ಟಿದ್ದ. ಅದೂ ಒಂದು ತರ ಹಾಳೆಯನ್ನೇ ಕೊರೆದ ಹಾಗೇ ಪುಟ್ಟನಿಗೆ ಅನ್ನಿಸಿತ್ತು. ಮಲ್ಲಿಗೆ ಅದನ್ನು ಹೇಳಿದರೆ, ಅವನು ಅದು ಹಾಗೆಲ್ಲ ಬೇರೆಯವರು ಬರೆದರೆ ಸರಿಯಾಗಿ ಬರೆಯುವುದಿಲ್ಲವೆಂದೂ, ಅದು ಅವನು ಹಿಡಿದರೆ ಮಾತ್ರ ಸರಿಯಾಗಿ ಬರೆಯುತ್ತದೆ ಎಂದೂ ಹೇಳಿದ್ದ. ಪುಟ್ಟನಿಗೆ ಹೀಗೆ ತಮ್ಮ ಮಾತೊಂದನ್ನೇ ಕೇಳುವಂತ ಪೆನ್ನೊಂದಿದ್ದರೆ ಎಷ್ಟು ಚೆನ್ನ ಎಂದೆನಿಸಿ, ಹೀರೋ ಪೆನ್ನಿನ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿತ್ತು.ಇವೆಲ್ಲ ಕಾರಣಗಳಿಗಾಗಿಯೇ ಪುಟ್ಟನಿಗೆ ಇವತ್ತು ಸಂಧ್ಯಾಳ ಬ್ಯಾಗಿನೊಳಗೆ ಆ ಹೀರೋ ಪೆನ್ನು ಕಂಡಕೂಡಲೇ ತೆಗೆದುಕೊಳ್ಳಬೇಕೆಂದು ಬಲವಾಗಿ ಅನ್ನಿಸಿ, ಹಾಗೆ ಮಾಡಿಬಿಟ್ಟಿದ್ದ.&lt;br /&gt;&lt;br /&gt;ಮಧ್ಯಾಹ್ನ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ, ಪುಟ್ಟ ಮೆಲ್ಲಗೆ ತನ್ನ ಬ್ಯಾಗಿನಿಂದ ಹೀರೋ ಪೆನ್ನನ್ನು ಹೊರಗೆ ತೆಗೆದ. ಅದರ ಹೊಂಬಣ್ಣದ ಕ್ಯಾಪು ಮಿರಿಮಿರಿ ಮಿಂಚುತ್ತಿತ್ತು. ಪಟ್ಟಿಯೊಂದರ ಹಿಂಭಾಗದ ಮೇಲೆ ಪೆನ್ನಿನಿಂದ ಬರೆಯಲು ಪ್ರಯತ್ನಿಸಿದ. ಆದರೆ ಪುಟ್ಟನ ಉತ್ಸಾಹಕ್ಕೆ ತಣ್ಣೀರೆರೆಚುವಂತೆ, ಪೆನ್ನು ಬರೆಯುತ್ತಾನೇ ಇಲ್ಲ! ಬರೀ ಕರಕರ ಶಬ್ದ ಮಾತ್ರ ಮಾಡುತ್ತಿದೆ. ಪುಟ್ಟ ಅಭ್ಯಾಸ ಬಲದಿಂದ ಎರಡು ಸಲ ಪೆನ್ನನ್ನು ಕೊಡವಿದ, ಊಹುಂ, ಒಂಚೂರೂ ಶಾಯಿಯೂ ಬೀಳಲಿಲ್ಲ. ಪುಟ್ಟ ಒಂದುಸಲ ಪೆಚ್ಚಾದರೂ, ಸಾವರಿಸಿಕೊಂಡು ಅದರ ಕೆಳಭಾಗವನ್ನು ಬಿಚ್ಚಿ, ಶಾಯಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಪ್ರಯತ್ನಿಸಿದ. ಆಗಲೇ ಗೊತ್ತಾಗಿದ್ದು ಅವನಿಗೆ, ಹೀರೋ ಪೆನ್ನು ಬೇರೆ ಶಾಯಿ ಪೆನ್ನುಗಳಿಗಿಂತ ನಿಜಕ್ಕೂ ಭಿನ್ನವಾಗಿದೆ ಎನ್ನುವುದು. ಅದರ ಮೇಲುಭಾಗಕ್ಕೆ ಅಂಟಿಕೊಂಡಂತೇ ಒಂದು ಉದ್ದನೆಯ ರಬ್ಬರ್ ಟ್ಯೂಬು ಇತ್ತು. ಅದರಲ್ಲೇ ಶಾಯಿ ತುಂಬುತ್ತಾರೇನೋ ಎಂದು ಅವನಿಗೆ ಅನಿಸಿತು. ಟ್ಯೂಬನ್ನು ಪೆನ್ನಿನಿಂದ ಬೇರ್ಪಡಿಸಲು ಪ್ರಯತ್ನಿಸಿದ. ಇಲ್ಲ, ಅದು ಗಟ್ಟಿಯಾಗಿ ಅಂಟಿಕೊಂಡೇ ಇತ್ತು. ಅದರಲ್ಲಿ ಶಾಯಿ ಹೇಗೆ ತುಂಬುವುದು ಎನ್ನುವುದೇ ಪುಟ್ಟನಿಗೆ ಗೊತ್ತಾಗಲಿಲ್ಲ. ಈಗ ಪುಟ್ಟ ನಿಜಕ್ಕೂ ಗೊಂದಲಕ್ಕೆ ಬಿದ್ದ. ಹೀರೋ ಪೆನ್ನಿನ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡರೂ, ಇದೊಂದರ ಬಗ್ಗೆ ಯಾರ ಹತ್ತಿರನೂ ಕೇಳಲಿಲ್ಲವಲ್ಲ ಎಂದು ಪೇಚಾಡಿಕೊಂಡ. ಆದರೆ ಈಗೇನೂ ಮಾಡುವಂತಿರಲಿಲ್ಲ.&lt;br /&gt;&lt;br /&gt;ಸಂಜೆಯ ತನಕವೂ ಅವನಿಗೆ ಇದರದ್ದೇ ಯೋಚನೆಯಾಯ್ತು. ಮಲ್ಲಿಯ ಹತ್ತಿರ ಕೇಳೋಣವೆಂದರೆ ಅವನು ಮೊದಲೇ ಸಂಶಯ ಪಿಶಾಚಿ. ಒಂದು ಉತ್ತರ ಹೇಳಲು ೧೦ ಪ್ರಶ್ನೆ ಕೇಳುತ್ತಾನೆ. ಯಾಕೋ ಅವನ ಹತ್ತಿರ ಕೇಳುವುದು ಅಷ್ಟೊಂದು ಒಳ್ಳೆಯದೆಲ್ಲವೆಂದು ಒಳಮನಸು ಹೇಳತೊಡಗಿತು. ಅಷ್ಟರಲ್ಲೇ ಪುಟ್ಟನ ಅಮ್ಮ ಅವನನ್ನು ಕರೆದು, ಇವತ್ತು ಅಕ್ಕನನ್ನು ಅವಳ ಭರತನಾಟ್ಯ ಕ್ಲಾಸಿಗೆ ಕರೆದುಕೊಂಡು ಹೋಗಿ, ಕ್ಲಾಸು ಮುಗಿದ ಮೇಲೆ ವಾಪಸ್ಸು ಅವಳ ಜೊತೆಯೇ ಬರಬೇಕೆಂದು ತಾಕೀತು ಮಾಡಿಬಿಟ್ಟಳು. ಅವನಪ್ಪ ಮನೆಗೆ ಬೇಗ ಬರದಿದ್ದದೆ ಬಹಳಷ್ಟು ಶನಿವಾರ ಈ ಕೆಲಸ ಪುಟ್ಟನ ಪಾಲಿಗೆ ಬರುತ್ತಿತ್ತು. ಅಕ್ಕನಿಗೆ ಹೆದರಿಕೆ ಅಂತಲ್ಲ, ಆದರೂ ಅವಳ ಜೊತೆ ಯಾರಾದರೂ ಇದ್ದರೆ ಅನುಕೂಲ ಅಂತೆನಿಸಿ ಅಮ್ಮ ಹಾಗೆ ಮಾಡುತ್ತಿದ್ದರು. ಪುಟ್ಟನಿಗೆ ಅದರಿಂದ ಖುಶಿಯೇ ಆಯಿತು. ಮಲ್ಲಿಯ ಜೊತೆ ಬ್ಯಾಡ್ಮಿಂಟನ್ ಆಡಲೂ ಇವತ್ತು ಅವನಿಗೆ ಮನಸ್ಸಿರಲಿಲ್ಲ.&lt;br /&gt;&lt;br /&gt;ಅಕ್ಕನ ಭರತನಾಟ್ಯ ಕ್ಲಾಸು ಬಹಳ ದೂರವೇನಿರಲಿಲ್ಲ. ಅಗಸನ ಕಟ್ಟೆ ಕೆರೆ ದಾಟಿ ಆ ಕೆರೆ ಏರಿ ಮೇಲಿರುವ ವಿಷ್ಣು ಮಠದ ತನಕ ಹೋಗಬೇಕು ಅಷ್ಟೇ. ಅಲ್ಲಿ ಒಬ್ಬ ಮೇಷ್ಟ್ರು ಪ್ರತೀ ಶನಿವಾರ ಸುತ್ತಮುತ್ತಲಿನ ಊರ ಹೆಣ್ಣುಮಕ್ಕಳಿಗೆ ಭರತ ನಾಟ್ಯ ಕಲಿಸುತ್ತಿದ್ದರು. ಅವರು ಮೂಲ ಮೈಸೂರಿನವರು, ಹೆಸರು ವಿಷ್ಣು ಶರ್ಮ, ಅನ್ನುವುದಷ್ಟೇ ಎಲ್ಲರಿಗೂ ಗೊತ್ತಿದ್ದಿದ್ದು. ಪುಟ್ಟನಿಗೆ ಗಂಡು ಮೇಷ್ಟರೊಬ್ಬರು ಹೆಣ್ಣುಮಕ್ಕಳಿಗೆ ಭರತನಾಟ್ಯ ಕಲಿಸುತ್ತಾರೆ ಎನ್ನುವುದೇ ಒಂದು ಸೋಜಿಗವಾಗಿತ್ತು. ದಾರಿ ಮಧ್ಯೆ ಅಕ್ಕನ ಹತ್ತಿರ ಹೀರೋ ಪೆನ್ನಿನ ಬಗ್ಗೆ ಕೇಳಬೇಕು ಎಂದೆನ್ನಿಸಿದರೂ ಪೂರ್ತಿಯಾಗಿ ಧೈರ್ಯ ಸಾಕಾಗಲಿಲ್ಲ. ಅಕ್ಕನೂ ಯಾವುದೋ ಡ್ಯಾನ್ಸ್ ಸ್ಟೆಪ್ಪಿನ ಗುಂಗಿನಲ್ಲೇ ಇದ್ದಳು. ಸುಮ್ಮನೆ ಅವಳ ಜೊತೆ ಹೆಜ್ಜೆಹಾಕಿದ. ಇವರು ಹೋಗುವಷ್ಟರಲ್ಲೇ ಕ್ಲಾಸು ಶುರುವಾಗಿಬಿಟ್ಟಿತ್ತು. ಪುಟ್ಟನ ಅಕ್ಕ ಓಡೋಡಿ ಹೋಗಿ ಮುಂದಿನ ಸಾಲಿನಲ್ಲೇ ಸೇರಿಕೊಂಡಳು. ಪುಟ್ಟ ಅಲ್ಲಿಯೇ ಇದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತುಕೊಂಡ . ಪ್ರತೀ ಸಲ ಅಕ್ಕನ ಜೊತೆ ಬಂದಾಗಲೂ ಅಲ್ಲಿ ಸಮಯ ಕಳೆಯುವುದು ಪುಟ್ಟನಿಗೆ ಬಹುಕಷ್ಟಕರವಾದ ಸಂಗತಿಯಾಗಿತ್ತು. ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಪಕ್ಕದಲ್ಲೇ ಇದ್ದ ಕಿಟಕಿಯಿಂದ ವಿಷ್ಣು ಮಠಕ್ಕೆ ಬರುತ್ತಿದ್ದ ಭಕ್ತಾದಿಗಳನ್ನು ನೋಡುತ್ತಲೇ ಹೇಗೋ ಒಂದುತಾಸನ್ನು ಕಷ್ಟದಿಂದ ಕಳೆಯುತ್ತಿದ್ದ. ಆದರೆ ಇವತ್ಯಾಕೋ ಅವನಿಗೆ ಅಕ್ಕ ಡ್ಯಾನ್ಸು ಮಾಡುತ್ತಿರುವದನ್ನು ನೋಡಬೇಕೆನ್ನಿಸಿತು. ಸುಮ್ಮನೆ ನೋಡುತ್ತಾ ಕುಳಿತ. ಕಿಟಕಿಯಿಂದ ಒಳಗೆ ಬರುತ್ತಿದ್ದ ಬಿಸಿಲುಕೋಲು ಡ್ಯಾನ್ಸ್ ಮಾಡುತ್ತಿದ್ದ ಹುಡುಗಿಯರ ಕಾಲುಗಳ ಮಧ್ಯೆ ಸಿಲುಕಿ ವಿಚಿತ್ರವಾದ ಬೆಳಕಿನ ವಿನ್ಯಾಸವನ್ನು ಸೃಷ್ಟಿಮಾಡುತ್ತಿತ್ತು. ಮೇಷ್ಟ್ರು ಎಲ್ಲರ ಬಳಿಗೂ ಸಾಗಿ ಸ್ಟೆಪ್ ತಪ್ಪಿದ್ದರೆ ಸರಿಮಾಡುತ್ತಿದ್ದರು. ಮೇಷ್ಟ್ರ ಜೊತೆ ಎಲ್ಲರೂ "ಮೆಲ್ಲ ಮೆಲ್ಲನೆ ಬಂದನೆ, ಗೋಪಮ್ಮಾ ಕೇಳೆ, ಮೆಲ್ಲಮೆಲ್ಲನೇ ಬಂದನೇ.." ಎಂದು ಲಯಬಧ್ಧವಾಗಿ ಹಾಡುತ್ತಾ ಡ್ಯಾನ್ಸ್ ಮಾಡುತ್ತಾ ಇದ್ದರು. ಪುಟ್ಟ ಅಕ್ಕನ ಬದಲಾಗುತ್ತಿದ್ದ ಮುಖಚರ್ಯೆಯನ್ನೇ ಗಮನಿಸುತ್ತಿದ್ದ. "ಮೆಲ್ಲ ಮೆಲ್ಲನೆ ಬಂದನೇ, ಗೋಪಮ್ಮಾ ಕೇಳೆ" ಎಂದು ಹಾಡುವಾಗ ಒಂಚೂರು ಕಾತರ ಭಾವ, "ಮೆಲ್ಲ ಮೆಲ್ಲಗೆ ಬಂದು ಗಲ್ಲಕೆ ಮುತ್ತ ಕೊಟ್ಟು" ಎಂದು ಗಲ್ಲದ ಮೇಲೆ ತೋರು ಬೆರಳಿಡುವಾಗಿನ ಒಂಚೂರು ನಾಚಿಕೆ, "ಕೇಳದೇ ಓಡಿಹೋದ ಗೊಲ್ಲಗೆ ಬುದ್ಧಿಯ ಹೇಳೆ" ಎಂದು ಹಾಡುವಾಗಿನ ಹುಸಿಮುನಿಸು, ಎಷ್ಟೆಲ್ಲಾ ಭಾವಗಳು! ಮುಂದೆ ಅಕ್ಕ ಒಳ್ಳೆ ಡ್ಯಾನ್ಸರ್ ಖಂಡಿತ ಆಗುತ್ತಾಳೆ ಅನ್ನಿಸಿತು ಪುಟ್ಟನಿಗೆ.&lt;br /&gt;&lt;br /&gt;ಹಾಗೇ ಎಷ್ಟು ಹೊತ್ತಾಯಿತೋ ಗೊತ್ತಿಲ್ಲ. ಹುಡುಗಿಯೊಬ್ಬಳು ಕಾಲು ಸೋತುಹೋಯಿತೆಂಬಂತೆ ಬಂದು ಪುಟ್ಟನ ಪಕ್ಕಕ್ಕೇ ಬಂದು ಕುಳಿತಳು. ಅವಳ ಮುಖದಿಂದ ಬೆವರು ನಲ್ಲಿ ನೀರಿನ ತರ ಧಾರಾಕಾರವಾಗಿ ಹರಿಯುತ್ತಿತ್ತು. ಡ್ಯಾನ್ಸ್ ಮಾಡುವುದು ಅಷ್ಟೆಲ್ಲಾ ಕಷ್ಟವಿರಬಹುದೆಂದು ಪುಟ್ಟ ಯಾವತ್ತೂ ಊಹಿಸಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಕುಳಿತು ಸುಧಾರಿಸಿಕೊಂಡ ಮೇಲೆ ಅವಳು ಹಿಂದೆಲ್ಲೋ ಹೋಗಿ ಸ್ಕೂಲ್ ಬ್ಯಾಗೊಂದನ್ನು ಹಿಡಿದುಕೊಂಡು ಬಂದಳು. ಪುಟ್ಟ ನೋಡುತ್ತಿದ್ದಂತೆಯೇ ಅದರಲ್ಲಿಂದ ಪಟ್ಟಿಯೊಂದನ್ನು ತೆಗೆದು, ಕೆಂಪು ಹಳದಿ ಬಣ್ಣದ ಜ್ಯಾಮೆಟ್ರಿ ಬಾಕ್ಸಿನಿಂದ ಪೆನ್ನು ತೆಗೆದು ಏನೋ ಬರೆಯತೊಡಗಿದಳು. ಪುಟ್ಟ ನೋಡುತ್ತಾನೆ, ಏನಾಶ್ಚರ್ಯ! ಅವಳ ಕೈಲಿರುವುದೂ ಹೀರೋ ಪೆನ್ನೇ. ಹೇಳಿಕೊಳ್ಳದಾದಷ್ಟು ಸಂತಸವಾಯಿತು ಅವನಿಗೆ. ಅಪ್ರಯತ್ನಪೂರ್ವಕವಾಗಿ "ಅದು ಹೀರೋ ಪೆನ್ನಾ?" ಅನ್ನೋ ಉದ್ಘಾರ ಅವನ ಬಾಯಿಂದ ಬಿದ್ದೇ ಹೋಗಿತ್ತು. ಬರೆಯುತ್ತಿದ್ದ ಹುಡುಗಿ, ತನ್ನ ಕೈಯಲ್ಲಿರುವುದು ಕೊಹಿನೂರ್ ವಜ್ರವೇ ಎಂಬಂತೆ ಗತ್ತಿನಿಂದ ಪುಟ್ಟನ ಕಡೆ ನೋಡಿ ತಲೆಯಾಡಿಸಿದಳು. ತನಗೇನೂ ಗೊತ್ತೇ ಇಲ್ಲ ಎಂಬಂತೆ ಪುಟ್ಟ "ಅದಕ್ಕೆ ಶಾಯಿ ತುಂಬುವುದು ಹೇಗೆ ಗೊತ್ತಾ?" ಎಂದು ಕೇಳಿದ. ಆ ಪ್ರಶ್ನೆ ಕೇಳುವಾಗ ಸಾಧ್ಯವಾದಷ್ಟು ಮುಗ್ಧ ಮುಖ ಮಾಡಲು ಅವನು ಪ್ರಯತ್ನಪಟ್ಟಿದ್ದು ಎದ್ದುಕಾಣುತ್ತಿತ್ತು. ಆದರೆ ಆ ಹುಡುಗಿಯ ಅಹಂಗೆ ಸ್ವಲ್ಪ ಘಾಸಿಯಾಗಿರಬೇಕು. ಅಂಥಾ ಪೆನ್ನು ಇಟ್ಟುಕೊಂಡು ಯಕಶ್ಚಿತ್ ಅದಕ್ಕೆ ಶಾಯಿ ತುಂಬುವುದು ಹೇಗೆ ಅನ್ನುವುದು ಗೊತ್ತಿಲ್ಲವೆಂದರೆ ಮರ್ಯಾದೆ ಪ್ರಶ್ನೆ ಅಲ್ಲವೇ? "ಓ, ಶಾಯಿ ತುಂಬೋದಾ? ಅದೇನ್ ಮಹಾ? ಹೀಗೆ" ಎನ್ನುತ್ತಾ, ಅದರ ಕೆಳಭಾಗವನ್ನು ಸಂಪೂರ್ಣ ಕಳಚಿ, ಪೆನ್ನನ್ನು ತಲೆಕೆಳಗು ಮಾಡಿ, ರಬ್ಬರ್ ಟ್ಯೂಬ್ ಒತ್ತಿ ಹಿಡಿದು ಹೇಗೆ ಇಂಕ್ ಬಾಟಲಲ್ಲಿ ಇಡಬೇಕು ಎಂದು ತೋರಿಸಿದಳು. ಪುಟ್ಟನಿಗೆ ಈಗ ಸಮಾಧಾನವಾಯಿತು. "ಓ ಹಾಗಾ?" ಎಂದು ತಲೆತೂಗಿದ. ಹುಡುಗಿ ಬರೆಯುವುದನ್ನು ಮುಂದುವರಿಸಿದಳು.&lt;br /&gt;&lt;br /&gt;ಅಕ್ಕನ ಜೊತೆ ವಾಪಾಸ್ ಮನೆಗೆ ಬರುತ್ತಿದ್ದಾಗ ಅವನ ಕಾಲುಗಳು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಜಗತ್ತನ್ನೇ ಗೆದ್ದಷ್ಟು ಹುರುಪು ಅವನ ಮೈಮನಗಳಲ್ಲಿ. ಆದರೂ ಸುಸ್ತಾದ ಅಕ್ಕನ ಕಾಲುಗಳಿಗೆ ಜೊತೆ ನೀಡಲು ಅವನು ಸಾವಕಾಶವಾಗಿಯೇ ಬರಬೇಕಾಯಿತು. ಮನೆಗೆ ಬಂದ ಮೇಲೆ ಅವನು ಮಾಡಿದ ಮೊದಲ ಕೆಲಸವೇ ತನ್ನ ರೂಮ್ ನ ಬಾಗಿಲು ಹಾಕಿಕೊಂಡು ಹೀರೋ ಪೆನ್ನಿಗೆ ಶಾಯಿ ತುಂಬಲು ಪ್ರಯತ್ನಿಸಿದ್ದು. ಸುಮಾರು ಹೊತ್ತು ಒದ್ದಾಡಿದ ನಂತರ ಅದರ ರಬ್ಬರ್ ಟ್ಯೂಬಿನಲ್ಲಿ ಒಂಚೂರು ಶಾಯಿಯನ್ನು ತುಂಬಲು ಸಾಧ್ಯವಾಯಿತು ಅವನಿಗೆ. ಸ್ಕೂಲ್ ಬ್ಯಾಗಿನಿಂದ ಪಟ್ಟಿಯೊಂದನ್ನು ತೆರೆದು ಅದರಲ್ಲಿ ಬರೆಯಲಾರಂಭಿಸಿದ. ಆಹಾ ಎಷ್ಟು ಸುಲಲಿತವಾಗಿ ಓಡುತ್ತಿದೆ ಪೆನ್ನು! ಪುಟ್ಟನಿಗೆ ಹಾಳೆಯ ಮೇಲೆ ಬರೆದ ಅನುಭವವೇ ಆಗುತ್ತಿಲ್ಲ. ಪೆನ್ನು ಅವನ ಕೈಯಲ್ಲಿ ಸರಾಗವಾಗಿ ಹರಿಯುತ್ತಿದೆ! ಪುಟ್ಟನಿಗೆ ಬರೆಯುವುದನ್ನು ನಿಲ್ಲಿಸಬೇಕು ಎಂದೆನ್ನಿಸುತ್ತಲೇ ಇಲ್ಲ. ಹಾಗೇ ಎಷ್ಟು ಹೊತ್ತು ಬರೆದನೋ ಅವನಿಗೇ ಗೊತ್ತು. ಕೊನೆಗೊಮ್ಮೆ ಕೈಯೆಲ್ಲಾ ಜೋಮು ಹಿಡಿದ ಹಾಗೆ ಅನ್ನಿಸಿದಾಗ ಪೆನ್ನನ್ನು ಮುಚ್ಚಿಟ್ಟು, ಮೆಲ್ಲಗೆ ತನ್ನ ಸ್ಕೂಲ್ ಬ್ಯಾಗಿಗೆ ಸೇರಿಸಿದ.&lt;br /&gt;&lt;br /&gt;ಪುಟ್ಟನ ರವಿವಾರವೆಲ್ಲಾ ಇದರ ಸಂಭ್ರಮದಲ್ಲೇ ಕಳೆದುಹೋಯ್ತು.ಆದರೆ ರಾತ್ರಿಯಾದಂತೆಲ್ಲಾ ಅವನಿಗೊಂದು ಅವ್ಯಕ್ತ ಭಯ ಆವರಿಸಿಕೊಳ್ಳತೊಡಗಿತು. ತಾನು ಪೆನ್ನು ಕದ್ದಿದ್ದು ಸಂಧ್ಯಾಳಿಗೆ ಗೊತ್ತಾದರೆ? ಇಷ್ಟು ಹೊತ್ತಿಗಂತೂ ಅವಳಿಗೆ ತನ್ನ ಪೆನ್ನು ಕಳೆದುಹೋಗಿರುವುದು ಖಂಡಿತವಾಗಿ ಗೊತ್ತಾಗಿರುತ್ತದೆ. ನಾಳೆ ಶಾಲೆಯಲ್ಲಿ ಮಾಸ್ತರ್ರಿಗೆ ಹೇಳಿ ಎಲ್ಲರ ಸ್ಕೂಲ್ ಬ್ಯಾಗ್ ಗಳನ್ನು ಹುಡುಕಿಸಿದರೆ? ಅದರ ಕಲ್ಪನೆ ಬಂದ ಕೂಡಲೇ ಪುಟ್ಟ ನಿಜವಾಗಿಯೂ ಕಂಗಾಲಾದ. ಹೀರೋ ಪೆನ್ನನ್ನು ಬ್ಯಾಗಿನಿಂದ ತೆಗೆದು ಮನೆಯಲ್ಲೇ ಎಲ್ಲೋ ಅಡಗಿಸಿಡಬೇಕೆಂದು ಅನಿಸಿತೊಡಗಿತು. ಆದರೆ ಅಡಗಿಸಿಡುವುದಾದರೂ ಎಲ್ಲಿ? ಅಕ್ಕನ, ಅಮ್ಮನ ಕಣ್ಣಿಂದ ತಪ್ಪಿಸಿ ಇಡುವುದು ಅಸಾಧ್ಯವೆಂದೇ ಅವನ ಮನಸು ಹೇಳತೊಡಗಿತು. ಅದಲ್ಲದೇ ಅಮ್ಮನ ಕೈಲಿ ಸಿಕ್ಕಿಹಾಕಿಕೊಂಡರೆ ಪರಿಸ್ಥಿತಿ ಇನ್ನೂ ಗಂಭೀರವಾಗುವುದರಲ್ಲಿ ಪುಟ್ಟನಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಈ ವಿಚಿತ್ರ ಸಂಕೋಲೆಯಲ್ಲಿ ಸಿಕ್ಕಿಬಿದ್ದಿದ್ದಕಾಗಿ ಪುಟ್ಟನಿಗೆ ಬಹಳ ಬೇಸರ, ದುಃಖ ಎರಡೂ ಆಯಿತು. ಈ ಸಂದಿಗ್ಧದ ಮುಂದೆ ಹೀರೋ ಪೆನ್ನಿನ ಸಂಭ್ರಮ ಪೂರ್ತಿಯಾಗಿ ಕರಗಿಹೋಯ್ತು. ರಾತ್ರಿ ಊಟಕ್ಕೆ ಕುಳಿತಾಗ ಪುಟ್ಟನ ಅನ್ಯಮನಸ್ಕತೆಯನ್ನು ಅಮ್ಮ ಗಮನಿಸಿ, "ಎನಾಯ್ತೋ ಪುಟ್ಟಾ?" ಅಂದು ಕೇಳಿಯೂ ಇದ್ದರು. ಪುಟ್ಟನಿಗೆ ಊಟ ಸರಿಯಾಗಿ ಇಳಿಯಲೂ ಇಲ್ಲ. ರಾತ್ರಿ ನಿದ್ದೆಯೂ ಸರಿಯಾಗಿ ಬರಲಿಲ್ಲ. ಬೆಳಗ್ಗಿನ ಜಾವದಲ್ಲೆಲ್ಲೋ ಪುಟ್ಟನಿಗೆ ಕನಸಿನಲ್ಲಿ ಸಂಧ್ಯಾ ಬಂದು "ನನ್ನ ಪೆನ್ನು ಕದ್ದಿದ್ದಕ್ಕೆ ನಿನಗೆ ಸರಿಯಾದ ಶಾಸ್ತಿ ಮಾಡುತ್ತೀನಿ ನೋಡು" ಎಂದು ಅಣಕಿಸಿದ ಹಾಗೆ ಆಯಿತು. ಪುಟ್ಟನಿಗೆ ಸಟ್ಟನೇ ಎಚ್ಚರವಾಯಿತು. ಅವನ ಮೈಯೆಲ್ಲ ಸಿಕ್ಕಾಪಟ್ಟೆ ಬೆವರಿ ಹೋಗಿತ್ತು. ಆಮೇಲೆ ಅವನಿಗೆ ನಿದ್ರೆ ಬರಲೇ ಇಲ್ಲ.&lt;br /&gt;&lt;br /&gt;ಯಾವತ್ತಿನಂತೆ ಅವನಿಗೆ ಬೇಗ ಎದ್ದು ಓದಲಾಗಲಿಲ್ಲ. "ಆರಂಭಶೂರ" ಎಂದು ಅವನಮ್ಮ ಪುಟ್ಟನನ್ನು ತಿಂಡಿತಿನ್ನುವಾಗ ಕೆಣಕಿದರು. ಪುಟ್ಟ ಏನೂ ಹೇಳಲಿಲ್ಲ. ಅವನ ಕಣ್ಣೆಲ್ಲಾ ಕೆಂಪಾಗಿಹೋಗಿತ್ತು. ಆದರೆ ಮನಸ್ಸು ಒಂದು ತಹಬದಿಗೆ ಬಂದಿತ್ತು. ಅವತ್ತು ಶಾಲೆಗೆ ಹೋಗಲು ಅವನಿಗೆ ಎಲ್ಲಿಲ್ಲದ ಅವಸರ. ಶಾಲೆಗೆ ಹೋದ ತಕ್ಷಣ ಅವನು ಮಾಡಿದ ಮೊದಲ ಕೆಲಸವೇ ಸಂಧ್ಯಾ ಬಳಿ ಹೋಗಿ "ನಿನ್ನ ಹೀರೋ ಪೆನ್ನು, ಶನಿವಾರ ಶಾಲೆಯಿಂದ ಮನೆಗೆ ಹೋಗುವ ಗಡಿಬಿಡಿಯಲ್ಲಿ ನಿನ್ನ ಬ್ಯಾಗಿನಿಂದ ಬಿದ್ದುಹೋಗಿತ್ತು, ನಾನು ಇಟ್ಟುಕೊಂಡಿದ್ದೆ, ತಗೋ" ಎಂದು ಹೀರೋ ಪೆನ್ನನ್ನು ವಾಪಾಸ್ ಮಾಡಿದ್ದು. ಸಂಧ್ಯಾಳಿಗೆ ಅತ್ಯಂತ ಸಂತೋಷವಾದ ಹಾಗೆ ತೋರಿತು. "ಓ ಹೌದಾ? ನಾನು ಮನೆಯೆಲ್ಲಾ ಹುಡುಕಿದೆ, ಎಲ್ಲೂ ಸಿಗಲಿಲ್ಲ, ಕಳೆದುಹೋಯಿತು ಎಂದು ಬಹಳ ಬೇಜಾರಾಗಿತ್ತು. ಥ್ಯಾಂಕ್ಸ್" ಎಂದು ಹೇಳಿ ಅವಳ ಬ್ಯಾಗಿನಿಂದ ಚಾಕಲೇಟೊಂದನ್ನು ತೆಗೆದು ಪುಟ್ಟನಿಗೆ ಕೊಟ್ಟಳು. ಪುಟ್ಟನ ಮನಸ್ಸು ಈಗ ನಿರಾಳವಾಯ್ತು. ಚಾಕಲೇಟನ್ನು ಬಾಯಲ್ಲಿ ಹಾಕಿ, ಸುಮ್ಮನೆ ಬಂದು ಬೆಂಚಿನಲ್ಲಿ ಕುಳಿತ. ಇನ್ನು ದಿನವೂ ಬೆಳಿಗ್ಗೆ ಒಂದು ತಾಸು ಓದಿ ಹೇಗಾದರೂ ೧೦ ನಂಬರೊಳಗೆ ಬರಲೇ ಬೇಕು ಎಂದು ಮನಸ್ಸಿನಲ್ಲೇ ಧೃಢ ನಿರ್ಧಾರ ಮಾಡಿಕೊಂಡ. ಅಪ್ಪನ ಹತ್ತಿರ ಮಾತ್ರ "ನನಗೆ ಹಸಿರು ಕಲರಿನ ಹೀರೋ ಪೆನ್ನೇ ತೆಗೆಸಿಕೊಡು" ಎಂದು ಬೇಡಿಕೆ ಇಡಬೇಕೆಂದೂ ಅವನಿಗೆ ಅನ್ನಿಸಿತು.&lt;br /&gt;&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-5629236194384528703?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/5629236194384528703/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=5629236194384528703' title='13 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/5629236194384528703'/><link rel='self' type='application/atom+xml' href='http://www.blogger.com/feeds/6035880729059442700/posts/default/5629236194384528703'/><link rel='alternate' type='text/html' href='http://madhu-vana.blogspot.com/2009/03/blog-post.html' title='ಹಸಿರು ಹೀರೋ ಪೆನ್ನು.'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>13</thr:total></entry><entry><id>tag:blogger.com,1999:blog-6035880729059442700.post-199210925965933223</id><published>2009-01-29T21:15:00.000-08:00</published><updated>2009-01-29T21:17:38.278-08:00</updated><title type='text'>ಜೊತೆಯಾದವಳಿಗೆ</title><content type='html'>&lt;span style="font-family:courier new;"&gt;ಬೆರಳ ತುದಿಯಲಿ ಸರಿದ ವರುಷಗಳ&lt;br /&gt;ಸುರಿವ ಮಳೆಯಲಿ ಕುಣಿದ ಹರುಷವ&lt;br /&gt;ಮರೆವ ನೆಪದಲಿ ಕಳೆದ ನೆನಪುಗಳ&lt;br /&gt;ಮರಳಿ ತರಲಿ ಶುಭದಿನದ ಘಳಿಗೆ&lt;br /&gt;&lt;br /&gt;ಮತ್ತೆಬಂದ ನವವಸಂತ ತರಲಿ&lt;br /&gt;ನಿತ್ಯ ನವಿರ ಒಲವ ಹೊಳಹು&lt;br /&gt;ಸುತ್ತಮುತ್ತ ಕವಿದಕಪ್ಪ ಭೇದಿಸಿ&lt;br /&gt;ಕತ್ತಲಿನ ದೀಪದಂತಿರಲಿ ಬಾಳು&lt;br /&gt;&lt;br /&gt;ಹತ್ತುಹಲವು ನೋವುನಲಿವ&lt;br /&gt;ಮೆತ್ತಗಾಗಿಸುವ ಸೋಲುಗೆಲುವ&lt;br /&gt;ಬಾಳಪಥದಿ ನಗುತ ನಡೆದು&lt;br /&gt;ನಾಳೆಗನಸುಗಳ ಭರವಸೆಯಾಗು&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-199210925965933223?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/199210925965933223/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=199210925965933223' title='12 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/199210925965933223'/><link rel='self' type='application/atom+xml' href='http://www.blogger.com/feeds/6035880729059442700/posts/default/199210925965933223'/><link rel='alternate' type='text/html' href='http://madhu-vana.blogspot.com/2009/01/blog-post_29.html' title='ಜೊತೆಯಾದವಳಿಗೆ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>12</thr:total></entry><entry><id>tag:blogger.com,1999:blog-6035880729059442700.post-7910827850820379159</id><published>2009-01-16T02:20:00.000-08:00</published><updated>2009-01-16T02:49:50.252-08:00</updated><title type='text'>ನಿನ್ನೆ ನಾಳೆಗಳ ನಡುವೆ</title><content type='html'>ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ&lt;br /&gt;ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ&lt;br /&gt;ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ&lt;br /&gt;ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ!&lt;br /&gt;&lt;br /&gt;ನಡೆವ ನೆಲದಲ್ಲಿ ನೆನೆದ ನೆತ್ತರ ನೋಡಿನೋಡಿಯೂ&lt;br /&gt;ಮೋಸದ ಮರೆಯಲ್ಲಿ ಮೌನಕ್ಕೆ ಮಾತಾಗಿದ್ದೀವೆ&lt;br /&gt;ಸಭ್ಯತೆಯ ಸೋಗಿನ ಸೆರಗ ಸುತ್ತಿಕೊಂಡೇ ಸಾಗಿದ್ದೇವೆ&lt;br /&gt;ನಾವು,ನಮಗೆ ವರ್ತಮಾನದ ತಲ್ಲಣಗಳಿಲ್ಲ!&lt;br /&gt;&lt;br /&gt;ಕನಸ ಕಣ್ಣು ಕಸಿವ ಕೆಲಸಕೆಂದೂ ಕುಗ್ಗದೆ&lt;br /&gt;ಬಸಿವ ಬೆವರ ಭಾರಕೂ ಬಸವಳಿದು ಬಿದ್ದಿಲ್ಲ&lt;br /&gt;ಕಾದಿರಿಸಿದ ಕಾಮನೆಗಳ ಕತ್ತಲಲ್ಲೇ ಕಾದಿದ್ದೇವೆ&lt;br /&gt;ನಾವು,ನಮಗೆ ನಾಳೆಗಳ ಹಂಗಿಲ್ಲ!&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-7910827850820379159?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/7910827850820379159/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=7910827850820379159' title='10 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/7910827850820379159'/><link rel='self' type='application/atom+xml' href='http://www.blogger.com/feeds/6035880729059442700/posts/default/7910827850820379159'/><link rel='alternate' type='text/html' href='http://madhu-vana.blogspot.com/2009/01/blog-post.html' title='ನಿನ್ನೆ ನಾಳೆಗಳ ನಡುವೆ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>10</thr:total></entry><entry><id>tag:blogger.com,1999:blog-6035880729059442700.post-5841227322972127781</id><published>2008-10-26T09:30:00.000-07:00</published><updated>2008-10-26T09:55:19.930-07:00</updated><title type='text'>ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ......</title><content type='html'>&lt;div align="justify"&gt;ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹಿಡಿದ ಹಳೇ ಪುಸ್ತಕಗಳನ್ನೆಲ್ಲಾ ಇನ್ನೊಮ್ಮೆ ತಿರುವಿಹಾಕಿ, ಹಳೆದ್ಯಾವುದೋ ಮಾರ್ಕ್ಸ್ ಕಾರ್ಡುಗಳನ್ನೊಮ್ಮೆ ನೋಡಿ ಕಣ್ತುಂಬಾ ಸಂತೋಷಪಟ್ಟರೆ ಆ ದಿನ ಸಾರ್ಥಕ. ಬೆಳಿಗ್ಗೆ ಬೆಳಿಗ್ಗೆನೇ ಮೆತ್ತಿ ಹತ್ತಿ ಕೂತು ಬಿಟ್ಟರೆ ಮಧ್ಯಾಹ್ನ ಅಮ್ಮ ಊಟಕ್ಕೆ ಕರೆಯುವ ತನಕಾನೂ ನಾನು ಅಲ್ಲೇ ಸ್ಥಾಪಿತನಾಗಿರುತ್ತೇನೆ. ಅಪರೂಪಕ್ಕೊಮ್ಮೆ ಮನೆಗೆ ಬಂದರೂ ಮಾತಾಡದೇ ಪುಸ್ತಕ ಹಿಡಿದುಕೊಂಡು ಕೂಡ್ತಾನೆ ಅನ್ನೋದು ಅಮ್ಮನ ದೊಡ್ಡ ಕಂಪ್ಲೇಂಟು. ಆದರೆ ನನಗ್ಯಾಕೋ ಹಾಗೇ ಮನೆಗೆ ಹೋದಾಗಲೆಲ್ಲಾ ಮೆತ್ತಿ ಹತ್ತಿ ಒಂದೊಪ್ಪತ್ತು ಕಳೆಯದೇ ಇದ್ದರೆ ಏನೋ ಕಳೆದುಕೊಂಡ ಹಾಗೆ.&lt;/div&gt;&lt;div align="justify"&gt;&lt;br /&gt;ಹಾಗೆ ನೋಡಿದರೆ ಹಳ್ಳಿಮನೆಗಳಲ್ಲಿ ಮೆತ್ತಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ಮನೆಯ ಸಾಂಸ್ಕೃತಿಕ ಕೇಂದ್ರವೆಂದು ಯಾವುದನ್ನಾದರೂ ಕರೆಯಬಹುದಾದರೆ ನಿಸ್ಸಂದೇಹವಾಗಿ ಅದು ಮೆತ್ತಿಗೇ ಸೇರಬೇಕು.ಮಕ್ಕಳಿಗೆ ಹತ್ತಿ ಇಳಿದು ಆಟವಾಡಲಿಕ್ಕೆ, ಕಣ್ಣುಮುಚ್ಚಾಲೆ ಆಡುವುದಕ್ಕೆ, ಮನೆಗಳಲ್ಲಿ ಪೂಜೆ ಸಮಾರಂಭಗಳಾದರೆ "ಇಸ್ಪೀಟ್" ಆಡಲಿಕ್ಕೆ ಅತ್ಯಂತ ಪ್ರಶಸ್ತ ಜಾಗ ಅದು. ಅದರ ಉಪಯೋಗಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಚಿಕ್ಕು, ಮಾವು ಮುಂತಾದ ಹಣ್ಣುಗಳನ್ನು ಮಕ್ಕಳ ಕಣ್ಣಿಗೆ ಕಾಣದಂತೆ ಮುಚ್ಚಿಡಲು, ದಿನಬಳಕೆ ಉಪಯೋಗಿಸದ ಆದರೆ ದೊಡ್ಡ ಸಮಾರಂಭಗಳಿಗೆ ಬೇಕಾಗುವಂತಹ ದೊಡ್ಡ ದೊಡ್ಡ ಪಾತ್ರೆಗಳನ್ನು ಶೇಖರಿಸಿಡಲು, ಕಂಬಳಿ, ಚಾದರ ಇನ್ನೂ ಹಲವಾರು ಹಾಸಿಗೆ ಸಾಮಗ್ರಿಗಳನ್ನು ಶೇಖರಿಸಿಡಲು, ಇನ್ನೂ ಎಷ್ಟೋ. ನಾವು ಮಕ್ಕಳಿದ್ದಾಗ ಇಷ್ಟೆಲ್ಲಾ ವಸ್ತುಗಳಿದ್ದ ಮೆತ್ತಿ ಸಹಜವಾಗಿ ಒಂತರಾ ನಿಧಿ ಇದ್ದ ಹಾಗೇ ಅನ್ನಿಸುತ್ತಿತ್ತು. ಪ್ರತೀ ಸಲ ಮೆತ್ತಿ ಹತ್ತಿದಾಗಲೂ ಹೊಸಾ ಹೊಸ ವಸ್ತುಗಳು ಕಾಣ್ತಾ ಇದ್ದರೆ ಯಾವ ಮಕ್ಕಳಿಗೆ ತಾನೆ ಸಂತೋಷವಾಗಲಿಕ್ಕಿಲ್ಲ? ಅದೊಂದು ಸದಾ "ಟ್ರೆಶರ್ ಹಂಟ್" ಇದ್ದ ಹಾಗೆಯೇ. ಹಾಗೆಯೇ ಮನೆಯ ಗಜಿಬಿಜಿಯಿಂದ ಸ್ವಲ್ಪ ವಿರಾಮ ಬೇಕೆಂದರೂ, ಮೆತ್ತಿ ಹತ್ತಿ ಕುಳಿತು ಬಿಟ್ಟರೆ ಅದೊಂದು ಹೊಸ ಲೋಕವೇ ಸರಿ. ಹಾಗಾಗಿ ಏಕಾಗ್ರತೆಯಿಂದ ಪುಸ್ತಕ ಓದಲಿಕ್ಕೆ(ಅಕಾಡೆಮಿಕ್ ಪುಸ್ತಕಗಳಲ್ಲ, ಕಥೆ ಪುಸ್ತಕಗಳು!) ಮತ್ತು ಕವನ ಗಿವನ ಗೀಜಲಿಕ್ಕೆ ಮೆತ್ತಿಗಿಂತ ಪ್ರಶಸ್ತವಾದ ಜಾಗ ನಮಗಂತೂ ಸಿಕ್ಕುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುವಾಗ ಮೆತ್ತಿ ಹತ್ತಿ, ಜಗತ್ತಿನ ಅರಿವೇ ಇಲ್ಲದಂತೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕಥೆ ಕಾದಂಬರಿ ಓದುವ ಅನುಭೂತಿಯನ್ನು ಯಾವುದಕ್ಕೂ ಹೋಲಿಸಲು ಬರುವುದಿಲ್ಲ ಎಂದರೆ ಹಲವಾರು ಜನರಾದರೂ ನನ್ನನ್ನು ಅನುಮೋದಿಸುತ್ತಾರೆಂಬ ಭರವಸೆ ನನಗಿದೆ.&lt;/div&gt;&lt;div align="justify"&gt;&lt;br /&gt;ಈ ಸಾರ್ತಿ ಮೆತ್ತಿ ಹತ್ತಿ ಹಳೆದ್ಯಾವುದೋ ಟ್ರಂಕನ್ನು ಶೋಧಿಸುತ್ತಿರುವಾಗ ಹಳೆಯ ಒಂದಷ್ಟು ಪತ್ರಗಳ ಗಂಟು ನನ್ನ ಕೈಸೇರಿತು. ಬಹಳ ಹಳೆಯದೇನಲ್ಲ, ಸುಮಾರು ೬-೭ ವರ್ಷದ ಹಿಂದಿನವು ಅಷ್ಟೇ. ನಾನು ಬೆಳಗಾವಿಯಲ್ಲಿ ಓದುತ್ತಿರುವಾಗ ಅಕ್ಕ ಕುಮಟಾದಲ್ಲಿ ಬಿಯೆಡ್ ಓದುತ್ತಿದ್ದಳು. ಆಗ ಸುಮಾರು ಒಂದು ವರ್ಷಗಳ ಕಾಲ ನಾವು ವಾರವಾರವೂ ಬರೆದುಕೊಂಡ ಪತ್ರಗಳ ಗಂಟು ಅದು. ಅದನ್ನು ಓದಿಕೊಂಡಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಇಡೀ ದಿನವೂ ಅದರ ಗುಂಗಿನಲ್ಲೇ ಇದ್ದೆ. ತುಂಬಾ ವೈಯಕ್ತಿಕ ಎನಿಸಿದರೂ ಬರೆದು ಎಲ್ಲರಲ್ಲೂ ಹಂಚಿಕೊಳ್ಳಬೇಕೆಂದು ಬಲವಾಗಿ ಅನ್ನಿಸಿ ಬಿಟ್ಟಿತು. ಆವಾಗಿನ್ನೂ ಮೊಬೈಲುಗಳು ಬಂದಿರಲಿಲ್ಲ. ನಾನು ಅಕ್ಕನಿಗೆ ಫೋನ್ ಮಾಡುವುದು ಬಹಳಾನೇ ಕಡಿಮೆ ಇತ್ತು. ಎಲ್ಲೋ ತಿಂಗಳಿಗೊಮ್ಮೆ ಮಾಡುತ್ತಿದ್ದೆ ಅಷ್ಟೇ. ಆದರೆ ಪತ್ರವನ್ನು ಮಾತ್ರ ತಪ್ಪದೇ ವಾರ ವಾರ ಬರೆದುಕೊಳ್ಳುತ್ತಿದ್ದವು. ನಾನು ಗೆಳೆಯರ ಜೊತೆ ರೂಮ್ ಮಾಡಿದ್ದರೆ ಅಕ್ಕ ಒಬ್ಬನೇ ರೂಮ್ ಮಾಡಿಕೊಂಡಿದ್ದಳು. ತಿಳಿನೀಲಿ ಇನ್ ಲ್ಯಾಂಡ್ ಪತ್ರಗಳಲ್ಲಿ ಸಾಧ್ಯವಾದಷ್ಟು ವಿಷಯಗಳನ್ನು ತುಂಬಿ (ಪತ್ರ ಅರ್ಧ ಬರೆದುಬಿಟ್ಟಾಗ ಇನ್ನೂ ಬಹಳಷ್ಟಿದೆ ಬರೆಯುವುದು ಅನ್ನಿಸಿಬಿಡುತ್ತಿತ್ತು, ಹಾಗಾಗಿ ಬರೆಯುತ್ತಾ ಹೋದ ಹಾಗೆ ಅಕ್ಷರಗಳ ಗಾತ್ರ ಸಣ್ಣದಾಗುತ್ತಾ ಹೋಗುತ್ತಿತ್ತು!) ಕಳಿಸುತ್ತಿದ್ದೆವು. ಈಗ ಆ ಪತ್ರಗಳನ್ನು ಓದಿದಾಗ ಅದರಲ್ಲಿದ್ದ ಪ್ರೀತಿ, ಕಾಳಜಿ, ನಮ್ಮ ಆವಾಗಿನ ಮನಸ್ಥಿತಿ ಎಲ್ಲಾ ನೋಡಿ ಒಂತರಾ ವಿಚಿತ್ರವಾದ ಖುಷಿಯಾಯ್ತು.&lt;/div&gt;&lt;div align="justify"&gt;&lt;br /&gt;ಮೊದ ಮೊದಲು ಪತ್ರ ಬರೆಯಲು ಶುರು ಮಾಡಿದಾಗ ನಾನು ಉಮೇದಿಯಿಂದ ಒಂದೆರಡು ಸಾರ್ತಿ ಇಂಗ್ಲೀಶಲ್ಲೇ ಪತ್ರ ಬರೆದಿದ್ದೆ. ಆದರೆ ಹಾಗೆ ಬರೆದ ಪತ್ರವೊಂದು ಅಪ್ಪನ ಕೈಗೆ ಸಿಕ್ಕಿ, ಅಪ್ಪ ಅದರಲ್ಲಿ ಹಲವಾರು ವ್ಯಾಕರಣ ದೋಷಗಳನ್ನೆಲ್ಲಾ ಗುರುತಿಸಿ ಇಟ್ಟಿದ್ದರು(ಎಷ್ಟೆಂದ್ರೂ ಮೇಷ್ಟ್ರಲ್ವೇ?). ಅದನ್ನು ನೋಡಿದ ಮೇಲೆ ನನ್ನ ಇಂಗ್ಲೀಷ್ ಜ್ನಾನದ ಮೇಲೆ ನನಗೇ ವಿಪರೀತ ಅಭಿಮಾನ ಹುಟ್ಟಿ ಇಂಗ್ಲೀಷಲ್ಲಿ ಪತ್ರ ಬರೆಯುವ ಸಾಹಸವನ್ನು ಬಿಟ್ಟುಬಿಟ್ಟಿದ್ದೆ. ಮೊನ್ನೆ ಅಪ್ಪ ಗುರುತಿಸಿದ್ದ ತಪ್ಪುಗಳನ್ನೆಲ್ಲ ಮತ್ತೆ ನೋಡಿದಾಗ ನನಗೆ ನಗು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಎಷ್ಟು ಕೆಟ್ಟದಾಗಿ ಬರೆದಿದ್ದೆನೆಂದರೆ, ಈಗ ನನ್ನ ಇಂಗ್ಲೀಷು ಸಿಕ್ಕಾಪಟ್ಟೆ ಸುಧಾರಿಸಿದೆ ಎಂದೆನಿಸುವಷ್ಟು!. ಆಮೇಲಿನ ಪತ್ರಗಳನ್ನೆಲ್ಲಾ ತೆಪ್ಪಗೆ ಹವ್ಯಕ ಭಾಷೆಯಲ್ಲೇ ಬರೆದಿದ್ದೆ!. ನಾನು ಆಗಿನ್ನೂ ನನ್ನ ವಿದ್ಯಾಭ್ಯಾಸ ಮುಗಿಸುತ್ತಾ ಬಂದಿದ್ದೆ. ಅಕ್ಕ ಆಗ ತಾನೇ ಎಮ್ಮೆಸ್ಸಿಯನ್ನು ಅರ್ಧದಲ್ಲೇ ಬಿಟ್ಟು ಬಿಯೆಡ್ ಮಾಡಲು ಬಂದಿದ್ದಳು. ಹಾಗಾಗಿ ನಮ್ಮ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಸಹಜವಾಗಿ ನಮಗೆ ಆತಂಕ ಮತ್ತು ನಿರೀಕ್ಷೆಗಳಿದ್ದವು. ಅವು ಪ್ರತೀ ಪತ್ರಗಳಲ್ಲೂ ಎದ್ದು ತೋರುತ್ತಿದ್ದವು.&lt;/div&gt;&lt;div align="justify"&gt;&lt;br /&gt;ಪ್ರಾರಂಭದ ಲೋಕಾಭಿರಾಮದ ಮಾತುಗಳೆಲ್ಲಾ ಮುಗಿದ ಮೇಲೆ ನಮ್ಮ ಅಭ್ಯಾಸಕ್ಕೆ ಆಗುತ್ತಿದ ತೊಂದರೆಗಳು(?), ಅಥವಾ ಪರೀಕ್ಷೆಯಲ್ಲಿ ಕಮ್ಮಿ ಮಾರ್ಕ್ಸ್ ಬಿದ್ದಿದ್ದಕ್ಕೆ ಕಾರಣಗಳು, ಇಂಥದ್ದೇ ಪತ್ರದ ಕೇಂದ್ರ ವಿಷಯಗಳಾಗಿ ಮೂಡುತ್ತಿದ್ದವು. "ಈ ವಾರ ಲೆಸೆನ್ ಪ್ಲಾನ್ ಮಾಡಿದೆ. ನನಗಂತೂ ಬಯೋಲಜಿಯಲ್ಲಿ ಸೆಲ್ ಡಿವಿಷನ್ ಟಾಪಿಕ್ ಇದೆ. ಇದು ಮಕ್ಕಳಿಗೆ ಅರ್ಥವಾಗುವುದು ಕಷ್ಟ. ಮಿಟೋಸಿಸ್ ಅರ್ಥವಾದರೂ ಮಿಯಾಸಿಸ್ ಅರ್ಥವಾಗುವುದೇ ಇಲ್ಲ. ಹೇಗೆ ಅರ್ಥ ಮಾಡಿಸಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ಪಾಠ ಮುಗಿದ ಮೇಲೆ ಅವರಿಗೆ ೨೫ ಮಾರ್ಕ್ಸ್ ಟೆಸ್ಟ್ ಬೇರೆ ಮಾಡಬೇಕು. ಇದರ ಜೊತೆ "ಟೀಚಿಂಗ್ ಏಡ್" ಬೇರೆ ಮಾಡಬೇಕು. ಅದೂ ಥರ್ಮೋಕೋಲಲ್ಲೇ ಮಾಡಬೇಕಂತೆ" ಅನ್ನೋ ಸಾಧಾರಣವಾದ ಕಷ್ಟದಿಂದ ಹಿಡಿದು "ಇಲ್ಲಿ ನನ್ನ ಪಾಠ ಎಲ್ಲಾ ಚೆನ್ನಾಗಿ ನಡೆಯುತ್ತಿದೆ, ಆದರೆ ಎಷ್ಟು ಚೆನ್ನಾಗಿ ಪಾಠ ಮಾಡಿದರೂ ಅಷ್ಟೇ, "ಉತ್ತಮ ಪಾಠ" ಎಂದು ಬರೆಯುವುದಿಲ್ಲ. ಪಾಠ ತುಂಬಾ ಚೆನ್ನಾಗಿದೆ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ "ಡಿಮೆರಿಟ್ಸ್" ಕಾಲಮ್ಮಿನಲ್ಲಿ ಏನಾದರೂ ಸಿಲ್ಲಿ ಮಿಸ್ಟೇಕನ್ನು ಬರೆದಿರುತ್ತಾರೆ (ಉದಾ: ಬ್ಲಾಕ್ ಬೋರ್ಡ್ ವರ್ಕ್ ಸುಧಾರಿಸಬೇಕು, ಸಾಲುಗಳು ನೇರವಾಗಿರಬೇಕು ಇಂಥದ್ದು) ಹೀಗೆ ಮಾಡಿದರೆ ಇಂಟರ್ನಲ್ ಮಾರ್ಕ್ಸ್ ಬೀಳುವುದೇ ಕಷ್ಟ" ಅನ್ನೋ ಗಂಭೀರ ಕಷ್ಟದ ಬಗ್ಗೆ ಅಕ್ಕ ಸಾಮಾನ್ಯವಾಗಿ ಬರೆಯುತ್ತಿದ್ದಳು. ನನ್ನ ಕಷ್ಟಗಳಂತೂ ಸದಾ ಪರೀಕ್ಷೆಯ ಸುತ್ತಮುತ್ತಲೇ ತಿರುಗುತ್ತಿದ್ದವು. "ನನ್ನ ಐಸಿ-೨ ಲ್ಯಾಬ್ ಸರಿನೇ ಆಜಿಲ್ಲೆ. ಎಲ್ಲಾ ಸರಿ ಮಾಡಿದಿದ್ದಿ, ಆದ್ರೂ "ಪಾರ್ಶಿಯಲ್ ಔಟ್ ಪುಟ್" ಬಂಜು. ನಮ್ಮ ಬ್ಯಾಚಲ್ಲಿ ಇನ್ನೂ ೫-೬ ಜನಕ್ಕೆ ಹಾಂಗೇ ಆಜು. ಈ ಇಲೆಕ್ಟ್ರಾನಿಕ್ಸ್ ಲ್ಯಾಬಿನ ಹಣೆಬರಹಾನೇ ಇಷ್ಟು. ಒಂದೂ ಸರಿಯಾಗಿ ವರ್ಕ್ ಆಗ್ತಿಲ್ಲೆ. ನಿನ್ನೆ ಸಿಕ್ಕಾಪಟ್ಟೆ ಟೆನ್ಶನ್ ಆಗೋಗಿತ್ತು. ಈಗ ಅಡ್ಡಿಲ್ಲೆ" ಅನ್ನೋ ದೌರ್ಭಾಗ್ಯದಿಂದ ಹಿಡಿದು "ನಂಗಳ ಕ್ಲಾಸ್ ಟೈಮ್ ಹ್ಯಾಂಗೆ ಗೊತ್ತಿದ್ದ? ಮಧ್ಯಾಹ್ನ ೧ ರಿಂದಾ ೫ ರ ತನಕ. ಊಟ ಮಾಡ್ಕ್ಯಂಡು ಹೋದ್ರಂತೂ ಪೂರ್ತಿ ನಿದ್ದೆ ಬಂದು ಬಿಡ್ತು. ಮೇಲಿಂದ ಸಿಕ್ಕಾಪಟ್ಟೆ ಸೆಖೆ ಬೇರೆ" ಅನ್ನೋ ಸರ್ವೇಸಾಧಾರಣವಾದ ಕಷ್ಟಗಳನ್ನೂ ಬರೆದುಕೊಳ್ಳುತ್ತಿದ್ದೆ. ಮುಕ್ಕಾಲು ಭಾಗ ನಮ್ಮ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರಲ್ಲೇ ಮುಗಿದುಹೋಗುತ್ತಿತ್ತು.&lt;/div&gt;&lt;div align="justify"&gt;&lt;br /&gt;ಅಕ್ಕಂದಿರಿಗೆ ಯಾವತ್ತಿದ್ರೂ ಜಾಸ್ತಿ ಕಾಳಜಿ ಅಲ್ವೇ? ಹಾಗಾಗಿ ಸುಮಾರಷ್ಟು ಸಲಹೆ ಸೂಚನೆಗಳನ್ನು ಅಕ್ಕ ಪ್ರತೀ ಪತ್ರದಲ್ಲೂ ತಪ್ಪದೇ ನೀಡುತ್ತಿದ್ದಳು. "ನೀನು ಸರಿಯಾಗಿ ಓದು. ಎಷ್ಟೇ ಹೆವೀ ವರ್ಕ್ ಮಾಡು, ಆದರೆ ಆರೋಗ್ಯವನ್ನು ಹಾಳುಮಾಡಿಕೊಂಡು ಬಿಡಬೇಡ.ನಿದ್ದೆ ಸರಿಯಾಗಿ ಮಾಡು(ಇದನ್ನು ಹೇಳುವುದು ನಿಜಕ್ಕೂ ಅನವಶ್ಯಕವಾಗಿತ್ತು), ಇಲ್ಲದೇ ಇದ್ದರೆ ನಿನಗೆ ಆರಾಂ ಇರುವುದಿಲ್ಲ" ಅನ್ನೋ ಟಿಪಿಕಲ್ ಕಾಳಜಿ ಸಾಲುಗಳ ಜೊತೆಗೆ "ಪರೀಕ್ಷೆ ಚೆನ್ನಾಗಿ ಮಾಡು. ಸಿಲ್ಲಿ ಮಿಸ್ಟೇಕ್ ಮಾಡಬೇಡಾ. ಪ್ರಾಕ್ಟಿಕಲ್ ಎಕ್ಸಾಂನ ಬಹಳ ಕೇರ್ ನಿಂದ ಮಾಡು. ಗಡಬಡೆ ಮಾಡಿಕೊಳ್ಳಬೇಡಾ(ನನ್ನ ವೀಕ್ ನೆಸ್ ಅವಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು)" ಅನ್ನೋ ಗಂಭೀರ ಸಲಹೆಗಳನ್ನೂ ನೀಡುತ್ತಿದ್ದಳು. ಅವಳು ಅಷ್ಟೆಲ್ಲಾ ಹೇಳಿದ ಮೇಲೆ ನಾನು ಯಾಕೆ ಸುಮ್ಮನಿರಬೇಕೆಂದು ನಾನೂ ಒಂದೆರಡು ಸಾಲು ಬರೆದು ಹಾಕುತ್ತಿದ್ದೆ." ನೀನೂ ರಾಶಿ ನಿದ್ದೆಗೆಟ್ಟು ಓದಡಾ. ಸರಿಯಾಗಿ ಓದು.ಗಡಿಬಿಡಿ ಮಾಡ್ಕ್ಯಂಡು ತಪ್ಪು ಮಾಡಡಾ(ಅವಳ ಬಾಣ ತಿರುಗಿ ಅವಳಿಗೇ!) ಅಂತಾನೂ, ಆರೋಗ್ಯ ಸರಿ ನೋಡ್ಕ್ಯ. ಲೆಸ್ಸೆನ್ಸು ಹೇಳಿ ಆಡುಗೆ ಸರೀ ಮಾಡ್ಕ್ಯಳದ್ದೇ ಕಡಿಗೆ ಬಿಯೆಡ್ ಮುಗಸತನಕಾ ನನ್ನಂಗೆ ಆಗಿ(ತೆಳ್ಳಗಾಗಿ) ಬಂದು ಬಿಡಡಾ ಎಂದೆಲ್ಲಾ ಸಣ್ಣ ಜೋಕ್ ಕಟ್ ಮಾಡಿಬಿಟ್ಟಿದ್ದೂ ಇದೆ. ಇನ್ನೊಂದು ಸಲವಂತೂ ಯಾವುದೋ ದೊಡ್ಡ ಫಿಲೋಸಫರ್ ತರಾ "ಇಂಟೆಲಿಜೆನ್ಸ್ ಎಂಡ್ ಎಬಿಲಿಟಿ ಆರ್ ನಥಿಂಗ್ ಟು ಡು ವಿಥ್ ಯುವರ್ ಮಾರ್ಕ್ಸ್" ಅಂತೆಲ್ಲಾ ಡೈಲಾಗ್ ಹೊಡೆದಿದ್ದೂ ಇದೆ. ಈಗ ಅದನ್ನೆಲ್ಲ ಓದಿ ನಗುವೋ ನಗು. ಒಟ್ಟಿನಲ್ಲಿ ನನಗೆ ಬೇಜಾರಾದ್ರೆ ಅವಳು ಸಮಾಧಾನ ಹೇಳೋದು, ಅವಳಿಗೆ ಬೇಜಾರಾದ್ರೆ ನಾನು ಸಮಾಧಾನ ಹೇಳೋದು.ಸಮಾಧಾನ ಹೇಳ್ಲಿ ಅಂತಾನೇ ಅಷ್ಟೆಲ್ಲಾ ಕಷ್ಟಗಳನ್ನು ಹೇಳಿಕೊಳ್ತಿದ್ವಾ ಅಂತ ಈಗ ಗುಮಾನಿ ಬರ್ತಿದೆ.&lt;/div&gt;&lt;div align="justify"&gt;&lt;br /&gt;ಅಕ್ಕ ಕುಮಟಾದಲ್ಲಿ ಇರೋದ್ರಿಂದ ಮನೆಗೆ ಸಾಧಾರಣವಾಗಿ ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಹೋಗಿ ಬರುತ್ತಿದ್ದಳು.ಆದರೆ ನಾನು ಹೋಗುವುದು ಎರಡು ತಿಂಗಳಿಗೋ ಅಥವಾ ೩ ತಿಂಗಳಿಗೋ ಒಮ್ಮೆಯಾಗಿತ್ತು. ಹಾಗಾಗಿ ಮನೆ ಸುದ್ದಿಯನ್ನೆಲ್ಲ ಪತ್ರದಲ್ಲಿ ಸಂಕ್ಷಿಪ್ತವಾಗಿ ಅಕ್ಕ ಹಂಚಿಕೊಳ್ಳುತ್ತಿದ್ದಳು. "ಮೊನ್ನೆ ಬಾಳೂರಲ್ಲಿ ಪಲ್ಲಕ್ಕಿ ಉತ್ಸವ ಇತ್ತು,ವಿನುತಾನ ಅಣ್ಣನ ಕ್ಲಿನಿಕ್ಕು ಇವತ್ತು ಹೊಸಪೇಟೆ ರೋಡಲ್ಲಿ ಓಪನ್ ಆತು, ಮುಂದಿನ ವಾರ ಆಯಿ ಬಟ್ಟೆ ತರಲೆ ತಾಳಗುಪ್ಪಕ್ಕೆ ಹೋಗ್ತಿ ಹೇಳಿದ್ದು,ಇಂಥದ್ದೇ. ಕೆಲವೊಂದು ಸಲ ನಮ್ಮನೆ ಸದಸ್ಯರಂತೇ ಇರುವ ನಾಯಿ,ಆಕಳುಗಳ ಬಗ್ಗೆಯೂ ಮಾತು ಬರುತ್ತಿತ್ತು. "ನಮ್ಮನೆ ಹಂಡಿ(ದನ) ಕರ ಒಂಚೂರು ಚಂದ ಇಲ್ಲೆ. ಮುಸುಡಿ ಮೇಲೆಲ್ಲಾ ಚುಕ್ಕಿ ಚುಕ್ಕಿ ಇದ್ದು. ಹಂಡಿ ಭಾಳಾನೇ ಬಡಿ ಬಿದ್ದೋಜು. ಕೆಚ್ಚಲ ಬಾವು ಆಗಿತ್ತು. ಕರಿಯಲೇ ಕೊಡ್ತಿತ್ತಿಲ್ಲೆ, ಸಿಕ್ಕಾಪಟ್ಟೆ ಓದೀತಿತ್ತು. ಗ್ರೇಸಿಯಂತೂ ಪಕ್ಕಾ ಹಡಬೆ ನಾಯಿ ಆದಾಂಗೆ ಆಜು. ಕಂಡಕಂಡಿದ್ದೆಲ್ಲಾ ಮುಕ್ತು. ಪಾತ್ರೆ ತೊಳೆಯುವ ಸುಗುಡನ್ನೂ ತಿಂಬಲೆ ಹಣಕಿದ್ದು" ಅನ್ನೋ ಸಾಲುಗಳನ್ನು ಈಗ ಓದಿದರೆ ಯಾಕೋ ಅವುಗಳ ನೆನಪುಗಳೆಲ್ಲಾ ಮತ್ತೆ ಮರುಕಳಿಸಿ ಒಂತರಾ ಖುಷಿ, ಒಂತರಾ ದುಃಖನೂ ಆಗುತ್ತದೆ.&lt;/div&gt;&lt;div align="justify"&gt;&lt;br /&gt;ಹೇಳ್ತಾ ಹೋದರೆ ಮುಗಿಯುವುದೇ ಇಲ್ಲ.ಅಷ್ಟು ಸಣ್ಣ ಪತ್ರದೊಳಗೆ ಎಷ್ಟೆಲ್ಲಾ ವಿಷಯಗಳನ್ನೆಲ್ಲಾ ತುಂಬಿಸುತ್ತಿದ್ದೆವು ಎಂದು ವಿಸ್ಮಯವಾಗುತ್ತದೆ. ನಮಗೆ ಆ ಪತ್ರಗಳು ಕೇವಲ ಯೋಗಕ್ಷೇಮ ತಿಳಿಸುವ ಸಾಧನಗಳಾಗಿರಲಿಲ್ಲ. ನಮ್ಮ ಎಲ್ಲಾ ಆತಂಕಗಳು, ಸಣ್ಣಪುಟ್ಟ ಖುಷಿಗಳು, ಬೇಜಾರು, ವೇದನೆ, ಛಲ, ಪ್ರೀತಿ, ಕಾಳಜಿ, ಇನ್ನು ಎಷ್ಟೋ ಭಾವಗಳು ಮಿಳಿತಗೊಂಡು ಅಕ್ಷರ ರೂಪ ಪಡೆಯುತ್ತಿದ್ದವು.ನಮ್ಮ ಆ ಕಾಲದ ಮನೋಸ್ಥಿತಿಯ ಪ್ರತಿಬಿಂಬವೇ ಆಗಿದ್ದ ಆ ಪತ್ರಗಳ ಗಂಟನ್ನೆಲ್ಲ ಜೋಪಾನವಾಗಿ ತಂದಿಟ್ಟುಕೊಂಡಿದ್ದೇನೆ. ನನ್ನ ಹತ್ತಿರವಿರುವ ಪುಸ್ತಕಗಳ ತೂಕವೇ ಒಂದಾದರೆ, ಈ ಪತ್ರಗಳ ತೂಕವೇ ಒಂದು. ಇನ್ನೂ ಹಲವು ವರ್ಷಗಳ ನಂತರ ಅವನ್ನು ಓದಿದರೂ ಮಾಂತ್ರಿಕ ಪೆಟ್ಟಿಗೆ ತೆಗೆದಂತೆ ನೆನಪುಗಳ ಭಂಡಾರ ಮನಸ್ಸಿನ ಪರದೆ ಮೇಲೆ ಹರಡಿಕೊಳ್ಳುವುದರಲ್ಲಿ ನನಗೆ ಸಂಶಯವೇ ಇಲ್ಲ. ಈಗಿನ ಮೊಬೈಲು ಯುಗದಲ್ಲಿ ಪತ್ರ ಬರೆಯುವ ವ್ಯವಧಾನ, ಪುರುಸೊತ್ತು, ತಾಳ್ಮೆಯಂತೂ ಯಾರಿಗೂ ಇಲ್ಲ. ಆದರೆ ಪತ್ರ ಬರೆಯುವ ಖುಷಿ ಮತ್ತು ಪತ್ರಕ್ಕಾಗಿ ಕಾಯುವ ತವಕವನ್ನು ಎಂಥ ಪ್ರೀತಿಯ ಎಸ್ಸೆಮ್ಮೆಸ್ಸುಗಳೂ, ಕಾಲ್ ಗಳೂ ತಂದುಕೊಡುವುದಿಲ್ಲವೆಂಬುದು ಮಾತ್ರ ಉರಿಯುವ ಸೂರ್ಯನಷ್ಟೇ ಸತ್ಯ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-5841227322972127781?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/5841227322972127781/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=5841227322972127781' title='19 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/5841227322972127781'/><link rel='self' type='application/atom+xml' href='http://www.blogger.com/feeds/6035880729059442700/posts/default/5841227322972127781'/><link rel='alternate' type='text/html' href='http://madhu-vana.blogspot.com/2008/10/blog-post.html' title='ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ......'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>19</thr:total></entry><entry><id>tag:blogger.com,1999:blog-6035880729059442700.post-3932137014981785045</id><published>2008-09-07T08:07:00.000-07:00</published><updated>2008-09-07T08:16:08.299-07:00</updated><title type='text'>ಕಚ್ಚೋ ಚಪ್ಪಲ್ಲು</title><content type='html'>&lt;div align="justify"&gt;"ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ ಶೂ ಒದ್ದೆಯಾಗದೇ ಇನ್ನೇನು ಸುಡುಬೇಸಿಗೇಲಿ ಒದ್ದೆ ಆಗುತ್ತಾ?" ಅಂತ ಪ್ರಶ್ನೆ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದ್ರೆ ಅವನಿದ್ದ ಮೂಡಲ್ಲಿ ಆ ಪ್ರಶ್ನೆ ಕೇಳಿದ್ರೆ ನನ್ನ ಆರೋಗ್ಯಕ್ಕೆ ಒಳ್ಳೆದಲ್ಲವೆಂದು ಮನಸ್ಸು ತಿಳಿ ಹೇಳಿದ್ದರಿಂದ, ಬಾಯಿ ತೆಪ್ಪಗಾಯ್ತು. "ಹಂ, ಯಾಕೋ ಸಿಕ್ಕಾಪಟ್ಟೆ ಮಳೆ ಇವತ್ತು. ಬೆಂಗಳೂರಲ್ಲಿ ಒಂದು ಜೋರು ಮಳೆ ಬಿದ್ರೆ, ಎಲ್ಲಾ ಅಧ್ವಾನ" ಅಂತ ಅವನ ಪಾಡಿಗೆ ಸಹಾನುಭೂತಿ ವ್ಯಕ್ತಪಡಿಸಿ, ಅವನನ್ನ ಸ್ವಲ್ಪ ಸಮಾಧಾನ ಪಡಿಸಲು ಪ್ರಯತ್ನಿಸಿದೆ. ಅವನಿಗೆ ಸಮಾಧಾನವಾದ ಲಕ್ಷಣ ಕಾಣಲಿಲ್ಲ. ಅದಿನ್ನು ಒಣಗಲಿಕ್ಕೆ ೩ ದಿನವಾದ್ರೂ ಬೇಕು ಅನ್ನುವುದು ಅವನ ದೊಡ್ಡ ತಲೆನೋವಾಗಿತ್ತು. ಅವನು ಗೊಣಗುತ್ತಾ ಬಚ್ಚಲಮನೆಗೆ ಕಾಲು ತೊಳೆಯಲು ಹೋಗುತ್ತಿದಂತೆಯೇ ನನ್ನ ನೆನಪುಗಳ ಹಾಸಿಗೆ ನಿಧಾನವಾಗಿ ಬಿಚ್ಚಲಾರಂಭಿಸಿತು. &lt;/div&gt;&lt;div align="justify"&gt;&lt;br /&gt;ಚಿಕ್ಕಂದಿನಲ್ಲಿ ಮಳೆಗಾಲ ನನಗೆ ಹೇಳಿಕೊಳ್ಳುವಷ್ಟು ಇಷ್ಟವೇನೂ ಆಗಿರಲಿಲ್ಲ. ಮಳೆನೀರಿನಲ್ಲಿ ಆಡಬಹುದು ಎಂಬ ಸಂತೋಷ ಒಂದನ್ನು ಬಿಟ್ಟರೆ ಮಳೆಗಾಲದಲ್ಲಿ ಎಲ್ಲವೂ ರಗಳೆಯೇ. ಈಗ ಬೆಂಗಳೂರಿಗೆ ಬಂದು ಊರ ಮಳೆಯನ್ನು ಮಿಸ್ ಮಾಡಿಕೊಂಡ ಮೇಲೆಯೇ ಮಳೆಗಾಲದ ನೆನಪುಗಳು ಬಹಳ ಅಪ್ಯಾಯಮಾನವೆನ್ನಿಸುತ್ತಿವೆ. ಮಳೆಗಾಲ ಎಂದರೆ ಮಲೆನಾಡಿನವರಿಗೆ ಒಣಗದ ಬಟ್ಟೆ, ಹಸಿಹಸಿ ಕಟ್ಟಿಗೆ ಒಲೆಯಲ್ಲಿ ಉಂಟು ಮಾಡುವ ಅಸಾಧ್ಯ ಹೊಗೆ, ಸಂಕದ ಮೇಲೆ ಹರಿಯುತ್ತಿರುವ ನೀರು, ರಸ್ತೆ ಸರಿ ಇರದೆ ಕ್ಯಾನ್ಸಲ್ ಆಗುವ ಬಸ್ಸು ಇಂಥ ಹಲವಾರು ತೊಂದರೆಗಳೇ ನೆನಪಾಗೋದು. ಕೆಲಸಗಳು ಯಾವುದೂ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಮೊನ್ನೆ ಜೋರು ಮಳೆ ಬಂದಾಗ, "ಆಹಾ, ಎಂಥಾ ಮಳೆ, ಈ ಮಳೆಲ್ಲಿ ಆರಾಮಾಗಿ ಕುತ್ಕಂಡು, ಬಿಸಿಬಿಸಿ ಚಾ ಕುಡ್ಯವು ನೋಡು" ಅಂತ ಅಮ್ಮನ ಹತ್ರ ಹೇಳಿದ್ರೆ, "ಎಂತಾ ಮಳೆನೆನಪಾ, ಒಂದೂ ಕೆಲ್ಸ ಮಾಡಲೇ ಬಿಡ್ತಿಲ್ಲೆ.ಎಷ್ಟೆಲ್ಲಾ ಕೆಲ್ಸ ಹಾಂಗೇ ಉಳ್ಕಂಜು ನೋಡು,ನಿಂಗೆ ಚಾ ಮಾಡ್ಕ್ಯೋತಾ ಕುಂತ್ರೆ ಅಷ್ಟೇಯಾ" ಎಂದು ನನ್ನ ಸೋಮಾರಿ ಮೂಡಿಗೆ ಛೀಮಾರಿ ಹಾಕಿದಳು. ಅವಳ ಪ್ರಕಾರ ಮಳೆಗಾಲ ನನ್ನಂಥ ಸೋಮಾರಿಗಳಿಗೆ ಹೇಳಿ ಮಾಡಿಸಿದ ಕಾಲ, ಅವಳ ಹಾಗೆ ಸದಾ ಚಟಿಪಿಟಿಯಿಂದ ಓಡಾಡ್ತಾ ಕೆಲಸ ಮಾಡಿಕೊಂಡು ಇರುವಂತವರಿಗೆ ಕೈಕಾಲು ಕಟ್ಟಿ ಹಾಕಿದ ಹಾಗೆಯೇ. &lt;/div&gt;&lt;div align="justify"&gt;&lt;br /&gt;ಆದರೆ ಮಜ ಇರುವುದು ಮನೆಯಿಂದ ಹೊರ ಬಿದ್ದಾಗಲೇ. ನಾವು( ನಾನು ಮತ್ತು ನನ್ನಕ್ಕ) ಸಣ್ಣಕ್ಕಿದ್ದಾಗ ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಒಂತರಾ ಸಾಹಸವೇ ಆಗಿತ್ತು. ನಮಗಿಂತಾ ದೊಡ್ಡದಾದ ಕೊಡೆ ಹಿಡಿದುಕೊಂಡು,ಜೋರಾಗಿ ಗಾಳಿ ಬೀಸಿದಾಗಲೆಲ್ಲಾ ಅದು ಹಾರಿಹೋಗದಂತೆ ಅಥವಾ ಕೊಡೆಯೇ ಉಲ್ಟಾ ಆಗದಂತೆ ಹರಸಾಹಸ ಮಾಡುತ್ತಾ, ಅಚಾನಕ್ ಆಗಿ ರಸ್ತೆಯಿಂದ ಕೆಳಕ್ಕಿಳಿದು ಕೆಸರು ನೀರನ್ನು ನಮ್ಮ ಮೈಗೆ ಎರಚಲು ಹವಣಿಸುವ ಬಸ್ಸು, ಲಾರಿಗಳಿಂದ ತಪ್ಪಿಸಿಕೊಳ್ಳುತ್ತಾ, ರಸ್ತೆ ಮೇಲೆ ನೀರೆಲ್ಲಾ ಹರಿಯುತ್ತಿದ್ದರೆ ಆ ಪವಿತ್ರ ಕುಂಕುಮ ನೀರಲ್ಲೇ ನಮ್ಮ ಪಾದಗಳನ್ನು ನೆನೆಸಿಕೊಳ್ಳುತ್ತಾ ಹೋಗುತ್ತಿದ್ದೆವು. ನಮ್ಮ ಕೈಯಲ್ಲಿದ್ದ ಕೊಡೆ ಮಾತ್ರ ಅದ್ಭುತ ಸಲಕರಣೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದಾಗಲಂತೂ ಇದ್ದೇ ಇದೆಯಲ್ಲ, ಮಳೆ ಬೀಳದೇ ಇದ್ದಾಗಲೂ ಒಮ್ಮೊಮ್ಮೆ ಹೆಗಲ ಮೇಲೆ ಗದೆಯಾಗಿ, ಇನ್ನೊಮ್ಮೆ ಗಿರಿಗಿಟ್ಲಿಯಾಗಿ, ಇನ್ನೊಮ್ಮೆ ದಾರಿಬದಿಯಲ್ಲಿದ್ದ ಪಿಳ್ಳೆ ಹಣ್ಣಿನ(ನೇರಳೆ ಹಣ್ಣಿನಂತದ್ದೇ)ಟೊಂಗೆಯನ್ನು ಬಗ್ಗಿಸಲು, ಇನ್ನೊಮ್ಮೆ ಕ್ರಿಕೆಟ್ ಬ್ಯಾಟ್ ಆಗಿಯೂ ಉಪಯೋಗಕ್ಕೆ ಬರುತ್ತಿತ್ತು. ಇಷ್ಟೆಲ್ಲಾ ಸಂಭಾಳಿಸಿಕೊಂಡೂ ಹಾಕಿಕೊಂಡಿದ್ದ ಬಟ್ಟೆಗೆ ಒಂಚೂರು ಕೊಳೆಯಾಗದೇ ಮನೆಗೆ ಬಂದರೆ ನಮ್ಮ ವಯಸ್ಸಿಗೇ ಅವಮಾನ ಮಾಡಿದಂತಲ್ಲವೇ? ನಾವು ನೆಟ್ಟಗೆ ಮನೆಗೆ ಬರುತ್ತಿದ್ದ ಟಾರು ರಸ್ತೆಯನ್ನು ಬಿಟ್ಟು, ಪಕ್ಕದಲ್ಲಿದ್ದ ಕಾಲುವೆ ಹಾರಿ, ಧರೆಯನ್ನೆಲ್ಲ ಗುದಕಿ,ಬೆಟ್ಟ ಬೇಣವನ್ನೆಲ್ಲ ಹುಡುಕಿ, ಅಪರೂಪಕ್ಕೊಮ್ಮೆ ಜಾರಿಬಿದ್ದು ಮನೆಗೆ ತಲುಪಿದಾಗ ಅಮ್ಮನ ತಲೆನೋವು ಶುರುವಾಗುತ್ತಿತ್ತು. ಮೊದಲೇ ಬಟ್ಟೆಗಳು ಒಣಗುವುದಿಲ್ಲ.ತೊಳೆದುಹಾಕುವಂತಿಲ್ಲ.ಕೊಳೆಯಾದ ಬಟ್ಟೆಗಳನ್ನೇ ಹಾಕಿಕೊಂಡು ಹೋದರೆ ನಮಗೆ ಅವಮಾನ ಬೇರೆ. ಅಮ್ಮನ ಕಷ್ಟ ಹೇಳತೀರದು. ನಮ್ಮ ಮಂಗಾಟಗಳ ಚೆನ್ನಾಗಿ ಪರಿಚಯವಿದ್ದ ಅಮ್ಮ ಯೋಚಿಸಿ ಯೋಚಿಸಿ, ಸರಿಯಾದ ಚಪ್ಪಲ್ಲಿಗಳನ್ನು ನಾವು ಹಾಕಿಕೊಂಡರೆ ಬಟ್ಟೆ ಕೊಳೆಮಾಡಿಕೊಳ್ಳುವುದನ್ನು ಕಮ್ಮಿ ಮಾಡುತ್ತೇವೆ ಎಂದ ನಿರ್ಧಾರ ಮಾಡಿರಬೇಕು. ಹಾಗಾಗಿ ಮಳೆಗಾಲದಲ್ಲಿ ಹಾಕುವ ಬಟ್ಟೆಗಳಿಗೆ ಮನೆಯಲ್ಲಿ ಎಷ್ಟು ಮಹತ್ವ ಕೊಡುತ್ತಿದ್ದರೋ, ಅಷ್ಟೇ ಮಹತ್ವವನ್ನು ನಾವು ಹಾಕುವ ಚಪ್ಪಲ್ಲಿಗಳಿಗೂ ಕೊಡುತ್ತಿದ್ದರು. ಬೆಂಗಳೂರಿನಲ್ಲಿ ಒಂದೇ ಚಪ್ಪಲ್ಲಿ ಅಥವಾ ಶೂನಲ್ಲಿ ಇಡೀ ವರ್ಷ ಕಳೆದುಬಿಡಬಹುದೇನೋ, ಆದರೆ ನಮಗೆ ಮಾತ್ರ ವರ್ಷಕ್ಕೆ ಕಡ್ಡಾಯವಾಗಿ ಬೇಸಿಗೆಕಾಲಕ್ಕೆ ಒಂದು ಜೊತೆ, ಮಳೆಗಾಲಕ್ಕೆಂದೇ ಜಾಸ್ತಿ ಜಾರದ, ಪ್ಲಾಸ್ಟಿಕ್ ಚಪ್ಪಲ್ಲು ಬೇಕೇ ಬೇಕಾಗುತ್ತಿತ್ತು. ಛಳಿಗಾಲದಲ್ಲಿ ಸಾಮಾನ್ಯ ಹವಾಯಿ ಚಪ್ಪಲ್ಲು ಸಾಕಾಗುತ್ತಿತ್ತು. &lt;/div&gt;&lt;div align="justify"&gt;&lt;br /&gt;ಮಳೆಗಾಲ ಇನ್ನೇನು ಶುರುವಾಗುತ್ತಿದೆ ಎನ್ನುವಾಗಲೇ ನಾವು ಅಪ್ಪನಿಗೆ ದಿನಾಲೂ ಚಪ್ಪಲ್ಲಿನ ನೆನಪು ಮಾಡಿಕೊಡಲು ಶುರುಮಾಡುತ್ತಿದ್ದೆವು. ನಮ್ಮ ಕಾಟ ಅತಿಯಾದಾಗ ಅಪ್ಪ ಒಂದು ಶುಭಸಂಜೆಯಲ್ಲಿ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಐದಾರು ಅಂಗಡಿಗಳಿಗೆ ತಿರುಗಿ ಸಾಕಾದಷ್ಟು ಚೌಕಾಶಿ ಮಾಡಿ, ಸಾಧ್ಯವಾದಷ್ಟು ಬಾಳಿಕೆ ಬರುವಂತಹ ಜೋಡಿಯೊಂದನ್ನು ತೆಗೆಸಿಕೊಡುತ್ತಿದ್ದರು(ಆದರೆ ಆ ಜೋಡಿಗಳಿಗೆ ಒಂದೇ ಮಳೆಗಾಲಕ್ಕಿಂತ ಹೆಚ್ಚು ಆಯಸ್ಸನ್ನು ನಾವು ದಯಪಾಲಿಸುತ್ತಲೇ ಇರಲಿಲ್ಲ!). ಅಲ್ಲಿ ನಮ್ಮ ಆಯ್ಕೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪನಿಗೆ ಚೆನ್ನಾಗಿದೆ ಅನ್ನಿಸಿದ್ದು ನಮ್ಮ ಪಾಲಿಗೆ ಬಂದ ಹಾಗೇ. ಅಪರೂಪಕ್ಕೊಮ್ಮೆ "ನಂಗೆ ಆ ಚಪ್ಪಲ್ಲಿನೇ ಬೇಕು" ಎಂಬ ಕ್ಷೀಣ ಸದ್ದು ಬಾಯಿ ತುದಿಯಂಚಲ್ಲಿ ಬಂದು ಇನ್ನೇನು ಬಿದ್ದೇ ಹೋಗುತ್ತದೆ ಎಂಬ ಭಯ ಹುಟ್ಟಿಸಿದರೂ, ಅಪ್ಪ "ಈ ಚಪ್ಪಲ್ಲು ಅಡ್ಡಿಲ್ಯನಾ?" ಎಂದು ಕೇಳಿದ ತಕ್ಷಣವೇ ನಾವು ಗೋಣನ್ನು ಅಡ್ಡಡ್ಡವಾಗಿ ಆಡಿಸಿ, ಮಾತು ಗಂಟಲಲ್ಲೇ ಉಳಿದುಹೋಗುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದೆವು. ಚಪ್ಪಲ್ಲಿ ಎಷ್ಟು ಚೆನ್ನಾಗಿದ್ದರೂ, "ಅದರ ಬಾರ್ ಸರಿಯಿಲ್ಲೆ", "ಇನ್ನೊಂಚೂರು ದೊಡ್ಡಕೆ ಇರಕಾಯಿತ್ತು", "ಹಿಮ್ಮಡಿ ಇನ್ನೂ ಎತ್ತರಕೆ ಇರಕಾಗಿತ್ತು" ಅಂತೆಲ್ಲಾ ಕಂಪ್ಲೇಂಟುಗಳನ್ನು ಅಪ್ಪ ಇಲ್ಲದಿದ್ದಾಗ ಅಮ್ಮನ ಹತ್ತಿರ ಹೇಳಿಕೊಳ್ಳುತ್ತಿದ್ದೆವು. ಅಮ್ಮ ಏನು ಮಾಡಿಯಾಳು? "ಮುಂದಿನ ಮಳೆಗಾಲದಲ್ಲಿ ಛೊಲೋದು ತಗಳಕ್ಕಡಾ ಬಿಡು" ಅಂತ ಸಮಾಧಾನ ಮಾಡುತ್ತಿದ್ದರು. &lt;/div&gt;&lt;div align="justify"&gt;&lt;br /&gt;ಅಸಲಿ ತೊಂದರೆಗಳು ನಾವು ಆ ಚಪ್ಪಲ್ಲನ್ನು ಶಾಲೆಗೆ ಹಾಕಿಕೊಂಡು ಹೋಗಲು ಶುರುಮಾಡಿದ ಮೇಲೆ ಶುರುವಾಗುತ್ತಿದ್ದವು. ಸ್ವಲ್ಪ ಗಟ್ಟಿ ಗಟ್ಟಿಯಾಗಿದ್ದ ಚಪ್ಪಲ್ಲಿಗಳು ನಮ್ಮ ಮೆದುವಾದ ಪಾದವನ್ನು ತಾಗಿ ತಾಗಿ ಹೆಬ್ಬೆರಳ ಸಂದಿಯಲ್ಲೋ(ಚಪ್ಪಲ್ಲಿಯ ಬಾರ್ ಬರುವಲ್ಲಿ) ಅಥವ ಹಿಮ್ಮಡಿಯಲ್ಲೋ, ಅಥವೋ ಪಾದದ ಎರಡೂ ಬದಿಯಲ್ಲೋ ಸಣ್ಣ ಗಾಯವನ್ನು ಮಾಡಿ ಬಿಡುತ್ತಿದ್ದವು. ಅದರ ಪರಿಣಾಮ ಮಾರನೆಯ ದಿನದಿಂದ ನಮಗೆ ಆ ಚಪ್ಪಲ್ಲಿಯನ್ನು ಹಾಕಿಕೊಳ್ಳಲು ಬಹಳ ತೊಂದರೆ ಆಗುತ್ತಿತ್ತು. ನಾವು ನಡೆದಂತೆಲ್ಲ ಅದೇ ಗಾಯ ಮತ್ತೆ ಚಪ್ಪಲ್ಲಿನ ಗಟ್ಟಿ ಭಾಗಕ್ಕೆ ತಾಗಿ ಇನ್ನೂ ಉರಿಯಾಗುತ್ತಿತ್ತು. ಸುಮಾರು ಒಂದು ವಾರಗಳ ತನಕ ಆ ಗಾಯ ತೊಂದರೆ ಕೊಡುತ್ತಲೇ ಇರುತ್ತಿತ್ತು. ಅದಕ್ಕೆ ನಾವು "ಚಪ್ಪಲ್ಲಿ ಕಚ್ಚುವುದು" ಎನ್ನುತ್ತಿದ್ದೆವು. ಆಗೆಲ್ಲ ಗಾಯಕ್ಕೆ ಎಣ್ಣೆ ಹಚ್ಚೋ,ಚಪ್ಪಲ್ಲಿನ ಆ ಭಾಗಕ್ಕೆ ಹತ್ತಿ ಸುತ್ತೋ ಉರಿಯ ಪರಿಣಾಮವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಸ್ವಲ್ಪ ದಿನಗಳಾದ ಮೇಲೆ ಚಪ್ಪಲ್ಲು ಸ್ವಲ್ಪ ಮೆದುವಾಗಿಯೋ, ಅಥವ ನಮಗೆ ರೂಢಿಯಾಗಿಯೋ ಚಪ್ಪಲ್ಲು ಕಚ್ಚುವುದು ನಿಂತು ಹೋಗುತ್ತಿತ್ತು. ಆದರೆ ಆ ಸ್ವಲ್ಪ ದಿನಗಳಲ್ಲೇ ನಾವು ಅನುಭವಿಸುತ್ತಿದ್ದ ಯಮಯಾತನೆ,ಹೊಸ ಚಪ್ಪಲ್ಲಿನ ಉತ್ಸಾಹವನ್ನು ಬಹಳ ಪಾಲು ಕಮ್ಮಿಮಾಡಿಬಿಡುತ್ತಿದ್ದವು. ಹಾಗಾಗಿ ಮಳೆಗಾಲ ಎಂದ ಕೂಡಲೇ ನನಗೆ ನೆನಪಿಗೆ ಬರುವುದು, ನಾವು ಕುಂಟುತ್ತಾ ಕಾಲನೆಳೆಯುತ್ತಾ ಹೋಗುತ್ತಿರುವ ದೃಶ್ಯ. ಅಪರೂಪಕ್ಕೊಮ್ಮೆ ಅಪ್ಪ ಶೂ ಕೊಡಿಸಿಬಿಟ್ಟಾಗ(ಅದು ನಾನು ಹಿಂದಿನ ದಿನ ಅಮ್ಮನ ಹತ್ತಿರ ಹಠ ಮಾಡಿ ಅಪ್ಪನಿಗೆ ಹೇಳಿಸಿದ್ದರ ಪರಿಣಾಮ), ಪರಿಸ್ಥಿತಿ ಇನ್ನೂ ಗಂಭೀರವಾಗಿಬಿಟ್ಟಿತ್ತು. ಆ ಶೂ ಅಂತೂ ನನ್ನ ಪಾದದ ಎಲ್ಲಾ ಭಾಗಗಳಲ್ಲಿ ಕಚ್ಚಿ ಕಚ್ಚಿ. ಮಾರನೇಯ ದಿನ ನಾನು ಹವಾಯಿ ಚಪ್ಪಲನ್ನೇ ಹಾಕಿಕೊಂಡು ಹೋಗುವಂತೆ ಮಾಡಿಬಿಟ್ಟಿತ್ತು. ಆ ಮೇಲಿಂದ ನಾನಂತೂ ಯಾವತ್ತೂ ಶೂ ತೆಗೆಸಿಕೊಡಿರೆಂದು ಅಪ್ಪಿತಪ್ಪಿಯೂ ಕೇಳಲಿಲ್ಲ. &lt;/div&gt;&lt;div align="justify"&gt;&lt;br /&gt;ಈಗೆಲ್ಲಾ ಮೆತ್ತ ಮೆತ್ತನೆಯ, ಸಾವಿರಾರು ರೂಪಾಯಿ ಬೆಲೆಯುಳ್ಳ ಶೂಗಳನ್ನು ಹಾಕಿಕೊಂಡು, ಅನಿರೀಕ್ಷಿತ ಮಳೆ ಬಿದ್ದಾಗ ಒದ್ದೆಯಾದರೆ ಒದ್ದಾಡುತ್ತಾ, ಅದನ್ನು ಒಣಗಿಸಲು ಹರಸಾಹಸ ಪಡುತ್ತಾ ಇರುವಾಗ ನಾವು ಎಷ್ಟೆಲ್ಲಾ ಮುಂದೆ ಬಂದುಬಿಟ್ಟಿದ್ದೇವಲ್ಲಾ ಎಂದು ಸೋಜಿಗವಾಗುತ್ತದೆ. ಚಪ್ಪಲ್ಲಿಗಳು ಕಚ್ಚುತ್ತವೆ ಎಂದು ಗೊತ್ತಿದ್ದೂ ಅವನ್ನು ಹಾಕಿಕೊಂಡು ಓಡಾಡಲು ಎಷ್ಟೆಲ್ಲಾ ಸಂಭ್ರಮ ಪಡುತ್ತಿದ್ದೆವು, ಈಗ ಎಂಥಾ ಚೆನ್ನಾಗಿರೋ ಶೂಗಳು ಮತ್ತು ಚಪ್ಪಲ್ಲಿಗಳೂ ಅಂಥಹ ರೋಮಾಂಚನವನ್ನು ತರುವುದಿಲ್ಲವೆಂದು ಬೇಜಾರೂ ಆಗುತ್ತದೆ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-3932137014981785045?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/3932137014981785045/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=3932137014981785045' title='19 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/3932137014981785045'/><link rel='self' type='application/atom+xml' href='http://www.blogger.com/feeds/6035880729059442700/posts/default/3932137014981785045'/><link rel='alternate' type='text/html' href='http://madhu-vana.blogspot.com/2008/09/blog-post.html' title='ಕಚ್ಚೋ ಚಪ್ಪಲ್ಲು'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>19</thr:total></entry><entry><id>tag:blogger.com,1999:blog-6035880729059442700.post-2165955648757111607</id><published>2008-07-01T01:19:00.000-07:00</published><updated>2008-07-02T03:18:03.828-07:00</updated><title type='text'>ಹೀಗೇ ಸುಮ್ಮನೇ...</title><content type='html'>&lt;p align="justify"&gt;ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತರಾನೇ. ಕುಂಭಕರ್ಣನ ಸಂತತಿ. ಮಲಗಿದ್ರೆ ಜಗತ್ತಿನ ಖಬರೇ ಇಲ್ಲ. ಶನಿವಾರ, ರವಿವಾರ ಊಟ ಆಗಿದ್ದ ಮೇಲೆ ಮಲಗಿದ್ರೆ ಮಾತ್ರ ಇವಳಿಗೆ "ಮಧ್ಯಾಹ್ನದ ಮೇಲೆ" ಅನ್ನೋ ಹೊತ್ತೇ ಇಲ್ಲ. ಮಧ್ಯಾಹ್ನ ಆದ ಮೇಲೆ ಸೀದಾ ಸಂಜೆನೇ. ಎಲ್ಲಾದ್ರೂ ಜಾಸ್ತಿ ಹೇಳಿದ್ರೆ "ಅಮ್ಮಾ, ನಾನೇನು ದಿನಾ ಮಧ್ಯಾಹ್ನ ಮಲಗ್ತಿನಾ? ಬರೀ ವೀಕೆಂಡಲ್ಲಿ ಮಾತ್ರ ಅಲ್ವಾ?" ಅಂತಾ ನನ್ನೇ ಕೇಳ್ತಾಳೆ. ನಂಗೂ ಒಂದೊಂದು ಸಲ ಹಾಗೇ ಅನ್ನಿಸಿಬಿಡತ್ತೆ. ವಾರವಿಡೀ, ಬೆಳಗ್ಗೆ ಬೇಗ ಏಳು, ಕಂಪನಿ ಬಸ್ ಹಿಡಿ, ಇಡಿ ದಿನಾ ಕೆಲಸಾ ಮಾಡು, ಸಂಜೆ ಮತ್ತೆ ಅದೇ ಟ್ರಾಫಿಕಲ್ಲಿ ಸಿಕ್ಕಾಕೊಂಡು ಮನೆಗೆ ಬಾ, ಇಷ್ಟರಲ್ಲೇ ಮುಗಿದೋಗತ್ತೆ. ಅದ್ಕೆ ಪಾಪ, ವೀಕೆಂಡಗಳಲ್ಲಾದ್ರೂ ಸರೀ ರೆಸ್ಟ್ ತಗೊಳ್ಲಿ ಅಂತ ಸುಮ್ಮನಾಗ್ತಿನಿ. ಆದ್ರೂ ಎಷ್ಟೋ ಸಲ ಇವಳ ಸೋಮಾರಿತನ ನೋಡಿ ಸಿಟ್ಟು ಬಂದು ಹೋಗುತ್ತೆ, ಗೊತ್ತಿಲ್ದೇನೆ ಬೈಯ್ದೂ ಹೋಗಿರುತ್ತೆ. ಅಲ್ಲಾ ಈ ವಯಸ್ಸಿಗೆ ಎಷ್ಟು ಚಟಪಿಟಿ ಇರ್ಬೇಕು ಹೆಣ್ಣು ಮಕ್ಕಳು? &lt;/p&gt;&lt;p align="justify"&gt;&lt;br /&gt;ನಾವೆಲ್ಲಾ ಈ ವಯಸ್ಸಲ್ಲಿ ಹೀಗಿರ್ಲಿಲ್ಲ, ಎಷ್ಟೆಲ್ಲಾ ಕೆಲ್ಸ ಮಾಡ್ತಿದ್ವಿ ಅಂದ್ರೆ ನಮ್ಮನೆಯವ್ರು ನನಗೇ ಬೈಯ್ತಾರೆ." ನಿನ್ನ ಕಾಲಕ್ಕೂ ಈ ಕಾಲಕ್ಕೂ ಯಾಕೆ ಹೋಲಿಸ್ತೀಯಾ? ಅವಳು ಹೊರಗೆ ಕೆಲ್ಸ ಮಾಡ್ತಾ ಇಲ್ವಾ? ನಿಧಾನಕ್ಕೆ ಎಲ್ಲದನ್ನೂ ಕಲೀತಾಳೆ ಬಿಡು" ಅಂತ. ಎಲ್ಲಾದಕ್ಕೂ ಇವ್ರದ್ದು ಅವ್ಳಿಗೇ ಸಪೋರ್ಟು. ಎಷ್ಟಂದ್ರೂ ಒಂದೇ ಮಗಳಲ್ವಾ? ತಲೆ ಮೇಲೆ ಹತ್ತಿಸಿಕೊಂಡು ಕುಣಿತಾರೆ. ಕುಣೀಲಿ, ಕುಣೀಲಿ, ನಾನೂ ನೋಡ್ತಿನಿ ಏಷ್ಟು ದಿನ ಅಂತಾ. ನಾನೇನಾದ್ರೂ ಬೈದ್ರೆ ಅಪ್ಪ ಮಗಳು ಒಂದೇ ಪಾರ್ಟಿ ಮಾಡ್ಕೊಂಡು ನನ್ನೇ ಅಂತಾರೆ. ನನಗೋ  ಇವಳು ಮಾಡೋ ವೇಷಾನೆಲ್ಲ ಸಹಿಸಿಕೊಂಡು ಸುಮ್ಮನೆ ಇರಕಂತೂ ಆಗಲ್ಲ. ಏನೋ ಅಂದು ಹೋಗುತ್ತೆ. ಈಗಲ್ದೇ ಇನ್ಯಾವಾಗ ಮನೆ ಕೆಲ್ಸಾನೆಲ್ಲ ಕಲ್ಯೋದು ಇವ್ಳು? ನಾಳೆ ಇವಳದ್ದೂ ಒಂದು ಮದುವೆ ಅಂತ ಆಗಲ್ಲ್ವಾ? ಆಗ ಸಂಸಾರ ಸಂಭಾಳಿಸ್ಕೊಂಡು ಹೋಗಷ್ಟಾದ್ರೂ ಮನೆ ಕೆಲಸಗಳು ಗೊತ್ತಿರ್ಬೇಕು ಅಂತ ನಾನು. ನಾಳೆ ಇವಳಿಗೆ ಎಲ್ಲಾ ಕೆಲ್ಸ ಬರಲ್ಲ ಅಂದ್ರೆ ಅತ್ತೆ ಮನೆಯವರು ಏನಂತಾರೆ? "ಇವಳಮ್ಮ ಏನೂ ಕಲಿಸೇ ಇಲ್ಲ" ಅಂತ ನನ್ನ ಆಡಿಕೊಳ್ಳಲ್ವಾ? ಮೊನ್ನೆ ಇದೇ ವಿಷ್ಯದ ಮೇಲೆ ಜೋರು ವಾದ ಆಯ್ತು. ಅಪ್ಪ ಮಗಳು ಇಬ್ರೂ ಸೇರಿ ಜೋರು ಗಲಾಟೆ ಮಾಡಿ ಒಟ್ನಲ್ಲಿ ನನ್ನ ಬಾಯಿ ಮುಚ್ಚಿಸಿದ್ರು. ನಮ್ಮ ಮನೆಯವರಂತೂ ಮೊದ್ಲೇ ಹೇಳಿದ್ನಲ್ಲಾ ಯಾವಾಗ್ಲೂ ಅವಳದ್ದೇ ಪಾರ್ಟಿ. "ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ರೂ ಹೊರಗೆ ಕೆಲಸ ಮಾಡ್ತಾರೆ, ಹೇಗೋ ಮ್ಯಾನೇಜ್ ಮಾಡ್ತಾರೆ ಬಿಡೆ. ಕೆಲಸದವಳನ್ನ ಇಟ್ಕೋತಾರೆ. ಗಂಡನೂ ಬಹಳಷ್ಟು ಸಹಾಯ ಮಾಡ್ತಾನೆ. ಎಲ್ಲಾ ಕಲ್ತುಕೊಂಡು ಏನು ಮಾಡೋದಿದೆ? ಅಂತ ಉಲ್ಟಾ ನನ್ನೇ ಕೇಳ್ತಾರೆ. ಇವಳಂತೂ ಬಿಡು. ಅಪ್ಪ ಬೇರೆ ಸಪೋರ್ಟಿಗಿದ್ದಾರೆ ಅಂತಾ ಗೊತ್ತಾಯ್ತಲ್ಲಾ, ಕೂಗಿದ್ದೇ ಕೂಗಿದ್ದು. ನಾನೇನೋ ಮಹಾ ದೂರಿದ ಹಾಗೆ. "ಅಮ್ಮಾ ನಾನಂತೂ ಮೊದ್ಲೇ ಹೇಳ್ಬಿಡ್ತೀನಿ, ನನ್ನ ಮದ್ವೆಯಾಗೋವ್ನಿಗೆ. ನಂಗೆ ಅಷ್ಟೆಲ್ಲಾ ಚೆನ್ನಾಗಿ ಅಡುಗೆ-ಗಿಡಗೆ ಎಲ್ಲಾ ಮಾಡಕ್ಕೆ ಬರಲ್ಲಾ. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಮನೆ-ಕೆಲಸ ಎಲ್ಲ ಒಟ್ಟೊಟ್ಟಿಗೆ ನಾನೊಬ್ನೇ ಮಾಡ್ಕೊಂಡು ಹೋಗಕ್ಕಾಗಲ್ಲಾ. ಜಾಸ್ತಿ ಕಿರಿಕಿರಿ ಮಾಡಿದ್ರೆ ಕೆಲಸ ಬಿಟ್ಟು ಮನೆಲ್ಲೇ ಇರ್ತಿನಿ ಅಂತ. ಇನ್ನೇನು ಹೊರಗೂ ದುಡಿದು ಸಂಬಳಾನೂ ತರ್ಬೇಕು, ಮನೆಲ್ಲಿ ಚಾಕರಿ ಮಾಡಕ್ಕೂ ನಾನೇ ಬೇಕು ಅಂದ್ರೆ ನಾನೇನು ಅವನ ಆಳಾ? ಅಂತ. ಅದೆಲ್ಲಾ ಸರಿನೇ. ನಾನೂ ಒಪ್ಕೋತಿನಿ. ಕಾಲ ಬದಲಾಗಿದೆ ಅಂತ. ಆದ್ರೆ ಇವಳು ಇಷ್ಟು ನೇರ ನೇರವಾಗಿ ಹೇಳಿದ್ರೆ ಯಾರು ಇವಳನ್ನ ಮದ್ವೆ ಆಗ್ತಾರೆ ಅಂತ ಭಯ ನಂಗೆ.&lt;/p&gt;&lt;p align="justify"&gt;&lt;br /&gt;ಇವ್ರಿಗೆ ಹೇಳಿದ್ರೆ ಕಿವಿ ಮೇಲೇ ಹಾಕ್ಕೊಳಲ್ಲ. "ಅವಳಿಗೆ ಇನ್ನೂ ಸಣ್ಣ ವಯಸ್ಸು, ನೀನು ಸುಮ್ನೆ ಟೆನ್ಶನ್ ಮಾಡ್ಕೋಂತೀಯಾ" ಅಂತಾರೆ. ಟೆನ್ಶನ್ ಆಗಲ್ವಾ? ಈ ಅಗಸ್ಟಿಗೆ ಅವ್ಳಿಗೆ ೨೪ ಮುಗಿಯುತ್ತೆ. ಎಂತಾ ಸಣ್ಣ ವಯಸ್ಸು? ಯಾವ ಯಾವ ವಯಸ್ಸಿಗೆ ಯಾವ್ಯಾವ್ದು ಆಗ್ಬೇಕೋ ಅದಾದ್ರೇ ಚಂದ ಅಲ್ವಾ? ಇವ್ರಿಗಂತೂ ಅದೆಲ್ಲಾ ಅರ್ಥ ಆಗಲ್ಲ. ಅವಳಂತೂ ಬಿಡು. "ಅಮ್ಮಾ ನಾನು ೨೬ ವರ್ಷದ ವರೆಗೂ ಮದುವೆ ಆಗಲ್ಲ" ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ಬಿಟ್ಟಿದ್ದಾಳೆ. ಹೆಚ್ಚಿಗೆ ಒತ್ತಾಯ ಮಾಡಿದ್ರೆ "ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ" ಅಂತ ಅಳಕ್ಕೇ ಶುರು ಮಾಡಿ ಬಿಡ್ತಾಳೆ. ನಾನೇನು ಇವಳನ್ನು ಆದಷ್ಟು ಬೇಗ ಮನೆಯಿಂದ ಹೊರಗೆ ಹಾಕ್ಬೇಕು ಅಂತಾ ಇಷ್ಟೆಲ್ಲಾ ಮಾಡ್ತಿದ್ದೀನಾ? ನನಗೂ ಮಗಳನ್ನು ಒಳ್ಳೆ ಮನೆಗೇ ಕೊಡ್ಬೇಕು ಅಂತ ಇಲ್ವಾ? ನಮ್ಗಿರೋದು ಒಂದೇ ಮಗಳು. ಅವಳು ಚೆನ್ನಾಗಿರ್ಲಿ ಅಂತಾನೇ ನಾವು ಇಷ್ಟೆಲ್ಲಾ ಮಾಡ್ತಾ ಇರೋದು? ಯಾರನ್ನಾರೂ ಲವ್ವು-ಗಿವ್ವು ಅಂತಾ ಮಾಡಿದಿಯೇನೇ, ಅಂತಾನೂ ನಂಬಿಸಿ ಕೇಳಿದಿನಿ. ಹಾಗೆಲ್ಲಾ ಇದ್ರೆ ಮೊದ್ಲೇ ಹೇಳ್ಬಿಡು. ಆಮೇಲೆ ಮೂರನೆಯವರಿಂದ ಗೊತ್ತಾಗೋದು ಬೇಡ ಅಂತಾನೂ ಹೇಳಿದೀನಿ. ಹಾಗೇನೂ ಇಲ್ಲಾ ಅಂತಾಳೆ. ನನಗಂತೂ ಸಾಕಾಗಿ ಹೋಗಿದೆ. ಅಪ್ಪ ಮಗಳು ಏನು ಬೇಕಾದ್ರೂ ಮಾಡ್ಕೊಳ್ಲಿ ಅಂತ ಬಿಟ್ಟು ಬಿಟ್ಟಿದ್ದೀನಿ. ಆದ್ರೂ ಕೆಲವೊಂದು ಸಲ ತಾಯಿ ಹೃದಯ, ಕೇಳಲ್ಲ.&lt;/p&gt;&lt;p align="justify"&gt;&lt;br /&gt;ಮೊನ್ನೆ ಏನಾಯ್ತು ಅಂದ್ರೆ, ನಮ್ಮ ಯಜಮಾನರ ಕೊಲೀಗು ಇದ್ದಾರಲ್ಲ ಶ್ರೀನಿವಾಸಯ್ಯ, ಅವರ ತಂಗಿ ಮಗನ ಪ್ರಪೋಸಲ್ಲು ಬಂದಿತ್ತು. ಹುಡುಗಾ ನೋಡೋಕೆ ಸುಮಾರಾಗಿದಾನೆ. ಒಳ್ಳೆ ಮನೆತನ, ಒಳ್ಳೆ ಸಂಬಂಧ. ಚೆನ್ನಾಗಿ ಓದಿದಾನೆ ಬೇರೆ. ಸ್ವಂತ ಮನೆಯಿದೆ, ಕಾರೂ ಇದೆ. ನನಗಂತೂ ಯಾವ ತೊಂದರೆನೂ ಕಾಣ್ಲಿಲ್ಲ. ಅವರ ಮನೆಯವರಿಗೂ ಬಹಳ ಇಷ್ಟವಾದ ಹಾಗೇ ಇತ್ತು. ಆದರೆ ಇವ್ಳು ಮಾತ್ರ ಸುತಾರಾಂ ಒಪ್ಪಲೇ ಇಲ್ಲ. ನಮ್ಮನೆಯವರಿಗೂ ಬಹಳ ಮನಸ್ಸಿದ್ದ ಹಾಗೆ ಕಾಣ್ತು ನನಗೆ. ಇವರೂ ಏನೇನೋ ಉಪದೇಶ ಮಾಡಿದ್ರು. ಕೊನೆಗೆ ಇವಳು ಹೇಳಿದ್ದು ಏನು ಗೊತ್ತಾ? "ಆ ಹುಡುಗಾ ಸ್ವಲ್ಪ ಕಪ್ಪಗಿದಾನೆ. ನನಗೆ ಬೇಡ" ಅಂತ. ಏನು ಹೇಳೋಣ ಇಂಥವರಿಗೆ? ರೂಪ, ಬಣ್ಣ ಎಲ್ಲಾ ನೋಡಿ ಯಾರಾದ್ರೂ ಮದ್ವೆ ಆಗ್ತಾರಾ? ಗುಣ ಅಲ್ವಾ ನೋಡ್ಬೇಕಾಗಿದ್ದು? ಅವಳು ತಪ್ಪಿಸಿಕೊಳ್ಳಕೆ ಹಾಗೆ ಹೇಳಿದ್ಳೋ, ಅಥವಾ ನಿಜವಾಗ್ಲೂ ಅವಳ ಮನಸ್ಸಲ್ಲಿ ಇದೇ ಇದೆಯಾ ಅಂತ ಹೇಗೆ ಹೇಳೋದು? ಆದ್ರೆ ಒಂದು ಮಾತ್ರ ನಿಜ, ಅವನು ಕಪ್ಪಗಿದಾನೆ ಅಂತ ರಿಜೆಕ್ಟ್ ಮಾಡಿದ್ರೆ ಮಾತ್ರ ಇವಳಿಗೆ ಸೊಕ್ಕು ಅಂತಾನೇ ಅರ್ಥ! ನಾನೇನೂ ಜಾಸ್ತಿ ಹೇಳಕ್ಕೆ ಹೋಗ್ಲಿಲ್ಲ. ಆಶ್ಚರ್ಯ ಅಂದ್ರೆ ಈಗ ಎರಡು ಮೂರು ದಿನದಿಂದ ಇವರೂ ಭಾಳ ಅಪ್ ಸೆಟ್ ಆಗಿದಾರೆ. ಈಗ ಅರ್ಥ ಆಗಿರ್ಬೇಕು ಅವರಿಗೆ ಮದ್ವೆ ಮಾಡೋದು ಎಷ್ಟು ಕಷ್ಟ ಅನ್ನೋದು.&lt;/p&gt;&lt;p align="justify"&gt;&lt;br /&gt;ಅದೆಲ್ಲ ಬಿಟ್ಟಾಕಿ. ಅದೇನೋ ಅಂತಾರಲ್ಲಾ, ಹಣೇಲಿ ಬರ್ದಿರ್ಬೇಕು ಅಂತಾ. ಯಾವಾಗ ಕಾಲ ಕೂಡಿ ಬರುತ್ತೋ ಗೊತ್ತಿಲ್ಲ. ಕಾಯ್ಬೇಕು ಅಷ್ಟೇ. ಆದ್ರೆ ಒಂದಂತೂ ನಿಜ. ಈ ಕಂಪ್ಯೂಟರ್ರು, ಇಂಟರನೆಟ್ಟು, ಅನ್ನೋ ವಸ್ತು ಮನೆಗೆ ಬಂದಾಗಿಂದ ಈಗಿನ ಕಾಲದ ಮಕ್ಕಳ ವರ್ತನೆನೇ ಚೇಂಜ್ ಆಗಿ ಹೋಗಿದೆ. ಇವಳೂ ಏನೂ ಕಮ್ಮಿಯಿಲ್ಲ. ಆಫೀಸ್ನಲ್ಲಿ ಕಂಪ್ಯೂಟರ್ ಮುಂದೆ ಕುಳ್ತಿದ್ದು ಸಾಲ್ದು ಅಂತ ರಾತ್ರೆ ೧೧, ೧೨ ಗಂಟೆ ತನಕಾನೂ ಆ ಕೀಬೋರ್ಡು ಕುಟ್ಟತಾ ಇರ್ತಾಳೆ. ಸಾಕು ಮಲಗಮ್ಮಾ ಅಂದ್ರೆ, ಅದ್ಯಾವುದೋ ಫ್ರೆಂಡ್ ಅಂತೆ, ಅಮೆರಿಕಾದಲ್ಲಿದಾರಂತೆ, ಅವನೋ, ಅವಳೋ ಯಾರದೋ ಜೊತೆ ಅದೇನೋ ಚಾಟಿಂಗ್ ಅಂತ ಮಾಡ್ತಾ ಇರ್ತಾಳೆ. ಹೊತ್ತು ಗೊತ್ತು ಒಂದೂ ಪರಿವೆನೇ ಇಲ್ಲ. ಅದರಲ್ಲಿ ಏನು ಬ್ರಹ್ಮಾಂಡ ತೋರಿಸ್ತಾರೋ ದೇವ್ರಿಗೇ ಗೊತ್ತು. ಒಂದಂತೂ ನಿಜ, ಇವೆಲ್ಲ ಬಂದ ಮೇಲೆ ಮಕ್ಕಳು ಇನ್ನೂ ಜಾಸ್ತಿ ಆಲಸಿಗಳಾಗ್ತಿದಾರೆ ಅಷ್ಟೇ. ಇಂಟರನೆಟ್ಟಲ್ಲೇ ಫ್ರೆಂಡ್ಸ್ ಮಾಡ್ಕೋಂತಾರೆ, ಹರಟೆ ಹೊಡೀತಾರೆ, ಇನ್ನೂ ಏನೇನೋ, ನಂಗದು ಸರಿಯಾಗಿ ಗೊತ್ತಾಗೋದೂ ಇಲ್ಲ. ಮೊನ್ನೆ ಅದ್ಯಾವುದೋ ಫ್ರೆಂಡೊಬ್ಬಳು ಮನೆಗೆ ಬಂದಿದ್ಲಲ್ಲಾ, ಇವ್ಳದ್ದೇ ವಯಸ್ಸು. ನಿನ್ನ ಕ್ಲಾಸ್ ಮೇಟೇನಮ್ಮಾ ಅಂತ ಕೇಳಿದ್ರೆ, ಇಲ್ಲಾ ಇವಳು ನನ್ನ ಆರ್ಕುಟ್ ಫ್ರೆಂಡ್ ಅಂತಾ ಅಂದಳು. ಇದ್ಯಾವ ತರ ಫ್ರೆಂಡ್ ಅಂತಾನೇ ನಂಗೆ ಗೊತ್ತಾಗ್ಲಿಲ್ಲ ನೋಡಿ. ಹಾಗಂದ್ರೆ ಏನೇ? ಅಂದ್ರೆ "ಅದೇ ಅಮ್ಮಾ. ಇಂಟರನೆಟ್ಟಲ್ಲಿ ಆರ್ಕುಟ್ ಅಂತ ಕಮ್ಯುನಿಟಿ ಇದೆಯಮ್ಮಾ, ಅದರಲ್ಲಿ ಫ್ರೆಂಡ್ ಆದವಳು, ನಿಂಗೆ ಗೊತ್ತಾಗಲ್ಲ ಬಿಡು" ಅಂದಳು. ಅದವಳ ಖಾಯಂ ಡೈಲಾಗು, "ಅಮ್ಮಾ ನಿಂಗೆ ಇವೆಲ್ಲಾ ಗೊತ್ತಾಗಲ್ಲ ಬಿಡಮ್ಮ" ಅಂತ. ಅವಳು ಹೇಳಿದ್ದು ನಿಜಾನೇ. ಈ ಕಾಲದವರ ಇಂಟರ್ ನೆಟ್ಟು, ಮೊಬೈಲು, ಐಪಾಡು ಇವೆಲ್ಲಾ ನಂಗಂತೂ ಒಂದೂ ಗೊತ್ತಾಗಲ್ಲ. ಅದರಲ್ಲೂ ಆ ಮೊಬೈಲನ್ನಂತೂ ಇನ್ನೂ ಸರಿಯಾಗಿ ಬಳಸಕ್ಕೆ ನಂಗಿನ್ನೂ ಬರಲ್ಲ. ಅದೇನೋ ಹಸಿರು ಬಟನಂತೆ, ರೆಡ್ ಬಟನಂತೆ, ಮೆಸೇಜು, ಎಸ್ಸೆಮೆಸ್ಸು, ಮಿಸ್ಸಡ್ ಕಾಲ್ಸು ಅಯ್ಯೋ ನಂಗಂತೂ ಬರೀ ಕನ್ಫೂಶನ್ನು. ಇನ್ನೂ ಮೊಬೈಲ್ ಬಳಸಕ್ಕೆ ಬರಲ್ಲ ಅಂತ ಅಪ್ಪ ಮಗಳು ಸೇರಿ ಯಾವಾಗಲೂ ರೇಗಿಸ್ತಾನೇ ಇರ್ತಾರೆ. ಇವರಂತೂ ಬಿಡಿ, ಸಂದರ್ಭ ಸಿಕ್ಕಿದಾಗಲೆಲ್ಲಾ ದಡ್ಡಿ, ದಡ್ಡಿ ಅಂತಾ ಹಂಗಿಸ್ತಾನೇ ಇರ್ತಾರೆ. ನನ್ನ ಮೈಯೆಲ್ಲಾ ಉರಿದುಹೋಗತ್ತೆ. ಅದೇನು ಜಾಸ್ತಿ ಓದಿದವ್ರು ಮಾತ್ರಾ ಬುದ್ಧಿವಂತರಾ? ಅಥವಾ ಈಗಿನ ಕಾಲದ ವಸ್ತುಗಳನ್ನೆಲ್ಲಾ ಉಪಯೋಗ್ಸಕ್ಕೆ ಬರದೋವ್ರು ಎಲ್ಲಾ ದಡ್ಡರಾ? ಅಷ್ಟೆಲ್ಲ ದಡ್ಡರಾದ್ರೆ ನಾವು ಸಂಸಾರ ಹೇಗೆ ನಡೆಸ್ಕೊಂಡು ಬಂದ್ವಿ? ಜಾಸ್ತಿ ಓದಿದ ಮಾತ್ರಕ್ಕೆ ಬುದ್ಧಿವಂತರು ಅಂತೇನೂ ರೂಲ್ಸ್ ಇಲ್ಲ. ಈಗ ಇವ್ರನ್ನೇ ತಗೊಳ್ಳಿ. ಎಷ್ಟು ಮಹಾ ಬುದ್ಧಿವಂತರು ಇವ್ರು? ನಂಗೊತ್ತಿಲ್ವಾ ಇವ್ರ ಭೋಳೇ ಸ್ವಭಾವ? ಯಾರೇ ಒಂದು ಸ್ವಲ್ಪ ದುಡ್ಡು ಬೇಕು ಅಂತ ಹಲ್ಲುಗಿಂಜಿದ್ರೂ ಹಿಂದೆ ಮುಂದೆ ನೋಡ್ದೇ ಕೊಟ್ಟುಬಿಡೋರು. ಕೈಯಲ್ಲಂತೂ ಒಂಚೂರೂ ದುಡ್ಡು ನಿಲ್ತಾ ಇರ್ಲಿಲ್ಲ. ನಾನು ಸ್ವಲ್ಪ ತಲೆ ಓಡಿಸಿ, ಸಾಧ್ಯವಾದಾಗ್ಲೆಲ್ಲಾ ಇವರ ಕೈ ಹಿಡಿದು, ಅಲ್ಲಲ್ಲಿ ಉಳ್ಸಿ, ಇವರ ದುಂದು ವೆಚ್ಚಕ್ಕೆಲ್ಲಾ ಕಡಿವಾಣ ಹಾಕಿ, ಕಾಡಿ ಬೇಡಿ ಈಗೊಂದು ೧೦ ವರ್ಷದ ಹಿಂದೆನೇ ಎರಡು ೩೦-೪೦ ಸೈಟ್ ತಗೊಳ್ಳೊ ಹಾಗೆ ಮಾಡದೇ ಇದ್ದಿದ್ರೆ, ಬೆಂಗಳೂರಲ್ಲಿ ಸ್ವಂತ ಮನೆ ಅಂತ ಮಾಡಿ, ಮಗಳನ್ನು ಇಂಜಿನಿಯರ್ ಓದ್ಸಕ್ಕೆ ಆಗ್ತಿತ್ತಾ? ಅದೂ ಇವ್ರಿಗೆ ಬರೋ ಸಂಬಳದಲ್ಲಿ? ಈಗ ನೀವೇ ಹೇಳಿ ಯಾರು ದಡ್ಡರು, ಯಾರು ಬುದ್ಧಿವಂತರು ಅಂತಾ? ಇನ್ನೊಂದು ಸಲ ಹಂಗಿಸ್ಲಿ, ಸರಿಯಾಗಿ ಹೇಳ್ತಿನಿ, ಬಿಡಲ್ಲ.&lt;/p&gt;&lt;p align="justify"&gt;&lt;br /&gt;ಅಯ್ಯೋ, ಮಾತಾಡ್ತಾ ಮಾತಾಡ್ತಾ ಟೈಮೇ ನೋಡಿಲ್ಲ ನೋಡಿ. ಆಗ್ಲೇ ೪.೩೦ ಆಗೋಯ್ತು. ಇವ್ಳನ್ನು ಬಡಿದಾದ್ರೂ ಎಬ್ಬಿಸ್ಬೇಕು ಈಗ. ಅದೇನೋ ಡ್ಯಾನ್ಸ್ ಕ್ಲಾಸ್ ಅಂತೆ. ಅದೆಂಥದೋ "ಸಾಲ್ಸಾ" ನೋ "ಸಲ್ಸಾ"ನೋ, ನಂಗೆ ಬಾಯಿ ಅಷ್ಟು ಸುಲಭವಾಗಿ ಹೊರಳಲ್ಲಬಿಡಿ, ಅದಕ್ಕೆ ಹೋಗ್ತಾಳೆ. ಅದೂ ಇಲ್ಲಿ ಹತ್ತಿರದಲ್ಲಿ ಎಲ್ಲೂ ಇಲ್ಲ. ಇಂದಿರಾನಗರಕ್ಕೇ ಹೋಗ್ಬೇಕು. ಆ ಸ್ಕೂಟಿ ಹಾಕ್ಕೊಂಡು ಅಷ್ಟೆಲ್ಲ ದೂರ ಹೋಗ್ಬೇಡಾ ಅಂದ್ರೂ ಕೇಳಲ್ಲಾ. ಅಷ್ಟೆಲ್ಲ ದೂರ ಹೋಗಿ ಕಲಿಯೋಂತದ್ದು ಏನಿದ್ಯೋ ನಂಗಂತೂ ಅರ್ಥವಾಗ್ಲಿಲ್ಲ. ಇಲ್ಲೇ ಗಣೇಶನ ಗುಡಿ ಹಿಂದೆ ಭರತನಾಟ್ಯ ಕಲಿಸಿಕೊಡ್ತಾರೆ, ಅದಕ್ಕೆ ಹೋಗಮ್ಮಾ ಅಂದ್ರೆ "ಅಮ್ಮಾ ಅವೆಲ್ಲ ಹಳೆ ಕಾಲದವು, ನಾನು ಕಲಿಯಲ್ಲ" ಅಂಥಾಳೆ. ಇನ್ನೇನು ಹೇಳೋದು? ಒಟ್ನಲ್ಲಿ ಹೇಳಿ ಪ್ರಯೋಜ್ನ ಇಲ್ಲ. ಹಳೆದ್ದು ಅಂತ ಎಲ್ಲಾದನ್ನೂ ಬಿಟ್ಕೊಂತಾ ಹೋಗ್ತಾನೇ ಇದ್ರೆ ನಮ್ಮದು ಅಂತಾ ಸಂಸ್ಕಾರಗಳು ಉಳಿಯೋದಾದ್ರೂ ಹೇಗೆ? ಮುಂದೆ ನಮ್ಮನ್ನೂ ಹಳೇಯವ್ರು ಅಂತ ಬಿಡದೇ ಇದ್ರೆ ಸಾಕು! ಒಂದೊಂದು ಸಲ ಹೆಣ್ಣು ಮಗಳನ್ನು ಯಾಕಾದ್ರೂ ಹೆತ್ತನಪ್ಪಾ ಅಂಥಾನೂ ಅನ್ನಸತ್ತೆ. ಆದ್ರೆ ಗಂಡು ಮಕ್ಕಳಿದ್ರೆ ಸುಖ ಅನ್ನೋದಂತೂ ಸುಳ್ಳು ಬಿಡಿ. ಈಗ ಪಕ್ಕದ ಮನೆ ಸುಮಿತ್ರಮ್ಮನ್ನೇ ನೋಡಿ. ಒಬ್ಬನೇ ಮಗ, ಚೆನ್ನಾಗಿ ಓದದಾ, ಅಮೇರಿಕಕ್ಕೆ ಹೋದ. ಅಲ್ಲೇ ಯಾವ್ದೋ ನಾರ್ತ್ ಇಂಡಿಯನ್ ಹುಡ್ಗಿನಾ ಮದ್ವೆ ಆದ. ಇನ್ನೇನು ಅಪ್ಪ ಅಮ್ಮನ್ನ ಮರೆತ ಹಾಗೇನೇ. ವರ್ಷಕ್ಕೋ ಎರಡು ವರ್ಷಕ್ಕೋ ಬರ್ತಾನೆ ಅಷ್ಟೇ. ಇವ್ರಿಗೋ ಆರೋಗ್ಯನೇ ಸರಿಯಿರಲ್ಲ. ಈ ವಯಸ್ಸಲ್ಲಿ ಎಷ್ಟೂಂತಾ ಓಡಾಡ್ಕೊಂಡು ಇರಕ್ಕಾಗತ್ತೆ ಹೇಳಿ? ನಮ್ಮ ಕೊನೆಗಾಲಕ್ಕೆ ಆಗ್ದೇ ಇರೋ ಮಕ್ಕಳು ಇದ್ರೆಷ್ಟು,ಬಿಟ್ರೆಷ್ಟು? ನಂಗಂತೂ ಅವ್ರನ್ನ ನೋಡಿ ಪಾಪ ಅನ್ನಸತ್ತೆ. ಗಂಡು ಮಕ್ಕಳಿರೋವ್ರದ್ದು ಒಂಥರಾ ಕಷ್ಟ, ಹೆಣ್ಣು ಮಕ್ಕಳಿರೋವ್ರದ್ದು ಇನ್ನೊಂಥರಾ ಕಷ್ಟ ಅಷ್ಟೇ.&lt;/p&gt;&lt;p align="justify"&gt;&lt;br /&gt;ಸಾಕು ಮಾಡಮ್ಮಾ ನಿನ್ನ ಪ್ರಲಾಪ, ನಮಗೇ ಹೊದೆಯಷ್ಟು ಕಷ್ಟ ಇದೆ ಅಂತೀರಾ? ಅಯ್ಯೋ, ನಿಮಗೂ ನನ್ನ ತರ ಬೆಳೆದು ನಿಂತ ಮಗಳಿದ್ರೆ ಗೊತ್ತಾಗಿರೋದು ನನ್ನ ಸಂಕಟ ಏನು ಅಂತಾ. ಹೋಗ್ಲಿ ಬಿಡಿ, ಅವರವರು ಪಡ್ಕೊಂಡು ಬಂದಿದ್ದು, ಅನುಭವಿಸ್ಬೇಕು. ಅನುಭವಿಸ್ತೀನಿ ಬಿಡಿ. ಇನ್ನೇನು ಇವರು ಬರೋ ಹೊತ್ತಾಯ್ತು. ಕಾಫಿ ಮಾಡ್ಬೇಕು. ಬಂದ ಕೂಡ್ಲೇ ಕೈಗೆ ಕಾಫಿ ಸಿಗದೇ ಹೋದ್ರೆ ಆಮೇಲೆ ಇಡೀ ದಿನ ಕೂಗ್ತಾ ಇರ್ತಾರೆ. ಇನ್ನೊಮ್ಮೆ ಯಾವಾಗಲಾದ್ರೂ ಸಿಕ್ತೀನಿ, ಸುದ್ದಿ ಹೇಳೋಕೆ ಬಹಳಷ್ಟಿದೆ. ಬರ್ಲಾ? ಅಯ್ಯೋ, ಹೇಳೊಕೇ ಮರ್ತೋಗಿತ್ತು ನೋಡಿ. ನಿಮಗೆ ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಪ್ಲೀಸ್ ಹೇಳ್ರೀ. ಯಾರಿಗೆ ಗೊತ್ತು, ಇವಳಿಗೆ ಇಷ್ಟ ಆದ್ರೂ ಆಗ್ಬಹುದು. ನಮ್ಮ ಪ್ರಯತ್ನ ಅಂತೂ ನಾವು ಮಾಡೋದು. ಮುಂದೆಲ್ಲಾ ಹಣೇಲಿ ಬರದಾಂಗೆ ಆಗತ್ತೆ. ಅಲ್ವಾ?&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-2165955648757111607?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/2165955648757111607/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=2165955648757111607' title='15 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/2165955648757111607'/><link rel='self' type='application/atom+xml' href='http://www.blogger.com/feeds/6035880729059442700/posts/default/2165955648757111607'/><link rel='alternate' type='text/html' href='http://madhu-vana.blogspot.com/2008/07/blog-post.html' title='ಹೀಗೇ ಸುಮ್ಮನೇ...'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>15</thr:total></entry><entry><id>tag:blogger.com,1999:blog-6035880729059442700.post-2436455570310012315</id><published>2008-06-23T01:01:00.000-07:00</published><updated>2008-06-23T01:10:43.709-07:00</updated><title type='text'>ಈ ಸಂಭಾಷಣೆ...</title><content type='html'>&lt;p&gt;ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು&lt;/p&gt;&lt;p&gt;ಅರೆಪಾವು ತುಂಟತನ, ಆಗಾಗ ಥೇಟ್ ಮಗು&lt;/p&gt;&lt;p&gt;ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು&lt;/p&gt;&lt;p&gt;ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು&lt;/p&gt;&lt;p&gt;&lt;span class=""&gt;&lt;/span&gt;&lt;/p&gt;&lt;p&gt;&lt;/p&gt;&lt;p&gt;&lt;br /&gt;&lt;br /&gt;ಪ್ರಶ್ನೆ ಕೇಳುವಾಗಲೆಲ್ಲ ತುಸು ತಗ್ಗಿದಂತೆ ದನಿ&lt;/p&gt;&lt;p&gt;ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ &lt;/p&gt;&lt;p&gt;ಉತ್ತರಕ್ಕೊಮ್ಮೆ ಬುದ್ಧ, ಇನ್ನೊಮ್ಮೆ ಶುದ್ಧ ವಜ್ರಮುನಿ&lt;/p&gt;&lt;p&gt;ಅಪರೂಪಕ್ಕೊಮ್ಮೊಮ್ಮೆ ಬರೀ ಹಠಮಾರಿ ಪುಟಾಣಿ!&lt;/p&gt;&lt;p&gt;&lt;/p&gt;&lt;p&gt;&lt;/p&gt;&lt;p&gt;&lt;br /&gt;&lt;br /&gt;ಹೇಳಿದಷ್ಟೂ ಸಾಲದು, ಮಾತಾಡಿದಷ್ಟೂ ಸಾಕಾಗದು&lt;/p&gt;&lt;p&gt;"ಮತ್ತೆ?" ಪ್ರಶ್ನೆ ತುಟಿಯಂಚಲ್ಲಿ ಎಂದೂ ಸಾಯದು&lt;/p&gt;&lt;p&gt;ನಿಶ್ಯಬ್ಧ, ನಿಟ್ಟುಸಿರು, ನಗು ದಿನದಿನವೂ ಹೊಸಹೊಸದು&lt;/p&gt;&lt;p&gt;ಕಿವಿಯಂಚಲ್ಲೇ ಗಾಂಧರ್ವಲೋಕ ಮೂಡಿಹದು ನಿಜದು&lt;/p&gt;&lt;p&gt;&lt;span class=""&gt;&lt;/span&gt;&lt;/p&gt;&lt;p&gt;&lt;/p&gt;&lt;p&gt;&lt;br /&gt;&lt;br /&gt;ಅನುರಾಗದಾಲಾಪದ ಮೋಹಕ ಅಲೆಗಳಲ್ಲಿ ತೇಲಾಡಿ&lt;/p&gt;&lt;p&gt;ಕಳೆದುಹೋಗುತ್ತಿರುವ ಕಾಲಪುರುಷನನೂ ಪರಿಪರಿ ಕಾಡಿ,&lt;/p&gt;&lt;p&gt;ಮೌನದಾಗಸದಲ್ಲಿ ಮೆಲುದನಿಯ ಕಾಮನಬಿಲ್ಲು ಹೂಡಿ&lt;/p&gt;&lt;p&gt;ಹಾಡುತ್ತಲೇ ಇದೆ ಈ ನಿತ್ಯ ನೂತನೆ, ಸಲ್ಲಾಪದ ಮೋಡಿ&lt;/p&gt;&lt;p&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-2436455570310012315?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/2436455570310012315/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=2436455570310012315' title='12 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/2436455570310012315'/><link rel='self' type='application/atom+xml' href='http://www.blogger.com/feeds/6035880729059442700/posts/default/2436455570310012315'/><link rel='alternate' type='text/html' href='http://madhu-vana.blogspot.com/2008/06/blog-post.html' title='ಈ ಸಂಭಾಷಣೆ...'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>12</thr:total></entry><entry><id>tag:blogger.com,1999:blog-6035880729059442700.post-7269084691478713168</id><published>2008-04-24T13:23:00.001-07:00</published><updated>2008-04-24T18:49:01.989-07:00</updated><title type='text'>ಈರನ ತರ್ಕವೂ... ಎಲೆಕ್ಸನ್ನೂ.....</title><content type='html'>&lt;div align="justify"&gt;ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ ಕಡೆ ಪುಟುಪುಟನೇ ಬರುತ್ತಿದೆ ಅಂದ್ರೆ ಅದು ಈರನೇ ಅಂತ ನಿಸ್ಸಂಶಯವಾಗಿ ಹೇಳಿ ಬಿಡಬಹುದು. ಅವನು ಹಲವಾರು ವರ್ಷಗಳಿಂದ ರಾಂಭಟ್ಟರ ಮನೆಯ ಸದಸ್ಯನಂತೇ ಖಾಯಂ ಕೆಲಸಕ್ಕೆ ಇದ್ದವನು. ಹಣ್ಣು ಹಣ್ಣು ಮುದುಕನಾಗಿ, ಬಡಕಲಾಗಿದ್ದ ಅವನನ್ನು ನೋಡಿದರೆ ಯಾರಿಗೂ ಇವನು ಕೆಲಸ ಮಾಡಬಹುದು ಎಂದೇ ಅನ್ನಿಸುತ್ತಿರಲಿಲ್ಲ. ಆದರೂ ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು, ಸಿಕ್ಕ ದುಡ್ಡಲ್ಲೇ ಹೇಗೋ ಅವನಿಗೆ ಬೇಕಾದಷ್ಟು ಖರ್ಚು ಮಾಡಿಕೊಂಡು ಹಾಯಾಗಿದ್ದ. ಅಪ್ಪ ಆಗಾಗ ಅವನನ್ನು ತೋಟದಲ್ಲಿದ್ದ ತೆಂಗಿನಕಾಯಿಗಳನ್ನು ಕೆಡವಲು ಕರೆಯುತ್ತಿದ್ದರು.&lt;/div&gt;&lt;div align="justify"&gt;&lt;br /&gt;ಸಪೂರ ಕಾಲುಗಳ ಈರ, ತೆಂಗಿನ ಮರ ಹತ್ತಿ ಕಾಯಿ ಕಿತ್ತು ಕೆಳಗೆ ಹಾಕುವುದನ್ನು ನೋಡುವುದೇ ಒಂದು ಮಜ. ಎರಡೂ ಕಾಲುಗಳಿಗೆ ಹಗ್ಗದ ತಳೆಯೊಂದನ್ನು ಸಿಕ್ಕಿಸಿ, ವೇಗವಾಗಿ ಮರ ಹತ್ತಿ, ನೋಡು ನೋಡುತ್ತಿದಂತೆಯೇ ಕಾಯಿಗಳನ್ನು ಕಿತ್ತು ಕೆಳಕ್ಕೆ ಎಸೆದು, ಸರ್ರನೇ ಮರದಿಂದ ಜಾರಿ ನೆಲಕ್ಕಿಳಿಯುತಿದ್ದ ಪರಿಯೇ ನನಗೊಂದು ಬೆರಗು. ಎಷ್ಟು ವರ್ಷಗಳಿಂದ ಇದೇ ಕೆಲಸವನ್ನು ಮಾಡುತ್ತಿದ್ದನೋ ಅವನು? ಎಂತಾ ಎತ್ತರದ ಮರವಾದರೂ ಲೀಲಾಜಾಲವಾಗಿ ಹತ್ತಬಲ್ಲ ಚಾಕಚಕ್ಯತೆ ಅವನಲ್ಲಿತ್ತು.&lt;/div&gt;&lt;div align="justify"&gt;&lt;br /&gt;ಅವನ ಮತ್ತೊಂದು ವಿಶೇಷತೆ ಅಂದರೆ ಅವನ ಬಾಯಿ. ಬಹುಷಃ ಮಲಗಿದ್ದಾಗ ಮಾತ್ರ ಅದಕ್ಕೆ ವಿಶ್ರಾಂತಿ ಕೊಡುತ್ತಿದ್ದ ಅವನು. ಯಾವುದೇ ಕೆಲಸ ಮಾಡುವಾಗಲೂ ಮಾತಾಡುತ್ತಲೇ ಇರಬೇಕು. ಅಪ್ಪ ಆಗಾಗ "ಈರಾ, ನಿಂದು ಮರದ್ದ ಬಾಯಾಗಿದ್ರೆ ಇಷ್ಟೊತ್ತಿಗೆ ವಡೆದು ಹೋಗ್ತಿತ್ತು ನೋಡು" ಅಂತ ಛೇಡಿಸುತ್ತಿದ್ದರು. ಅದಕ್ಕೆಲ್ಲಾ ಅವನು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. "ಇರಬೋದ್ರಾ" ಎಂದಂದು ಮತ್ತೆ ಅವನ ಕಾಯಕವನ್ನು ಮುಂದುವರೆಸುತ್ತಿದ್ದ. ನಮಗೆಲ್ಲ ಅವನ ವಾಚಾಳಿತನ ತಮಾಷೆಯ ವಿಷಯವಾಗಿತ್ತು. ಆಗಾಗ ಯಾವ್ಯಾವ್ದೋ ವಿಷಯಗಳನ್ನು ಎತ್ತಿ, ಅವನ ಬಾಯಿಂದ ಉದುರುವ ಅಣಿಮುತ್ತುಗಳನ್ನು ಕೇಳಿ ನಗಾಡಿಕೊಳ್ಳುತ್ತಿದ್ದೆವು.&lt;/div&gt;&lt;div align="justify"&gt;&lt;br /&gt;ಹಬ್ಬದ ದಿನ ಬೆಳಿಗ್ಗೆ ಜಗಲಿಯಲ್ಲಿ ಖುರ್ಚಿ ಹಾಕಿಕೊಂಡು ಕುಳಿತು ಪೇಪರ ಓದುತ್ತಿದ್ದವನಿಗೆ ಈರ ಮನೆ ಕಡೆ ಬರುತ್ತಿರುವುದು ಕಂಡಿತು. ಸಮಯ ನೋಡಿದರೆ ಇನ್ನೂ ಎಂಟು ಗಂಟೆ. ಅವನು ಇನ್ನೂ ಸ್ವಲ್ಪ ದೂರದ್ದಲ್ಲಿದ್ದಂತೆಯೇ ನಾನು "ಎನೋ ಈರಾ, ಇಷ್ಟು ಬೇಗಾ ಬಂದು ಬಿಟ್ಟಿದ್ದೀಯಾ" ಎಂದು ಕೇಳಿದೆ. ಹತ್ತಿರಾ ಬಂದವನೇ "ಓ, ಮರಿ ಹೆಗಡೇರು....ಹಬ್ಬಕ್ಕೆ ಮನೆಗೆ ಬಂದವ್ರೆ. ಬೆಂಗ್ಳೂರಿಂದಾ ಯಾವಾಗಾ ಬಂದ್ರಾ?" ಎಂದು ಕೇಳಿದ. ನಾನು "ನಿನ್ನೆ" ಎಂದು ಹೇಳಿ ಸುಮ್ಮನಾದೆ. "ಹೆಗ್ಡೇರು ಕಾಯಿ ಕೊಯ್ಯಕ್ಕೆ ಬಾ ಅಂದಿದ್ರು. ಮುಗಸಕಂಡೇ ಭಟ್ಟರ ಮನೆಗೆ ಹೋಗವಾ ಅಂತಾ ಬೆಗ್ಗನೇ ಬಂದೆ. ಹೆಗಡ್ರಿಲ್ಲ್ರಾ? ಎಂದು ಪ್ರಶ್ನೆ ಹಾಕಿದ. ನಾನು ಒಳಗೆ ಹೋಗಿ, ಯಾವ್ಯಾವ ಮರದ್ದು ಕಾಯಿ ಕೀಳಿಸುವುದು ಎಂದು ತಿಳಿದುಕೊಂಡು, ಈರನ ಹತ್ತಿರ "ನಡ್ಯಾ, ನಾನೇ ಬರ್ತೆ ಇವತ್ತು. ನಿನ್ನ ಹತ್ರಾ ಮಾತಾಡದ್ದೇ ಬಾಳ ದಿನಾ ಆಯ್ತು" ಎಂದು ಕತ್ತಿ, ತಳೆ, ಗೋಣಿಚೀಲ ಹಿಡಿದುಕೊಂಡು ಹೊರಟೆ. "ಈ ಮುದಕನ ಹತ್ರ ಎಂತಾ ಇರ್ತದ್ರಾ ಮಾತಾಡದು? ನೀವೇ ಹೇಳ್ಬೇಕು ಬೆಂಗ್ಳೂರಲ್ಲಿದ್ದವ್ರು" ಎಂದವನೇ ಬಾಯಲ್ಲಿದ್ದ ಎಲೆಯಡಿಕೆಯನ್ನು ಉಗಿದು ನನ್ನ ಜೊತೆಗೆ ಮಾತಾಡಲು ಅನುವಾದ. ಬೆಳಿಗ್ಗೆ ಬೆಳಿಗ್ಗೆನೇ ಒಳ್ಳೆ ಟೈಮ್ ಪಾಸ್ ಆಯ್ತು ಅಂತ ನನಗೆ ಒಳಗೊಳಗೇ ಸಂತೋಷವಾಯ್ತು.&lt;/div&gt;&lt;div align="justify"&gt;&lt;br /&gt;ಆದರೆ ನನ್ನ ನಿರೀಕ್ಷೆಗೆ ವಿರುದ್ಧವಾಗಿ ಈರ ಜಾಸ್ತಿ ಮಾತಾಡುವ ಇರಾದೆಯನ್ನೇನೂ ತೋರಿಸಲಿಲ್ಲ. ನಾನೇ ಯಾವ್ಯಾವ್ದೋ ವಿಷಯಗಳನ್ನು ಎತ್ತಿ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಎಲ್ಲದಕ್ಕೂ ಅವನದು ಚುಟುಕಾದ ಉತ್ತರ.ಇವತ್ಯಾಕೋ ಅವನ ಮೂಡ್ ಸರಿಯಿಲ್ಲದಿರಬಹುದು ಎಂದು ನಾನೂ ಜಾಸ್ತಿ ಮಾತಾಡದೇ ಅವನ ಕೆಲಸ ಮುಗಿಯುವವರೆಗೂ ಸುಮ್ಮನಿದ್ದೆ. ಕೆಡವಿದ ಕಾಯಿಗಳೆಲ್ಲವನ್ನೂ ಚೀಲಕ್ಕೆ ತುಂಬಿ ಈರನ ಬೆನ್ನಿಗೆ ಹೊರಿಸಿ ನಾನು, ಅವನು ಮನೆ ಕಡೆ ಪಾದ ಬೆಳೆಸಿದೆವು. ಕೊಟ್ಟಿಗೆ ಹತ್ತಿರ ಚೀಲವನ್ನು ಧೊಪ್ಪನೆ ಇಳಿಸಿ, ಪಕ್ಕದಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತವನೇ ಈರ, "ಹೆಗ್ಡೇರೇ, ಎಲೆಕ್ಸನ್ನು ಬಂತಲ್ರಾ, ಈ ಸಲ ಮುಖ್ಯಮಂತ್ರಿ ಯಾರಾಗ್ತಾರ್ರಾ?" ಎಂದು ಕೇಳಿಯೇ ಬಿಟ್ಟ. ನಾನು ನಿಂತಲ್ಲಿಯೇ ಎಡವಿ ಬೀಳೋದಂದೇ ಬಾಕಿ. ಬೆಳಿಗ್ಗೆ ಬೆಳಿಗ್ಗೇನೇ ಇಂಥ ಗಹನ ಗಂಭೀರ, ಮಿಲಿಯನ್ ಡಾಲರ್ ಪ್ರಶ್ನೆಯನ್ನು ನಾನು ಈರನ ಬಾಯಿಂದಂತೂ ನಿರೀಕ್ಷಿಸಿರಲಿಲ್ಲ. ಏನು ಉತ್ತರ ಕೊಡಬೇಕೆಂದೇ ನನಗೆ ತೋಚಲಿಲ್ಲ. ನಾನು ನೇರವಾಗಿ ಉತ್ತರಿಸಿದರೆ, ಈ ಮುದುಕನ ತಲೆಯೊಳಗಿರಬಹುದಾದ ಅನೇಕ ಸ್ವಾರಸ್ಯಕರ ವಿಚಾರಗಳು ತಪ್ಪಿಹೋಗಬಹುದು ಎಂದೆಣಿಸಿ, ಸ್ವಲ್ಪ ನಿಧಾನಕ್ಕೆ "ನಾನೆಂತಾ ಜ್ಯೋತಿಷಿನೆನಾss ಯಾರು ಮುಖ್ಯಮಂತ್ರಿ ಆಗ್ತಾರೆ ಹೇಳಕ್ಕೆ? ನಂಗೆಂತಾ ಗೊತ್ತು? ನಿಂಗೆ ಯಾರು ಆಗ್ಬೇಕು ಅಂತದೇ?" ಎಂದು ಅವನಿಗೇ ಮರುಪ್ರಶ್ನೆ ಹಾಕಿದೆ. ಸಟ್ಟನೇ ಬಂತು ಉತ್ತರ. "ನೀವು ನನ್ನಾ ಕೇಳಿದ್ರೆ ನಮ್ಮ ಬಂಗಾರಪ್ಪನೋರು ಆಗ್ಬೇಕು ನೋಡಿ ಮತ್ತೆ ಇನ್ನೊಂದು ಸರ್ತಿ.ಚೊಲೋ ಇರ್ತದೆ" ಎಂದ. ಅದೇನೂ ನನಗೆ ಆಶ್ಚರ್ಯ ತರಲಿಲ್ಲ. ಯಾಕೆಂದರೆ ಈರನ ಮನೆಯವರೆಲ್ಲರೂ ಬಂಗಾರಪ್ಪನ ಪರಮ ಭಕ್ತರು. ಬಂಗಾರಪ್ಪನೋರು ಮುಖ್ಯಮಂತ್ರಿ ಆದಾಗ ಈರನ ಮಗನಿಗೊಂದು ಅಗಸೇಬಾಗಿಲಲ್ಲಿ ಸಣ್ಣ ಪಾನ್ ಅಂಗಡಿ ಹಾಕಿಕೊಳ್ಳಲು ಆರ್ಥಿಕ ಸಹಾಯ ಮಾಡಿದ್ದರು. ಅವನ ಮನೆ ನಡೆಯಲು ಆ ಪಾನ್ ಅಂಗಡಿ ಎಷ್ಟೋ ರೀತಿಯಲ್ಲಿ ಸಹಾಯ ಮಾಡಿದೆ. ಹಾಗಾಗಿ ಈರನಿಗೆ ಮತ್ತೆ ಬಂಗಾರಪ್ಪನವರೇ ಮುಖ್ಯಮಂತ್ರಿ ಆಗಲಿ ಎಂದನ್ನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ಯಾವಾಗ ಕೇಳಿದ್ದರೂ ಬಹುಷಃ ಅವನಿಂದ ಅದೇ ಉತ್ತರ ಸಿಗುತ್ತಿತ್ತು.&lt;/div&gt;&lt;div align="justify"&gt;&lt;br /&gt;"ಅಲ್ದಾ, ಬಂಗಾರಪ್ಪನವರಿಗೆ ವಯಸ್ಸಾಗ್ಲಿಲ್ಲೇನಾ ಈಗಾ? ಈ ವಯಸ್ಸಲ್ಲಿ ಮುಖ್ಯಮಂತ್ರಿ ಆದರೇ ಅವರ ಹತ್ರಾ ಎಂತಾ ಮಾಡಕ್ಕೇ ಆಗತ್ತಾ?" ನಾನು ಇನ್ನೂ ಕೆದಕಿದೆ. "ಹ್ವಾಯ್, ವಯಸ್ಸಾದ್ರೆ ಎಂಥಾ ಆಯ್ತು? ಎಷ್ಟು ಗಟ್ಟಿ ಅದಾರೆ ಅವ್ರು. ಈ ವಯಸ್ಸಲ್ಲು ಬೇಕಾದ್ರೆ ಡೊಳ್ಳು ಕಟ್ಕೊಂಡು ಕುಣಿತಾರೆ ಗೊತ್ತಾ? ಅಲ್ಲಾ ನನ್ನ ನೋಡಿ ಬೇಕಾರೆ. ನಾನೂ ಬೇಕಾರೆ ಡೊಳ್ಳು ಕುಣಿತೆ ಗೊತ್ತಾ ನಿಮಗೆ? ಕಾಲು ಸ್ವಲ್ಪ ತೊಂದ್ರೆ ಕೊಡ್ತದೆ ಹೇಳದು ಬಿಟ್ರೆ ಆರಾಮಾಗೇ ಇದ್ದೆ ನಾನೂವಾ. ಮನೆ ನಡ್ಸಕಂಡು ಹೋಗ್ತಾ ಇಲ್ವಾ ಈಗ? ಮನೆ ನಡೆಸ್ದಾಂಗೆಯಾ ರಾಜ್ಯ ಆಳೋದು.ವಯಸ್ಸಾಯ್ತು ಹೇಳಿ ಮನ್ಸ್ರನ್ನ ಅಸಲಗ್ಯ ಮಾಡ್ಬೇಡಿ ನೀವು ಹಾಂಗೆಲ್ಲಾ" ಎಂದು ಅವನದೇ ವಿಶಿಷ್ಟ ಶೈಲಿಯಲ್ಲಿ ನನ್ನನ್ನು ಅಣಕಿಸುವಂತೆ ಹೇಳಿದ. ನಾನು ಈಗ ಧಾಟಿ ಬದಲಾಯಿಸಿ "ಹೋಗ್ಲಿ ಬಂಗಾರಪ್ಪನವ್ರು ಈಗ ಯಾವ ಪಕ್ಷದಲ್ಲಿದಾರೆ ಹೇಳಾದ್ರೂ ಗೊತ್ತನಾ ನಿಂಗೆ?" ಎಂದು ಕೇಳಿದೆ. "ಅದ್ನೆಲ್ಲಾ ಕಟ್ಕಂಡು ನಮಗೆಂತಾ ಆಗ್ಬೇಕಾಗದೆ? ಅವ್ರು ಯಾವ ಪಕ್ಷದಲ್ಲಿದ್ರೆಂತಾ? ನಮ್ಮ ಮಗ ಹೇಳ್ತಾ ಯಾವ ಚಿತ್ರಕ್ಕೆ ವೋಟ್ ಹಾಕ್ಬೇಕು ಹೇಳಿ. ಅದಕ್ಕೆ ಹಾಕಿ ಬಂದ್ರಾಯ್ತು ಅಷ್ಟೇಯಾ" ಅಂದ. ಇನ್ನು ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ ಅನ್ನಿಸಿತು. ಆದರೂ ಇಷ್ಟಕ್ಕೆ ಬಿಟ್ಟ್ರೆ ಎಂತಾ ಚಂದ ಎನ್ನಿಸಿ "ವಯಸ್ಸಾದವ್ರೆಲ್ಲಾ ರಾಜ್ಯ ಚೊಲೋ ಆಳ್ತಾರೆ ಅಂದ್ರೆ ದೇವೇಗೌಡ್ರೇ ಮುಖ್ಯಮಂತ್ರಿ ಆಗ್ಬಹುದಲ್ಲಾ?" ಎಂಬ ಹೊಸಾ ತರ್ಕ ಮುಂದಿಟ್ಟೆ. ಈರನಿಗೆ ಯಾಕೋ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣ್ತು. "ನೀವು ಅವ್ರ ಸುದ್ದಿ ಮಾತ್ರ ಎತ್ಬೇಡಿ ನನ್ನತ್ರಾ" ಎಂದ. ಅಷ್ಟರಲ್ಲಿ ಅಮ್ಮ ಒಳಗಿಂದ ಬಾಳೆ ಎಲೆಯಲ್ಲಿ ಅವಲಕ್ಕಿ, ಒಂದು ಲೋಟ ಚಾ ಹಿಡಿದುಕೊಂಡು ಬಂದು ಕಟ್ಟೆ ಮೇಲಿಟ್ಟರು. ಈರ ಬಂದ ಸಿಟ್ಟನೆಲ್ಲ ಹಾಕಿಕೊಂಡಿದ್ದ ಎಲೆಯಡಿಕೆಯ ಮೇಲೆ ತೀರಿಸುವಂತೆ, ಅದನ್ನು ಪಕ್ಕಕ್ಕೇ ಜೋರಾಗಿ ಉಗುಳಿ, "ಈಗ ಆಸ್ರಿಗೆ ಎಲ್ಲಾ ಬ್ಯಾಡ್ರಾ ಅಮಾ, ಮನ್ಲೇ ಮಾಡ್ಕಂಡು ಬಂದೆ. ನೀವು ಒಂದೆರಡು ಅಡಿಕೆ ಇದ್ರೆ ಕೊಡಿ, ಕವಳ ಸಂಚಿ ಖಾಲಿಯಾಗೋಗದೆ" ಎಂದ. ಅಮ್ಮ ಗೊಣಗುತ್ತಾ "ನಿಂಗೆ ಅಡಿಕೆ ಕೊಟ್ಟು ಪೂರೈಸೈಕಾಗಲ್ಲಾ ನೋಡು. ದಿನಕ್ಕೆ ಸಾವ್ರ ಸಲ ಕವಳ ಹಾಕ್ತೆ. ನಂಗೆ ಬೇಕಾದಷ್ಟು ಕೆಲ್ಸ ಅದೆ. ಈಗ ಅಟ್ಟ ಹತ್ತಿ ಮತ್ತೆ ಅಡಕೆ ತರ್ಲಿಕ್ಕೆ ನನ್ನ ಕೈಯಲ್ಲಂತೂ ಆಗಲ್ಲ" ಎಂದು ಹೇಳಿ ವಾಪಸ್ ಹೋದರು. ಅಮ್ಮ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. ಅವನು ಹೊಸದಾಗಿ ಯಾವಾಗ ಎಲೆಯಡಿಕೆ ಹಾಕಿಕೊಂಡಿದ್ದನೋ, ನನಗಂತೂ ಗೊತ್ತೇ ಆಗಿರಲಿಲ್ಲ. ಈರನಿಗ್ಯಾಕೋ ಕೊಟ್ಟ ಅವಲಕ್ಕಿ, ಚಾ ಗಿಂತಲೂ ಅಡಿಕೆಯೇ ಮೇಲೆಯೇ ಜಾಸ್ತಿ ಒಲವಿದ್ದ ಹಾಗೇ ಕಂಡಿತು. ಅವನು ನನ್ನನ್ನು ಮತ್ತೆ ಅದರ ಅವಶ್ಯಕತೆಯ ಬಗ್ಗೆ ಕೊರೆಯುವುದಕ್ಕಿಂತ ಮುಂಚೆ ನಾನೇ ಎದ್ದು ಹೋಗಿ ಡಬ್ಬದಿಂದ ೪ ಅಡಿಕೆ ತಂದು ಅವನ ಕೈಗೆ ಹಾಕಿದೆ.&lt;/div&gt;&lt;div align="justify"&gt;&lt;br /&gt;ಈರ ಅವಲಕ್ಕಿ ಖಾಲಿ ಮಾಡುತ್ತಿರುವಂತೆಯೇ ನಾನು ಮತ್ತೆ ಕೇಳಿದೆ. "ಅಲ್ವಾ, ದೇವೇಗೌಡ್ರು ಮುಖ್ಯಮಂತ್ರಿ ಆಗೋದು ಬ್ಯಾಡ ಹೇಳಿ ಎಂತಕ್ಕೆ ಹೇಳಿ ಹೇಳಿಲ್ವಲ್ಲಾ ನೀನು?". "ಅದು... ಈ ಸರಾಯಿ ಮಾರೋದು ನಿಲ್ಲಿಸ್ದವ್ರು ದೇವೇಗೌಡ್ರೇ ಅಲ್ವ್ರಾ. ಅದಕ್ಕೆ ಬೇಡ ಅಂದೆ" ಅಂದ. ಅವನ ಯೋಚನೆಗಳಿಗೆ ಇಂಥ ಆಯಾಮಗಳೂ ಇರುತ್ತವೆ ಎನ್ನುವುದು ನನಗೆ ಗೊತ್ತಿರಲಿಲ್ಲ. "ಥೋ, ಮಾರಾಯ..ಸಾರಾಯಿ ಮಾರೋದ್ನಾ ನಿಲ್ಲಿಸ್ದವ್ರು ದೇವೇಗೌಡ್ರು ಅಲ್ಲ ಮಾರಾಯ. ಬಿಜೆಪಿಯವ್ರು" ಎಂದೆ. "ಯಾರಾದ್ರೆ ಎಂತದು? ಒಟ್ನಲ್ಲಿ ದೇವೇಗೌಡ್ರ ಮಗ ಮುಖ್ಯಮಂತ್ರಿ ಆಗಿದ್ದಾಗ ಅಲ್ದಾ ನಿಲ್ಸಿದ್ದು.ಒಟ್ನಲ್ಲಿ ನಮ್ಮ ಟೈಮ್ ಸರಿಯಿರ್ಲಿಲ್ಲ.ಅದಕ್ಕೆಯಾ ಬಂಗಾರಪ್ನೋರಿಗೆ ವೋಟ್ ಹಾಕದು ನಾನು" ಎಂದ. ಪ್ಯಾಕೆಟ್ ಸರಾಯಿ ಮಾರೋದು ನಿಲ್ಲಿಸಿದಕ್ಕೂ, ಈರನ ಟೈಮ್ ಸರಿಯಿಲ್ಲದಿರದಕ್ಕೂ ರಿಲೇಟ್ ಮಾಡಲು ನನಗಂತೂ ಬಹಳ ಕಷ್ಟವಾಗಲಿಲ್ಲ. ದಿನವೂ ಸಂಜೆ ೭ ಗಂಟೆ ಆಗುತ್ತಿದಂತೆಯೇ ಈರ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಉತ್ತರಾಭಿಮುಖವಾಗಿ ನೀಲೆಕಣಿ ಕಡೆಗೆ ಹೋಗುವುದು ಯಾವ ಗನಗಂಭೀರ ಉದ್ದೇಶಕ್ಕೆ ಎನ್ನುವುದು ಇಡೀ ಊರಿಗೆ ಗೊತ್ತು.ಇಂತಿಪ್ಪ ಈರನಿಗೆ ಧಿಡೀರ್ ಎಂದು ಪ್ಯಾಕೆಟ್ ಸಾರಾಯಿ ನಿಷೇಧ ಮಾಡಿಬಿಟ್ಟರೆ ಎಷ್ಟು ಕಷ್ಟವಾಗಿರಲಿಕ್ಕಿಲ್ಲ?. ಆ ಕಾರ್ಯಕ್ಕೆ ಮುಂದಾದ ಜನರನ್ನು ಅವನು ಜೀವಮಾನದಲ್ಲಿ ಕ್ಷಮಿಸುವುದು ಸುಳ್ಳು. ಈ ವಿಷಯ ಮತ್ತೆ ಮುಂದುವರಿಸಿದರೆ ಈರನ ಮೂಡ್ ಮತ್ತೆ ಯಾವ ಕಡೆ ತಿರುಗುತ್ತದೆಯೋ ಎಂದು ಹೆದರಿ ನಾನು ಮಾತುಕತೆಯನ್ನು ಅಲ್ಲಿಯೇ ನಿಲ್ಲಿಸಿಬಿಟ್ಟೆ.&lt;/div&gt;&lt;div align="justify"&gt;&lt;br /&gt;ಆದರೆ ಈರ ನಿಲ್ಲಿಸುವ ಲಕ್ಷಣವಿರಲಿಲ್ಲ." ನೀವು ಬರೀ ನನ್ನ ಕೇಳಿದ್ದೇ ಆಯ್ತು. ನೀವು ಯಾರಿಗೆ ವೋಟ್ ಹಾಕ್ತ್ರಿ? ಬಂಗಾರಪ್ಪನವ್ರಿಗೇ ಹಾಕಿ" ಎಂದ. ನಾನು ತಲೆ ಆಡಿಸಿದೆ. ಇನ್ನೇನೂ ಹೇಳಲು ಬಾಯಿತೆರೆದರೆ ನನ್ನ ಮಾತುಗಳೆಲ್ಲವೂ ನನಗೇ ತಿರುಗುಬಾಣವಾಗುವ ಸಾಧ್ಯತೆಯಿತ್ತು. "ಎಲೆಕ್ಷನ್ ದಿನಾ ನಿಮ್ಗೆ ರಜೆ ಅದ್ಯಾ? ವೋಟ್ ಹಾಕಕ್ಕೆ ಬೆಂಗ್ಳೂರಿಂದ ಬರದು ಹೌದಾ?" ಎಂದು ಕೇಳಿದ. "ಹ್ಮ್...ನೋಡಣಾ. ಬರ್ಬೇಕು ಅಂತದೆ. ಎಂತಾ ಆಗ್ತದೆ ಗೊತ್ತಿಲ್ಲ. ಈ ಎಲೆಕ್ಷನ್ ನಾಟಕಾ ಎಲ್ಲ ನೋಡಿದ್ರೆ ಯಾರಿಗೂ ವೋಟ್ ಹಾಕದೇ ಬ್ಯಾಡ ಅನ್ನಸ್ತದೆ ಮಾರಾಯಾ" ಎಂದು ತುಸು ಬೇಸರದ ಧ್ವನಿಯಲ್ಲೇ ಹೇಳಿದೆ. "ಹ್ವಾಯ್, ನೀವು ಹಿಂಗೆ ಹೇಳಿದ್ರೆ ಹೆಂಗ್ರಾ? ನಿಮ್ಮಂಥ ಹುಡುಗ್ರು, ಓದ್ದವ್ರು ವೋಟ್ ಹಾಕ್ಲೇ ಬೇಕ್ರಾ. ನಾವಾರೇ ಓದದವ್ರು, ಜಾಸ್ತಿ ತೆಳಿಯದಿಲ್ಲಾ. ನೀವು ಪ್ರಪಂಚ ಕಂಡವ್ರು. ನಿಮಗೆ ಗೊತ್ತಿರ್ತದೆ ಅಲ್ರಾ, ಯಾರಿಗೆ ವೋಟ್ ಹಾಕ್ಬೇಕು, ಯಾರಿಗೆ ಹಾಕ್ಬಾರ್ದು ಅಂತೆಲ್ಲಾ? ನೀವು ವಿದ್ಯಾವಂತರು ವೋಟ್ ಹಾಕ್ದೇ ಇದ್ದ್ರೆ ಎಂಥೆಂತದೋ ಜನ ಆರ್ಸಿ ಬರ್ತಾರೆ. ವೋಟ್ ಹಾಳು ಮಾಡ್ಬೇಡ್ರಿ ಮಾರಾಯ್ರಾ. ರಜೆ ಹಾಕಾದ್ರೂ ಬಂದು ವೋಟ್ ಮಾಡಿ ಹೋಗಿ" ಎಂದು ಕಳಕಳಿಯ ಧ್ವನಿಯಲ್ಲಿ ಹೇಳಿದ. ಈರನಿಗಿದ್ದ ಕಳಕಳಿ ಎಲ್ಲ ವಿದ್ಯಾವಂತರಲ್ಲೂ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ನನಗೆ ಅನ್ನಿಸಿತು. ಈರ ಮುಂದುವರಿಸಿ " ನಾನು ಭಟ್ಟರಿಗೂ ಹೇಳ್ದೆ. ಭಟ್ಟ್ರ ಮಗಳು ಕಾಲೇಜಿಗೆ ಹೋಗ್ಲಿಕ್ಕೆ ಹಣಕಿ ೩ ವರ್ಷ ಆಗ್ತಾ ಬಂತು. ಅವ್ರೂ ವೋಟ್ ಹಾಕ್ಬಹುದೇನಪಾ. ಎರಡು ತಿಂಗ್ಳ ಹಿಂದೆ ಹೀಪನಳ್ಳಿ ಶಾಲೆಲೇ ಅದೆಂತೋ ಹೆಸರು ಬರೆಸ್ಕಂಡು ಹೋದ್ರು. ನಮ್ಮ ಗೋವಿಂದಂಗೆ ಈ ವರ್ಷ ೧೮ ತುಂಬ್ತು. ಅವ್ನ ಕಳ್ಸಿಕೊಟ್ಟಿದ್ದೆ. ಈಗ ಮೊನ್ನೆ ಮೊನ್ನೆ ಅದೆಂತೋ ಮಶಿನ್ನಾಗೆ ಫೋಟೋ ತೆಗಸಿ ಒಂದು ಕಾರ್ಡ್ ಕೊಟ್ರಪ್ಪಾ. ಅವ್ನುವಾ ಈ ಸಲ ವೋಟ್ ಮಾಡ್ಬಹುದಂತೆ. ಆದ್ರೆ ಭಟ್ಟ್ರ ಮಗಳು ಹೋದಂಗೆ ಇಲ್ಲ. ಅಲ್ಲಾ ಆ ಹುಡಗಿಗಂತೂ ಬುದ್ಧಿ ಇಲ್ಲ.ಭಟ್ಟ್ರಾದ್ರೂ ಕಳ್ಸಿಕೊಡ್ಬೇಕಾ ಇಲ್ಲ್ವಾ? ನಾ ಹೇಳ್ದೆ. ಭಟ್ಟರೆಲ್ಲಿ ಕೇಳ್ತಾರೆ ನನ್ನ ಮಾತಾ? ಮುದಕಾ ವಟವಟಗುಡ್ತಾನೆ ಅಂತಾರೆ . ಹೋಗ್ಲಿ ಬಿಡಿ.ಎಂತಾ ಮಾಡಕ್ಕೆ ಆಗ್ತದೇ ಅಲ್ರಾ? ಎಂದು ತನ್ನ ಬೇಸರ ತೋಡಿಕೊಂಡ. ನಾನು ಸುಮ್ಮನೆ ಅವನನ್ನು ಸಮ್ಮತಿಸಿದೆ.&lt;/div&gt;&lt;div align="justify"&gt;&lt;br /&gt;ಇನ್ನೂ ಒಂದಷ್ಟು ಹೊತ್ತು ಮಾತಾಡುತ್ತಿದ್ದನೇನೋ. ಆದರೆ ನಾನು ಸುಮ್ಮನಿದ್ದದನ್ನು ನೋಡಿ "ನಿಮ್ಮ ಹತ್ರ ಮಾತಾಡ್ತಾ ಇದ್ರೆ ಹೀಂಗೆ ಮಧ್ಯಾಹ್ನ ಆಗೋಗ್ತದೆ. ಭಟ್ಟ್ರು ಆಮೇಲೆ ಕೋಲು ಹಿಡ್ಕಂಡು ಕಾಯ್ತಿರ್ತಾರೆ" ಅಂದವನೇ "ಹೆಗಡೇರಿಗೆ, ನೀವೇ ಹೇಳ್ಬಿಡಿ. ಸಂಜೆ ಬಂದು ದುಡ್ಡು ಇಸ್ಕಂಡು ಹೋಗ್ತೆ. ಬರ್ಲಾ? ಬರ್ತೆ ಅಮಾ.."ಎಂದವನೇ ಎದ್ದು ಹೋಗೇ ಬಿಟ್ಟ. ನಾನು ಸ್ವಲ್ಪ ಹೊತ್ತು ಅವನ ಹೋದ ದಾರಿಯನ್ನೇ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಮಾತ್ರ, ಯಾವುದೇ ಕಾರಣಕ್ಕೆ ತಪ್ಪಿಸದೇ ವೋಟ್ ಮಾತ್ರ ಹಾಕಲೇ ಬೇಕೆಂದು ಧೃಢವಾಗಿ ನಿರ್ಧರಿಸಿಕೊಂಡೆ. ನೀವೂ ಅಷ್ಟೇ. ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಆಯ್ತಾ? ಗೊತ್ತಾದ್ರೆ ಈರ ಬಹಳ ಬೇಜಾರು ಮಾಡ್ಕೋತಾನೆ!&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-7269084691478713168?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/7269084691478713168/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=7269084691478713168' title='9 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/7269084691478713168'/><link rel='self' type='application/atom+xml' href='http://www.blogger.com/feeds/6035880729059442700/posts/default/7269084691478713168'/><link rel='alternate' type='text/html' href='http://madhu-vana.blogspot.com/2008/04/blog-post.html' title='ಈರನ ತರ್ಕವೂ... ಎಲೆಕ್ಸನ್ನೂ.....'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>9</thr:total></entry><entry><id>tag:blogger.com,1999:blog-6035880729059442700.post-7321652195665801412</id><published>2008-03-20T08:44:00.000-07:00</published><updated>2008-03-20T09:02:55.383-07:00</updated><title type='text'>ಯಾವ ಮೋಹನ ಮುರಳಿ ಕರೆಯಿತೋ</title><content type='html'>&lt;p align="justify"&gt;ಕೆಲವೊಮ್ಮೆ ನನಗೆ ಹಾಗಾಗುತ್ತೆ. ಯಾವುದೋ ಹಾಡು ತುಂಬಾ ಹಿಡಿಸಿ, ಬಹಳಷ್ಟು ದಿನಗಳ ಕಾಲ ಕಾಡುತ್ತಾ ಇರತ್ತೆ. ಇಡೀ ದಿನ ಅದರದ್ದೇ ಗುಂಗು. ಈಗೊಂದು ೧೫ ದಿನಗಳಿಂದ ಈ ಹಾಡು ಕಾಡುತ್ತಾ ಇದೆ.&lt;/p&gt;&lt;p align="justify"&gt;&lt;object width="413" height="308" class="BLOG_video_class" id="BLOG_video-cd425502bdb8dd19" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v17.nonxt8.googlevideo.com/videoplayback?id%3Dcd425502bdb8dd19%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330767%26sparams%3Did,itag,ip,ipbits,expire%26signature%3D1ED3E1A1B7FC34328C105844C9BBA01C3E0CF9E.5C4C5816D268829F2864E289478325A91276C210%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3Dcd425502bdb8dd19%26offsetms%3D5000%26itag%3Dw160%26sigh%3DLU9k2PocJ-vVEm2TG6eV10MOqJ0&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="413" height="308" bgcolor="#FFFFFF"flashvars="flvurl=http://v17.nonxt8.googlevideo.com/videoplayback?id%3Dcd425502bdb8dd19%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330767%26sparams%3Did,itag,ip,ipbits,expire%26signature%3D1ED3E1A1B7FC34328C105844C9BBA01C3E0CF9E.5C4C5816D268829F2864E289478325A91276C210%26key%3Dck1&amp;iurl=http://video.google.com/ThumbnailServer2?app%3Dblogger%26contentid%3Dcd425502bdb8dd19%26offsetms%3D5000%26itag%3Dw160%26sigh%3DLU9k2PocJ-vVEm2TG6eV10MOqJ0&amp;autoplay=0&amp;ps=blogger"allowFullScreen="true" /&gt;&lt;/object&gt;&lt;/p&gt;&lt;p align="justify"&gt;ಇದು ತೆಲುಗಿನ "ಸಿರಿವೆನ್ನೆಲ" ಚಿತ್ರದ್ದು. ಈ ಹಾಡಿನ ಸಂಪೂರ್ಣ ಸಾಹಿತ್ಯ ಓಂಕಾರದ ಮೇಲೆ ರಚಿತವಾಗಿದೆ. ನನ್ನ ತೆಲುಗು ರೂಂಮೇಟನ್ನು ಕಾಡಿ ಬೇಡಿ, ಸಾಹಿತ್ಯದ ಅರ್ಥ ತಿಳಿದುಕೊಂಡೆ. ಓಂಕಾರವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾನೆ ಸಾಹಿತಿ!. "ಸರಸ ಸ್ವರ ಸುರ ಝರೀ ಗಮನಂ ಸಾಮವೇದ ಸಾರಮಿದಿ" ಎಂಬಂತ ಸುಂದರ ಸಾಲುಗಳನ್ನು ಪೋಣಿಸಿ ರಚಿಸಿದ್ದಾರೆ ಸಾಹಿತಿ ಶ್ರೀ ಸೀತಾರಾಮ ಶಾಸ್ತ್ರಿ ಅವರು. ಅದಕ್ಕೆ ಒಳ್ಳೆಯ ಸಂಗೀತ ಬೇರೆ.ಈ ಹಾಡಿನಲ್ಲಿ ಕೊಳಲಿನ ಬಳಕೆ, ಹಾಡಿನ ಸೌಂದರ್ಯಕ್ಕೆ ಮೆರಗು ತಂದಿದೆ ಅಂದು ನನಗೆ ಅನ್ನಿಸುತ್ತೆ. ಈ ಹಾಡಿಗೆ ಪ್ರಸಿದ್ಧ ಕಲಾವಿದ ಹರಿಪ್ರಸಾದ್ ಚೌರಾಸಿಯಾ ಅವರು ಕೊಳಲಿನ ಹಿನ್ನೆಲೆ ಒದಗಿಸಿದ್ದಾರೆ. ಸಂಗೀತ ನಿರ್ದೇಶನ ಕೆ.ವಿ.ಮಹಾದೇವನ್, ಹಾಡಿದವರು ಎಸ್.ಪಿ.ಬಿ ಮತ್ತು ಪಿ.ಸುಶೀಲಾ. ಹ್ಮಾ.. ಮರೆತಿದ್ದೆ. ಈ ಚಿತ್ರದಲ್ಲಿ ನಾಯಕ ಕುರುಡ, ಆದರೆ ಚೆನ್ನಾಗಿ ಕೊಳಲು ಬಾರಿಸುತ್ತಾನೆ. ನಾಯಕಿ ಮೂಕಿ. ಮೂಕಿಯ ಪಾತ್ರದಲ್ಲಿ ಸುಹಾಸಿನಿಯವರು ಮನೋಹಕ ಅಭಿನಯ ನೀಡಿದ್ದಾರೆ.&lt;/p&gt;&lt;p align="justify"&gt;ಒಳ್ಳೆಯ ಸಾಹಿತ್ಯ, ಸಂಗೀತ, ಹಿನ್ನೆಲೆ ಗಾಯನ, ಹಿನ್ನೆಲೆಯಲ್ಲಿ ತೇಲಿ ಬರುತ್ತಿರುವ ಕೊಳಲಿನ ಸದ್ದು, ಇವೆಲ್ಲಾ ಒಟ್ಟಿಗೆ ಸೇರಿದರೆ ಗಂಧರ್ವಲೋಕ ಸೃಷ್ಟಿಯಾಗದೇ ಇನ್ನೇನಾದೀತು?&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-7321652195665801412?l=madhu-vana.blogspot.com' alt='' /&gt;&lt;/div&gt;</content><link rel='enclosure' type='video/mp4' href='http://www.blogger.com/video-play.mp4?contentId=cd425502bdb8dd19&amp;type=video%2Fmp4' length='0'/><link rel='replies' type='application/atom+xml' href='http://madhu-vana.blogspot.com/feeds/7321652195665801412/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=7321652195665801412' title='5 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/7321652195665801412'/><link rel='self' type='application/atom+xml' href='http://www.blogger.com/feeds/6035880729059442700/posts/default/7321652195665801412'/><link rel='alternate' type='text/html' href='http://madhu-vana.blogspot.com/2008/03/blog-post_20.html' title='ಯಾವ ಮೋಹನ ಮುರಳಿ ಕರೆಯಿತೋ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>5</thr:total></entry><entry><id>tag:blogger.com,1999:blog-6035880729059442700.post-6648496274966386153</id><published>2008-03-17T17:59:00.000-07:00</published><updated>2008-03-19T13:45:21.361-07:00</updated><title type='text'>ಮೂಕ ಹಕ್ಕಿಯು ಹಾಡುತಿದೆ..</title><content type='html'>&lt;div align="justify"&gt;&lt;/div&gt;&lt;p align="justify"&gt;ವಾರಂತ್ಯದಲ್ಲೂ ನಗರದ ಜಂಜಡದಿಂದ ಅಷ್ಟು ದೂರ ಬಂದು, ಈ ಹಸಿರು ಹಿನ್ನೆಲೆಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನದಿಯ ಹರವನ್ನು ದಿಟ್ಟಿಸುತ್ತಾ ಕಾಲ ಕಳೆಯುವುದು ಕೇವಲ ಅವಳ ನೆನಪನ್ನು ಮರೆಯಲೋಸ್ಕರವಾ?ಅಥವಾ ನನ್ನನ್ನೇ ನಾನು ಮರೆಯಲಾ? ಗೊತ್ತಾಗುತ್ತಿಲ್ಲ! . ಆದರೆ ಒಂದಂತೂ ನಿಜ. ಹಸಿರು ಸೆರಗು ಹೊದ್ದಿರುವ ವನದೇವತೆಯ ಮಡಿಲಲ್ಲಿ ಮೈಚಾಚಿ,ದಿವ್ಯ ಏಕಾಂತದಲ್ಲಿ ಎಲ್ಲವನ್ನೂ ಮರೆತು ಹೋಗುವುದು ಎಷ್ಟು ಆಪ್ಯಾಯಮಾನ ಗೊತ್ತಾ?&lt;/p&gt;&lt;p align="justify"&gt;ಅವಳೂ ನನ್ನ ಪಕ್ಕದಲ್ಲೇ ಕುಳಿತು ಮೌನದೊಳಕ್ಕೇ ಪಿಸುಗುಟ್ಟಿದ್ದರೆ ಇನ್ನೂ ಹಿತವಾಗಿರುತ್ತಿತ್ತೆಂದು ಒಮ್ಮೊಮ್ಮೆ ಅನಿಸುವುದಿದೆ.ಆದರೆ ಆಗ ಏಕಾಂತದ ರಸಘಳಿಗೆಯನ್ನು ಸವಿಯುವ ಭಾಗ್ಯ ತಪ್ಪಿಹೋಗುತ್ತಿತ್ತೇನೋ. ಏಕಾಂತದ ರಂಗಸ್ಥಳದಲ್ಲಿ ಕೇವಲ ನನ್ನೆದೆಯ ಪಿಸುಮಾತುಗಳ ಧ್ವನಿಗಳಿಗೆ ಜಾಗವಿದೆ.ಮಾತು ಮೂಕವಾಗಿ, ಮೌನ ಧ್ವನಿಯಾಗಿ, ಒಂಟಿ ಹಕ್ಕಿ ಗರಿಗೆದರಿ ಅಲ್ಲಿ ಕುಣಿಯಬೇಕು. ನನ್ನ ದುಃಖ ದುಮ್ಮಾನಗಳು ಸದ್ದಿಲ್ಲದೇ ಬಂದು ರಂಗಸ್ಥಳದಲ್ಲಿ ಗಿರಿಗಿಟ್ಲಿಯಾಗಿ ಕುಣಿದು ಸುಸ್ತಾಗಿ, ನೇಪಥ್ಯಕ್ಕೆ ಸರಿದು ಅನಿರ್ವಚನೀಯವಾದ ಭಾವವೊಂದಕ್ಕೆ ಎಡೆ ಮಾಡಿಕೊಡಬೇಕು. ಆ ಸುಖಕ್ಕಾಗಿಯೇ ಅಲ್ಲವೇ ನಾನು, ಕುಣಿಕೆ ಬಿಚ್ಚಿದೊಡನೆಯೇ ಅಮ್ಮನ ಬಳಿ ಓಡಿ ಬರುವ ಪುಟ್ಟ ಕರುವಿನ ತರ ಪದೇ ಪದೇ ಇಲ್ಲಿಗೆ ಓಡಿ ಬರುತ್ತಿರುವುದು?&lt;/p&gt;&lt;p align="justify"&gt;ಅವಳು ಬಿಟ್ಟು ಹೋದಾಗ ನನ್ನನಾವರಿಸಿಕೊಂಡ ಭಾವ ಎಂತಹುದೆಂಬುದು ಹೇಳುವುದು ಕಷ್ಟ. ಅನಾಥ ಭಾವ ರಪ್ಪನೇ ಮುಖಕ್ಕೆ ರಾಚಿತ್ತು. ದುಃಖವೇ ಹಾಗಲ್ಲವೇ ? ಸದಾ ಸುಖದ ನೆರಳಿನಲ್ಲೇ ಇದ್ದು, ಸಮಯಸಾಧಕನಂತೆ ಹೊಂಚು ಹಾಕಿ ಇದ್ದಕ್ಕಿದ್ದ ಹಾಗೆ ತನ್ನ ಕಬಂಧ ಬಾಹುಗಳನ್ನು ಚಾಚಿ ಆಪೋಶನ ತೆಗೆದುಕೊಂಡುಬಿಡುತ್ತದೆ.ಅದಕ್ಕೆ ನಿಧಾನವೆಂಬುದೇ ಗೊತ್ತಿಲ್ಲ. ಅಮಾವಾಸ್ಯೆಯ ಕತ್ತಲಿನಂತೆ ಗಾಢವಾಗಿ ಕವಿದು ಒಂದೇ ಕ್ಷಣದಲ್ಲಿ ಎಲ್ಲಾವನ್ನೂ ಆವರಿಸಿಕೊಂಡು ಬಿಡುತ್ತದೆ. ನನಗೂ ಹಾಗೇ ಆಗಿತ್ತು. ದೀಪದ ದಾರಿಯಲ್ಲಿ ನಡೆಯುತ್ತಿದ್ದವನಿಗೆ ಇದ್ದಕಿದ್ದ ಹಾಗೆ ಕಣ್ಣುಗಳು ಕುರುಡಾದ ಹಾಗೆ. ಹಲವು ದಿನಗಳಲ್ಲೇ ನಾನು ಒಂಟಿತನದ ದಾಸನಾಗಿಬಿಟ್ಟಿದ್ದೆ. ಆದರೆ ಒಂಟಿತನ ದುಃಖದಂತಲ್ಲ. ಅದು ನಿಧಾನವಾಗಿ ನನ್ನನ್ನು ತನ್ನ ಪರಿಧಿಯೊಳಕ್ಕೆ ಸೆಳೆದುಕೊಂಡಿತು. ಮೊದ ಮೊದಲು ಒಂಟಿತನದ ಮೌನ, ಕತ್ತಲು ಎಲ್ಲವೂ ಆಪ್ಯಾಯಮಾನವೆನ್ನಿಸುತ್ತಿತ್ತು. ಆದರೆ ದಿನ ಕಳೆದಂತೆ ಗೊತ್ತಾಗುತ್ತಾ ಹೋಯಿತು. ಬೆಳಕು ಬೇಕೆಂದರೆ ಒಂಟಿತನದ ಕತ್ತಲ ಮನೆಗೆ ಕಿಟಕಿಗಳೇ ಇಲ್ಲ!.&lt;/p&gt;&lt;p align="justify"&gt;ಒಂಟಿತನದ ಲೋಕದಲ್ಲಿ ಬಾಳು ಬಹಳ ದುರ್ಭರವಾಗಿತ್ತು. ಕತ್ತಲು ದಿಗಿಲುಕ್ಕಿಸುತ್ತಿತ್ತು. ಅವ್ಯಕ್ತ ಮೌನ ಮೂಗಿಗೆ ಅಡರಿ ಉಸಿರುಗಟ್ಟಿಸುವ ವಾತಾವರಣ. ಎಲ್ಲೋ ಗೋಚರಿಸಿಬಹುದಾದ ಪುಟ್ಟ ಬೆಳಕಿನ ಕಿರಣವನ್ನು ಹುಡುಕಿ,ದುಃಖದ ವ್ಯಾಪ್ತಿಯಿಂದ ಹೊರಬರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಲವು ದಿನ ಆ ಕತ್ತಲಲ್ಲೇ ಅಂಬೆಗಾಲಿಟ್ಟು ತೆವಳಿ ಹುಡುಕಿದ ಮೇಲೆಯೇ ಕಂಡಿದ್ದು ನನಗೆ ಈ ಏಕಾಂತದ ಪುಟ್ಟ ಬೆಳಕಿಂಡಿ. ಅವತ್ತು ಎಷ್ಟು ಸಂತೋಷವಾಗಿತ್ತು ಗೊತ್ತಾ?ಮೊದಲ ಬಾರಿ ನನ್ನೆದೆಯ ಹಕ್ಕಿ ರೆಕ್ಕೆ ಬಿಚ್ಚಿ ಗರಿಗೆದರಿ ಹಾಡಿತ್ತು.&lt;/p&gt;&lt;p align="justify"&gt;ಒಂಟಿತನಕ್ಕೂ ಏಕಾಂತಕ್ಕೂ ಇರುವ ವ್ಯತ್ಯಾಸ ದಿನಕಳೆದಂತೆ ಅನುಭವಕ್ಕೆ ಬರತೊಡಗಿತು. ಏಕಾಂತದಲ್ಲಿ ಮನಸ್ಸು ಮತ್ತೆ ಹಗುರ. ಏಕಾಂತದಲ್ಲಿ ನಾನು ಕೇವಲ ನಾನಾಗುತ್ತೇನೆ. ನನ್ನೊಳಗಿನ ಮೌನ ನನ್ನೊಡನೇ ಮಾತನಾಡಲು ಶುರು ಮಾಡಿಬಿಡುತ್ತದೆ!. ನೆನಪುಗಳು ಅಲ್ಲಿ ಕಾಡುವುದಿಲ್ಲ, ಬದಲು ದುಃಖಗಳಿಗೆ ಸಾಂತ್ವನ ಕೊಡುವ ಸಂಜೀವಿನಿಗಳಾಗುತ್ತವೆ. ನಮ್ಮ ತಪ್ಪನ್ನು ಎತ್ತಿ ತೋರಿಸಿ ತಿಳಿ ಹೇಳುವ ವೇದಾಂತಿಗಳಾಗುತ್ತವೆ. ಎಂಥ ಸೋಜಿಗವಲ್ಲವೇ?&lt;/p&gt;&lt;p align="justify"&gt;ಹಸಿರು ಮುಂಚಿನಿಂದಲೂ ನನ್ನ ಇಷ್ಟವಾದ ಬಣ್ಣ. ಏಕಾಂತವನ್ನು ಅನುಭವಿಸಲು ಹಸಿರು ಹಿನ್ನೆಲೆ ಇದ್ದರೆಷ್ಟು ಚೆನ್ನ ಎಂದು ಯೋಚನೆ ಮನಸ್ಸಿನಲ್ಲಿ ಸುಳಿದ ತಕ್ಷಣವೇ ಇಲ್ಲಿಗೆ ಹೊರಟು ಬಂದಿದ್ದೆ. ಕಾಡಿನ ದುರ್ಗಮ ದಾರಿಗಳಲ್ಲಿ ಕಳೆದುಹೋಗಿ, ದಾರಿ ಮಧ್ಯೆ ಝುಳು ಝುಳು ಹರಿಯುವ ನೀರಿಗೆ ತಲೆಯೊಡ್ಡಿ, ಅಲ್ಲಲ್ಲಿ ಮರಗಳಲ್ಲಿ ಅಡಗಿ ಕುಳಿತು ಚೀರುತ್ತಿರುವ ಜೀರುಂಡೆಗಳ ಹಾಡಿಗೆ ತಲೆದೂಗುತ್ತಾ, ನಮ್ಮನ್ನು ನಾವೇ ಮರೆಯುವುದಿದೆಯಲ್ಲಾ ಅದರ ರೋಮಾಂಚನವನ್ನು ಶಬ್ಧಗಳಲ್ಲಿ ಹಿಡಿಯಲು ಆಗದು. ಏನಿದ್ದರೂ ಅನುಭವಿಸಿಯೇ ತೀರಬೇಕು. "ಸದ್ದಿರದ ಪಸರುಡೆಯ ಮಲೆನಾಡ ಬನಗಳಲ್ಲಿ, ಹರಿವ ತೊರೆಯಂಚಿನಲಿ ಗುಡಿಸಲೊಂದಿರಲಿ"ಎಂದು ಕುವೆಂಪು ಆಸೆಪಟ್ಟಿದ್ದು ಇದಕ್ಕಾಗಿಯೇ ಅಲ್ಲವೇ? ಸೂರ್ಯನನ್ನೇ ಚುಂಬಿಸಲು ನಿಂತಿರುವಂತೆ ಮುಗಿಲೆತ್ತರಕ್ಕೆ ನಿಂತಿರುವ ಗಿರಿಶಿಖರಗಳನ್ನು ನೋಡುತ್ತಾ ನನ್ನೆಲ್ಲಾ ಅಹಂಕಾರ ಬೆಳಗ್ಗಿನ ಇಬ್ಬನಿಯಂತೆ ಕ್ಷಣಾರ್ಧದಲ್ಲಿ ಮರೆಮಾಯ. ಎದುರಾದ ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ ಮುನ್ನುಗಿ ಹರಿಯುವ ನದಿ ನನಗೆ ಸ್ಪೂರ್ತಿ. ಪ್ರಕೃತಿಯೆದುರು ಮಾನವ ಎಷ್ಟೊಂದು ಕುಬ್ಜ ಅಲ್ಲವೇ?&lt;/p&gt;&lt;p align="justify"&gt;ಮತ್ತೆ ಹಿಂದಿರುಗಿ ಹೋಗಲು ಇಷ್ಟವಿಲ್ಲ.ಆದರೇನು ಮಾಡಲಿ ?ಹೋಗುವುದು ಅನಿವಾರ್ಯ. ಹಿಂದೆ ಋಷಿಮುನಿಗಳು ಇಂಥ ಕಾಡುಗಳ ಮಧ್ಯೆ ಆಶ್ರಮ ಮಾಡಿಕೊಂಡು ದೇವರನ್ನು ಹುಡುಕುತ್ತಿದ್ದರಂತೆ. ಎಂಥಾ ಪುಣ್ಯವಂತರಲ್ಲವೇ ಅವರು? ಲೌಕಿಕದ ಅನುಭೂತಿಯಿಂದ ವಿಮುಕ್ತನಾಗಿ ಸರ್ವನಿಯಾಮಕನನ್ನು ಹುಡುಕಲು ಇದಕ್ಕಿಂತ ಒಳ್ಳೆಯ ಜಾಗ ಬೇರೇನಿದ್ದೀತು? ದೇವರನ್ನೇ ಹುಡುಕಬೇಕೆಂಬ ಹಠ ನನಗಿಲ್ಲ. ಆದರೆ ಇಲ್ಲಿ ಕಳೆದ ಹಲವು ಘಳಿಗೆಗಳನ್ನು ಮನತೃಪ್ತಿಯಾಗಿ ಸವಿದ ಸಾರ್ಥಕ್ಯಭಾವ ನನ್ನಲ್ಲಿದೆ.ಮತ್ತೆ ಬರುತ್ತೇನೆ. ದಣಿದ ಮನಕ್ಕೆ ಉತ್ಸಾಹದ ತಪಃಶಕ್ತಿಯನ್ನು ತುಂಬಲು!. &lt;/p&gt;&lt;p align="justify"&gt;ಒಂಟಿತನದ ಮನೆಯಲ್ಲಿ ಬಂದಿಯಾಗಿರುವ ಎಲ್ಲರಿಗೂ ಯಾರಾದರೂ ಬಂದು ದಿವ್ಯ ಏಕಾಂತದ ಸನ್ನಿಧಿಯನ್ನು ತೋರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆದರೆ ಅದೂ ಕಷ್ಟವಲ್ಲವೇ ? ಒಳಗಿದ್ದವರನ್ನು ಕೂಗೋಣವೆಂದರೆ ಒಂಟಿತನದ ಮನೆಗೆ ಕಿಟಕಿಗಳೇ ಇಲ್ಲವಲ್ಲ? ಏಕಾಂತದ ಸನ್ನಿಧಿಯನ್ನು ಒಳಗಿದ್ದವರೇ ಹೇಗೋ ಹುಡುಕಿಕೊಳ್ಳಬೇಕು!&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-6648496274966386153?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/6648496274966386153/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=6648496274966386153' title='3 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/6648496274966386153'/><link rel='self' type='application/atom+xml' href='http://www.blogger.com/feeds/6035880729059442700/posts/default/6648496274966386153'/><link rel='alternate' type='text/html' href='http://madhu-vana.blogspot.com/2008/03/blog-post_17.html' title='ಮೂಕ ಹಕ್ಕಿಯು ಹಾಡುತಿದೆ..'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>3</thr:total></entry><entry><id>tag:blogger.com,1999:blog-6035880729059442700.post-5604996312027873284</id><published>2008-03-09T19:17:00.000-07:00</published><updated>2008-03-09T19:25:09.154-07:00</updated><title type='text'>ಕಾರ್ ಕಾರ್ ಎಲ್ನೋಡಿ ಕಾರ್</title><content type='html'>&lt;div align="justify"&gt;ಗ್ಯಾಸ್ ಸ್ಟೇಶನ್ನಿನ ಎದುರುಗಿದ್ದ ಸಿಗ್ನಲ್ಲಿನ ಮುಂದೆ ಕಾರು ನಿಲ್ಲಿಸಿಕೊಂಡಾಗ, ಮಾಧವನಿಗೆ ತಾನು ತಪ್ಪು ಲೇನಿನಲ್ಲಿ ನಿಂತಿರುವುದು ಅರಿವಾಯಿತು. ಹಿಂದೆ ಮುಂದೆ ಸಾಕಷ್ಟು ವಾಹನಗಳು ಇದ್ದುದರಿಂದ, ಸಿಗ್ನಲ್ಲು ಬಿಟ್ಟ ತಕ್ಷಣ, ಎಡಕ್ಕೆ ತಿರುಗುವುದು ಕಷ್ಟವಿತ್ತು. ಕಾರು ತಪ್ಪು ಲೇನಿನಲ್ಲಿ ನಿಂತಿದ್ದು ಅರಿವಾದ ತಕ್ಷಣ, ಅವನ ಪಕ್ಕ ಕುಳಿತಿದ್ದ "ಟೆನ್ಶನ್ ಪಾರ್ಟಿ" ಉಮಾಪತಿ ಯಾವುದೋ ದೊಡ್ಡ ತಪ್ಪು ಮಾಡಿದವರಂತೆ ಕೂಗಿಕೊಳ್ಳಲು ಶುರು ಮಾಡಿದ. ಅವನನ್ನು ಸಮಾಧಾನ ಪಡಿಸಿ, ಸಿಗ್ನಲ್ಲು ಬಿಟ್ಟ ಕೂಡಲೇ ಮಧ್ಯದ ಲೇನಿನಲ್ಲೇ ಇನ್ನೂ ಮುಂದೆ ಹೋಗಿ, ಒಂದು ಯು ಟರ್ನ ಹೊಡೆದು, ಬಲಕ್ಕೆ ತಿರುಗಿ ವಾಲ್ ಮಾರ್ಟಿನಲ್ಲಿ ಮಾಧವ ಕಾರು ಪಾರ್ಕ್ ಮಾಡಿದಾಗ, ಸೂರ್ಯ ದಿಗಂತದಲ್ಲಿ ಮರೆಯಾಗಲು ಹವಣಿಸುತ್ತಿದ್ದ. ಅಲ್ಲಲ್ಲಿ ವಿರಳ ಸಂಖ್ಯೆಯಲ್ಲಿ ನಿಂತಿದ್ದ ಕಾರುಗಳು, ತಮ್ಮನ್ನು ಅನಾಥವಾಗಿ ಬಿಟ್ಟು ಹೋದ ಮಾಲೀಕರಿಗಾಗಿ ಬರಕಾಯುತ್ತಿದ್ದವು.&lt;/div&gt;&lt;div align="justify"&gt;&lt;br /&gt;ಆಫೀಸು ಮುಗಿಸಿ ಮನೆಗೆ ಬಂದವರಿಗೆ,ಮನೆಯಲ್ಲಿ ಮೊಸರು ಇಲ್ಲದಿರುವುದು ಅನುಭವಕ್ಕೆ ಬಂದ ಇಬ್ಬರೂ ಕೂಡಲೇ ಕಾರು ಹತ್ತಿ ಮನೆಗೆ ಹತ್ತಿರವೇ ಇರುವ ವಾಲ್ ಮಾರ್ಟಿಗೆ ಹೊರಟು ಬಂದಿದ್ದರು. ಮಾಧವ ತಾನು ಒಬ್ಬನೇ ಹೋಗಿ ಬರುತ್ತೇನೆಂದು ಹೇಳಿದರೂ, ಮನೆಯಲ್ಲಿ ಕುಳಿತು ಸಮಯ ಕಳೆಯುವುದು ಹೇಗೆ ಎಂದು ಅರ್ಥವಾಗದೇ, ಅವನ ರೂಮ್ ಮೇಟ್ ಉಮಾಪತಿಯೂ ಹೊರಟು ಬಂದಿದ್ದ. ಈಗೊಂದು ೪ ತಿಂಗಳ ಹಿಂದೆ ಇಬ್ಬರು ಕಂಪನಿ ಕೆಲಸದ ಮೇಲೆ ಅಮೇರಿಕಕ್ಕೆ ಬಂದವರು ಸಿಂಗಲ್ ಬೆಡ್ ರೂಮಿನ ಅಪಾರ್ಟಮೆಂಟೊಂದರಲ್ಲಿ ಉಳಿದುಕೊಂಡಿದ್ದರು. ಮಾಧವ ಸ್ವಭಾವದಲ್ಲಿ ಒರಟು. ಹೆವೀ ಬಿಲ್ಟ್ ಪರ್ಸನಾಲಿಟಿ, ಹುಂಬ ಧೈರ್ಯ ಜಾಸ್ತಿ. ಎಂಥಾ ತೊಂದರೆಯಲ್ಲು ಸಿಕ್ಕಿಕೊಂಡರೂ, ಸಲೀಸಾಗಿ ಹೊರಬರಬಲ್ಲ ಚಾಕಚಕ್ಯತೆ ಅವನಲ್ಲಿತ್ತು. ಉಮಾಪತಿಯದು ಅವನ ತದ್ವಿರುದ್ಧ ಸ್ವಭಾವ. ಸ್ವಲ್ಪ ಪುಕ್ಕಲ ಸ್ವಭಾವ, ತೆಳ್ಳನೆಯ ಶರೀರ. ಸಣ್ಣ ಸಣ್ಣ ವಿಷಯಕ್ಕೂ ಗಾಬರಿ ಮಾಡಿಕೊಂಡು ಸ್ನೇಹಿತರ ಗ್ಯಾಂಗಿನೆಲ್ಲೆಲ್ಲಾ "ಟೆನ್ಶನ್ ಪಾರ್ಟಿ ಉಮಾಪತಿ" ಎಂದೇ ಕರೆಸಿಕೊಳ್ಳುತ್ತಿದ್ದ. ಆದರೂ ಅವರಿಬ್ಬರಾ ಜೋಡಿ ಮಾತ್ರ ಅಪೂರ್ವವಾಗಿತ್ತು. ಮಾಧವನ ಹುಂಬ ಧೈರ್ಯಕ್ಕೆ ಕಡಿವಾಣ ಹಾಕಲು ಮತ್ತು ಉಮಾಪತಿಯ ಪುಕ್ಕಲು ಸ್ವಭಾವಕ್ಕೆ ಧೈರ್ಯ ನೀಡಲು ಒಬ್ಬರಿಗೊಬ್ಬರು ಅನಿವಾರ್ಯವೆಂದು ಅವರನ್ನು ನೋಡಿದವರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು.&lt;/div&gt;&lt;div align="justify"&gt; &lt;/div&gt;&lt;div align="justify"&gt;&lt;/div&gt;&lt;div align="justify"&gt;ವಾಲ್ ಮಾರ್ಟಿನಲ್ಲಿ ತಮ್ಮ ಕೆಲಸ ಮುಗಿಸಿ ಹೊರಗೆ ಬಂದಾಗ, ಹೇಗೂ ಇಲ್ಲಿತನಕ ಬಂದಾಗಿದೆ, ಹಾಗೇ ಇಂಡಿಯನ್ ಸ್ಟೋರ್ಸಿಗೂ ಹೋಗಿ ಬಂದರಾಯಿತು ಎಂದು ಉಮಾಪತಿ ಸೂಚಿಸಿದಾಗ, ಮಾಧವ ಮರುಮಾತಿಲ್ಲದೇ ಒಪ್ಪಿಕೊಂಡುಬಿಟ್ಟ. ೪ ತಿಂಗಳಿಂದ ಬರೀ ಬ್ರೆಡ್, ಜ್ಯಾಮ್, ಸೀರಿಯಲ್ಸ್ ಇವನ್ನೇ ತಿಂದು ಇಬ್ಬರಿಗೂ ನಾಲಿಗೆ ಎಕ್ಕುಟ್ಟಿ ಹೋಗಿತ್ತು. ಇಂಡಿಯನ್ ಸ್ಟೋರ್ಸಿನಲ್ಲಿ ಅಪರೂಪಕ್ಕೆ ಸಿಗುತ್ತಿದ್ದ ದೋಸೆ ಹಿಟ್ಟಿನ ಆಸೆಗೆ ಅವರು ವಾರಕ್ಕೆರಡು ಸಲ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ. ವಾಲ್ ಮಾರ್ಟಿನಿಂದ ಹೊರಗೆ ಬರುತ್ತಿದ್ದಂತೆಯೇ, ಎಡಕ್ಕೆ ತಿರುಗಿ, ಸರ್ವೀಸ್ ರೋಡನ್ನು ಬಳಸಿಕೊಂಡು , ನಿಧಾನವಾಗಿ ಕಾರು ಐ-೩೫ ಹೈವೇಯಲ್ಲಿ ಮುನ್ನುಗತೊಡಗಿತು.&lt;/div&gt;&lt;div align="justify"&gt;&lt;br /&gt;ಅಮೇರಿಕನ್ ಹೈವೇಗಳಲ್ಲಿ ಡ್ರೈವ್ ಮಾಡುವುದೆಂದರೆ ಮಾಧವನಿಗೆ ಎಲ್ಲಿಲ್ಲದ ಸಂತೋಷ. ಸಿನೆಮಾ ಹಿರೋಯಿನ್ನುಗಳ ಕೆನ್ನೆಯಂತೆ ನುಣುಪಾಗಿದ್ದ ರೋಡುಗಳಲ್ಲಿ ೭೦ ಮೈಲಿ ವೇಗದಲ್ಲಿ ಕಾರನ್ನು ನುಗ್ಗಿಸಿ, ಆಗಾಗ ಲೇನ್ ಬದಲಿಸುತ್ತಾ ಝೂಮಿನಲ್ಲಿ ಒಡಾಡುವಂತಿದ್ದರೆ ಯಾರಿಗೇ ತಾನೇ ಖುಶಿಯಾಗದಿದ್ದೀತು? ಮಾಧವನಿಗೆ ಹಿಂದೆ ಕಾರ್ ಒಡಿಸಿ ಬೇರೆ ಚೆನ್ನಾಗಿ ಅನುಭವವಿತ್ತು. ಇಲ್ಲಿಗೆ ಬಂದು ಹಳೆಯ ಟೊಯೋಟಾ ಕ್ಯಾಮ್ರಿಯೊಂದನ್ನು ಖರೀದಿಸಿ, ಅದಕ್ಕೊಂದು ಅಲ್ಪ ಸ್ವಲ್ಪ ರಿಪೇರಿ ಮಾಡಿಸಿ, ಒಳ್ಳೆಯ ಕಂಡಿಶನ್ನಿನಲ್ಲಿ ಇಟ್ಟುಕೊಂಡಿದ್ದ. ಮಾಧವನ ಬಳಿ ಬಂದ ನಂತರ ಕಾರು ಬಹಳವೇನೂ ಓಡಿರಲಿಲ್ಲ. ಹತ್ತಿರವೇ ಇದ್ದ ಆಫೀಸಿಗೆ ದಿನಕ್ಕೆರಡು ಸಲ, ವಾರಕ್ಕೊಮ್ಮೆ ಅಥವಾ ಎರಡು ಸಾರ್ತಿ ವಾಲ್ ಮಾರ್ಟ್ ಮತ್ತು ಇಂಡಿಯನ್ ಸ್ಟೋರ್‍ಸಿಗೆ ಓಡಾಡುವುದಕ್ಕೇ ಕಾರಿನ ಭಾಗ್ಯ ಸೀಮಿತವಾಗಿತ್ತು. ಹೀಗೆ ಅಪರೂಪಕ್ಕೆ ಹೈವೇ ಮೇಲೆ ಒಡಿಸುವ ಸುಖಕ್ಕಾಗಿಯೇ ಮಾಧವ, ಹತ್ತಿರವೇ ಸೆಡಾರ್ ಪಾರ್ಕಿನಲ್ಲೇ ಇದ್ದ ಇಂಡಿಯನ್ ಸ್ಟೋರ್ಸಿಗೆ ಹೋಗದೇ ಸುತ್ತು ಬಳಸಿ, ದೂರದಲಿದ್ದ ಮಿನರ್ವಾ ಸ್ಟೋರ್ಸಿಗೆ ಹೋಗುತ್ತಿದ್ದುದು.&lt;/div&gt;&lt;div align="justify"&gt;&lt;br /&gt;ಮೈಲುಗಟ್ಟಲೇ ಉದ್ದವಿದ್ದ ಟ್ರಕ್ ಗಳನ್ನು ಹಿಂದೆ ಹಾಕಿ, ಕೇವಲ ೫ ನಿಮಿಷಗಳಲ್ಲಿ ೨೫೬ನೇಯ ಎಕ್ಸಿಟ್ಟಿನಲಿ ಮಾಧವನ ಕೆಂಪು ಕಾರು ಬಲಕ್ಕೇ ಹೊರಳುತ್ತಿರುವಾಗ ಕತ್ತಲು ಎಲ್ಲವನ್ನೂ ಆಹುತಿ ತೆಗೆದುಕೊಳ್ಳಲು ರೆಡಿಯಾಗುತ್ತಾ ಇತ್ತು. ಎಕ್ಸಿಟ್ ತೆಗೆದುಕೊಳ್ಳುತ್ತಿದ್ದಂತೆಯೇ, ಕಾರುಗಳನ್ನು ಸಾವಧಾನವಾಗಿ ಚಲಿಸಿ ಎಂದು ಎಚ್ಚರಿಸಲೇ ಇದೆ ಎಂಬಂತೆ, ಧುತ್ತನೇ ಸಿಗ್ನಲ್ಲೊಂದು ಎದಿರಾಗುತ್ತಿತ್ತು. ಸಿಗ್ನಲ್ಲಿನಲ್ಲಿ ಕೆಂಪು ದೀಪ ಹೊತ್ತಿದ್ದನ್ನು ಗಮನಿಸಿದ ಮಾಧವ ವೇಗವನ್ನು ಸಾಧ್ಯವಾದಷ್ಟು ತಗ್ಗಿಸಿ,ಬಿಳಿ ಬಿ.ಎಂ.ಡಬ್ಲೂ ಕಾರೊಂದರ ಹಿಂದಕ್ಕೆ ಮಾರು ಜಾಗ ಬಿಟ್ಟು ನಿಲ್ಲಿಸಿದ. ನಮ್ಮೂರಿನಲ್ಲಿ ಕಾರಿಂದ ಕಾರಿಗೆ ಮಧ್ಯ ಇಷ್ಟೊಂದು ಜಾಗ ಬಿಟ್ಟು ಬಿಟ್ಟರೆ, ೭-೮ ದ್ವಿಚಕ್ರ ವಾಹನಗಳು ಆ ಸಂದಿಯಲ್ಲೇ ನುಗ್ಗಿಬಿಡುತ್ತವೆ ಎಂದನಿಸಿ ಮಾಧವನಿಗೆ ಸ್ವಲ್ಪ ನಗು ಬಂತು. ಪಕ್ಕದಲ್ಲಿ ಕುಳಿತ ಉಮಾಪತಿ, ಮಾಧವ ನಿಲ್ಲಿಸಿದ್ದು ಬಹಳವೇ ಹಿಂದಾಯಿತೆಂದೂ, ಅಷ್ಟೆಲ್ಲಾ ಜಾಗವನ್ನು ಕಾರಿಂದ ಕಾರಿನ ಮಧ್ಯೆ ಕೊಡುವ ಅವಶ್ಯಕತೆ ಇಲ್ಲವೆಂದು ಹೇಳಿದಾಗ ಮಾಧವನಿಗೂ ಹೌದೆನ್ನಿಸಿತು. ಮೆಲ್ಲಗೆ ಬ್ರೇಕ್ ಮೇಲೆ ಇಟ್ಟಿದ್ದ ಕಾಲನ್ನು ಸಡಿಲಿಸಿ ಕಾರನ್ನು ಮುಂದೆ ಚಲಿಸಲು ಅನುವುಮಾಡಿಕೊಟ್ಟ. ಇನ್ನೇನು ಬಿಳಿ ಕಾರಿನ ಹತ್ತಿರ ಬರುವಷ್ಟರಲ್ಲಿ, ಸುರೇಶನ ಕಾಲು ಸ್ವಲ್ಪ ಜಾರಿತು. ಸಟ್ಟನೇ, ಬ್ರೇಕ್ ಒತ್ತಬೇಕೆಂದು ಅಂದುಕೊಂಡವನು, ಬ್ರೇಕಿನ ಬದಲು ಎಕ್ಸಲರೇಟರನ್ನೇ ಬಲವಾಗಿ ಒತ್ತಿಬಿಟ್ಟ. ಮರುಕ್ಷಣದಲ್ಲೇ, ಮಾಧವನ ಕಾರು "ಧಡಾರ್" ಎಂಬ ಶಬ್ದದೊಂದಿಗೆ ಮುಂದಿದ್ದ ಬಿಳಿ ಕಾರಿನ ಹಿಂಭಾಗವನ್ನು ಗುದ್ದಿ, ತಾನೇನೂ ಮಾಡಿಯೇ ಇಲ್ಲವೆಂಬಂತೆ ಅಮಾಯಕ ಮುಖ ಹೊತ್ತು ನಿಂತಿತು. ಹಿಂಭಾಗಕ್ಕೆ ಗುದ್ದಿಸಿಕೊಂದ ಬಿಳಿ ಕಾರು,ಸಿಗ್ನಲ್ಲನ್ನು ದಾಟಿ ಸ್ವಲ್ಪ ದೂರದಲ್ಲಿ ರಸ್ತೆಗಡ್ಡವಾಗಿ ನಿಂತಿತು.&lt;/div&gt;&lt;div align="justify"&gt;&lt;br /&gt;ಮಾಧವನಿಗೆ ಇಲ್ಲೇ ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಬಾರದೇ ಎನ್ನುವಷ್ಟು ಭಯವಾಯಿತು. ಭಯಕ್ಕೆ ಅವನ ಕೈಕಾಲುಗಳು ಒಂದೇ ಸಮ ನಡುಗುತ್ತಿದ್ದವು. ನಾಲಿಗೆ ಒಣಗಿ ಮಾತಾಡಲೂ ಆಗದೇ, ಸುಮ್ಮನೇ ಸ್ಟೇರಿಂಗ್ ಮೇಲೆ ಕೈಯಿಟ್ಟು ಕುಳಿತುಕೊಂಡ. ಪಕ್ಕದಲ್ಲಿದ್ದ ಉಮಾಪತಿಯನ್ನಂತೂ ಕೇಳುವದೇ ಬೇಡ. ಮೊದಲೇ ಟೆನ್ಶನ್ ಪಾರ್ಟಿ. ಬಿಳಿಚಿಕೊಂಡು, ಸಿಂಹದ ಬಾಯಲ್ಲಿ ಸಿಕ್ಕಿಕೊಂಡ ಚಿಗರೆ ಮರಿಯ ಹಾಗೆ ಬೆವೆತುಹೋಗಿದ್ದ. ಇಬ್ಬರಿಗೂ ಇನ್ನೂ ಆಘಾತದ ದಿಗ್ಭ್ರಮೆಯಿಂದ ಹೊರಗೆ ಬರಲೇ ಆಗಿರಲಿಲ್ಲ. ಸೀಟ್ ಬೆಲ್ಟ್ ಕಟ್ಟಿಕೊಂಡದ್ದರಿಂದ ಇಬ್ಬರಿಗೂ ಪೆಟ್ಟೇನೂ ಆಗಿರಲಿಲ್ಲ. ಹಿಂದೆ, ಅಕ್ಕ ಪಕ್ಕದಲ್ಲಿದ್ದ ಎಲ್ಲಾ ಕಾರುಗಳಲ್ಲಿದ್ದ ಜನರೆಲ್ಲರೂ, ಇವರನ್ನೇ ನೋಡತೊಡಗಿದ್ದರು. ನಮ್ಮೂರಿನಲ್ಲಾಗಿದ್ದರೆ ಇಷ್ಟೊತ್ತಿಗೆ ಗುಂಪು ಕೂಡಿ, ತನಗೆ ಒಂದೆರಡು ಏಟುಗಳು ಖಂಡಿತ ಬೀಳುತ್ತಿತ್ತು ಎಂದು ಮಾಧವನ ಮನಸ್ಸು ಹೇಳತೊಡಗಿತು. ಇವರು ಇನ್ನೂ ಕಾರಿನಿಂದ ಹೊರಬಂದಿರಲಿಲ್ಲ, ಅಷ್ಟರಲ್ಲೇ ಗುದ್ದಿಸಿಕೊಂಡ ಕಾರಿನಲ್ಲಿದ್ದ ವಯಸ್ಸಾದ ಅಜ್ಜ ಮತ್ತು ಅಜ್ಜಿಯಿಬ್ಬರೂ ಇವರ ಬಳಿ ಓಡಿ ಬಂದರು. ಅವರು ಏನು ಬೈಯ್ಯಬಹುದು ಎಂಬ ನಿರೀಕ್ಷೇಯಲ್ಲೇ ಇದ್ದವರಿಗೆ, ಅವರು "ಆರ್ ಯೂ ಗಯ್ಸ್ ಫೈನ್? ಡೋಂಟ್ ವರಿ, ಎವೆರಿಥಿಂಗ್ ವಿಲ್ ಬಿ ಆಲ್ ರೈಟ್.." ಎಂದು ಹೇಳಿದಾಗ ಬಹಳ ಆಶ್ಚರ್ಯವಾಯಿತು. ಇಂಥ ಆಘಾತದ ಮಧ್ಯೆಯೂ ಅವರಿಗಿದ್ದ ಕಾಳಜಿ ಮತ್ತು ಸಮಯಪ್ರಜ್ನೆ ಮಾಧವನಿಗೆ ಬಹಳ ಇಷ್ಟವಾಯಿತು. ಅವನ ಮನಸ್ಸು ಈಗ ಸ್ವಲ್ಪ ತಹಬಂದಿಗೆ ಬಂತು.&lt;/div&gt;&lt;div align="justify"&gt;&lt;br /&gt;ಎರಡು ನಿಮಿಷಗಳಲ್ಲೇ,ದೈತ್ಯ ದೇಹದ ಪೋಲೀಸನೊಬ್ಬ,ತಲೆಯ ಮೇಲೆ ಹೊಳೆಯುತ್ತಿದ್ದ ದೀಪಗಳುಳ್ಳ ಕಾರಿನಲ್ಲಿ ಬಂದಿಳಿದ.ಬಂದವನೇ ಇವರಿಗಿಬ್ಬರಿಗೂ ಏನಾದರೂ ಪೆಟ್ಟಾಗಿದೆಯೇ,ಅವರಿಗೆ ಎನಾದರೂ ವೈದ್ಯಕೀಯ ಸಹಾಯ ಬೇಕೇ ಎಂದು ಕೇಳಿ, ಮಾಧವನ ಲೈಸೆನ್ಸ್ ಇಸಿದುಕೊಂಡು, ಅವನ ಕಾರಿನಲ್ಲಿದ್ದ ಲಾಪ್ ಟ್ಯಾಪಿನಲ್ಲಿ ಏನೇನೋ ಫೀಡ್ ಮಾಡತೊಡಗಿದ.ಮಾಧವನ ಕಾಲುಗಳು ಇನ್ನೂ ನಡುಗುತ್ತಲೇ ಇತ್ತು. ಅಜಾನುಬಾಹು ಪೋಲೀಸಿನವನ್ನು ನೋಡಿದರೇ ಭಯ ತರಿಸುವಂತೆ ಇದ್ದ. ಉಮಾಪತಿಯ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಇನ್ನು ಮುಂದೆ ಅವನು ಯಾರ ಕಾರನ್ನೇ ಹತ್ತುವುದು ಸಂಶಯವಿತ್ತು. ನೋಡು ನೋಡುತ್ತಿರುವಂತೆಯೇ ಅಗ್ನಿ ಶಾಮಕ ವಾಹನದಂತೆ ಕಾಣುವ ದೊಡ್ಡ ಟ್ರಕ್ಕೊಂದು ಮಾಧವನ ಕಾರನ್ನೂ, ಬಿಳಿ ಬಿ.ಎಂ.ಡಬ್ಲೂ ಕಾರನ್ನೂ ಟೋ ಮಾಡಿ, ಪಕ್ಕ ಸರಿಸಿ ಮತ್ತೆ ವಾಹನಗಳ ಸುಗಮ ಸಂಚಾರಕ್ಕೆ ಎಡೆ ಮಾಡಿಕೊಟ್ಟಿತು. ಅವರ ಕೆಲಸದ ವೇಗ, ಕ್ರಿಯಾಶೀಲತೆ ಮತ್ತು ವೃತ್ತಿಪರತೆ ಮಾಧವನಿಗೆ ಅಚ್ಚರಿ ತರಿಸಿತು. ಆಕ್ಸಿಡೆಂಟ್ ಆದ ಹಲವೇ ನಿಮಿಷಗಳಲ್ಲಿ ಅದರ ಕುರುಹೂ ಸಿಗದಂತೆ ಎಲ್ಲವೂ ನಡೆದುಹೋಗಿತ್ತು.&lt;/div&gt;&lt;div align="justify"&gt;&lt;br /&gt;ಸಿಗ್ನಲ್ಲಿನ ಪಕ್ಕದಲ್ಲಿ ಕುರಿಮರಿಗಳ ಹಾಗೆ ನಿಂತುಕೊಂಡಿದ್ದ ಇವರ ಬಳಿ, ಬಿಳಿ ಕಾರಿನ ಅಜ್ಜ ಬಂದು "ಇನ್ಶುರೆನ್ಸ್ ಗೆ ಫೋನ್ ಮಾಡಿದ್ರಾ? ಎಂದು ಕೇಳಿದಾಗ ಮಾಧವನಿಗೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವನಿಗೆ ಹುಲ್ಲು ಕಡ್ಡಿ ಸಿಕ್ಕಿದ ಹಾಗೆ ಸಂತೋಷವಾಯಿತು. ಪೋಲಿಸನದೇ ಸಹಾಯ ತೆಗೆದುಕೊಂಡು ಇನ್ಶುರೆನ್ಸ್ ಕಂಪನಿಗೆ ಫೋನ್ ಮಾಡಿ, ಆದದ್ದೆಲ್ಲವನ್ನೂ ವಿವರಿಸಿದ. ಕಂಪನಿ ರೆಪ್ರೆಸೆಂಟಿವ್ ಒಬ್ಬನನ್ನು ಕಳಿಸಿಕೊಡುತ್ತೇನೆಂದೂ, ಜಾಸ್ತಿ ಗಾಭರಿ ಬೀಳಬೇಡಿ ಎಂದು ಆ ಕಡೆ ಇದ್ದ ಕೋಕಿಲವಾಣಿ ಉಲಿಯಿತು. ಮಾಧವನಿಗೆ ಸ್ವಲ್ಪ ಸಮಾಧಾನವಾಯಿತು. ಪಕ್ಕದಲ್ಲೇ ಇದ್ದ ಅಜ್ಜ ಅಜ್ಜಿಯ ಹತ್ತಿರ ಮಾಧವ ಪರಿಪರಿಯಾಗಿ ಕ್ಷಮೆ ಬೇಡಿದ. ಅವರಿಬ್ಬರೂ ಅತ್ಯಂತ ಸಮಾಧಾನ ಚಿತ್ತರೂ, ಕರುಣಾಮಯಿಗಳಂತೆ ತೋರುತ್ತಿದ್ದರು. ಹೀಗೆ ಆಗುವುದು ಸಹಜ ಮತ್ತು ಇದೊಂದು ಆಕ್ಸಿಡೆಂಟ್ ಅಷ್ಟೇ ಎಂದು ಅವರು ಮಾಧವನಿಗೆ ಧೈರ್ಯ ಹೇಳಿದರು. ೧೫ ನಿಮಿಷಗಳಲ್ಲಿ ಇನ್ಶುರೆನ್ಸಿನವನು ಹಾಜರಾದ. ಬಂದವನೇ ಪೋಲಿಸಿನವನ ಹತ್ತಿರವೂ, ಅಜ್ಜ ಅಜ್ಜಿಯರ ಹತ್ತಿರವೂ ಏನೇನೊ ಮಾತನಾಡಿ, ಕೊನೆಯಲ್ಲಿ ಮಾಧವನ ಹತ್ತಿರ ಬಂದು "ಡೋಂಟ್ ವರಿ ಸರ್, ಐ ವಿಲ್ ಟೇಕ್ ಕೇರ್ ಆಫ್ ಎವೆರಿಥಿಂಗ್" ಎಂದು ಹೇಳಿ, ಯಾರ್ಯಾರಿಗೋ ಹತ್ತಾರು ಕರೆ ಮಾಡಿದ.ಅದಾದ ಮೇಲೆ ಪೋಲಿಸಿನವನು ಹೋಗಿಬಿಟ್ಟ.&lt;/div&gt;&lt;div align="justify"&gt;&lt;br /&gt;ಇನ್ನೊಂದು ೨೦ ನಿಮಿಷ ಕಳೆಯುವುಷ್ಟರಲ್ಲಿ ಎಲ್ಲಾ ಸರಾಗವಾಗಿ ಮುಗಿದು ಹೋಯಿತು. ಎರಡು ಕಾರುಗಳನ್ನೂ, ಯಾವುದೋ ವಾಹನ ಬಂದು ಎತ್ತಾಕಿಕೊಂಡು ಹೋಯಿತು. ತನ್ನ ಕಾರಿನಲ್ಲೆಯೇ ಅಜ್ಜ ಅಜ್ಜಿಯರನ್ನೂ, ಮಾಧವ ಮತ್ತು ಉಮಾಪತಿಯರನ್ನೂ ಮನೆಗೆ ಬಿಡುವುದಾಗಿ ಇನ್ಶುರೆನ್ಸಿನವನು ಹತ್ತಿಸಿಕೊಂಡ. ಅಜ್ಜ ಅಜ್ಜಿಯರನ್ನು ಡೌನ್ ಟೌನಿನಲ್ಲಿ ಬಿಟ್ಟು ಕಾರು ಮತ್ತೆ ಉತ್ತರದ ಹೈವೇ ಹಿಡಿಯಿತು. ಇಳಿಯುವ ಮುನ್ನ ಅಜ್ಜ ಅಜ್ಜಿಯರಲ್ಲಿ ಮತ್ತೊಮ್ಮೆ ಮಾಧವ, ಆಗಿದ್ದೆಲ್ಲದ್ದಕ್ಕೂ ಕ್ಷಮೆ ಕೇಳಿದ. ಆ ವೃದ್ಧ ದಂಪತಿಗಳಿಗೆ ತನ್ನಿಂದಾದ ತೊಂದರೆಗಳನ್ನೆಲ್ಲ ನೆನೆಸಿಕೊಂಡು ಮಾಧವನಿಗೆ ತುಂಬಾ ಕೆಟ್ಟದನಿಸಿತು. ಆದರೆ ಪರಿ ಪರಿಯಾಗಿ ಕ್ಷಮೆ ಕೇಳುವುದನ್ನು ಬಿಟ್ಟರೆ ಇನ್ನೇನೂ ಅವನು ಮಾಡಲು ಸಾಧ್ಯವಿರಲಿಲ್ಲ.&lt;/div&gt;&lt;div align="justify"&gt;&lt;br /&gt;ದಾರಿಯಲ್ಲಿ ಇನ್ಶುರೆನ್ಸಿನವನು ಸುಮ್ಮನೆ ಮಾಧವನನ್ನು ಹಲವಾರು ಪ್ರಶ್ನೆ ಕೇಳಲು ಶುರು ಮಾಡಿದ.ಮಾಧವನಿಗೆ ಏನನ್ನೂ ಹೇಳಲು ಮೂಡಿರಲಿಲ್ಲ.ಆದರೂ ಅವನು ಕೇಳಿದ್ದಕ್ಕೆಲ್ಲದ್ದಕ್ಕೂ ಚುಟುಕಾಗಿ ಉತ್ತರಿಸಿದ.ಹಿಂದೆ ಕುಳಿತಿದ್ದ ಉಮಾಪತಿ ಇನ್ನೂ ದಿಗ್ಭ್ರಮೆಯಲ್ಲೇ ಇದ್ದ ಹಾಗಿತ್ತು. ಮಾತಾಡುತ್ತಾ ಮಾಧವನಿಗೆ ಅವನು ಚೈನಾದಿಂದಾ ಬಹಳ ಹಿಂದೆಯೇ ಬಂದು ಇಲ್ಲಿ ಸೆಟಲ್ ಆಗಿರುವುದಾಗಿಯೂ, ಈ ಕಂಪನಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿಯೂ ತಿಳಿದುಬಂತು. ಕಾರನ್ನು ೨೪೯ ನೆಯ ಎಕ್ಸಿಟ್ಟಿನಲ್ಲಿ ಬಲಕ್ಕೆ ಹೊರಳಿಸಲು ಹೇಳಿ, ಮಾಧವ ಅವನಿಗೆ ತನ್ನ ಅಪಾರ್ಟಮೆಂಟಿನ ದಾರಿಯನ್ನು ನಿರ್ದೇಶಿಸಲು ತೊಡಗಿದ.ಇನ್ನೇನು ಕಾರು ಬಲಕ್ಕೆ ತಿರುಗಿ ಅಪಾರ್ಟಮೆಂಟಿನೊಳಕ್ಕೆ ತಿರುಗಬೇಕು ಅನ್ನುವುಷ್ಟರಲ್ಲಿ, ಅಪಾರ್ಟಮೆಂಟಿನಿಂದ ಹೊರಕ್ಕೆ ಬರುತ್ತಿದ್ದ ಕಾರೊಂದು ಅತೀ ವೇಗದಲ್ಲಿ ಮುನ್ನುಗ್ಗಿ ಬರುತ್ತಿದ್ದುದ್ದು ಡ್ರೈವರಿನ ಸೀಟಿನಲ್ಲಿದ್ದ ಚೀನಿಯವನಿಗೂ, ಪಕ್ಕ ಕುಳಿತಿದ್ದ ಮಾಧವನಿಗೂ ಕಂಡಿತು. ಅದನ್ನು ನೋಡಿದ ತಕ್ಷಣವೇ ಮಾಧವನ ಬಾಯಿಂದ "ಸ್ಟಾಪ್" ಎಂಬ ಸಣ್ಣ ಚೀತ್ಕಾರ ಅವನಿಗರಿವಿಲ್ಲದಂತೆಯೇ ಹೊರಬಿದ್ದಿತು. ಏನಾಗುತ್ತಿದೆ ಎಂದು ಅರಿವಾಗುವುದರಲ್ಲೇ, ಮಾಧವನ ನಿರೀಕ್ಷೆಗೆ ತದ್ವಿರುದ್ಧವಾಗಿ, ಅವನ ಕಾರು ಭಯಂಕರ ವೇಗದಲ್ಲಿ ಮುನ್ನುಗ್ಗಿ, ಎದುರಿಗೆ ಬರುತ್ತಿದ್ದ ಕಾರನ್ನು ಸವರಿಕೊಂಡಂತೆಯೇ ಚಲಿಸಿ, ಬಲ ರಸ್ತೆಯಲ್ಲಿ ಹೋಗುವುದರ ಬದಲು ಎಡ ಬದಿಯ ರಸ್ತೆಯಲ್ಲೇ ಇನ್ನೂ ಸುಮಾರು ಮುಂದೆ ಹೋಯಿತು. ಈ ಕಾರು ಮುನ್ನುಗ್ಗಿದ ವೇಗಕ್ಕೆ ಹೆದರಿದ ಎದುರು ಬದಿ ಕಾರಿನವನು ತಕ್ಷಣವೇ ಬ್ರೇಕ್ ಹಾಕಿ ದೊಡ್ಡದಾಗಿ ಹಾರ್ನ್ ಮಾಡಿದ್ದು ಮಾಡಿದ್ದು ಮಾತ್ರ ಮೂರೂ ಜನರ ಅನುಭವಕ್ಕೆ ಬಂತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಉಮಾಪತಿ, ಕಾರು ನುಗ್ಗಿದ ವೇಗಕ್ಕೆ ಅಪ್ರತಿಭನಾಗಿ ಕಿಟಾರನೆ ಕಿರಿಚಿಕೊಂಡ. ಆ ಕ್ಷಣದ ಒತ್ತಡದಲ್ಲಿ ಚೀನಿಯವನೂ ಕೂಡ ಮಾಧವನ ತರಾನೇ ಬ್ರೇಕ್ ಒತ್ತುವುದರ ಬದಲು ಬಲವಾಗಿ ಎಕ್ಸಲರೇಟರನ್ನು ಒತ್ತಿಬಿಟ್ಟಿದ್ದ. ಆದರೆ ಮಾಧವನಿಗೆ ತಕ್ಷಣವೇ ಚೀನೀ ಮಾಡಿದ ತಪ್ಪಿನ ಅಂದಾಜಾಗಿ ಹೋಗಿತ್ತು. ಅಸಾಧ್ಯ ಟೆನ್ಶನಿನಲ್ಲಿದ್ದ ಅವನನ್ನು ಉದ್ದೇಶಿಸಿ, ಮಾಧವ ತಣ್ಣನೆಯ ದನಿಯಲ್ಲಿ ಬ್ರೇಕ್, ಬ್ರೇಕ್ ಎಂದು ಎರಡು ಸಲ ಕೂಗಿದ. ಪುಣ್ಯಕ್ಕೆ ಎದುರಿನಿಂದ ಯಾವುದೇ ವಾಹನ ಬರುತ್ತಿರಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋದ ಮೇಲೆ ಚೀನಿಯವನಿಗೂ ಅಂತೂ ಕಾರು ಹಿಡಿತಕ್ಕೆ ಸಿಕ್ಕಿತು. ವೇಗ ತಗ್ಗಿಸಿ, ಮೆಲ್ಲಗೆ ಬ್ರೇಕ್ ಹಾಕಿ, ಪಕ್ಕಕ್ಕೆ ತಿರುಗಿಸಿ ಖಾಲಿ ಇದ್ದ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ ನಿಟ್ಟುಸಿರು ಬಿಟ್ಟ, ಅವನ ಕೈಕಾಲುಗಳೂ ನಡುಗುತ್ತಿದ್ದವು. ಅವನ ಪರಿಸ್ಥಿತಿಯನ್ನು ನೋಡಿ ಮಾಧವನಿಗೆ ಜೋರಾಗಿ ನಗು ಬಂತು. ಹ್ಯಾಪು ಮೋರೆ ಹಾಕಿಕೊಂಡಿದ್ದ ಚೀನಿಯವನನ್ನೂ, ಹೆದರಿ ಗುಬ್ಬಚ್ಚಿಯಂತಾದ ಉಮಾಪತಿಯನ್ನೂ ಒಮ್ಮೆ ನೋಡಿ, ಕುಳಿತಲ್ಲೆಯೇ ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗಲು ಶುರುಮಾಡಿಬಿಟ್ಟ. ಉಮಾಪತಿಗೆ ಮಾತ್ರಾ, ಇಂಥ ಪರಿಸ್ಥಿತಿಯಲ್ಲೂ ನಗುತ್ತಿರುವ ಮಾಧವನನ್ನು ಕಂಡು ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ಎದುರಿಗೇ ಚೀನಿಯವನು ಕುಳಿತಿದ್ದರಿಂದ ಸಿಟ್ಟನ್ನು ಅದುಮಿಕೊಂಡು, ಏನು ಮಾಡಬೇಕೆಂದು ಗೊತ್ತಾಗದೇ ತಾನೂ ಮಾಧವನ ನಗುವಿಗೆ ದನಿಗೂಡಿಸಿದ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-5604996312027873284?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/5604996312027873284/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=5604996312027873284' title='5 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/5604996312027873284'/><link rel='self' type='application/atom+xml' href='http://www.blogger.com/feeds/6035880729059442700/posts/default/5604996312027873284'/><link rel='alternate' type='text/html' href='http://madhu-vana.blogspot.com/2008/03/blog-post_09.html' title='ಕಾರ್ ಕಾರ್ ಎಲ್ನೋಡಿ ಕಾರ್'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>5</thr:total></entry><entry><id>tag:blogger.com,1999:blog-6035880729059442700.post-1529333309847761264</id><published>2008-03-05T08:40:00.000-08:00</published><updated>2008-03-05T14:22:33.543-08:00</updated><title type='text'>ಎಲ್ಲೆಲ್ಲೂ ಸಂಗೀತವೇ...</title><content type='html'>&lt;p align="justify"&gt;ಸಿನೆಮಾ ಗೀತೆಗಳಲ್ಲಿ ಶುದ್ಧ ಶಾಸ್ತ್ರೀಯ ಸಂಗೀತದ ಛಾಯೆಯಿರುವ ಗೀತೆಗಳು ಬಹಳೇ ಬಹಳ ಕಮ್ಮಿಯಿವೆ ಎಂಬುದು, ನನ್ನಂತೆ ಇನ್ನೂ ಹಲವರ ಕೊರಗು. ಆದರೂ ಅಲ್ಲಲ್ಲಿ ಒಂದೆರಡು ಅತ್ಯುತ್ತಮ ರಚನೆಗಳು ಮನಸೂರೆಗೊಳ್ಳುತ್ತವೆ. ನನಗೆ ಅತ್ಯಂತ ಇಷ್ಟವಾದ ಮೂರು ಉತ್ತಮ ಹಾಡುಗಳನ್ನು ದಕ್ಷಿಣ ಭಾರತ ಸಿನೆಮಾಗಳಿಂದ ಆಯ್ದು ಇಲ್ಲಿ ಹಾಕಿದ್ದೇನೆ. ಬಿಡುವಿನ ಸಮಯದಲ್ಲಿ ನೀವೂ ಕೇಳಿ ಆನಂದಿಸಿ.&lt;/p&gt;&lt;p align="justify"&gt;ಮೊದಲನೆಯದು, ಡಾ.ರಾಜ್ ಕುಮಾರ್ ನಟಿಸಿದ ಜೀವನ ಚೈತ್ರ ಚಿತ್ರದ "ನಾದ ಮಯ ಈ ಲೋಕವೆಲ್ಲಾ’ ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಆಗಲೇ ಕೇಳಿರುತ್ತೀರಿ. ಈ ಹಾಡಿಗೆ ೧೯೯೩ ರಲ್ಲಿ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇನ್ನೂ ಗಾಯನ ಮತ್ತು ಅಣ್ಣಾವ್ರ ನಟನೆ ಬಗ್ಗೆ ನನಗೇನೂ ಹೇಳಲು ಉಳಿದಿಲ್ಲ. ಹಾಡು ಕೇಳಿ ಮುಗಿಯುತ್ತಿದ್ದಂತೆಯೇ ಮಂತ್ರಮುಗ್ಧವಾಗಿ ಸರಸ್ವತಿಯ ಪರವಶವಾಗುವುದರಲ್ಲಿ ಸಂಶಯವೇ ಇಲ್ಲ. ವಿಶೇಷವೆಂದರೆ ಈ ಹಾಡು ಅತ್ಯಂತ ಕ್ಲಿಷ್ಟವಾದ ರಾಗದಲ್ಲಿ (ತೋಡಿ) ರಚನೆಯಾಗಿದ್ದುದರಿಂದ ಹಾಡುವುದು ಅತ್ಯಂತ ಕಠಿಣವೆಂದು ಬಲ್ಲಿದರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅಣ್ಣಾವ್ರ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿಯೇ ನಲಿಯುತ್ತಿದೆ ಎಂಬಷ್ಟು ಸೊಗಸಾಗಿದೆ ಮೂಡಿ ಬಂದಿದೆ.&lt;/p&gt;&lt;p align="justify"&gt;&lt;object width="400" height="320" class="BLOG_video_class" id="BLOG_video-d691a0305a9b7b23" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v9.nonxt6.googlevideo.com/videoplayback?id%3Dd691a0305a9b7b23%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330769%26sparams%3Did,itag,ip,ipbits,expire%26signature%3D7FCFF7F07C4E9F6B1A9442EC4C8C01396BF86712.7993E24D47D641A1A1E786A2EFF5BCF3D795B61%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3Dd691a0305a9b7b23%26offsetms%3D5000%26itag%3Dw160%26sigh%3DY7-OcXQ5CWOrSjlsS5x1SmXm10o&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="400" height="320" bgcolor="#FFFFFF"flashvars="flvurl=http://v9.nonxt6.googlevideo.com/videoplayback?id%3Dd691a0305a9b7b23%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330769%26sparams%3Did,itag,ip,ipbits,expire%26signature%3D7FCFF7F07C4E9F6B1A9442EC4C8C01396BF86712.7993E24D47D641A1A1E786A2EFF5BCF3D795B61%26key%3Dck1&amp;iurl=http://video.google.com/ThumbnailServer2?app%3Dblogger%26contentid%3Dd691a0305a9b7b23%26offsetms%3D5000%26itag%3Dw160%26sigh%3DY7-OcXQ5CWOrSjlsS5x1SmXm10o&amp;autoplay=0&amp;ps=blogger"allowFullScreen="true" /&gt;&lt;/object&gt;&lt;/p&gt;&lt;p&gt;ಎರಡನೆಯದು ವಾಣಿ ಜಯರಾಮ್ ಹಾಡಿದ "ಆನತಿ ನೀಯರಾ" ಎಂಬ ಹಾಡು. ತೆಲುಗಿನ "ಸ್ವಾತಿ ಕಿರಣಮ್" ಚಿತ್ರದ ಈ ಗೀತೆಗೆ ೧೯೯೨ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. "ಕಲಾ ತಪಸ್ವಿ" ಎಂದೇ ಖ್ಯಾತರಾದ ಕೆ.ವಿಶ್ವನಾಥ್ ಅವರು ಇಂಥ ಹಲವಾರು ಸದಭಿರುಚಿಯ ಚಿತ್ರಗಳನ್ನು (ಶಂಕರಾಭರಣಂ, ಸಾಗರ ಸಮ್ಮುಖಂ..) ತೆಲುಗಿನಲ್ಲಿ ನೀಡುತ್ತಲೇ ಬಂದಿದ್ದಾರೆ. ವಾಣಿ ಜಯರಾಂ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಹಲವಾರು ಶಾಸ್ತ್ರೀಯ ಹಿನ್ನೆಲೆಯ ಹಾಡುಗಳಿಗೆ ಅವರು ಧ್ವನಿ ಒದಗಿಸಿದ್ದಾರೆ. ಈ ಹಾಡಲ್ಲಿ ನಟಿಸಿದವರು,ಕನ್ನಡದವರೇ ಆದ ಮಾ.ಮಂಜುನಾಥ್ ಅವರು. ಹಾಡುತ್ತಿರುವಾಗ ಅವರ ತುಟಿ ಚಲನೆ, ಹಾವಭಾವ, ಗತ್ತು ಎಲ್ಲವನ್ನೂ ಒಮ್ಮೆ ಗಮನಿಸಿ. ವಾಣಿ ಜಯರಾಂ ಅವರ ಕಂಠಕ್ಕೆ ಅತ್ಯುತ್ತಮವಾದ ನ್ಯಾಯವನ್ನು ಅವರು ಹಾಡಿನಲ್ಲಿ ಸಲ್ಲಿಸಿದ್ದಾರೆ.ಈ ಚಿತ್ರವೆಲ್ಲಾದರೂ ಸಿಕ್ಕರೆ ತಪ್ಪದೇ ನೋಡಿ. ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಚಿತ್ರದ ಸಂಗೀತ ನಿರ್ದೇಶಕರು ಕೆ.ವಿ.ಮಹಾದೇವನ್.&lt;/p&gt;&lt;p&gt;&lt;object width="407" height="305" class="BLOG_video_class" id="BLOG_video-2d69383190ad43ad" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v14.nonxt8.googlevideo.com/videoplayback?id%3D2d69383190ad43ad%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330769%26sparams%3Did,itag,ip,ipbits,expire%26signature%3D11218D59EB6A36E73848129F026000A491BB61D0.5447C7107BF3E484EBCB9A7BCEB869187BF78125%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3D2d69383190ad43ad%26offsetms%3D5000%26itag%3Dw160%26sigh%3D5dgs1Unnx_BlUeMql2oWaDOJO7E&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="407" height="305" bgcolor="#FFFFFF"flashvars="flvurl=http://v14.nonxt8.googlevideo.com/videoplayback?id%3D2d69383190ad43ad%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330769%26sparams%3Did,itag,ip,ipbits,expire%26signature%3D11218D59EB6A36E73848129F026000A491BB61D0.5447C7107BF3E484EBCB9A7BCEB869187BF78125%26key%3Dck1&amp;iurl=http://video.google.com/ThumbnailServer2?app%3Dblogger%26contentid%3D2d69383190ad43ad%26offsetms%3D5000%26itag%3Dw160%26sigh%3D5dgs1Unnx_BlUeMql2oWaDOJO7E&amp;autoplay=0&amp;ps=blogger"allowFullScreen="true" /&gt;&lt;/object&gt;&lt;/p&gt;&lt;p&gt;ಮೂರನೆಯದು, ಮಲಯಾಳಮ್ಮಿನ "ಹಿಸ್ ಹೈನೆಸ್ ಅಬ್ದುಲ್ಲಾ" ಚಿತ್ರದ "ನಾದರೂಪಿಣೀ’ ಎಂಬ ಹಾಡು. ಹಾಡಿದವರು ಎಂ.ಜಿ.ಶ್ರೀಕುಮಾರ್. ಈ ಹಾಡಿಗೆ ೧೯೯೧ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ವೀಡಿಯೋದ ಗುಣಮಟ್ಟ ಅಷ್ಟೊಂದೇನೂ ಚೆನ್ನಾಗಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ. ಆದರೆ ಹಾಡು ಮಾತ್ರ ಸೂಪರ್.ಸಂಗೀತ ನೀಡಿದವರು ರವೀಂದ್ರನ್ ಮಾಸ್ಟರ್. ಈ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ.&lt;/p&gt;&lt;p&gt;&lt;object width="401" height="305" class="BLOG_video_class" id="BLOG_video-66c5134441ad4b27" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v11.nonxt6.googlevideo.com/videoplayback?id%3D66c5134441ad4b27%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330769%26sparams%3Did,itag,ip,ipbits,expire%26signature%3D6FA04B826F317CD160C80E371AAC6B1F18D77293.24FBD3B75D7BB60D165C55A5B5D6DE6FF7E28875%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3D66c5134441ad4b27%26offsetms%3D5000%26itag%3Dw160%26sigh%3DPfUaKbIsbhoo0ysMRvS1_dexoBw&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="401" height="305" bgcolor="#FFFFFF"flashvars="flvurl=http://v11.nonxt6.googlevideo.com/videoplayback?id%3D66c5134441ad4b27%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330769%26sparams%3Did,itag,ip,ipbits,expire%26signature%3D6FA04B826F317CD160C80E371AAC6B1F18D77293.24FBD3B75D7BB60D165C55A5B5D6DE6FF7E28875%26key%3Dck1&amp;iurl=http://video.google.com/ThumbnailServer2?app%3Dblogger%26contentid%3D66c5134441ad4b27%26offsetms%3D5000%26itag%3Dw160%26sigh%3DPfUaKbIsbhoo0ysMRvS1_dexoBw&amp;autoplay=0&amp;ps=blogger"allowFullScreen="true" /&gt;&lt;/object&gt;&lt;/p&gt;&lt;p&gt;ಈ ಮೂರು ಹಾಡುಗಳು ೧೯೯೦-೧೯೯೩ ರ ಮಧ್ಯೆ ಬಿಡುಗಡೆಯಾಗಿದ್ದು ಒಂದು ವಿಶೇಷ. ಮೂರೂ ಹಾಡುಗಳ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಸಾಹಿತ್ಯ ಅರ್ಥವಾಗದಿದ್ದರೂ ರಸಾಸ್ವಾದನೆಗೆ ಕಷ್ಟವಾಗಲಾಗದು. ಹಾಡುಗಳು ನಿಮಗೂ ಇಷ್ಟವಾದರೆ ನನಗೆ ಸಂತೋಷ!&lt;/p&gt;&lt;p&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-1529333309847761264?l=madhu-vana.blogspot.com' alt='' /&gt;&lt;/div&gt;</content><link rel='enclosure' type='video/mp4' href='http://www.blogger.com/video-play.mp4?contentId=2d69383190ad43ad&amp;type=video%2Fmp4' length='0'/><link rel='enclosure' type='video/mp4' href='http://www.blogger.com/video-play.mp4?contentId=66c5134441ad4b27&amp;type=video%2Fmp4' length='0'/><link rel='enclosure' type='video/mp4' href='http://www.blogger.com/video-play.mp4?contentId=d691a0305a9b7b23&amp;type=video%2Fmp4' length='0'/><link rel='replies' type='application/atom+xml' href='http://madhu-vana.blogspot.com/feeds/1529333309847761264/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=1529333309847761264' title='2 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/1529333309847761264'/><link rel='self' type='application/atom+xml' href='http://www.blogger.com/feeds/6035880729059442700/posts/default/1529333309847761264'/><link rel='alternate' type='text/html' href='http://madhu-vana.blogspot.com/2008/03/blog-post_05.html' title='ಎಲ್ಲೆಲ್ಲೂ ಸಂಗೀತವೇ...'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>2</thr:total></entry><entry><id>tag:blogger.com,1999:blog-6035880729059442700.post-3480197408206100039</id><published>2008-03-01T10:09:00.000-08:00</published><updated>2008-03-04T13:50:07.823-08:00</updated><title type='text'>ನೀನಿಲ್ಲದೇ ಬಾಳೊಂದು ಬಾಳೇ..</title><content type='html'>&lt;div align="justify"&gt;&lt;/div&gt;&lt;p align="justify"&gt;&lt;strong&gt;ಹಿಂದೊಮ್ಮೆ ಇದೇ ಲೇಖನವನ್ನು ಹಾಕಿದ್ದೆ. ಎರಡು ಮೂರು ವರುಷಗಳ ಹಿಂದೆ ಯಾರೋ ಕಳಿಸಿದ್ದ ಇ-ಮೈಲ್(ಆಂಗ್ಲ ಭಾಷೆಯಲ್ಲಿದ್ದ) ಅನ್ನು ಸ್ವಲ್ಪ ನೇಟಿವಿಟಿ ಬದಲಿಸಿ, ಕನ್ನಡಕ್ಕೆ ತರ್ಜುಮೆ ಮಾಡಿ ಬರೆದಿದ್ದೆ. ಆಂಗ್ಲ ಭಾಷೆಯಲ್ಲಿದ್ದ ಕಥೆಯ ಮೂಲ ಲೇಖಕರು ಯಾರು ಎಂಬುದು ನನಗೆ ಗೊತ್ತಿಲ್ಲ. ಬಹುಷ: ಮೇಲ್ ಬಾಕ್ಸಿಂದ ಮೇಲ್ ಬಾಕ್ಸಿಗೆ ಹರಿದಾಡುವ ಈ ಮೇಲ್ ಗಳನ್ನು ಟ್ರಾಕ್ ಮಾಡುವುದು ಸಾಧ್ಯವಿಲ್ಲವೇನೋ. ಇದರ ಆಂಗ್ಲ ಮೂಲ ಲೇಖಕರು ಯಾರೆಂದು ನಿಮಗೆ ತಿಳಿದಿದ್ದರೆ, ದಯವಿಟ್ಟು ತಿಳಿಸಿ&lt;/strong&gt;.&lt;/p&gt;&lt;p align="justify"&gt;-ಮಧು&lt;br /&gt;&lt;br /&gt;ನನ್ನ ಮದುವೆ ಅಷ್ಟೊಂದೇನೂ ವಿಜೃಂಭಣೆಯಿಂದ ನಡೆದಿರಲಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ನಾನು ಮದುವೆಯಾಗಿದ್ದು. ಅವಳು ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಕೆಮೆಷ್ಟ್ರಿ ಲೆಕ್ಚರರ್ ಆಗಿದ್ದಳು. ಜಾತಕ ಚೆನ್ನಾಗಿ ಹೊಂದುತ್ತೆ ಅಂತ ಅಪ್ಪ ಖುಶಿಯಾಗಿದ್ದರು. ಅಪ್ಪ ಅಮ್ಮ ಅವಳ ಮನೆಗೆ ಹೋಗಿ ನೋಡಿ ಬಂದ ಮೇಲೆ ನಾನು ವೀಡಿಯೋ ಕಾನ್ಫ಼ರೆನ್ಸ್ ಮೂಲಕ ಅವಳ ಜೊತೆ ಮಾತಾಡಿದ್ದೆ. ಅತ್ಯಂತ ವಿನಯದಿಂದ, ಹೆಸರಿಗೆ ತಕ್ಕಂತೆ ಸೌಜನ್ಯದಿಂದ ಮಾತಾಡಿದ ಅವಳು ನನಗೆ ತುಂಬಾ ಹಿಡಿಸಿದ್ದಳು.&lt;/p&gt;&lt;p align="justify"&gt;ಎಂಗೇಜಮೆಂಟ್ ಏನೂ ನಡೆದಿರಲಿಲ್ಲ. ಮದುವೆ ೧೫ ದಿನಗಳ ಒಳಗೇ ಎಂದು ನಿರ್ಧಾರವಾಗಿತ್ತು. ನನಗೆ ರಜೆ ಸಿಗುವುದು ಬಹಳ ಕಷ್ಟವಾಗಿತ್ತು. ಹೇಗೋ ಒಂದು ೧೦ ದಿನಾ ರಜೆ ಹೊಂದಿಸಿ ಮದುವೆಗೆ ಹೋಗಿ ಬಂದಿದ್ದೆ. ಮದುವೆಯಾದ ನಾಲ್ಕನೆಯ ದಿನವೇ ನಾನು ಅವಳನ್ನು ಕರೆದುಕೊಂಡು ವಾಪಸ್ ಬಂದೂ ಇದ್ದೆ. ಪ್ಲೇನಿನಲ್ಲಿ ಇವಳು ನನ್ನ ಜೊತೆ ಜಾಸ್ತಿ ಮಾತಾಡಿರಲಿಲ್ಲ. ಮದುವೆಯಾದ ಇಷ್ಟು ಬೇಗನೇ ಅಪ್ಪ,ಅಮ್ಮ ಎಲ್ಲರನ್ನೂ ಬಿಟ್ಟು ಬಂದು ಬೇಸರವಾಗಿರಬಹುದೆಂದೆಣಿಸಿ ನಾನೂ ಅವಳನ್ನು ಜಾಸ್ತಿ ಮಾತಾಡಿಸಲು ಹೋಗಿರಲಿಲ್ಲ. ಆದರೇ ಇಲ್ಲಿಗೆ ಬಂದ ಎರಡು ದಿನವಾದರೂ ಅವಳ ಮೂಡ್ ಇನ್ನೂ ಹಾಗೇ ಇತ್ತು. ಆ ಎರಡು ದಿನ ನನಗೆ ಆಫ಼ೀಸ್ ನಲ್ಲಿ ತುಂಬಾ ಕೆಲಸವಿದ್ದುದರಿಂದ ಅವಳ ಬಗ್ಗೆ ಜಾಸ್ತಿ ಗಮನವಹಿಸಲೂ ಆಗಿರಲಿಲ್ಲ. ಹೋಮ್ ಸಿಕ್ ನಿಂದ ಹೊರಬರಲು ಯಾರಿಗಾದರೂ ಸ್ವಲ್ಪ ದಿನ ಬೇಕಾಗುತ್ತೆ ಎಂದನಿಸಿ ಸುಮ್ಮನಿದ್ದೆ.&lt;br /&gt;ಮಾರನೇ ದಿನ ಅವಳ ಪಕ್ಕ ಕುಳಿತುಕೊಂಡು ಕೇಳಿದೆ&lt;br /&gt;"ಏನಾಯ್ತು ? ಅಮ್ಮಾವ್ರು ತುಂಬಾ ಬೇಜಾರಲ್ಲಿದೀರಾ ?"&lt;br /&gt;"ನನ್ನನ್ಯಾಕೆ ಇಲ್ಲಿಗೆ ಕರೆದುಕೊಂಡು ಬಂದ್ರಿ ?". ಇದೊಳ್ಳೇ ತಮಾಷೆಯಾಯಿತಲ್ಲಪ್ಪಾ ಎಂದನಿಸಿ ಕೇಳಿದೆ&lt;br /&gt;"ಅಂದ್ರೆ ? ಏನಾಯ್ತು ಈಗ ?"&lt;br /&gt;"ನಾನು ಮನೆಗೆ ಹೋಗಬೇಕು "&lt;br /&gt;"ಇದೇ ನಿನ್ನ ಮನೆ""ಇಲ್ಲಾ, ಇದು ನನ್ನ ಮನೆಯಲ್ಲಾ. ನನ್ನ ಮನೆ ಬೆಂಗಳೂರಿನಲ್ಲಿದೆ. ಪ್ಲೀಸ್, ನನ್ನ ಕಳಿಸಿಕೊಡಿ"&lt;br /&gt;"ನೋಡು, ನೀನು ಹೋಮ್ ಸಿಕ್ ಆಗಿದೀಯಾ. ಒಂದು ಎರಡು ದಿನ ಅಷ್ಟೇ, ಆಮೇಲೆ ಎಲ್ಲಾ ಸರಿಹೋಗುತ್ತೆ. ನಾನು ಮೊದಲು ಇಲ್ಲಿಗೆ ಬಂದಾಗ ನನಗೂ ಹೀಗೆ ಆಗಿತ್ತು. ನನಗೆ ಈ ವಾರ ಸ್ವಲ್ಪ ಕೆಲಸ ಜಾಸ್ತಿ ಇತ್ತು. ಅದಕ್ಕೆ ನಿನ್ನ ಜೊತೆ ಕಾಲ ಕಳೆಯಕ್ಕೆ ಆಗ್ಲಿಲ್ಲ. ಈ ವೀಕೇಂಡ್ ನನ್ನ ಫ್ರೆಂಡ್ಸ್ ಮನೆಗೆ ಕರ್ಕೊಂಡು ಹೋಗ್ತಿನಿ. ಅವರ ಜೊತೆ ಇದ್ದರೆ ನಿಂಗೆ ಸ್ವಲ್ಪ ಬೋರ್ ಕಮ್ಮಿ ಆಗುತ್ತೆ"&lt;br /&gt;"ಇಲ್ಲಾ, ನಂಗೆ ಈ ಜಾಗ ಇಷ್ಟನೇ ಆಗ್ಲಿಲ್ಲ. ಅಪ್ಪ, ಅಮ್ಮ, ಕಾಲೇಜು ಎಲ್ಲಾದನ್ನೂ ತುಂಬಾ ಮಿಸ್ ಮಾಡ್ಕೊಂತಾ ಇದೀನಿ ನಾನು. ನಾನು ವಾಪಸ್ ಹೋಗ್ತಿನಿ"&lt;br /&gt;"ನೋಡು, ಸ್ವಲ್ಪ ತಣ್ಣಗೆ ಕುಳಿತುಕೊಂಡು ಯೋಚನೆ ಮಾಡು. ಏನನ್ಕೊಂಡಿದೀಯಾ ನೀನು ? ಏನು ನಿನ್ನ ಪ್ಲಾನು ? ಈಗ ಹೋಗ್ತಿನಿ ಅಂತಿದೀಯಾ,ಮತ್ತೆ ವಾಪಸ್ ಯಾವಾಗ ಬರ್ತಿದೀಯಾ ?"&lt;br /&gt;"ನಾನು ವಾಪಸ್ ಬರಲ್ಲ"&lt;br /&gt;ನನಗೆ ರೇಗಿ ಹೋಯಿತು. ನನಗೆ ಗೊತ್ತಿಲ್ಲದಂತೆಯೇ, ನನ್ನ ಧ್ವನಿ ದೊಡ್ಡದಾಯಿತು.&lt;br /&gt;"ನಿಂಗೆ ತಲೆ ಕೆಟ್ಟಿದೆಯಾ?"&lt;br /&gt;"ನೀವು ಹಾಗನ್ಕೊಂಡ್ರೆ ನಾನೇನೂ ಮಾಡಕ್ಕಾಗಲ್ಲ". ನನಗೆ ಈಗ ತಲೆ ಸಂಪೂರ್ಣವಾಗಿ ಕೆಟ್ಟು ಹೋಯಿತು. ನಿಧಾನಕ್ಕೆ ಕೇಳಿದೆ.&lt;br /&gt;"ಹೋಗ್ಲಿ, ನಿನ್ನ ಮನಸ್ಸಿನಲ್ಲಿ ಬೇರೆ ಯಾರಾದರೂ ಇದ್ದಾರಾ?"&lt;br /&gt;"ಇಲ್ಲ. ನಂಗೆ ವಾಪಸ್ ಹೋಗಬೇಕು. ನೀವು ಕಳಿಸ್ಲಿಲ್ಲಾ ಅಂದ್ರೆ ನಾನು ೯೧೧ ಗೆ ಕಾಲ್ ಮಾಡ್ತಿನಿ"&lt;br /&gt;&lt;br /&gt;ನಂಗ್ಯಾಕೋ ಇದು ಹುಚ್ಚರ ಸಹವಾಸ ಎಂದೆನಿಸಿತು. ಹಾಗೆ ಸ್ವಲ್ಪ ಸಿಟ್ಟೂ ಬಂತು.&lt;br /&gt;" ಮದುವೆ ಅಂದ್ರೆ ಮಕ್ಕಳಾಟ ಅಂದ್ಕೊಂಡಿದೀಯಾ ನೀನು? ನಿನ್ನ ಅಪ್ಪ ಅಮ್ಮ, ನನ್ನ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡು. ಮದುವೆಯಾಗಿ ಇನ್ನು ೧೦ ದಿನ ಆಗಿಲ್ಲಾ. ಆವಾಗ್ಲೇ ವಾಪಸ್ ಹೋಗ್ತಿನಿ ಅಂತಿದಿಯಲ್ಲಾ, ಮದುವೆಯಾಗಬೇಕಾದ್ರೆ ಇಲ್ಲಿಗೆ ಬರಬೇಕು ಅಂತ ಗೊತ್ತಿರಲಿಲ್ವಾ ನಿನಗೆ ? ವಾಪಸ್ ಬರಲ್ಲಾ ಅಂತಿದೀಯ. ನಮ್ಮ ಮದುವೆ ಕತೆ ಎನಾಗುತ್ತೆ ?" ಎಂದೆಲ್ಲಾ ರೇಗಿದೆ.&lt;br /&gt;"ನಾನು ನಿಮ್ಮ ಮೇಲೆ ತಪ್ಪು ಹೊರಿಸ್ತಾ ಇಲ್ಲ. ತಪ್ಪೆಲ್ಲಾ ನಂದೇ. ನಾನು ಅಪ್ಪ ಅಮ್ಮನ್ನ ಬಿಟ್ಟು ಇಷ್ಟು ದೂರದ ಊರಲ್ಲಿ ಒಬ್ಬನೇ ಇರಲಾರೆ. ನಿಮಗೆ ಮದುವೆ ಉಳಿಸಿಕೋಬೇಕಿದ್ರೆ, ನೀವೇ ಬೆಂಗಳೂರಿಗೆ ಬನ್ನಿ" ಅಂತೆಂದು ದೊಡ್ಡದಾಗಿ ಅಳುತ್ತಾ ಎದ್ದು ಹೋಗಿಬಿಟ್ಟಳು.&lt;/p&gt;&lt;p align="justify"&gt;&lt;br /&gt;ನನಗೀಗ ಏನು ಮಾಡಬೇಕೆಂದೇ ತೋಚಲಿಲ್ಲ. ಅವಳು ತಮಾಷೆ ಮಾಡುತ್ತಿದ್ದಾಳೆಂದು ನನಗೆ ಅನ್ನಿಸಲಿಲ್ಲ. ಇಷ್ಟು ಸಾಲದೆಂಬಂತೆ ಇಡೀ ದಿನ ಮಕ್ಕಳ ತರಹ ಅಳುತ್ತಾನೇ ಇದ್ದಳು. ನನಗ್ಯಾಕೋ, ನಾನು ಬಹಳ ತಪ್ಪು ಮಾಡಿಬಿಟ್ಟೆ ಅನ್ನಿಸತೊಡಗಿತು. ಮನೆಗೆ ಫೋನ್ ಮಾಡಿದೆ. ಅಪ್ಪ ಅಮ್ಮ ಏನು ಹೇಳಿಯಾರು ? ಅವರಿಗೂ ತುಂಬಾ ಶಾಕ್ ಆಗಿತ್ತು. ನೀನೇನೂ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಸಹಮತವಿದೆ ಎಂದರು ಅಷ್ಟೇ. ಅವಳ ಮನೆಗೂ ಫೋನ್ ಮಾಡಿದೆ. ಅತ್ತೆ, ಮಾವನೂ ಅವಳಿಗೆ ತಿಳಿಹೇಳಲು ಪ್ರಯತ್ನಿಸಿದರು. ಇವಳದ್ದು ಒಂದೇ ಹಠ. ತಾನು ವಾಪಸ್ ಬರ್ತೀನಿ ಅಂತ. ಅಳುವುದನ್ನು ಮಾತ್ರ ನಿಲ್ಲಿಸಲಿಲ್ಲ. ಎಲ್ಲರೂ ಸಂಪೂರ್ಣವಾಗಿ ನಿಸ್ಸಹಾಯಕರಾಗಿದ್ದರು.&lt;br /&gt;&lt;br /&gt;ಅವಳು ಮನಸ್ಸು ಬದಲಾಯಿಸಬಹುದೆನೋ ಅಂತ ನಾನು ಇನ್ನೆರಡು ದಿನ ಕಾಯ್ದೆ. ಅಳುವುದನ್ನು ಬಿಟ್ಟು ಇನ್ನೇನೂ ಮಾಡಿರಲಿಲ್ಲ ಅವಳು, ಈ ಎರಡು ದಿನಗಳಲ್ಲಿ. ನನಗೆ ರ್‍ಓಸಿ ಹೋಗಿ, ೨೦೦೦ ಡಾಲರ್ ತೆತ್ತು ಮಾರನೆಯ ದಿನವೇ ಅವಳ ಟಿಕೆಟ್ ಬುಕ್ ಮಾಡಿ ತಂದು ಅವಳಿಗೆ ತೋರಿಸಿದೆ. ಅವಳಿಗೆ ಅಷ್ಟೊಂದೇನೂ ಸಂತಸವಾದ ಹಾಗೆ ಕಾಣಲಿಲ್ಲ. ಆದರೆ ಅಳುವುದನ್ನು ನಿಲ್ಲಿಸಿದ್ದಳು. ಭಾರದ ಮನಸ್ಸಿನಿಂದ ಅವಳನ್ನು ಏರ್ ಪೋರ್ಟಲ್ಲಿ ಬಿಟ್ಟು, ಕೈಯಲ್ಲಿ ಟಿಕೆಟ್ ತುರುಕಿ ವಾಪಸ್ ಬಂದೆ. ತೀರ ಹೋಗುವಾಗ ಒಮ್ಮೆ ಹಿಂದಿರುಗಿ ಕೈ ಬೀಸುತ್ತಾಳೇನೋ ಅಂದುಕೊಂಡವನಿಗೆ ಅಲ್ಲೂ ನಿರಾಶೆ ಕಾದಿತ್ತು.&lt;br /&gt;ಅವಳು ಹೋದ ಮೇಲೆ ನನಗೆ ಮನಸ್ಸೆಲ್ಲಾ ಖಾಲಿ ಖಾಲಿ ಅಂದೆನಿಸಲು ಶುರುವಾಯಿತು. ಅವಳು ನನ್ನ ಜೊತೆ ಹೆಚ್ಚೆಂದರೇ ೧೦ ದಿನ ಇದ್ದಳಷ್ಟೇ, ಆದರೂ ಏನೋ ಕಳೆದುಕೊಂಡ ಭಾವ ಇಡೀ ದಿನ ಕಾಡುತ್ತಲೇ ಇತ್ತು. ಎರಡು ದಿನದ ಬಳಿಕ ಅವಳ ಮನೆಗೆ ಫೋನ್ ಮಾಡಿದೆ. ಅವಳ ಅಪ್ಪ ಅಮ್ಮ ಒಂದೆ ಸಮನೇ ನನ್ನ ಹತ್ತಿರ ಕ್ಷಮೆ ಕೇಳುತ್ತಿದ್ದರು. ಇವಳು ನನ್ನ ಹತ್ತಿರ ಮಾತಾಡಲೂ ಇಲ್ಲ. ಈ ಹಠಮಾರಿಯನ್ನು ಕಟ್ಟಿಕೊಂಡು ಬಾಳು ಬಹಳ ಕಷ್ಟವೆನಿಸಿತು ನನಗೆ. ಅರೇಂಜ್ಡ್ ಮ್ಯಾರೇಜ್ ಗಳ ಬಗ್ಗೆ ನನಗೆ ಸಂಪೂರ್ಣವಾಗಿ ನಂಬಿಕೆ ಹಾರಿಹೋಯಿತು. ಹಿಂದೆ ನನ್ನ ಕ್ಲಾಸ್ ಮೇಟ್ ಆಗಿದ್ದ ಒಂದಿಬ್ಬರು ಹುಡುಗಿಯರು ನನಗೆ ಇಷ್ಟವಾಗಿದ್ದರು. ಆದರೆ ಯಾರನ್ನೂ ಮದುವೆಯಾಗಬೇಕೆಂದು ಅನ್ನಿಸಿರಲಿಲ್ಲ. ಇವಳನ್ನು ನೋಡಿದ ತಕ್ಷಣ ನಾನು ಮದುವೆಯಾಗಲು ಒಪ್ಪಿಕೊಂಡು ಬಿಟ್ಟಿದ್ದೆ. ನನ್ನ ಆಯ್ಕೆಯೇ ಸರಿಯಿಲ್ಲವೆಂದು ತೀವ್ರವಾಗಿ ಅನ್ನಿಸಲು ಶುರುವಾಯಿತು.&lt;br /&gt;&lt;br /&gt;ಇನ್ನೊಂದು ವಾರವಾಗುತ್ತಿದಂತೆಯೇ, ನನಗೆ ಒಬ್ಬನೇ ಇರಲು ಬಹಳ ಕಷ್ಟವಾಯಿತು.ಪದೇ ಪದೇ ಅವಳ ನೆನಪು ಕಾಡುತ್ತಿತ್ತು. ನಾನೇ ಎಲ್ಲೋ ತಪ್ಪು ಮಾಡಿದೆನೆಂಬ ಗಿಲ್ಟ್ ಪದೇ ಪದೇ ಕಾಡಲು ಶುರುವಾಗಿ, ಮನಸ್ಸಿನ ನೆಮ್ಮದಿಯೇ ಹಾರಿ ಹೋಯಿತು. ಅವಳನ್ನು ಯಾವುದೇ ಕಾರಣಕ್ಕೆ ಬಿಡಬಾರದೆಂದು ನಿರ್ಧರಿಸಿ, ಕೆಲಸಕ್ಕೆ ರಾಜೀನಾಮೆ ನೀಡಿ ನಾನು ವಾಪಸ್ ಭಾರತಕ್ಕೆ ಹೋದೆ. ನಾನು ಹಿಂದಿರುಗುತ್ತಿದ್ದರ ಬಗ್ಗೆ ಯಾರಿಗೂ ಸೂಚನೆ ನೀಡಿರಲಿಲ್ಲ. ಬೆಳಿಗ್ಗೆ ಅಕ್ಕನ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಸಾಯಂಕಾಲ ೪ ಗಂಟೆಯ ಹಾಗೆ ಅವಳ ಕಾಲೇಜಿನ ಹತ್ರ ಹೋದೆ. ಕಾಲೇಜಿನೊಳಕ್ಕೇ ಹೋಗಿ ಅವಳ ಬರ ಕಾಯಬೇಕೆನಿಸಿದರೂ, ಯಾಕೋ ಮನಸ್ಸಾಗಲಿಲ್ಲ. ಕಾಲೇಜ್ ಗೇಟ್ ನ ಬಳಿಯೆ ಸುಮ್ಮನೇ ನಿಂತುಕೊಂಡೆ. ಸುಮಾರು ಅರ್ಧ ಗಂಟೆಗಳ ಬಳಿಕ ಇವಳು ಕೈಯಲ್ಲಿ ದೊಡ್ಡದೊಂದು ಪೇಪರ್ ಬಂಡಲ್ ಹಿಡಿದುಕೊಂಡು ಸುಸ್ತಾದಂತೆ ನಡೆದು ಬಂದಳು. ನನ್ನನ್ನು ಅವಳು ಗಮನಿಸಿದ್ದಂತೆ ಕಾಣಿಸಲಿಲ್ಲ. ನಾನು ಸುಮ್ಮನೇ ಅವಳನ್ನು ಬಸ್ ಸ್ಟಾಂಡಿನ ತನಕ ಹಿಂಬಾಲಿಸಿದೆ. ಬಸ್ ಸ್ಟಾಂಡಿನಲ್ಲಿ ಅವಳು ನಿಂತ ತಕ್ಷಣವೇ "ಪೇಪರ್ ಬಂಡಲನ್ನು ನಾನು ಹಿಡಿದುಕೊಳ್ಲಾ?" ಅಂತ ಮೃದುವಾಗಿ ಕೇಳಿದೆ. ಹಿಂದುರುಗಿದ ಅವಳ ಕಣ್ಣುಗಳಲ್ಲಿದ್ದಿದ್ದು ಆಶ್ಚರ್ಯವೋ ಅಥವಾ ಸಂತಸವೋ, ನನಗೆ ಸರಿಯಾಗಿ ಗುರುತಿಸಲಾಗಲಿಲ್ಲ.ನಾನು ಸುಮ್ಮನೆ ನಕ್ಕೆ. ಅವಳ ಮುಖದ ತುಂಬೆಲ್ಲಾ ಸಾವಿರ ಪ್ರಶ್ನೆಗಳು. "ಒಂದು ವಾರ ನಿನ್ನ ಜತೆಯಲ್ಲೇ ಇರ್ತಿನಿ. ಬೆಂಗಳೂರು ನಂಗೆ ಹೊಸತೇನಲ್ಲ. ಆದರೂ ನನಗೆ ಈ ವಾರದಲ್ಲಿ, ನಿಂಗೆ ಇಷ್ಟವಾದ ಎಲ್ಲಾ ಜಾಗಗಳನ್ನು ತೋರಿಸ್ತೀಯಾ?" ಎಂದೆ. ಅವಳಿಗೆ ತುಂಬಾ ಸಂತೋಷವಾದಂತೆ ತೋರಿತು.&lt;/p&gt;&lt;p align="justify"&gt;&lt;br /&gt;&lt;br /&gt;ಆ ಇಡೀ ವಾರ ಕಳೆದಿದ್ದೇ ಗೊತ್ತಾಗಲಿಲ್ಲ. ಅತ್ತೆ ಮಾವ ತುಂಬಾ ಒತ್ತಾಯ ಮಾಡಿದ್ದರಿಂದ ಆ ವಾರ ನಾನು ಅಲ್ಲೇ ಉಳಿದಿದ್ದೆ. ದಿನಾ ಸಂಜೆ ನಾನೇ ಅವಳನ್ನು ಒಂದೆರಡು ಒಳ್ಳೆಯ ಜಾಗಗಳಿಗೆ ಕರೆದುಕೊಂಡು ಹೋದೆ. ಬಹಳ ಲವಲವಿಕೆಯಿಂದ ನನ್ನ ಜೊತೆ ಮಾತನಾಡುತ್ತಿದ್ದಳು. ಮಕ್ಕಳ ತರ ರಚ್ಚೆ ಹಿಡಿದು, ಅತ್ತು ರಂಪ ಮಾಡಿದವಳು ಇವಳೇನಾ ಅಂತ ನನಗೆ ಆಶ್ಚರ್ಯವಾಗುವಷ್ಟು. ಅವಳನ್ನು ಮನೆಯಲ್ಲಿ ಮಕ್ಕಳ ತರವೇ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ ಏಳುತ್ತಿದ್ದಂತೆಯೆ ಕಾಫಿ ಬೆಡ್ ಬಳಿಯೇ ಸರಬರಾಜಾಗುತ್ತಿತ್ತು. ಅವಳು ಇವತ್ತು ಯಾವ ಡ್ರೆಸ್ ಹಾಕಿಕೊಳ್ಳುತ್ತಾಳೆ ಅನ್ನುವುದನ್ನೂ ಅವಳ ಅಮ್ಮನೇ ನಿರ್ಧರಿಸುತ್ತಿದ್ದಳು. ಅದಕ್ಕೆ ಇಸ್ತ್ರಿಯನ್ನೂ ಅವರೇ ಮಾಡಿ, ಇವಳು ಸ್ನಾನ ಮುಗಿಸಿ ಬರುವುದರೊಳಗೇ ರೆಡಿ ಮಾಡಿಟ್ಟಿರುತ್ತಿದ್ದರು. ಅಮ್ಮ ತಿಂಡಿ ಮಾಡಿಟ್ಟ ತಿಂಡಿಯನ್ನು ತಿಂದು, ಮನೆಯ ಬಳಿಯೇ ಬರುತ್ತಿದ್ದ ಕಾಲೇಜ್ ಬಸ್ ಏರಿ ಕಾಲೇಜಿಗೆ ಹೋಗುತ್ತಿದ್ದಳು. ಕಾಲೇಜಿನಲ್ಲಿ ದಿನಕ್ಕೆ ಮೂರೋ, ನಾಲ್ಕೋ ೪೫ ನಿಮಿಷದ ಪೀರಿಯಡ್ ಗಳನ್ನು ಮುಗಿಸಿ ಮತ್ತೆ ೪.೩೦ ರ ಹಾಗೆ ಮನೆಗೆ ವಾಪಸ್ ಬರುತ್ತಿದ್ದಳು. ಇಷ್ಟು ಮಾಡಿದ್ದಕ್ಕೇ, ಸಂಜೆ ಬರುವಷ್ಟರಲ್ಲೇ ಸುಸ್ತಾಗಿ ಬಿಡುತ್ತಿದ್ದಳು ಅವಳು. ಸಂಜೆ ಮನೆಗೆ ಬಂದ ಮೇಲೆ, ಅಮ್ಮ ಕೊಟ್ಟ ಕಾಫಿ ಕುಡಿದು, ಹರಟೆ ಹೊಡೆದು, ಟೀವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನೋ, ಧಾರಾವಾಹಿಗಳನ್ನೋ ನೋಡುತ್ತಾನೋ, ಹಾಡು ಕೇಳುತ್ತಾನೋ ಅವಳ ದಿನ ಮುಗಿದು ಹೋಗುತ್ತಿತ್ತು. ರಾತ್ರಿ, ಅವಳ ಹಾಸಿಗೆಯನ್ನೂ ಅವಳ ಅಮ್ಮನೇ ತಯಾರು ಮಾಡಬೇಕಾಗಿತ್ತು.ಅಪರೂಪಕ್ಕೊಮ್ಮೆ, ಮೂಡ್ ಚೆನ್ನಾಗಿದ್ದಾಗ ಅವಳ ಎರಡು ಕ್ಲೋಸ್ ಫ್ರೆಂಡ್ಸಗಳ ಮನೆಗೆ ಭೇಟಿ ನೀಡಿ ಅಲ್ಲಿ ಹರಟೆ ಹೊಡಿಯುವುದನ್ನು ಬಿಟ್ಟರೇ ಮನೆಯಿಂದ ಅವಳು ಹೊರಗೆ ಹೋಗುತ್ತಿದ್ದಿದ್ದೇ ಕಮ್ಮಿ. ವೀಕೆಂಡಗಳಂದು ಅವಳ ದಿನಚರಿ ಇದಕ್ಕಿಂತ ಬಹಳ ಭಿನ್ನವಾಗೇನೂ ಇರಲಿಲ್ಲ. ಆ ದಿನಗಳಂದು ಅವಳು ಸ್ವಲ್ಪ ಜಾಸ್ತಿನೇ ನಿದ್ದೆ ಮಾಡುತ್ತಿದ್ದಳು. ಫೋನಿನಲ್ಲಿ ಸ್ವಲ್ಪ ಜಾಸ್ತಿನೇ ಸಮಯ ಕಳೆಯುತ್ತಿದ್ದಳು. ಸಂಜೆ ಅಮ್ಮನ ಜೊತೆ ದೇವಸ್ಥಾನಕ್ಕೆ ಒಮ್ಮೊಮ್ಮೆ ಹೋಗುತ್ತಿದ್ದಿದ್ದೂ ಇತ್ತು. ರವಿವಾರ ಬೆಳಿಗ್ಗೆ ತಪ್ಪದೇ ಸಂಗೀತ ಕ್ಲಾಸಿಗೆ ಮಾತ್ರ ಹೋಗುತ್ತಿದ್ದಳು. ಹುಟ್ಟಿದಾಗಿನಿಂದ ಒಮ್ಮೆಯೂ ಅವಳು ಅಪ್ಪ ಅಮ್ಮನ್ನ ಬಿಟ್ಟು ಹೋಗಿರಲೇ ಇಲ್ಲ.&lt;/p&gt;&lt;p align="justify"&gt;&lt;br /&gt;&lt;br /&gt;ಅವಳ ಹಿಂದಿನ ವರ್ತನೆಗೆ, ನನಗೆ ಕಾರಣ ಸಂಪೂರ್ಣವಾಗಿ ಗೊತ್ತಾಗಿ ಹೋಯಿತು. ಅವಳ ಅಪ್ಪ ಅಮ್ಮನಿಂದ ದೂರ ಮಾಡಿ, ಅವಳ ಕಂಫರ್ಟ್ ಝೋನಿನಿಂದ ಹೊರಗೆ ಕರೆದುಕೊಂಡು ಹೋದ ನಾನು ಅವಳ ಕಣ್ಣಿಗೆ ವಿಲನ್ ತರ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವಳ ಜೊತೆ ಕುಳಿತಿಕೊಂಡು ನಾನು ನಿಧಾನವಾಗಿ ಮಾತನಾಡಿದೆ. ನಾನು ನಿನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆಂದು ಭರವಸೆ ಮೂಡಿಸಿದೆ. ನಾನು ಇಲ್ಲೇ ಮನೆ ಮಾಡಿದರೆ ನನ್ನ ಜೊತೆ ಇರಲು ಅವಳು ಸಹಮತಿಸಿದಳು. ವಾರಕ್ಕೊಮ್ಮೆ ಅಮ್ಮನ ಮನೆಗೆ ಮಾತ್ರ ತಪ್ಪದೇ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಳು. ನಾನು ಒಪ್ಪಿದೆ. ಅಲ್ಲಿಗೆ ಅರ್ಧ ಸಮಸ್ಯೆ ಕಮ್ಮಿಯಾದಂತಾಯಿತು.&lt;/p&gt;&lt;p align="justify"&gt;&lt;br /&gt;&lt;br /&gt;ಮನೆ ಮಾಡಿ, ಹೊಸ ಕೆಲಸ ಹಿಡಿದ ಮೇಲೆ ನಿಜವಾದ ಸಮಸ್ಯೆಗಳು ಶುರುವಾದವು. ಅವಳಿಗೆ ನಿಜಕ್ಕೂ ಪ್ರಪಂಚ ಜ್ನಾನವೇ ಇರಲಿಲ್ಲ. ಅವಳಿಗೆ ಮದುವೆಯಾಗಿದೆ, ಅಲ್ಲಿಗೆ ಕೆಲವೊಂದು ಜವಾಬ್ದಾರಿಗಳಿರುತ್ತವೆ ಅನ್ನುವುದನ್ನು ನಾನು ಪದೇ ಪದೇ ನೆನಪಿಸಿಬೇಕಾಯಿತು. ಬಟ್ಟೆಗಳನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲಿ ಬೇಕೆಂದರಲ್ಲಿ ಬೀಸಾಡುತ್ತಿದ್ದಳು. ಅಪ್ಪಿ ತಪ್ಪಿ ನಾನೊಮ್ಮೆ ಆಕ್ಷೇಪಿಸಿದರೇ, ನನ್ನ ಮೇಲೇ ರೇಗುತ್ತಿದ್ದಳು ಇಲ್ಲವೇ ಅಳಲು ಶುರು ಮಾಡಿ ಬಿಡುತ್ತಿದ್ದಳು. ಒಂದು ಕಾಫಿ ಮಾಡಲೂ ಬರುತ್ತಿರಲಿಲ್ಲ. ಬೆಳಿಗ್ಗೆ ನಾನೇ ಕಾಫಿ ಮಾಡಿ ಅವಳನ್ನು ಎಬ್ಬಿಸಬೇಕಾಗಿತ್ತು. ನನಗೆ ಗೊತ್ತಿದ್ದ ಅಲ್ಪ ಸ್ವಲ್ಪ ಅಡುಗೆಯನ್ನೇ ಕಲಿಸಬೇಕಾಯಿತು. ಅವಳೇ ನಿಯಮಗಳನ್ನು ಮಾಡುತ್ತಿದ್ದಳು, ಅವಳೇ ಅದನ್ನು ಮುರಿಯುತ್ತಿದ್ದಳು. ನನ್ನ ಬಗ್ಗೆ ಅಷ್ಟೊಂದೇನೂ ಕಾಳಜಿ ತೋರುತ್ತಿರಲಿಲ್ಲ. ಹೇಳದೇ ಕೇಳದೇ ಒಮ್ಮೊಮ್ಮೆ ಅಮ್ಮನ ಮನೆಗೆ ಹೋಗಿಬಿಡುತ್ತಿದ್ದಳು, ನನಗೊಂದು ಫೋನ್ ಕೂಡ ಮಾಡದೇ. ಮರುದಿನ ನಾನೇ ಅವಳನ್ನು ಕರೆದುಕೊಂಡು ಬರಬೇಕಾಗಿತ್ತು.&lt;/p&gt;&lt;p align="justify"&gt;&lt;br /&gt;&lt;br /&gt;ಆದರೆ ತಿಂಗಳುಗಳು ಉರುಳುತ್ತಿದ್ದಂತೆಯೇ, ನಿಧಾನವಾಗಿ ಅವಳ ಜವಾಬ್ದಾರಿಗಳು ಅವಳಿಗೆ ಮನದಟ್ಟಾಗತೊಡಗಿದವು. ಹಿಂದಿಗಿಂತಲೂ ಜಾಸ್ತಿ ಸಹನೆ ತೋರಿಸಲು ಶುರು ಮಾಡಿದಳು. ಅಪರೂಪಕ್ಕೆ ನನಗಿಂತ ಮುಂಚೆ ಎದ್ದು ಕಾಫಿ ಮಾಡುತ್ತಿದ್ದಳು. ನಾನೇ ಅಚ್ಚರಿಪಡುವಷ್ಟು ಶಿಸ್ತನ್ನು ಮೈಗೂಡಿಸಿಕೊಂಡಳು. ರವಿವಾರದಂದು ಅಮ್ಮನ ಮನೆಗೆ ಹೋಗಿ ಹೊಸ ಅಡುಗೆಗಳನ್ನು ಕಲಿತು, ನನ್ನ ಮೇಲೆ ಪ್ರಯತ್ನಿಸುವ ಧೈರ್ಯ ತೋರಿಸುತ್ತಿದ್ದಳು. ನಾನು ಒತ್ತಾಯ ಮಾಡಿದ ಮೇಲೆ ನನ್ನ ಜೊತೆ ಸಿನೆಮಾಕ್ಕೋ, ಫ್ರೆಂಡ್ಸಗಳ ಮನೆಗೋ ಬರುತ್ತಿದ್ದಳು. ಎಫ಼್-೧ ರೇಸನ್ನು ನನ್ನ ಜೊತೆ ಕುಳಿತುಕೊಂಡು ನೋಡಿ, ಶೂಮಾಕರ್ ಗೆದ್ದಾಗ ನನ್ನಷ್ಟೇ ಸಂಭ್ರಮ ಪಡುತ್ತಿದ್ದಳು. ನನ್ನ ಸಹಚರ್ಯದಲ್ಲಿ ಅವಳು ಸಂತೋಷವಾಗಿರುವುದನ್ನು ನಾನು ಗಮನಿಸಿದೆ. ಆಗಾಗ ನನಗೆ ಅಲ್ಪ ಸ್ವಲ್ಪ ಗೊತ್ತಿದ್ದ ಕೆಮೆಷ್ಟ್ರಿಯನ್ನು ಹೇಳಿ, ರೇಗಿಸಿ, ಜಗಳವಾಡಿ ಬೈಸಿಕೊಳ್ಳುತ್ತಿದ್ದೆ. ಹಂಸಧ್ವನಿ ರಾಗದಲ್ಲಿ "ವಾತಾಪಿ ಗಣಪತೆಂಭಜೇಹಂ" ಎಂದು ಅವಳು ಭಕ್ತಿಯಿಂದ ಹಾಡುವಾಗ ಅವಳ ಪಕ್ಕ ಕುಳಿತು ಕಾಡುತ್ತಿದ್ದೆ. ನಾವಿಬ್ಬರೂ ಈಗ ಅತ್ಯಂತ ಸುಖಿಗಳು.&lt;br /&gt;&lt;br /&gt;ಮೊನ್ನೆ ನಮ್ಮ ಪ್ರಥಮ ಆನಿವರ್ಸರಿಗೆ ಅವಳಿಗೆ ಒಂದು ಸುಂದರ ಕೆಂಪು ಗುಲಾಬಿಯನ್ನೂ, ಮೆತ್ತನೆಯ ಟೆಡ್ಡಿ ಬೇರನ್ನೂ ತಂದು ಕೊಟ್ಟೆ. ಆವತ್ತು ಅವಳು ತುಂಬಾ ಖುಶಿಯಾಗಿದ್ದಳು. ಹಿಂದೆ ನಡೆದಿದ್ದೆಲ್ಲದ್ದಕ್ಕೂ, ನನಗಾದ ತೊಂದರೆಗೂ ಅವಳು ಕ್ಷಮೆ ಕೇಳಿದಳು. ನಾನು ನಕ್ಕು ಬಿಟ್ಟೆ. ಹಿಂದಾಗಿದ್ದೆಲ್ಲವನ್ನೂ ನಾನು ಈಗ ಮರೆತು ಬಿಟ್ಟಿದ್ದೇನೆ, ನಿನ್ನನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದೆನ್ನುವಷ್ಟರಲ್ಲಿ, ಅವಳ ಕಣ್ಣಂಚಿನಲ್ಲಿ ಸಣ್ಣ ಹನಿ ತುಳುಕಿದ್ದನ್ನು ನಾನು ಗಮನಿಸಿದೆ. ಈಗಲೂ ಒಮ್ಮೊಮ್ಮೆ ಅವಳು ಯಾವುದೋ ಸಣ್ಣ ಕಾರಣಕ್ಕೆಲ್ಲಾ ಹಠ ಮಾಡುತ್ತಿರುತ್ತಾಳೆ. ಆಗೆಲ್ಲಾ ನಾನು, ಹಿಂದೆ ಅವಳು ಹೇಗೆ ೯೧೧ ಗೆ ಕಾಲ್ ಮಾಡ್ತಿನಿ ಅಂತ ಹೇಳಿ ಹೆದರಿಸಿದ್ದನ್ನು ನೆನಪಿಸಿ, ರೇಗಿಸುತ್ತಿರುತ್ತೇನೆ. ನಾನು ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬರದಿದ್ದರೆ ಏನಾಗುತ್ತಿತ್ತೋ ಅಂತ ಒಮ್ಮೊಮ್ಮೆ ಅನ್ನಿಸುವುದಿದೆ. ಆದರೆ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಮಾತ್ರಾ ಸಮಂಜಸವಾಗಿತ್ತು ಅನ್ನುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ.&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-3480197408206100039?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/3480197408206100039/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=3480197408206100039' title='6 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/3480197408206100039'/><link rel='self' type='application/atom+xml' href='http://www.blogger.com/feeds/6035880729059442700/posts/default/3480197408206100039'/><link rel='alternate' type='text/html' href='http://madhu-vana.blogspot.com/2008/03/blog-post.html' title='ನೀನಿಲ್ಲದೇ ಬಾಳೊಂದು ಬಾಳೇ..'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>6</thr:total></entry><entry><id>tag:blogger.com,1999:blog-6035880729059442700.post-1306660628914285592</id><published>2008-02-28T14:39:00.000-08:00</published><updated>2008-12-10T20:34:58.958-08:00</updated><title type='text'>ಅವಳು ಹೇಳಿದ್ದು..</title><content type='html'>&lt;a href="http://4.bp.blogspot.com/_dUxzF14Tgas/R8gjlUgEPoI/AAAAAAAAAFw/oAoDdpMFfFs/s1600-h/ATcAAABFl1luB9ev9fznBxWyc4SGsY82BRZkzUXicGN6l7OmjrEgdj0ZVVhtjoOPGN3XEQWcOx2gMj7tomJdxy7zhSUQAJtU9VDFYoMQkDFAOZU6fYChJtG-mF5aSg.jpg"&gt;&lt;img id="BLOGGER_PHOTO_ID_5172423296100351618" style="DISPLAY: block; MARGIN: 0px auto 10px; WIDTH: 197px; CURSOR: hand; HEIGHT: 201px; TEXT-ALIGN: center" height="207" alt="" src="http://4.bp.blogspot.com/_dUxzF14Tgas/R8gjlUgEPoI/AAAAAAAAAFw/oAoDdpMFfFs/s320/ATcAAABFl1luB9ev9fznBxWyc4SGsY82BRZkzUXicGN6l7OmjrEgdj0ZVVhtjoOPGN3XEQWcOx2gMj7tomJdxy7zhSUQAJtU9VDFYoMQkDFAOZU6fYChJtG-mF5aSg.jpg" width="250" border="0" /&gt;&lt;/a&gt;&lt;br /&gt;&lt;div&gt;ಕಣ್ದಾವರೆ ಕುಡಿನೋಟ, ಪಿಸು ಮಾತ ತುಂಟಾಟ&lt;br /&gt;&lt;span class=""&gt;&lt;/span&gt;ಮುಂಗುರುಳ ಮೃದುಲಾಸ್ಯ,ತುಟಿಯಂಚು ಮಂದಹಾಸ&lt;br /&gt;ಗಾಢಾಂಧಕಾರ ಸೀಳಿದ ಬೆಳ್ಳಿಕೋಲ ಹೊಳಹು&lt;br /&gt;ಸಾರಿವೆಯಾ ನನಸಾಗುವ ಕನಸ ಸಂಭ್ರಮವನ್ನು?&lt;br /&gt;&lt;span class=""&gt;&lt;br /&gt;ಹೆಪ್ಪುಗಟ್ಟಿದ ಮಾತು, ಮಡುಗಟ್ಟಿದ ಮೌನ&lt;br /&gt;ಕಾಲದ ಬಿಂಬ ಕಣ್ರೆಪ್ಪೆಯಲೇ ಪ್ರತಿಮೆ&lt;br /&gt;ಭಾವದೊರತೆ ಮೊಗದಿ ಉಕ್ಕಿದಾ ಸಾಗರ&lt;br /&gt;ಹುಸಿಯೇ ನಲ್ಲನ ಬರುವಿಕೆಯ ನಿರೀಕ್ಷೆ?&lt;br /&gt;&lt;br /&gt;ಮೈತಬ್ಬಿದಾ ವೇಲು,ಇಳಿಬಿದ್ದ ಹೆರಳು&lt;br /&gt;ಹಿನ್ನೆಲೆಯ ಅವ್ಯಕ್ತಭಾವ, ಮರೆಮಾಚಿದ ಸತ್ಯ&lt;br /&gt;ಕಾಲನಾಳದಿ ಸಮಾಧಿಯಾದ ಚಿದಂಬರ ರಹಸ್ಯ&lt;br /&gt;ಅರಿಯದ ನಿರಾಭರಣ ನೀರೆಯ ತುಮುಲಾಟದ ಕಥೆ, ವ್ಯಥೆ&lt;br /&gt;&lt;/span&gt;&lt;/span&gt;&lt;br /&gt;(ನನ್ನ ಪ್ರಥಮ ಪ್ರಯತ್ನ. ಅಲ್ಲಲ್ಲಿ ತಿದ್ದಿ,ಸೂಚನೆ ನೀಡಿದ ಅಕ್ಕನಿಗೆ ಧನ್ಯವಾದಗಳು)&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-1306660628914285592?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/1306660628914285592/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=1306660628914285592' title='5 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/1306660628914285592'/><link rel='self' type='application/atom+xml' href='http://www.blogger.com/feeds/6035880729059442700/posts/default/1306660628914285592'/><link rel='alternate' type='text/html' href='http://madhu-vana.blogspot.com/2008/02/blog-post_28.html' title='ಅವಳು ಹೇಳಿದ್ದು..'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_dUxzF14Tgas/R8gjlUgEPoI/AAAAAAAAAFw/oAoDdpMFfFs/s72-c/ATcAAABFl1luB9ev9fznBxWyc4SGsY82BRZkzUXicGN6l7OmjrEgdj0ZVVhtjoOPGN3XEQWcOx2gMj7tomJdxy7zhSUQAJtU9VDFYoMQkDFAOZU6fYChJtG-mF5aSg.jpg' height='72' width='72'/><thr:total>5</thr:total></entry><entry><id>tag:blogger.com,1999:blog-6035880729059442700.post-4612558264117988241</id><published>2008-02-22T12:46:00.000-08:00</published><updated>2008-02-22T13:09:47.335-08:00</updated><title type='text'>ನಾದಮಯ..ಈ ಲೋಕವೆಲ್ಲ</title><content type='html'>&lt;div align="justify"&gt;ಸುರೇಶ ತನ್ನ ಹಳೆಯ ಟಿ.ವಿ.ಎಸ್ ಎಕ್ಸೆಲ್ ಅನ್ನು ಗಾಂಧಿ ಬಜಾರಿನ ಸಂದಿಗೊಂದಿಯಲ್ಲಿ ತಿರುಗಿಸಿ, ಎಚ್.ಬಿ.ಸೇವಾಸಮಾಜ ರೋಡಿನ ತುದಿಯಲ್ಲಿದ್ದ ನೀಲಿ ಮನೆಯ ಬಾಗಿಲ ಮುಂದೆ ನಿಂತಾಗ ಗಡಿಯಾರ ೭.೧೫ ತೋರುತ್ತಿತ್ತು. ಗಡಿಬಿಡಿಯಿಂದ ಹೆಲ್ಮೆಟ್ ತೆಗೆದು, ಹ್ಯಾಂಡ್ ಲಾಕ್ ಮಾಡಿ, ಪುಸ್ತಕ ತೆಗೆದುಕೊಂಡು ನಿಧಾನವಾಗಿ ಮಾಳಿಗೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಭಾಗ್ವತರ ಸಣ್ಣ ರೂಮಿನಿಂದ ಹಾರ್ಮೋನಿಯಮ್ ಸದ್ದೂ, ತಾಳಮಾಲಿಕೆಯ ಸದ್ದೂ, ಅಲೆ ಅಲೆಯಾಗಿ ತೇಲಿ ಬಂದು ಅವನ ಕಿವಿಗೆ ಅಪ್ಪಳಿಸತೊಡಗಿತು.&lt;/div&gt;&lt;div align="justify"&gt; &lt;/div&gt;&lt;div align="justify"&gt;ಶೂ ಬಿಚ್ಚಿ, ನಿಧಾನಕ್ಕೆ ಬಾಗಿಲು ತೆರೆದು ರೂಮಿನೊಳಕ್ಕೆ ಅಡಿಯಿಟ್ಟವನಿಗೆ ಸಂಗೀತ ಲೋಕ ನಿಧಾನವಾಗಿ ಅನಾವರಣಗೊಳ್ಳತೊಡಗಿತು. ೬.೩೦ ರ ಕ್ಲಾಸಿನ ಪುಷ್ಪಮಾಲಾ ಅಕ್ಕ ಆಗಲೇ ಒಂದು ರೌಂಡ್ ತಾಲೀಮು ನಡೆಸಿ, ಎರಡನೆಯದಕ್ಕೆ ರೆಡಿಯಾಗುತ್ತಿದ್ದರು. ಭಾಗ್ವತರು ಹಾರ್ಮೋನಿಯಮ್ ಹಿಡಿದು, ತಾಳಮಾಲಿಕೆಯ ವೇಗವನ್ನು ಅಡ್ಜಸ್ಟ್ ಮಾಡುತ್ತಿದ್ದರು. ಸುರೇಶ, ಕಣ್ಣಿನಲ್ಲೇ ಒಂದು ನಮಸ್ಕಾರ ಮಾಡಿ, ನೆಲದ ಮೇಲೆ ಹಾಸಿದ್ದ ಜಮಖಾನೆಯ ಮೇಲೆಯೇ ಪುಷ್ಪಮಾಲಳ ಪಕ್ಕ ಕುಳಿತುಕೊಂಡ. ಹಾರ್ಮೋನಿಯಮ್ಮಿನ ಹಮ್ಮಿಂಗ್ ಶಬ್ದ ಒಂದು ವಿಲಕ್ಷಣವಾದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಭಾಗ್ವತರು ನಿಧಾನಕ್ಕೆ "ಕಲ್ಯಾಣ ಕೃಷ್ಣಾ, ಕಮನೀಯ ಕೃಷ್ಣಾ, ಕಾಳಿಂಗ ಮರ್ಧನ ಶ್ರೀಕೃಷ್ಣಾ" ಎಂದು ಜಿಂಝೋಟಿ ರಾಗದಲ್ಲಿ ಭಜನೆ ಹೇಳಿಕೊಡಲು ಶುರುಮಾಡಿದರು. ಅದನ್ನು ಪುನರಾವರ್ತಿಸುತ್ತಿದ್ದಿದ್ದು ಪುಷ್ಪಲತಾ ಆಗಿದ್ದರೂ, ಸುರೇಶನ ಮನಸ್ಸು ಅಪ್ರಯತ್ನಪೂರ್ವಕವಾಗಿ ಅವಳಿಗೆ ಸಾಥ್ ನೀಡುತ್ತಿತ್ತು. ಭಜನೆ ಮುಗಿದು ಪುಷ್ಪಮಾಲಾ ಅಕ್ಕ ಎದ್ದು ಹೋದರೂ, ಸುರೇಶನಿಗೆ ಇನ್ನೂ ಜಿಂಝೋಟಿ ರಾಗದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ. ಹಿಂದೊಮ್ಮೆ ಆ ರಾಗವನ್ನು ಕಲಿಸಿಕೊಡಿ ಎಂದು ಅವನು ಭಾಗ್ವತರನ್ನು ಕೇಳಿಕೊಂಡಿದ್ದ. ಆದರೆ ಜಿಂಝೋಟಿ ರಾಗ ಸ್ವಲ್ಪ ಕ್ಲಿಷ್ಟವಾಗಿದ್ದುದರಿಂದ ಭಾಗ್ವತರು ಅದನ್ನು ನಿರಾಕರಿಸಿದ್ದರು. ಅಂಥ ಕ್ಲಿಷ್ಟ ರಾಗಗಳನ್ನು ಕಲಿಯಲು ಸುರೇಶ ಇನ್ನೂ ಹೆಚ್ಚಿನ ಸಮಯ ಕಾಯಬೇಕಾಗಿತ್ತು.&lt;/div&gt;&lt;div align="justify"&gt;&lt;br /&gt;ಸುರೇಶನಿಗೆ ಶಾಸ್ತ್ರೀಯ ಸಂಗೀತದ ಹುಚ್ಚು ಯಾವಾಗ ಹಿಡಿಯಿತೆಂದು ತಿಳಿದುಕೊಳ್ಳಲು ನೀವು ಈಗೊಂದು ಆರು ವರ್ಷದ ಹಿಂದೆ ಹೋಗಬೇಕು. ಸುರೇಶನಿಗೆ ಸಂಗೀತದ ಹಿನ್ನೆಲೆಯೇನೂ ಇರಲಿಲ್ಲ. ಅರ್ಧಮರ್ಧ ಬರುತ್ತಿದ್ದ ಹಿಂದಿ ಹಾಡುಗಳನ್ನು ಕೆಟ್ಟ ಸ್ವರದಲ್ಲಿ ಕಿರುಚಿ ಹಾಡುವುದಕ್ಕೇ ಅವನ ಸಂಗೀತ ಜ್ನಾನ ಸೀಮಿತವಾಗಿತ್ತು. ಆದರೆ ಕಾಲೇಜಿನಲ್ಲಿರುವಾಗ "ಸ್ಪಿಕ್ ಮೆಕೆ" ಯವರು ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಭಾ ಅತ್ರೆಯವರ ಗಾಯನ ಸುರೇಶನ ಮೇಲೆ ಎಷ್ಟು ಅಚ್ಚಳಿಯದಂತ ಪ್ರಭಾವವನ್ನು ಉಂಟುಮಾಡಿತ್ತೆಂದರೆ, ಆವತ್ತಿನಿಂದ ಸುರೇಶನಿಗೆ ಶಾಸ್ತ್ರೀಯ ಸಂಗೀತದ ಮುಂದೆ ಉಳಿದಿದೆಲ್ಲಾ ಗೌಣ ಎಂದನ್ನಿಸಲು ಶುರುವಾಯಿತು. ಆವಾಗಲಿಂದ, ಅಪ್ಪ ಕೊಡುತ್ತಿದ್ದ ತಿಂಗಳ ಖರ್ಚಿನಲ್ಲೇ ಆದಷ್ಟು ಉಳಿಸಿ ಸಾಧ್ಯವಾದಷ್ಟು ಕ್ಯಾಸೆಟ್ ಗಳನ್ನು ಕೊಂಡು ತಂದು ಪದೇ ಪದೇ ಕೇಳಲು ಶುರುಮಾಡಿದ್ದ. ಶಾಸ್ತ್ರೀಯ ಸಂಗೀತದ ಮೇಲೆ ಇವನು ಬೆಳೆಸಿಕೊಂಡಿದ್ದ ಗೀಳು, ಅವನ ಅಪ್ಪ ಅಮ್ಮನಿಗೂ ಆಶ್ಚರ್ಯ ತಂದಿತ್ತು. ಬೆಂಗಳೂರಿಗೆ ಬಂದು ಕೆಲಸ ಮಾಡಿ, ಕೈಯಲ್ಲಿ ಒಂದೆರಡು ಕಾಸು ಆಡತೊಡಗಿದ ಮೇಲೆ, ಅವರಿವರನ್ನು ಕೇಳಿ ಭಾಗ್ವತರ ಅಡ್ರೆಸ್ ಪಡೆದುಕೊಂಡು, ಅವರ ಹತ್ತಿರ ಸಂಗೀತ ಕಲಿಯಲು ಶುರುಮಾಡಿದ್ದ. ಸಂಗೀತದ ಹಿನ್ನೆಲೆಯೇ ಇಲ್ಲದ, ಅಷ್ಟೊಂದೇನೂ ಒಳ್ಳೆ ಕಂಠವೂ ಇಲ್ಲದ ಸುರೇಶನಿಗೆ ಸಂಗೀತ ಹೇಳಿಕೊಡಲು ಭಾಗ್ವತರು ಮೊದಲು ಸ್ವಲ್ಪ ಹಿಂಜರಿದರೂ, &lt;span class=""&gt;ಸುರೇಶ ಒತ್ತಾಯ&lt;/span&gt; ಮಾಡಿದ ನಂತರ, ಅವನ ಉತ್ಸುಕತೆಯನ್ನು ನೋಡಿ ಪ್ರತೀ ಶನಿವಾರ ೭.೩೦ ಗಂಟೆಗೆ ಅವನ ಕ್ಲಾಸನ್ನು ನಿಗದಿ ಮಾಡಿದ್ದರು.&lt;/div&gt;&lt;div align="justify"&gt;&lt;br /&gt;ಭಾಗ್ವತರು ಈಗ ಕರೆ ಎರಡರ ಶೃತಿ ಹಿಡಿದು ರೆಡಿ ಆಗಿದ್ದರು. ಸುರೇಶ ಪುಸ್ತಕ ತೆಗೆದು, ದುರ್ಗಾ ರಾಗವನ್ನು ಹಾಡಲು ಶುರು ಮಾಡಿದ. ಆರೋಹಣ, ಅವರೋಹಣ, ಸ್ವರ ಗೀತೆ ಆದಮೇಲೆ ಹಿಂದಿನ ವಾರ ಕಲಿಸಿಕೊಟ್ಟ ಆಲಾಪವನ್ನು ತಾಳಮಾಲಿಕೆಯ ಜೊತೆ ಶುರುಮಾಡಿದ. ಒಂದೆರಡು ಆವರ್ತನೆಯಾಗುವುದರಲ್ಲಿ ಸುರೇಶನ ಕಂಠ ಒಂದು ಹದಕ್ಕೆ ಬಂದಿತ್ತು. ಆದರೂ ಮಧ್ಯದಲ್ಲಿ ಎರಡು ಸಲ ತಾಳ ತಪ್ಪಿದ. ಭಾಗ್ವತರು ಮತ್ತೆ ಸರಿಯಾಗಿ ಹೇಳಿಕೊಟ್ಟರು. ಹಾಗೇ ಮುಂದುವರೆಸಿಕೊಂಡು ಹೋದವನು, "ಸಾ" ದಿಂದ "ಹಿಮ ನಗ ನಂದಿನಿ, ಭವ ಭಯ ಕೌಂದಿನಿ" ಎಂದು ಅಂತರಾವನ್ನು ಶುರು ಮಾಡುವುದರ ಬದಲು ನಿಷಾದಕ್ಕೇ ಎಳೆದು ಹಾಡಲು ಶುರುಮಾಡಿಬಿಟ್ಟ. ಭಾಗ್ವತರು ಈಗ ಹಾರ್ಮೋನಿಯಮ್ ನಿಲ್ಲಿಸಿಬಿಟ್ಟರು. ಮತ್ತೆ ಹಿಂದಿನಿಂದ ಆಲಾಪ ಶುರು ಮಾಡಬೇಕಾಯಿತು. ಎರಡು ಮೂರು ಪ್ರಯತ್ನದ ನಂತರವೂ ಭಾಗ್ವತರಿಗೆ ತೃಪ್ತಿಯಾಗುವಂತೆ ಸುರೇಶನಿಗೆ ಹಾಡಲು ಸಾಧ್ಯವಾಗಲೇ ಇಲ್ಲ. ಈಗ ನಿಷಾದಕ್ಕಿಂತ ಸ್ವಲ್ಪ ಈಚೆ ಅಂತರಾವನ್ನು ಶುರುಮಾಡುತ್ತಿದ್ದರೂ, ಸರಿಯಾಗಿ "ಸಾ" ಹಚ್ಚಲು ಅವನು ವಿಫಲನಾಗುತ್ತಿದ್ದ. ಹಾರ್ಮೋನಿಯಮ್ ಅಲ್ಲಿ "ಸಾ" ಮತ್ತು "ನಿ" ಯನ್ನು ಬಿಡಿ ಬಿಡಿಯಾಗಿ ಹಿಡಿದು ತೋರಿಸಿದಾಗ ಸರಿಯಾಗಿಯೇ ಹಾಡುತ್ತಿದ್ದವನು, ಅವುಗಳ ಜೊತೆ ಇನ್ಯಾವುದೋ ಸ್ವರ ಸೇರಿಕೊಂಡಾಗ, ಅಥವಾ ಎರಡೂ ಸ್ವರಗಳನ್ನು ಒಟ್ಟಿಗೆ ಹಾಡುವಾಗ ಮಾತ್ರಾ ಗಲಿಬಿಲಿಯಾಗಿ ತಪ್ಪು ತಪ್ಪಾಗಿ ಯಾವುದೋ ಸ್ವರ ಹಾಡಿ ಬಿಡುತ್ತಿದ್ದ. ಇನ್ನೂ ಮೂರು   ನಾಲ್ಕು ವಿಫಲ ಪ್ರಯತ್ನಗಳ ಬಳಿಕ, ಭಾಗ್ವತರಿಗೆ ಇದು ಬರೀ ಗಾಳಿಯಲ್ಲಿ ಗುದ್ದಾಟ ಮಾಡಿದ ಹಾಗೇ ಅನ್ನಿಸಿರಬೇಕು. "ಇವತ್ತಿಗೆ ಕ್ಲಾಸ್ ಸಾಕು. "ನಿ"   ಮತ್ತು   "ಸಾ"  ಗಳನ್ನು ನೀನು ಸರಿಯಾಗಿ ಗುರುತಿಸದ ಹೊರತು ಮುಂದಕ್ಕೆ ಕಲಿಯುವ ಪ್ರಮೇಯವೇ ಇಲ್ಲ. ಒಂದು ಕೆಲಸ ಮಾಡು. ಹಿಂದೆ ಹೇಳಿಕೊಟ್ಟಿದ್ದ ಅಲಂಕಾರಗಳನ್ನು ಮತ್ತೆ ಪ್ರಾಕ್ಟೀಸ್ ಮಾಡಿಕೊಂಡು ಬಾ. ಮುಂದಿನ ವಾರ ನೋಡೋಣ" ಎಂದವರೇ, ಹಾರ್ಮೋನಿಯಮ್ಮಿನ ಬಾತೆಗಳನ್ನು ಮುಚ್ಚಿ, ಬದಿಗಿಟ್ಟರು. ಸುರೇಶನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅವನಿಗೆ ಅಪಾರವಾದ ನಿರಾಸೆಯಾಗಿತ್ತು. ಸಪ್ಪೆ ಮುಖ ಹೊತ್ತು ಹಿಂದಿರುಗಿದ.&lt;/div&gt;&lt;div align="justify"&gt;&lt;br /&gt;ಸೌತ್ ಎಂಡ್ ಸರ್ಕಲ್ಲಿನ ಕಡೆ ವೇಗವಾಗಿ ಹೋಗುತ್ತಿದ್ದವನ ಮನಸ್ಸೆಲ್ಲ ತುಂಬಾ ಆ ನಿರಾಶೆಯೇ ತುಂಬಿಕೊಂಡಿತ್ತು. ಹಿಂದೆಲ್ಲಾ ಅವನು ಎಲ್ಲವನ್ನೂ ಸರಿಯಾಗೇ ಹಾಡುತ್ತಿದ್ದ. ಈಗೊಂದು ತಿಂಗಳಿಂದ ಆಫೀಸಿನಲ್ಲಿ ಕೆಲಸ ಹೆಚ್ಚಾದುದರಿಂದ ಪ್ರಾಕ್ಟೀಸ್ ಮಾಡಲು ಜಾಸ್ತಿ ಸಮಯ ಸಿಕ್ಕಿರಲಿಲ್ಲ. ಈ ವಾರ ಸರಿಯಾಗಿ ಪ್ರಾಕ್ಟೀಸ್ ಮಾಡಿ ಮುಂದಿನ ವಾರದ ಕ್ಲಾಸಲ್ಲಿ ಸರಿಯಾಗಿ ಹಾಡೇ ಹಾಡುತ್ತೇನೆಂಬ ದೃಢ ನಿರ್ಧಾರ ಮಾಡಿ ಗಾಡಿಯ ಎಕ್ಸಲರೇಟರನ್ನು ಇನ್ನೂ ಜಾಸ್ತಿ ಮಾಡಿದ. ಸೌತ್ ಎಂಡ್ ಸರ್ಕಲ್, ಫೋರ್ತ್ ಬ್ಲಾಕು, ಬನ್ನೇರುಘಟ್ಟ ರಸ್ತೆ ದಾಟಿ, ಬಿ.ಟಿ.ಎಂ ನ ಮುಖ್ಯ ಸಿಗ್ನಲ್ಲಿಗೆ ಬಂದಾಗ ಸಮಯ ೮.೩೦ ದಾಟಿತ್ತು. ಸಿಗ್ನಲ್ಲಿನಲ್ಲಿ ೧೦ ನಿಮಿಷ ಕಾಯ್ದು, ರೂಮ್ ಸೇರಿದಾಗ ಸುರೇಶನಿಗೆ ಇವತ್ತು ತನ್ನದೇ ಅಡುಗೆ ಪಾಳಿ ಎಂಬುದು ನೆನಪಾಯಿತು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಗೆಳೆಯರ ಜೊತೆ ಸುರೇಶ ಒಂದು ಡಬಲ್ ಬೆಡ್ ರೂಮಿನ ಮನೆಯೊಂದರಲ್ಲಿ ಇರುತ್ತಿದ್ದ. ದಿನಕ್ಕೊಬ್ಬರಂತೆ ಅಡುಗೆ ಪಾಳಿ ವಹಿಸಿಕೊಂಡಿದ್ದರು. ಇವತ್ಯಾಕೋ ಸುರೇಶನಿಗೆ ಅಡುಗೆ ಮಾಡುವ ಮೂಡೇ ಇರಲಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಿಂದಲೇ ಒಂದಷ್ಟು ಬೀನ್ಸ್, ಕಾರೆಟ್ ಹೆಚ್ಚಿ ಹಾಕಿ, ಬೇಳೆಯ ಜೊತೆ ಒಂದು ಕುಕ್ಕರಿನಲ್ಲೂ, ಅಕ್ಕಿ ತೊಳೆದು ಇನ್ನೊಂದು ಕುಕ್ಕರಿನಲ್ಲೂ ಇಟ್ಟ.&lt;/div&gt;&lt;div align="justify"&gt;&lt;br /&gt;ಊಟವಾದ ಮೇಲೆ ಹಾರ್ಮೋನಿಯಮ್ ಹಿಡಿದು ಒಂದಷ್ಟು ಅಭ್ಯಾಸ ಮಾಡಬೇಕೆಂದು ಅಂದುಕೊಂಡವನು, ರೂಮ್ ಮೇಟ್ ಗಳೆಲ್ಲಾ ಆಗಲೇ ಮಲಗಲು ತಯಾರಾಗುತ್ತಿರುವುದನ್ನು ಕಂಡು ಹಿಂಜರಿದ. ಗುರುಗಳಿಗೆ ಗುರುತಿದ್ದ ಯಾವುದೋ ಅಂಗಡಿಯಿಂದ ಹಳೆಯ ಒಂದು ಸೆಕೆಂಡ್ ಹಾಂಡ್ ಹಾರ್ಮೋನಿಯಮನ್ನು ಸುರೇಶ, ಕಮ್ಮಿ ಬೆಲೆಗೆ ಖರೀದಿಸಿದ್ದ. ಹಳೆಯ ಆ ಹಾರ್ಮೋನಿಯಮ್ಮಿನ ಮನೆಗಳೆಲ್ಲಾ ಸವೆದು ಸವೆದು ಇನ್ನೇನು ಜೀರ್ಣಾವಸ್ಥೆಯಲ್ಲಿದ್ದವು. ಹಳೆಯದಾಗಿದ್ದಕ್ಕೋ ಏನೋ, ಅದರಿಂದ ಹೊರಡುತ್ತಿದ್ದ ಸದ್ದು ಸ್ವಲ್ಪ ಕರ್ಕಶವಾಗಿಯೇ ಕೇಳುತ್ತಿತ್ತು. ರವಿವಾರದಂದು ಅಭ್ಯಾಸ ಮಾಡುವಾಗ ಒಂದೆರಡು ಸಲ, ಪಕ್ಕದ ಮನೆಯ ದಪ್ಪ ದೇಹದ ಮುಸ್ಲಿಮ್ ಆಂಟಿ ಇವರ ಮನೆಗೆ ಬಂದು ಕಂಪ್ಲೇಂಟ್ ಬೇರೆ ಮಾಡಿದ್ದಳು. ಆವತ್ತಿನಿಂದ ಸುರೇಶ ಸ್ವಲ್ಪ ಜಾಸ್ತಿನೇ ಜಾಗರೂಕನಾಗಿದ್ದ. ಹಾರ್ಮೋನಿಯಮ್ ಶುರು ಮಾಡಿ ಒಂದಷ್ಟು ಅಭ್ಯಾಸಮಾಡಬೇಕೆಂದು ಅವನ ಮನಸ್ಸು ತೀವ್ರವಾಗಿ ತುಡಿಯುತ್ತಿದ್ದರೂ, ಅನಿವಾರ್ಯವಾಗಿ ಅದನ್ನು ಹತ್ತಿಕ್ಕಬೇಕಾಯಿತು. ರಾತ್ರಿಯಿಡೀ ಸುರೇಶನಿಗೆ ನಿದ್ದೆಯೇ ಹತ್ತಲಿಲ್ಲ. ದುರ್ಗಾ ರಾಗದ ಸ್ವರಗಳು ಇನ್ನೂ ಕಿವಿಯಲ್ಲೇ ಗುಂಯ್ ಗುಡುತ್ತಲೇ ಇತ್ತು. ಸುಮಾರು ೧೨ ಗಂಟೆಯ ತನಕ ಹಾಸಿಗೆಯಲ್ಲೇ ಹೊರಳಾಡಿದವನು, ತಡೆಯಲು ಆಗದೇ, ಮೆಲ್ಲಗೆ ಎದ್ದು ಹಾಲ್ ಗೆ ಬಂದು,ಮುದ್ರಿಸಿಕೊಂಡು ಬಂದಿದ್ದ ಕ್ಯಾಸೆಟ್ಟನ್ನು,ಟೇಪ್ ರೆಕಾರ್ಡರಿನಲ್ಲಿ ತುರುಕಿದ. ವಾಲ್ಯೂಮನ್ನು ಸಾಧ್ಯವಾದಷ್ಟು ಕಮ್ಮಿಯಲ್ಲಿಟ್ಟು, ಮನಸ್ಸಿನಲ್ಲೇ ಕ್ಯಾಸೆಟ್ಟಿನಲ್ಲಿದ್ದಂತೆಯೇ ಪುನರಾವರ್ತಿಸಲು ಶುರುಮಾಡಿದ. ಈ ಸಲ "ನಿ" ಮತ್ತು "ಸಾ" ಸರಿಯಾಗಿ ಬಂದಹಾಗೆ ಅನಿಸಿತು. ಸಂತೃಪ್ತಿಯೆನಿಸಿ, ಟೇಪ್ ರೇಕಾರ್ಡರ್ ಆರಿಸಿ ಮುಸುಕೆಳೆದು ಮಲಗಿಬಿಟ್ಟ.&lt;/div&gt;&lt;div align="justify"&gt;&lt;br /&gt;ಮಾರನೆಯ ದಿನ ರವಿವಾರ, ರೂಮ್ ಮೇಟ್ ಗಳೆಲ್ಲಾ ಎಷ್ಟೋ ಒತ್ತಾಯ ಮಾಡಿದರೂ, ಅವರ ಜೊತೆ ಸಿನೆಮಾಕ್ಕೆ ಹೋಗದೇ, ಮನೆಯಲ್ಲೇ ಉಳಿದುಕೊಂಡ. ಈಗ ಸುರೇಶನಿಗೆ ಸಂಗೀತ ಅಭ್ಯಾಸ ಮಾಡಲು ಒಳ್ಳೆಯ ವಾತಾವರಣ ಸಿಕ್ಕಿತ್ತು. ಮನೆಯ ಕಿಟಕಿ, ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ಹಾರ್ಮೋನಿಯಮ್ ಹಿಡಿದುಕುಳಿತ. ಮೊದಲನೆಯ ಕ್ಲಾಸಿನಲ್ಲಿ ಹೇಳಿಕೊಟ್ಟ ಅಲಂಕಾರಗಳಿಂದ ಹಿಡಿದು, ಇಲ್ಲಿಯ ತನಕ ಆದ ಎಲ್ಲಾ ರಾಗಗಳನ್ನು ಒಂದೊಂದಾಗಿ ಮತ್ತೆ ಹಾರ್ಮೋನಿಯಮ್ಮಿನ ಸಹಕಾರದೊಂದಿಗೆ ಹಾಡಲು ಶುರು ಮಾಡಿದ. ಇನ್ನೇನು ದುರ್ಗಾ ರಾಗ ಶುರುಮಾಡುವ ಹೊತ್ತಿಗೆ ಯಾರೋ ಬಾಗಿಲು ತಟ್ಟಿದ ಹಾಗಾಯಿತು. ರಸಭಂಗವಾದಂತನಿಸಿ, ತುಸು ಸಿಟ್ಟಿನಿಂದಲೇ ಬಾಗಿಲು ತೆಗೆದು ನೋಡಿದ. ನೋಡಿದರೆ, ಇಡೀ ರಾತ್ರಿ ಕಾಲನಿಯನ್ನು ಕಾವಲು ಕಾಯುತ್ತಿದ್ದ ಗೂರ್ಖಾ ಎದುರು ನಿಂತಿದ್ದ. ಸುರೇಶನನ್ನು ನೋಡಿದವನೇ "ಪೇಟಿ ಬಜಾರಹೆತೇ ಸಾಬ್? " ಎಂದು ಹುಳ್ಳಗೆ ನಕ್ಕ. ಸುರೇಶನಿಗೆ ಅವನ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂತಾದರೂ, ಹೇಗೋ ಸಾವರಿಸಿಕೊಂಡು "ಕ್ಯಾ ಚಾಹಿಯೆ?" ಎಂದು ಸಿಟ್ಟಿನಲ್ಲೇ ಕೇಳಿದ. ಸುರೇಶನ ಸಿಟ್ಟನ್ನು ಗಮನಿಸಿದಂತೆ ಗೂರ್ಖಾ, "ಪಾಂಚ್ ರುಪಯ್ಯಾ ಸಾಬ್" ಎಂದು ದೀನ ಮುಖ ಮಾಡಿ ಕೈಚಾಚಿದ. ಪ್ರತೀ ತಿಂಗಳೂ ಎಲ್ಲಾ ಮನೆಯಿಂದಲೂ ಹೀಗೆ ೫ ರುಪಾಯಿ ತೆಗೆದುಕೊಂಡು ಹೋಗುವುದು ಅವನಿಗೆ ಅಭ್ಯಾಸವಾಗಿ ಹೋಗಿತ್ತು. ಸಧ್ಯ ಇವನು ತೊಲಗಿದರೆ ಸಾಕೆಂದು ಅನಿಸಿ, ಪ್ಯಾಂಟ್ ಜೇಬಿನಿಂದ ೫ ರುಪಾಯಿಯ ನಾಣ್ಯ ತೆಗೆದು ಅವನ ಕೈಗಿತ್ತ. ಗೂರ್ಖಾ ಅವನಿಗೊಂದು ಸಲಾಮ್ ಹೊಡೆದು ಹಾಗೇ ತಿರುಗಿ ಹೋಗಿಬಿಟ್ಟ. ಅವನು ಸಲಾಮ್ ಹೊಡೆದಿದ್ದು ತನಗೋ ಅಥವಾ ತಾನು ಕೊಟ್ಟ ೫ ರುಪಾಯಿಗೋ ಅನ್ನುವ ಗೊಂದಲದಲ್ಲೇ ಇದ್ದವನಿಗೆ ಗಾಳಿಗೆ ಧೊಪ್ಪನೆ ಬಾಗಿಲು ಮುಚ್ಚಿಕೊಂಡಾಗಲೇ ಎಚ್ಚರವಾಗಿದ್ದು. &lt;/div&gt;&lt;div align="justify"&gt;&lt;br /&gt;ಮತ್ತೆ ಹಾಡಲು ಕುಳಿತವನಿಗೆ ಸಲೀಸಾಗಿ ಸ್ವರಗಳು ಒಲಿದುಬರಲು ಶುರುಮಾಡಿದವು. ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಸುರೇಶನ ದೊಡ್ಡ ಗಂಟಲಿಗೆ ವಿಚಿತ್ರವಾದ ಹಿನ್ನೆಲೆ ಒದಗಿಸಿತ್ತು. ಯಾವುದೋ ಲಹರಿಯಲ್ಲಿದ್ದವನಂತೆ, ಅತ್ಸುತ್ಸಾಹದಲ್ಲಿ ನೋಡು ನೋಡುತ್ತಿದ್ದಂತೆಯೇ ಆಲಾಪವನ್ನು ಮುಗಿಸಿ, ಲಯ ಸರಗಮ್ ಗಳನ್ನೂ ಹಾಡಿಬಿಟ್ಟ. ಎಲ್ಲಾ ಸರಿಯಾಗಿ ಬಂದ ಹಾಗೆ ತೋರಿತು. ಆದರೂ ಮನಸ್ಸಿನಲ್ಲಿ ಏನೋ ಸಂಶಯ, ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂದು. ಸರಿ, ಟೇಪ್ ರೆಕಾರ್ಡರಿನಲ್ಲಿ ಹೊಸದೊಂದು ಕೆಸೆಟ್ ತುರುಕಿ, ರೆಕಾರ್ಡ್ ಬಟನ್ ಒತ್ತಿ ಮತ್ತೊಮ್ಮೆ ಹಾಡಲು ಶುರು ಮಾಡಿದ. ಈ ಸಲ ಹಾಡುವಾಗ ಅವನ ಕಂಠ ಸ್ವಲ್ಪ ನಡುಗುತ್ತಿತ್ತು. ಹಾರ್ಮೋನಿಯಮ್ಮಿನ ಮೇಲೆ ಓಡಾಡುತ್ತಿದ್ದ ಬೆರಳುಗಳು ಬೆವೆಯುತ್ತಿದ್ದವು. ಹೇಗೋ ಹೇಗೋ ಹಾಡಿ ಮುಗಿಸಿದವನು, ಭಯದಿಂದಲೇ ಕೆಸೆಟ್ ರಿವೈಂಡ್ ಮಾಡಿ ಕೇಳತೊಡಗಿದ. ಕೆಸೆಟ್ಟಿನಲ್ಲಿ ಹಾರ್ಮೋನಿಯಮ್ಮಿನ ಸದ್ದೇ ಪ್ರಬಲವಾಗಿ, ಸುರೇಶನ ಧ್ವನಿ ಅಸ್ಪಷ್ಟವಾಗಿ ಗೊಣಗಿದಂತೆ ಕೇಳುತ್ತಿತ್ತು. ತಾನು ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂಬುದು ಸುರೇಶನಿಗೆ ಗೊತ್ತೇ ಆಗುತ್ತಿರಲಿಲ್ಲ. "ದರಿದ್ರ ಹಾರ್ಮೋನಿಯಮ್ಮು" ಎಂದು ಮನಸ್ಸಿನಲ್ಲೇ ಶಪಿಸಿ ಅದನ್ನು ಗೋಡೆಯ ಬದಿ ನೂಕಿದ. ಅವನು ನೂಕಿದ ರಭಸಕ್ಕೆ ಹಾರ್ಮೋನಿಯಮ್ಮಿನ ಬಾತೆ ತೆಗೆದುಕೊಂಡುಬಿಟ್ಟಿತು. ಬಾತೆ ತೆರೆದುಕೊಂಡ ಹಾರ್ಮೋನಿಯಮ್ಮು, ತನ್ನ ದುಸ್ತಿತಿಯನ್ನೇ ನೋಡಿ ಹಲ್ಲು ಬಿಟ್ಟುಕೊಂಡು ನಗುತ್ತಾ, ಅಣಕಿಸುತ್ತಿದಂತೆ ಭಾಸವಾಯಿತು ಸುರೇಶನಿಗೆ.&lt;/div&gt;&lt;div align="justify"&gt;&lt;br /&gt;ಅವತ್ತು ಇಡೀ ದಿನ, ಮತ್ತೆ ಹಾಡಲು ಮನಸ್ಸಾಗಲಿಲ್ಲ ಸುರೇಶನಿಗೆ. ಮನಸ್ಸಿನಲ್ಲಿ, ತನ್ನ ಸಾಮರ್ಥ್ಯದ ಬಗ್ಗೆಯೇ ಒಂದು ಅವ್ಯಕ್ತ ಭಯ ಕಾಡುತ್ತಿತ್ತು. ಸಂಗೀತವೆಂದರೇ ಒಂದು ರೀತಿಯ ದಿಗಿಲೆನಿಸಲು ಶುರುವಾಗಿತ್ತು. ಒಂದು ಕ್ಷಣ, ಈ ಸಂಗೀತದ ಗೀಳಿಗೆ ಬಿದ್ದು ತಪ್ಪು ಮಾಡಿದೆನೇನೋ ಅನ್ನಿಸಿತು. ಆದರೂ, ಒಳ್ಳೆ ಹಾಡುಗಾರನಾಗಬೇಕೆಂಬ ಅವನ ಕನಸನ್ನು ಅವನು ಅಷ್ಟು ಬೇಗ ಮರೆಯಲು ಸಿದ್ಧವಿರಲಿಲ್ಲ.ಮುಂದಿನ ವಾರ ಕ್ಲಾಸಿಗೆ ಹೋಗುವದಕ್ಕಿಂತ ಮುಂಚೆ ಒಂದು ತಾಸು ಇನ್ನೊಮ್ಮೆ ಮನೆಯಲ್ಲೇ ಅಭ್ಯಾಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ. &lt;/div&gt;&lt;div align="justify"&gt;&lt;br /&gt;ಆದರೆ, ಆ ಶನಿವಾರ ಭಾಗ್ವತರು ೫ ಗಂಟೆಗೇ ಫೋನ್ ಮಾಡಿ, ೬.೩೦ ರ ಪುಷ್ಪಮಾಲಾ ಕ್ಲಾಸಿಗೆ ಬರುತ್ತಿಲ್ಲವಾದುದರಿಂದ, ಸುರೇಶನಿಗೇ ಆ ಸಮಯಕ್ಕೆ ಕ್ಲಾಸಿಗೆ ಬರಲು ಹೇಳಿಬಿಟ್ಟರು. ಸುರೇಶ ಈಗ ನಿಜವಾಗಲೂ ದಿಗಿಲುಬಿದ್ದ. ಅವನಿಗೆ ಇನ್ನೂ ಆಫೀಸಿನ ಕೆಲಸ ಮುಗಿಸಿ ಹೊರಬೀಳಲು ಮುಕ್ಕಾಲು ಗಂಟೆಯಂತೂ ಬೇಕಾಗಿತ್ತು. ಇನ್ನು ಅಭ್ಯಾಸ ಮಾಡುವ ಪ್ರಮೇಯವೇ ಇಲ್ಲ. ಹೇಗೋ ಹೇಗೋ ಬೇಗ ಕೆಲಸ ಮುಗಿಸಿ ಹೊರಟವನಿಗೆ ಬಿ.ಟಿ.ಎಂ ಸಿಗ್ನಲ್ಲಿನಲ್ಲೇ ಆರು ಗಂಟೆ ಆಗಿಬಿಟ್ಟಿತ್ತು. ಸಣ್ಣಗೆ ಝುಮುರು ಮಳೆ ಹನಿ ಬೇರೆ ಬೀಳುತ್ತಿತ್ತು. ಲೇಟ್ ಆಗಿ ಹೋದರೆ, ತನಗಾಗಿ ಭಾಗ್ವತರು ಕಾಯುತ್ತಿರುತ್ತಾರೆ ಎಂಬ ಭಾವನೆಯೇ ಸುರೇಶನಿಗೆ ಇನ್ನೂ ದಿಗಿಲುಕ್ಕಿಸಿತು. ಯಾವು ಯಾವುದೋ ಬೀದಿಗಳಲ್ಲಿ ನುಗ್ಗಿ, ಶಾರ್ಟ್ ಕಟ್ ಹಿಡಿದು ಅಂತೂ ೬.೩೦ ಕ್ಕೆ ಗಾಂಧಿ ಬಜಾರ್ ತಲುಪಿ ನಿಟ್ಟುಸಿರು ಬಿಟ್ಟ.&lt;/div&gt;&lt;div align="justify"&gt;&lt;br /&gt;ಭಾಗ್ವತರು ಇವತ್ತು ಒಳ್ಳೆಯ ಮೂಡಲ್ಲಿ ಇದ್ದ ಹಾಗೆ ಕಂಡಿತು. ಮಳೆಯಲ್ಲಿ ತೊಯ್ದುಕೊಂಡು ಬಂದಿದ್ದ ಸುರೇಶನಿಗೆ ಭಾಗ್ವತರ ಹೆಂಡತಿ ಬಿಸಿ ಬಿಸಿ ಚಹ ಬೇರೆ ಮಾಡಿಕೊಟ್ಟರು. ಟ್ರಾಫಿಕ್ಕಿನಲ್ಲಿ ಸಿಕ್ಕಿ ನಲುಗಿ, ಮಳೆಯಲ್ಲಿ ತೊಯ್ದು ಹಿಂಡಿಯಾಗಿದ್ದ ಸುರೇಶ, ಚಹ ಕುಡಿದು ಸುಧಾರಿಸಿಕೊಂಡ. ಭಾಗ್ವತರಿಗೆ ಹಿಂದಿನ ವಾರ ನಡೆದಿದ್ದೆಲ್ಲವೂ ಮರೆತು ಹೋಗಿತ್ತು. ಹೆದರುತ್ತಲೇ, ಸುರೇಶ ಹಿಂದಿನದೆಲ್ಲದನ್ನೂ ನೆನಪಿಸಿದ. "ಸರಿ ಮತ್ತೆ, ಅಲಂಕಾರ ಶುರು ಮಾಡು" ಎಂದು ಹೇಳಿದಾಗ "ಇಲ್ಲ. ಇನ್ನೊಂದು ಅವಕಾಶ ಕೊಡಿ. ಈ ಸಲ ಖಂಡಿತ ಸರಿಯಾಗಿ ಹಾಡುತ್ತೇನೆ" ಎಂದು ಗೋಗರೆದ. ತನ್ನಲ್ಲಿ ಇಂಥ ಆತ್ಮವಿಶ್ವಾಸ ಎಲ್ಲಿಂದ ಬಂದಿತೆಂಬುದೇ ಗೊತ್ತಾಗದೇ ಸುರೇಶನಿಗೆ ಒಂದು ಕ್ಷಣ ಸೋಜಿಗವಾಯಿತು. ಭಾಗ್ವತರು ಒಮ್ಮೆ ನಕ್ಕು "ಸರಿ" ಎಂದು ಬಿಟ್ಟರು. &lt;/div&gt;&lt;div align="justify"&gt;&lt;br /&gt;ಅಳುಕುತ್ತಲೇ ಹಾಡಲು ಶುರು ಮಾಡಿದ. ಒಂದೊಂದಾಗಿ ಸ್ವರಗಳನ್ನು ಹಾಡುತ್ತಿದ್ದಂತೆಯೇ, ಭಾಗ್ವತರು ತಲೆ ಆಡಿಸಿ ಸಮ್ಮತಿ ಸೂಚಿಸತೊಡಗಿದರು. ಸುರೇಶನಿಗೆ ಈಗ ಇನ್ನೂ ಧೈರ್ಯ ಬಂತು. ಹಾವಿನಂತೆ ಬಳುಕುತ್ತಾ ಹಾರ್ಮೋನಿಯಮ್ಮಿನ ಮನೆಗಳ ಮೇಲೆ ಹರಿದಾಡುತ್ತಿದ್ದ ಭಾಗ್ವತರ ಬೆರಳುಗಳನ್ನೇ ನೋಡುತ್ತಿದ್ದವನಿಗೆ ಯಾವುದೋ ಬೇರೆಯೇ ಲೋಕಕ್ಕೆ ಪ್ರವೇಶವಾದ ಅನುಭವವಾಗಿ, ತನ್ನನ್ನು ತಾನೇ ಮರೆತು ಮೈದುಂಬಿ ಹಾಡತೊಡಗಿದ. ಈಗ ಅವನ ಕಣ್ಣಿಗೆ ಎದುರು ಕುಳಿತಿದ್ದ ಭಾಗ್ವತರು ಕಾಣುತ್ತಿರಲಿಲ್ಲ. ಅವರ ಹಾರ್ಮೋನಿಯಮ್ಮಿನ ಸದ್ದು ಮಾತ್ರಾ ಅಸ್ಪಷ್ಟವಾಗಿ ಕ್ಷೀಣವಾಗಿ ಕೇಳಿಸುತ್ತಿತ್ತು. ಸುರೇಶ ಪ್ರವೇಶಿಸಿದ್ದ ಹೊಸ ಲೋಕದಲ್ಲಿ ಹಲವಾರು ಜನರು ನಿಂತುಕೊಂಡು, ಬೇರೆ ಬೇರೆ ಶೃತಿಗಳಲ್ಲಿ ಹಾಡುತ್ತಿದ್ದರು. ಹಿಂದೆಲ್ಲೋ ಅವರೆಲ್ಲರನ್ನೂ ಎಲ್ಲೋ ನೋಡಿದ ಅನುಭವವಾಯಿತಾದರೂ, ಯಾರನ್ನೂ ಬಿಡಿ ಬಿಡಿಯಾಗಿ ಗುರುತಿಸಲಾಗಲಿಲ್ಲ. ನೋಡು ನೋಡುತ್ತಿದ್ದಂತೆಯೇ, ಅವರ ಬಿಂಬಗಳು ಸುರೇಶನ ಕಣ್ಣ ಮುಂದೇ ಎದ್ದೆದ್ದು ಕುಣಿಯತೊಡಗಿದವು. ಸುರೇಶನ ಕಣ್ಣಿಗೆ ಕತ್ತಲು ಕವಿದಂತಾಗಿ, ತಲೆ ತಿರುಗತೊಡಗಿತು .ದುರ್ಗಾ ರಾಗದ ಸ್ವರಗಳು, ಸೌತ್ ಎಂಡ್ ಸರ್ಕಲ್ಲಿನಲ್ಲಿ ಸದಾ ಹೂವು ಮಾರುತ್ತಾ ನಿಂತಿರುತ್ತಿದ್ದ ಪುಟ್ಟ ಬಾಲೆಯ ಧ್ವನಿ, ಕುಕ್ಕರಿನ ಶಿಳ್ಳೆಯ ಸದ್ದು, ಪಕ್ಕದಮನೆಯ ಮುಸ್ಲಿಮ್ ಆಂಟಿಯ ಕೀರಲು ಧ್ವನಿ, ಗೂರ್ಖಾನ "ಸಲಾಂ ಸಾಬ್" ಎಂಬ ಗಡಸು ಧ್ವನಿ, ಹಳೆಯ ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಬಿ.ಎಂ.ಟಿ.ಸಿ ಬಸ್ಸಿನ ಕರ್ಕಶ ಹಾರ್ನ್, ಎಲ್ಲವೂ ಸೇರಿ ಕಲಸುಮೇಲೋಗರವಾಗಿ, ಅವನ ಕಿವಿಯಲ್ಲಿ ಅನುರಣಿಸತೊಡಗಿದವು. ಆ ಯಾತನೆಯನ್ನು ತಾಳಲಾಗದೇ ಸುರೇಶ ಕಿವಿಮುಚ್ಚಿಕೊಂಡ. ಸುರೇಶ ಅನುಭವಿಸುತ್ತಿದ್ದ ಯಾತನೆಗಳಿಗೆಲ್ಲಾ ಸಾಕ್ಷಿಯೆಂಬಂತೆ ಅವನ ಕೆಂಪು ಹೊದಿಕೆಯ ಸಂಗೀತ ಪುಸ್ತಕ ಅನಾಥವಾಗಿ ಬಿದ್ದುಕೊಂಡು ಮನೆಯ ಸೂರನ್ನೇ ದಿಟ್ಟಿಸುತ್ತಿತ್ತು. ಭಾಗ್ವತರ ಹಾರ್ಮೋನಿಯಮ್ಮು ಈಗ ಮೌನದ ಮೊರೆ ಹೊಕ್ಕಿತ್ತು. ಇವ್ಯಾವುದರ ಪರಿವೆಯೇ ಇಲ್ಲದಂತೆ ತಾಳಮಾತ್ರಿಕೆ ಮಾತ್ರಾ ಒಂದೇ ತಾಳದಲ್ಲಿ ಮಿಡಿಯುತ್ತಾ, ಸುರೇಶನ ಶೋಕಗೀತೆಗೆ ಸಾಥ್ ನೀಡುತಿತ್ತು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-4612558264117988241?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/4612558264117988241/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=4612558264117988241' title='14 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/4612558264117988241'/><link rel='self' type='application/atom+xml' href='http://www.blogger.com/feeds/6035880729059442700/posts/default/4612558264117988241'/><link rel='alternate' type='text/html' href='http://madhu-vana.blogspot.com/2008/02/blog-post_22.html' title='ನಾದಮಯ..ಈ ಲೋಕವೆಲ್ಲ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>14</thr:total></entry><entry><id>tag:blogger.com,1999:blog-6035880729059442700.post-8232964490589597393</id><published>2008-02-16T09:53:00.000-08:00</published><updated>2008-02-16T10:05:01.914-08:00</updated><title type='text'>ಗಣೇಶನ ಮದುವೆ</title><content type='html'>&lt;div align="justify"&gt;ಮಂಗಳವಾರ ಬೆಳಿಗ್ಗೆ ಬೇಗ ಎದ್ದು, ಇನ್ನೂ ಮುಖ ತೊಳೆಯುತ್ತಿರುವಂತೆಯೇ, ನನ್ನವಳು "ರೀ, ಇವತ್ತಿನ ಪೇಪರ್ ನೋಡಿದ್ರಾ, ಗಣೇಶನ ಮದುವೆ ಆಯಿತಂತೆ ಕಣ್ರೀ" ಎಂದು ಹಾಲ್ ನಿಂದಲೇ ಕೂಗಿಕೊಂಡಳು. ಇನ್ನೂ ನಿದ್ದೆಕಣ್ಣಲ್ಲಿದ್ದ ನಾನು ಅವಳ ಕೂಗಿಗೆ ಬೆಚ್ಚಿಬಿದ್ದೆ. ಸುಮಾರಾಗಿ ಯಾವ ವಿಷಯಕ್ಕೂ ಎಕ್ಸೈಟ್ ಆಗದವಳು ಇವತ್ತು ಇಷ್ಟು ದೊಡ್ಡ ದನಿಯಲ್ಲಿ ಕೂಗಿಕೊಂಡಿದ್ದನ್ನು ಕೇಳಿ ಏನೋ ವಿಶೇಷವಿರಬೇಕೆಂದು ಅನ್ನಿಸಿತು. "ಯಾವ ಗಣೇಶನೇ ? ಅದೇ ಪಾರ್ವತಿ-ಈಶ್ವರನ ಮಗನಿಗಾ? ಕಲಿಗಾಲ ಕಣೇ.. ಏನು ಬೇಕಾದರೂ ಆಗಬಹುದು" ಎಂದು ಇದ್ದಲಿಂದಲೇ ಕೂಗಿದೆ. "ನಿಮ್ಮ ತಲೆ.... ನಮ್ಮ ಗೋಲ್ಡನ್ ಸ್ಟಾರ್ ಗಣೇಶನಿಗೆ ಮದುವೆಯಾಯ್ತಂತೆ ಕಣ್ರೀ. ಪೇಪರ್ನಲ್ಲಿ ಫೋಟೋ ಹಾಕಿದ್ದಾರೆ ನೋಡಿ" ಮಾರುತ್ತರ ಬಂತು. "ಓ ಅವನಿಗಾ?" ನಾನು ಸಮಾಧಾನ ಪಟ್ಟೆ.&lt;/div&gt;&lt;div align="justify"&gt;&lt;br /&gt;ನನ್ನವಳು ಗೋಲ್ಡನ್ ಸ್ಟಾರ್ ಗಣೇಶನ ಕಟ್ಟಾ ಅಭಿಮಾನಿ. ಕಾಮೆಡಿ ಟೈಮ್ ಕಾಲದಿಂದಲೂ ಅವನನ್ನು ಮೆಚ್ಚಿದವಳು. ನನಗೆ ಇಷ್ಟವಿಲ್ಲದಿದ್ದರೂ,ದುಂಬಾಲು ಬಿದ್ದು, ಮುಂಗಾರು ಮಳೆ, ಹುಡುಗಾಟ, ಚೆಲ್ಲಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಎಲ್ಲಾ ಚಿತ್ರಗಳಿಗೂ ನನ್ನನ್ನು ಕರೆದುಕೊಂಡು ಹೋಗಿ ನನಗೆ ಚಿತ್ರಹಿಂಸೆ ಕೊಟ್ಟಿದ್ದಳು . ಸಿನೆಮಾ ನೋಡುವಾಗ ಮಾತ್ರ ಚಕಾರವೆತ್ತಲೂ ಬಿಡದವಳು, ಸಿನೆಮಾ ಮುಗಿದ ನಂತರ ಎರಡು ದಿನಗಳಗಟ್ಟಲೇ ಗಣೇಶನ ಗುಣಗಾನ ಮಾಡಿ ನನ್ನ ಹೊಟ್ಟೆ ಉರಿಸಿದ್ದಳು. ಈಗ ನೋಡಿದರೆ ಅವನ ಮದುವೆ ವಿಷಯ ಗೊತ್ತಾಗಿದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ಮೂಡ್ ಹಾಳುಮಾಡುವುದರಲ್ಲಿ ಸಂಶಯವೇ ಇಲ್ಲ ಅನ್ನಿಸಿ ಹಾಲ್ ಕಡೆ ನಡೆದೆ.&lt;/div&gt;&lt;div align="justify"&gt;&lt;br /&gt;ದಿನಾ ಬೆಳಿಗ್ಗೆ ನನಗಿಂತಲೂ ಬೇಗ ಎದ್ದು, ಒಬ್ಬಳಿಗೇ ಸ್ಟ್ರಾಂಗ್ ಕಾಫಿ ಮಾಡಿಕೊಂಡು, ಹಾಲ್ ನಲ್ಲಿದ್ದ ಸೋಫಾದ ಮೇಲೆ ಪವಡಿಸಿಕೊಂಡು ಪೇಪರ್ ಓದುವುದು ಅವಳ ದಿನಚರಿ. ಪೇಪರು ನನ್ನ ಕೈಗೆ ಬಂದರೆ ಅದು ಅರ್ಧ ತಾಸು ಕದಲುವುದಿಲ್ಲವೆನ್ನುವುದು ಅವಳ ಕಂಪ್ಲೇಂಟು. ಅದಕ್ಕೇ ನನಗಿಂತಲೂ ಮುಂಚೆ ಅವಳು ಪೇಪರ್ ಓದಿ ಬಿಡಬೇಕು. ಇವತ್ತೂ ಅಷ್ಟೇ.. ಕಾಲು ಮೇಲೆ ಕಾಲು ಹಾಕಿಕೊಂಡು, ಮುಖಪುಟದಲ್ಲಿ ಹಾಕಿದ್ದ ಗಣೇಶನ ಮದುವೆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳನ್ನು ನೋಡಿ ನಗು ಬಂತು. ಆದರೂ ಸಾವರಿಸಿಕೊಂಡು "ಅಲ್ವೇ, ನಾನು ಈಗ ತಾನೆ ಎದ್ದಿದೀನಿ. ಆಫೀಸಿಗೆ ಬೇಗ ಹೋಗ್ಬೇಕು. ಕಾಫಿ ಮಾಡಿ ತಂದುಕೊಡೋದು ಬಿಟ್ಟು, ಅದ್ಯಾವುದೋ ಸುಟ್ಟ ಬದನೇಕಾಯಿ ಮುಖದ ಹೀರೋನ ಮದುವೆಯಾಯ್ತು ಅಂತ ಬಾಯಿಬಿಟ್ಟುಕೊಂಡು ಫೋಟೋ ನೋಡ್ತಾ ಇದ್ದೀಯಲ್ಲೇ ? ಗಂಡನ ಮೇಲೆ ಸ್ವಲ್ಪಾನೂ ಕಾಳಜಿಯಿಲ್ವಾ ನಿನಗೆ?" ಎಂದು ರೇಗಿಸಿದೆ. "ನಿಮಗೆ ಕಾಫಿ ತಾನೇ ಬೇಕು ? ತಂದು ಕೊಡ್ತಿನಿ ಇರಿ. ನನ್ನ ಗಣೇಶಂಗೆ ಮಾತ್ರಾ ಏನೂ ಹೇಳ್ಬೇಡಿ ನೀವು" ಎಂದವಳೇ, ಪೇಪರನ್ನು ನನ್ನ ಕೈಯಲ್ಲಿ ತುರುಕಿ, ದಡಕ್ಕನೇ ಎದ್ದು ಅಡುಗೆ ಮನೆಗೆ ಕಡೆಗೆ ನಡೆದಳು.&lt;/div&gt;&lt;div align="justify"&gt;&lt;br /&gt;ನಿಧಾನವಾಗಿ ಸೋಫಾದ ಮೇಲೆ ಕುಳಿತು ಪೇಪರ್ ತೆಗೆದವನಿಗೆ ರಾಚಿದ್ದು ದಂಪತಿಗಳ ನಗುಮುಖದ ಚಿತ್ರ. ಜೋಡಿ ಚೆನ್ನಾಗಿದೆ ಅನ್ನಿಸಿತು. "ಜೋಡಿ ಸಕ್ಕತ್ತಾಗಿ ಇದೆಯಲ್ಲೇ ?" ಇವಳಿಗೆ ಕೇಳಿಸುವಂತೆ ದೊಡ್ಡದಾಗಿ ಹೇಳಿದೆ. "ಕರ್ಮ, ಕರ್ಮ.. ಅಲ್ರೀ, ಹೋಗಿ ಹೋಗಿ, ಅದ್ಯಾವುದೋ ಡೈವೋರ್ಸ್ ಆದ ಹುಡುಗಿಯನ್ನು ಮದುವೆ ಆಗಿದ್ದಾನಲ್ರೀ ಅವನು ? ಇಡೀ ಕರ್ನಾಟಕದಲ್ಲಿ ಮತ್ಯಾರೂ ಹುಡುಗಿಯರು ಸಿಕ್ಕಲಿಲ್ವಾ ಅವನಿಗೆ? ಕರ್ಮಕಾಂಡ.." ಅಂತ ಉರಿದುಕೊಂಡಳು. ನಂಗ್ಯಾಕೋ ಅವಳನ್ನು ಇನ್ನೂ ಸ್ವಲ್ಪ ರೇಗಿಸೋಣ ಅನ್ನಿಸಿತು. ಮೆಲ್ಲಗೆ ಅಡುಗೆ ಮನೆಯ ಕಡೆ ಪಾದ ಬೆಳೆಸಿದೆ. "ಅಲ್ವೇ, ಅವನು ಪ್ರೀತಿ ಮಾಡಿ ಮದುವೆಯಾಗಿದ್ದಂತೆ ಕಣೇ, ಅದರಲ್ಲೇನು ತಪ್ಪು? ಪ್ರೀತಿ ಮಾಡೋವ್ರು ಚಂದನೆಲ್ಲಾ ನೋಡ್ತಾರಾ? ಅದಲ್ದೇ ಇವಳು ನೋಡೋಕ್ಕೆ ಚೆನ್ನಾಗೇ ಇದ್ದಾಳಲ್ಲೇ." ನಾನು ಮೆಲ್ಲಗೆ ಉಸುರಿದೆ. ಫಿಲ್ಟರನಲ್ಲಿದ್ದ ಡಿಕಾಕ್ಷನ್ ಗೆ ಸ್ವಲ್ಪ ಜಾಸ್ತಿನೇ ಹಾಲು,ಸಕ್ಕರೆ ಬೆರೆಸಿ ನನ್ನ ಕೈಗಿತ್ತವಳೇ "ಅವಳೆಂತಾ ಚೆನ್ನಾಗಿದಾಳೆ ? ನಮ್ಮ ಗಣೇಶಂಗೆ ಒಂದು ಚೂರೂ ಸರಿಯಾದ ಜೋಡಿಯಲ್ಲ. ಸ್ವಲ್ಪ ವಯಸ್ಸಾದ ಹಾಗೆ ಬೇರೆ ಕಾಣ್ಸ್ತಾಳೆ." ಎಂದು ಮೂಗು ಮುರಿದಳು.&lt;/div&gt;&lt;div align="justify"&gt;&lt;br /&gt;"ನನಗಂತೂ ಅವಳು ಫೋಟೋದಲ್ಲಿ ನಿನಗಿಂತಾ ಚೆನ್ನಾಗಿ ಕಾಣ್ತಾಳೆ ಕಣೇ" ನಾನು ಬ್ರಹ್ಮಾಸ್ತ್ರ ಪ್ರಯೋಗಿಸಿದೆ. "ಹ್ಮ್.. ಕಾಣ್ತಾರೆ ಕಾಣ್ತಾರೆ.. ನನ್ನ ಬಿಟ್ಟು ಉಳಿದವರೆಲ್ಲರೂ ನಿಮಗೆ ಚೆನ್ನಾಗೇ ಕಾಣ್ತಾರೆ. ನಾನು ಇಲ್ಲಿ ಇಡೀ ದಿನ ಮನೆಲ್ಲಿದ್ದು ಕತ್ತೆ ತರ ಚಾಕರಿ ಮಾಡ್ತಿನಿ. ನೀವು ಕಂಡ ಕಂಡ ಸುಂದರಿಯರ ಹಿಂದೆ ಜೊಲ್ಲು ಸುರಿಸಿಕೊಂಡು ಹೋಗಿ. ಈ ಕರ್ಮಕ್ಕೆ ಮದುವೆ ಬೇರೆ ಕೇಡು ನಿಮಗೆ" ಅವಳ ಕಂದು ಕಂಗಳಲ್ಲಿ ಕಿಡಿ ಹಾರಿತು. "ಅಲ್ವೇ, ಅವಳ ಜಡೆ ತುಂಬಾ ಉದ್ದ ಇದೆ ಕಣೇ. ನೋಡು.." ನಾನು ಪೇಪರ್ ಅವಳ ಮುಂದೆ ಹಿಡಿದೆ. ಜಡೆ ನನ್ನವಳ ವೀಕ್ ಪಾಯಿಂಟು. ಮದುವೆಯಾದಾಗಲೇ ಸ್ವಲ್ಪ ಗಿಡ್ಡ ಇದ್ದ ಕೂದಲು, ಬರ್ತಾ ಬರ್ತಾ ಉದುರಿ, ಈಗ ಮೋಟುಜಡೆಯಾಗಿತ್ತು. ಅದಕ್ಕೆ ಇವಳು ಮಾಡಿದ ಆರೈಕೆ ಒಂದೆರಡಲ್ಲ. ೧೫ ದಿನಕ್ಕೊಮ್ಮೆ ಶಾಂಪೂ ಬದಲಿಸುತ್ತಿದ್ದಳು. ಹಾಗೆಲ್ಲಾ ಪದೇ ಪದೇ ಶಾಂಪೂ ಬದಲಿಸಬಾರದೆಂದು ಸಲಹೆ ಕೊಟ್ಟ ನನಗೆ "ನೀವು ಸುಮ್ಮನಿರಿ, ನಿಮಗೇನೂ ಗೊತ್ತಾಗಲ್ಲ" ಎಂದು ಗದರಿ ಬಾಯಿಮುಚ್ಚಿಸಿದ್ದಳು. "ಅವಳು ಹಾಕ್ಕೊಂಡಿದ್ದು ಚೌರಿ ಕಣ್ರೀ, ನೀವು ಅದನೆಲ್ಲಾ ಎಲ್ಲಿ ಸರಿಯಾಗಿ ನೋಡ್ತೀರಾ? ಈಗ ಇಲ್ಲಿಗೆ ಬಂದಿದ್ದು ಯಾಕೆ? ನನ್ನ ರೇಗಿಸೋಕಾ? ನನಗೆ ಬೇಕಾದಷ್ಟು ಕೆಲಸವಿದೆ. ನೀವು ಹಾಲ್ ಗೆ ಹೋಗಿ ಕುಕ್ಕರುಬಡೀರಿ, ಹೋಗಿ" ಎಂದು ನನ್ನನ್ನು ಹೊರದಬ್ಬಲು ಪ್ರಯತ್ನಿಸಿದಳು. ನಾನು ಕದಲಲಿಲ್ಲ. ಹಾಗೆ ನೋಡಿದರೆ, ಸಿಟ್ಟು ಬಂದಾಗ ನನ್ನವಳು ತುಂಬಾನೇ ಮೋಹಕವಾಗಿ ಕಾಣುತ್ತಾಳೆ. ಅದಕ್ಕೆಂದೇ ನಾನು ಆಗಾಗ ಅವಳನ್ನು ರೇಗಿಸುವುದುಂಟು. ಮೆಲ್ಲಗೆ ಕಾಫಿ ಕುಡಿಯುತ್ತಾ ಅವಳ ಮುಖವನ್ನೇ ದಿಟ್ಟಿಸಿದೆ.&lt;/div&gt;&lt;div align="justify"&gt;&lt;br /&gt;ನನ್ನ ಅತ್ತೆಯ ಮೂರು ಹೆಣ್ಣು ಮಕ್ಕಳಲ್ಲಿ, ನನ್ನವಳೇ ಸ್ವಲ್ಪ ಕಪ್ಪು. ಆದರೂ ಮುಖದಲ್ಲೇನೋ ಅಪೂರ್ವ ಕಳೆ. ಸ್ವಲ್ಪ ಅಗಲವಾದ ಹಣೆ, ಆಳವಾದ ಸಣ್ಣ ಕಣ್ಣುಗಳು, ತಿದ್ದಿ ತೀಡಿದಂತಿದ್ದ ಹುಬ್ಬುಗಳು, ನೀಳವಾದ ಮೂಗು, ತುಂಬುಗೆನ್ನೆ. ನಕ್ಕಾಗ ಎರಡೂ ಕೆನ್ನೆಗಳಲ್ಲಿ ಗುಳಿ ಬಿದ್ದು ಅಪೂರ್ವವಾದ ಸೌಂದರ್ಯವನ್ನು ಹೊರಸೂಸುತ್ತಿದ್ದವು. ಅವಳ ಕಂದು ಕಣ್ಣುಗಳಲ್ಲಿ ಅದೇನೋ ಕಾಂತಿ ಅಯಸ್ಕಾಂತದಂತೆ ಸೆಳೆಯುತ್ತಿತ್ತು. ಇವತ್ತು ಹಣೆಗೆ ಒವಲ್ ಶೇಪಿನ ಪುಟ್ಟ ಸ್ಟಿಕರ್ರೊಂದನ್ನು ಅಂಟಿಸಿಕೊಂಡಿದ್ದಳು. ಉಪ್ಪಿಟ್ಟಿಗೆಂದು ಮೆಣಸಿನಕಾಯಿ ಹೆಚ್ಚುತ್ತಿದ್ದವಳು, ಆಗಾಗ ಹಣೆಯ ಮೇಲೆ ಮೂಡಿದ್ದ ಬೆವರು ಹನಿಗಳನ್ನು ಕೈಯಿಂದ ಒರೆಸಿಕೊಳ್ಳುತ್ತಿದ್ದಳು. ಅವಳ ಪುಟ್ಟ ಚಲನವಲನಗಳಲ್ಲೂ ಅದೇನೋ ಮೋಹಕತೆ.&lt;/div&gt;&lt;div align="justify"&gt;&lt;br /&gt;ನಾನಿನ್ನೂ ಅಲ್ಲೇ ನಿಂತು ಅವಳನ್ನೇ ನೋಡುತ್ತಿರುವುದು ಅವಳಿಗೆ ಸ್ವಲ್ಪ ಮುಜುಗರ ತಂದಿರಬೇಕು. ಅವಳಿಗೆ ಸ್ವಲ್ಪ ಜಾಸ್ತಿಯೇ ನಾಚಿಕೆ ಸ್ವಭಾವ. ಮದುವೆಯಾಗಿ ವರ್ಷವಾದರೂ, ಪಬ್ಲಿಕ್ ಜಾಗಗಳಲ್ಲಿ ನಾನು ಕೈ ಹಿಡಿದುಕೊಂಡರೆ ನಾಚಿ ತಟ್ಟನೇ ಕೈ ಹಿಂದೆ ತೆಗೆದುಕೊಳ್ಳುತ್ತಿದ್ದಳು. "ನನ್ನ ಮುಖದ ಮೇಲೆ ಕೋತಿ ಕುಣಿತಾ ಇದೆಯೇನ್ರೀ? ಹಾಲ್ ಗೆ ಹೋಗಿ ಆ ದರಿದ್ರ ಪೇಪರನ್ನೇ ಓದಿ ಹೋಗಿ" ಎಂದು ಬೆನ್ನಿನ ಮೇಲೊಂದು ಗುದ್ದಿ ನನ್ನನ್ನು ಬಲವಂತವಾಗಿ ಹೊರದಬ್ಬಿದಳು. ಹೈಸ್ಕೂಲಿನಲ್ಲಿ ನನ್ನವಳು ಖೋಖೋ ಚೆನ್ನಾಗಿ ಆಡುತ್ತಿದ್ದಳಂತೆ. ಈಗಲೂ ನನ್ನನ್ನು ಅಟ್ಟಿಸಿಕೊಂಡು ಬಂದು ಬೆನ್ನಿಗೆ ಗುದ್ದುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ ಅವಳು.&lt;/div&gt;&lt;div align="justify"&gt;&lt;br /&gt;೧೦ ನಿಮಿಷದಲ್ಲಿ ಉಪ್ಪಿಟ್ಟು ರೆಡಿ. ನನಗೆ ಉಪ್ಪಿಟ್ಟೆಂದರೆ ಸ್ವಲ್ಪ ಅಲರ್ಜಿ. ಆದರೆ ಇವಳಿಗೆ ಮಾತ್ರ ಉಪ್ಪಿಟ್ಟೆಂದರೆ ಪಂಚಪ್ರಾಣ. ನಿಧಾನವಾಗಿ ಉಪ್ಪಿಟ್ಟು ತಿನ್ನುತ್ತಿದ್ದವಳನ್ನು ಮತ್ತೆ ಕೆಣಕಿದೆ. "ಅಲ್ವೇ ? ಗಣೇಶ ನಿನ್ನ ಮದುವೆ ಆಗಲಿಲ್ಲ ಅಂತಾ ಬೇಜಾರಾ ನಿಂಗೆ?". ಈ ಸಲ ಅವಳು ರೆಡಿಯಾಗಿದ್ದಳು. "ಏನು ಮಾಡೋದು? ನಿಮ್ಮನಾಗಲೇ ಮದುವೆಯಾಗಿ ಬಿಟ್ಟಿದ್ದೀನಲ್ಲಾ? ಅದಲ್ದೇ ಗಣೇಶನ ಮದುವೆ ಬೇರೆ ಆಗಿ ಹೋಯ್ತು. ಇಲ್ಲದೇ ಹೋದರೆ ಟ್ರೈ ಮಾಡಬಹುದಿತ್ತು. ಛೇ.." ಎಂದು ಮುಖ ಊದಿಸಿದಳು. "ದುನಿಯಾ ಪಿಚ್ಚರಲ್ಲಿ ಲೂಸ್ ಮಾದನ ಪಾರ್ಟ್ ಮಾಡಿದ್ನಲ್ಲಾ. ಅವನೂ ಈಗ ಹೀರೋ ಅಂತೆ ಕಣೇ. ಅವನಿಗಿನ್ನೂ ಮದ್ವೆ ಆಗಿಲ್ಲ ನೋಡು. ಟ್ರೈ ಮಾಡ್ತೀಯಾ?" ನಾನು ಬಿಡಲು ತಯಾರಿರಲಿಲ್ಲ. "ಥೂ, ಅವನೂ ಒಂದು ಹೀರೋನೇನ್ರಿ ? ಮಂಗನ ತರ ಇದಾನೆ ನೋಡೋಕೆ. ಎಂತೆಂಥವ್ರೆಲ್ಲಾ ಹೀರೋ ಆಗ್ತಾರಪ್ಪಾ ಈ ಕಾಲದಲ್ಲಿ" ಎಂದು ನಿಡುಸುಯ್ದಳು. "ನಿನ್ನ ಗಣೇಶ ಇನ್ನೇನು ಸುರಸುಂದರಾಂಗನಾ? ಕುರುಚಲು ಗಡ್ಡ, ಕೆದರಿದ ಕೂದಲು, ದೇವ್ರಿಗೇ ಪ್ರೀತಿ ಅವನ ಅವತಾರ. ಒಂದು ನಾಲ್ಕು ಹಾಡು ಹಾಡಿ, ಎರಡು ಹೀರೋಯಿನ್ ಜತೆ ಕುಣಿದುಬಿಟ್ಟು, ನಾಲ್ಕು ವಿಲ್ಲನ್ನುಗಳಿಗೆ ಹೊಡೆದುಬಿಟ್ರೆ ಸಾಕು, ತಲೆ ಮೇಲೆ ಕುಳಿಸ್ಕೊತೀರಾ ನೀವುಗಳು. ಬುದ್ಧಿನೇ ಇಲ್ಲ ಹೆಣ್ಣಮಕ್ಕಳಿಗೆ" ನಾನಂದೆ. ನಾನು ಹೆಣ್ಣು ಜಾತಿಗೇ ಬೈಯ್ದಿದ್ದು ನನ್ನವಳಿಗೆ ಬಹಳ ಕೋಪ ತರಿಸಿತು ಅನ್ನಿಸುತ್ತೆ. ಮುಖ ಕೆಂಪಗೆ ಮಾಡಿಕೊಂಡು "ರೀ, ನೀವು ನನ್ನ ಗಣೇಶಂಗೆ ಮಾತ್ರಾ ಏನೂ ಹೇಳಬೇಡಿ. ಅವನು ಎಷ್ಟು ಒಳ್ಳೆಯವನು ಗೊತ್ತಾ? ಮುಂಗಾರು ಮಳೆ ಹಂಡ್ರೆಡ್ ಡೇಸ್ ಸಮಾರಂಭದಲ್ಲಿ ನನ್ನ ಹತ್ತಿರ ಎಷ್ಟು ಚೆನ್ನಾಗಿ ಮಾತಾಡ್ದಾ ಗೊತ್ತಾ? ಎಷ್ಟು ಪ್ರೀತಿ, ಎಷ್ಟು ವಿನಯ. ನೋಡೋಕ್ಕೂ ಸ್ಮಾರ್ಟ್ ಆಗಿ ಇದಾನೆ. ನಿಮಗಿಂತಾ ಸಾವಿರ ಪಾಲು ಬೆಟರ್ರು" ಅಂದವಳೇ ಉಪ್ಪಿಟ್ಟಿನ ಬಟ್ಟಲನ್ನು ಅಲ್ಲಿಯೇ ಬಿಟ್ಟು ಸಿಟ್ಟು ಮಾಡಿಕೊಂಡು ಒಳಗೆ ನಡೆದಳು. ನನಗೆ ಉಪ್ಪಿಟ್ಟು ಗಂಟಲಲ್ಲೇ ಸಿಕ್ಕಿಕೊಂಡ ಹಾಗಾಯಿತು. "ನಿನ್ನಂತಾ ಮದುವೆಯಾದ ಹುಡುಗಿಯರಿಗೇ ಈ ತರ ಹುಚ್ಚುತನ ಇದ್ರೆ, ಇನ್ನು ಮದುವೆಯಾಗದೇ ಇರೋ ಹೆಣ್ಣುಮಕ್ಕಳಿಗೆ ಇನ್ನೆಷ್ಟು ಕ್ರೇಜ್ ಇರಬೇಡಾ ? ನಿಮ್ಮಂತೋರ ಕಾಟ ತಡೆಲಿಕ್ಕಾಗದೇ, ಅವ್ನು ರಾತ್ರೋ ರಾತ್ರಿ ಮದ್ವೆಯಾಗಿದ್ದು" ಎಂದು ಕೂಗಿ ನಾನು ಬಟ್ಟಲನ್ನು ಕುಕ್ಕಿದೆ. ನನ್ನ ಅಹಂಗೂ ಸ್ವಲ್ಪ ಪೆಟ್ಟು ಬಿದ್ದಿತ್ತು.&lt;/div&gt;&lt;div align="justify"&gt;&lt;br /&gt;ಸ್ನಾನ ಮುಗಿಸಿಕೊಂಡು ಬಂದರೂ, ಇವಳು ತಣ್ಣಗಾದ ಲಕ್ಷಣ ಕಾಣಲಿಲ್ಲ. ಮುಗುಮ್ಮಾಗಿ ಸೋಫ಼ಾದ ಮೇಲೆ ಕುಳಿತುಕೊಂಡೇ ಇದ್ದಳು. ಮತ್ತೆ ಮಾತಾಡಿಸಿದರೇ ಸಿಟ್ಟು ಉಲ್ಬಣಿಸಬಹುದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೆ. ನನ್ನವಳಿಗೆ ಸಿಟ್ಟು ಬರುವುದು ತುಂಬಾನೇ ಕಮ್ಮಿ. ಬಂದರೂ ಬಹಳ ಬೇಗ ಇಳಿದುಹೋಗುತ್ತಿತ್ತು. ನಾನು ನೋಡಿದವರೆಲ್ಲರಲ್ಲೂ ಅತ್ಯಂತ ಸಹನಾಮೂರ್ತಿ ಅಂದರೆ ಇವಳೇ. ಇವತ್ಯಾಕೋ ನಾನೇ ಅವಳನ್ನು ಕೆಣಕಿ ಸಿಟ್ಟು ಬರಿಸಿದ್ದೆ. ಆಫೀಸಿಗೆ ಹೊರಟು ನಿಂತರೂ ಅವಳ ಮೂಡ್ ಸರಿಯಾದ ಹಾಗೆ ಕಾಣಲಿಲ್ಲ. ದಿನವೂ ಬಾಗಿಲಿನ ತನಕ ಬಂದು ಬೈ ಹೇಳಿ ಹೋಗುತ್ತಿದ್ದವಳು, ಇವತ್ತು ಪತ್ತೆಯೇ ಇಲ್ಲ. ಲಂಚ್ ಬ್ರೇಕಿನಲ್ಲಿ ಮನೆಗೆ ಎರಡು ಸಲ ಕಾಲ್ ಮಾಡಿದೆ. ಅರ್ಧಕ್ಕೇ ಕಟ್ ಮಾಡಿದಳು. ಇದ್ಯಾಕೋ ಸ್ವಲ್ಪ ಸೀರಿಯಸ್ ಆದ ಲಕ್ಷಣ ಕಾಣಿಸಿ, ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯಿತು.&lt;/div&gt;&lt;div align="justify"&gt;&lt;br /&gt;ಸಂಜೆ, ಸ್ವಲ್ಪ ಮುಂಚೆಯೇ ಮನೆಗೆ ಹೋದೆ. ಬಾಗಿಲು ತೆಗೆದವಳೇ, ಮುಖ ಕೂಡ ನೋಡದೇ ವಾಪಸ್ ಹೋದಳು. ನಾನು ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಬಿಸಿ ಕಾಫಿ ರೆಡಿಯಾಗಿತ್ತು. ಅವಳಿಗಾಗಿ ಹುಡುಕಿದೆ. ಬೆಡ್ ರೂಮಿನಲ್ಲಿ ಯಾವುದೋ ಕಾದಂಬರಿ ಹಿಡಿದು ಕುಳಿತಿದ್ದಳು. ಮೆಲ್ಲಗೆ ಅವಳ ಬಳಿ ಹೋಗಿ ಕುಳಿತು ಅವಳ ಮುಖವನ್ನೇ ನೋಡತೊಡಗಿದೆ. ತಿರುಗಿ, ಕಣ್ಣು ಹುಬ್ಬಿನಲ್ಲೇ ಒಮ್ಮೆ "ಏನು?" ಎಂದು ಪ್ರಶ್ನಿಸಿದವಳು, ಮತ್ತೆ ಕಾದಂಬರಿಯಲ್ಲಿ ಮುಖ ಹುದುಗಿಸಿದಳು. ಕಾದಂಬರಿಯನ್ನು ಅವಳ ಕೈಯಿಂದ ಕಸಿದು, ಮುಖವನ್ನು ನನ್ನ ಬಳಿ ತಿರುಗಿಸಿಕೊಂಡು "ನಿನ್ನ ಕಾಫಿ ಆಯ್ತಾ?" ಎಂದು ಕೇಳಿದೆ. ತಲೆ ಅಲ್ಲಾಡಿಸಿದಳು. "ನಿನ್ನ ಹತ್ತಿರ ಮಾತಾಡಬೇಕು. ಬಾ" ಎಂದು ಅವಳನ್ನು ಹಾಲಿಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕುಳಿಸಿದೆ. "ನಿನಗೊಂದು ವಿಷಯ ಹೇಳಬೇಕು. ನೀನು ತಮಾಷೆ ಮಾಡಬಾರದು" ಎಂದೆ. ಅವಳೇನೂ ಮಾತಾಡಲಿಲ್ಲ. ಆದರೇ ಅವಳ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. "ನಾನು ಎಂಜಿನೀಯರಿಂಗ್ ಮಾಡುವಾಗ, ನನಗೆ ಅನು ಪ್ರಭಾಕರ್ ಮೇಲೆ ಸಿಕ್ಕಾಪಟ್ಟೆ ಕ್ರಷ್ ಇತ್ತು, ಗೊತ್ತಾ? ಅವಳ ಎಲ್ಲಾ ಪಿಕ್ಚರ್ ಗಳನ್ನೆಲ್ಲಾ ತಪ್ಪದೇ ನೋಡುತ್ತಿದ್ದೆ. ನನ್ನ ರೂಮಿನಲ್ಲೂ ಅವಳ ಫೋಟೊಗಳನ್ನು ಅಂಟಿಸಿಕೊಂಡಿದ್ದೆ. ನಿಂಗೆ ಸಮೀರ್ ಗೊತ್ತಲ್ಲಾ, ಅವನು ಬಂದು ಅನುಪ್ರಭಾಕರಳ ಮದುವೆಯಾದ ಸುದ್ದಿ ಹೇಳಿದಾಗ ನನಗೆ ಎಷ್ಟು ಬೇಜಾರಾಗಿತ್ತು ಗೊತ್ತಾ? ತಿಂಗಳುಗಟ್ಟಲೇ ಶೇವ್ ಮಾಡದೇ ಗಡ್ಡ ಬಿಟ್ಟುಕೊಂಡು ದೇವದಾಸ್ ತರಹ ಅಲೆದುಕೊಂಡಿದ್ದೆ" ಎಂದು ಹೇಳಿ ಬೆಡ್ ರೂಮಿನಲ್ಲಿಟ್ಟಿದ್ದ ನನ್ನ ಹಳೇ ಡೈರಿಯೊಂದನ್ನು ತೆಗೆದುಕೊಂಡು ಬಂದೆ. ಅದರಲ್ಲಿ ಅನು ಪ್ರಭಾಕರ್, ಅವಳ ಗಂಡನ ಜೊತೆಯಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋ ಒಂದನ್ನು ನಾನು ಪತ್ರಿಕೆಯೊಂದರಿಂದ ಕಟ್ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ನನ್ನವಳಿಗೆ ತೋರಿಸಿ, ಮುಗ್ಧನಂತೆ ಮುಖ ಮಾಡಿ "ಈಗ ಹೇಳು, ಈ ಫೋಟೋದಲ್ಲಿರುವವನಿಗಿಂತಾ ನಾನು ಚೆನ್ನಾಗಿಲ್ವಾ? ಎಂದು ಕೇಳಿದೆ. ನನ್ನವಳ ಮುಖದಲ್ಲೆಲ್ಲಾ ಈಗ ನಗುವಿನ ಹೊನಲು. "ನಿಮ್ಮ ತಲೆ" ಎಂದವಳೇ ತಲೆಯ ಮೇಲೊಂದು ಮೊಟಕಿ, ಫೋಟೋವನ್ನು ಕಸಿದುಕೊಂಡು ಮತ್ತೆ ಡೈರಿಯೊಳಕ್ಕೆ ತುರುಕಿ, " ನೀವು ಅನು ಪ್ರಭಾಕರನನ್ನು ಮದುವೆಯಾಗ್ದೇ ಇದ್ದಿದ್ದು ಒಳ್ಳೆದೇ ಆಯಿತು ಬಿಡಿ. ಇಲ್ಲಾಂದ್ರೇ ನಿಮಗೆ ನನ್ನಷ್ಟು ಒಳ್ಳೆ ಹೆಂಡತಿ ಸಿಗುತ್ತಿರಲಿಲ್ಲ ಅಲ್ವಾ?" ಎಂದಂದು ಕಣ್ಣು ಮಿಟುಕಿಸಿದಳು. ನಾನು ಗೋಣು ಆಡಿಸಿದೆ. "ರೀ... ಒಗ್ಗರಣೆ ಹಾಕಿದ ಅವಲಕ್ಕಿ ಮಾಡಿದರೆ ತಿಂತೀರಾ ?" ಎಂದು ಸಂಧಾನ ಬೆಳೆಸಿದಳು. ಅವಳಿಗೆ ಗೊತ್ತು, ನನಗೆ ಒಗ್ಗರಣೆ ಹಾಕಿದ ಅವಲಕ್ಕಿ ಅಂದರೆ ಬಹಳ ಪ್ರೀತಿಯೆಂದು. ಅವಳು ಯಾವಾಗ ಮಾಡ್ತೀನೇಂದ್ರೂ ನಾನು ಅದನ್ನು ನಿರಾಕರಿಸುತ್ತಿರಲಿಲ್ಲ.&lt;/div&gt;&lt;div align="justify"&gt;&lt;br /&gt;ರಾತ್ರಿ ಊಟ ಮಾಡುತ್ತಿರುವಾಗ ಏನೋ ನೆನಪಾದಂತೆ "ಅಲ್ಲಾರೀ, ಅದು ಹೇಗೆ ನಿಮಗೆ ಅನು ಪ್ರಭಾಕರ ಹಿಡಿಸಿದ್ಳು ?ಈಗ ಅದ್ಯಾವುದೋ ಝೀ ಟೀವಿ ಸೀರಿಯಲ್ಲಲ್ಲಿ ಬರ್ತಾಳಲ್ಲಾ. ನನಗಂತೂ ಅವಳು ಸಿಕ್ಕಾಪಟ್ಟೆ ಓವರ್ ಆಕ್ಟಿಂಗ್ ಮಾಡ್ತಾಳೆ ಅನ್ನಿಸುತಪ್ಪಾ. ನೋಡೋಕೆ ಬೇರೆ ಗಂಡುಬೀರಿ ತರ ಕಾಣ್ತಾಳೆ" ಎಂದಳು. ನಾನು ತಣ್ಣಗೆ "ನಿನ್ನ ಗಣೇಶ್ ಮತ್ತಿನ್ಯೇನು? ಅವಂದೂ ಓವರ್ ಆಕ್ಟಿಂಗ್ ಅಲ್ವಾ ?ಎಂದೆ. ನನ್ನನ್ನೊಮ್ಮೆ ದುರುಗುಟ್ಟಿದವಳು ಮರುಕ್ಷಣದಲ್ಲೇ ನಾನು ನಗುತ್ತಿದ್ದದ್ದನ್ನು ನೋಡಿ, ತಾನೂ ನಕ್ಕಳು. ಪುಣ್ಕಕ್ಕೆ ನಾನು ಅವಳ ಎದುರು ಕುಳಿತಿದ್ದೆ. ಅವಳ ಪಕ್ಕದಲ್ಲೇನಾದ್ರೂ ಕುಳಿತಿದ್ದರೆ ಬೆನ್ನ ಮೇಲೆ ಒಂದು ಗುದ್ದು ಖಂಡಿತ ಬೀಳುತ್ತಿತ್ತು. "ರೀ..,ಕೇಳೋಕೆ ಮರೆತೋಯ್ತು. ಮುಂದಿನ ತಿಂಗಳು ಗಣೇಶ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಕೊತಾನಂತೆ.ನಾವೂ ಹೋಗೋಣ್ವಾ ?" ಎಂದು ಮುಖ ನೋಡಿದಳು. ನಾನು ನಿರುತ್ತರನಾದೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-8232964490589597393?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/8232964490589597393/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=8232964490589597393' title='15 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/8232964490589597393'/><link rel='self' type='application/atom+xml' href='http://www.blogger.com/feeds/6035880729059442700/posts/default/8232964490589597393'/><link rel='alternate' type='text/html' href='http://madhu-vana.blogspot.com/2008/02/blog-post_16.html' title='ಗಣೇಶನ ಮದುವೆ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>15</thr:total></entry><entry><id>tag:blogger.com,1999:blog-6035880729059442700.post-5978811003081745396</id><published>2008-02-14T08:55:00.000-08:00</published><updated>2008-02-29T17:47:10.557-08:00</updated><title type='text'>ಮೆಜೆಸ್ಟಿಕ್ ಮಾಲಕಂಸ್</title><content type='html'>&lt;p align="justify"&gt;ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಮಾಲಕಂಸ್ ರಾಗ ಬಹಳ ಪ್ರಚಲಿತ ರಾಗ. ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದ ಈ ರಾಗ, ರಾತ್ರಿ ರಾಗಗಳಲ್ಲಿ ಅತ್ಯಂತ ಜನಪ್ರಿಯ ರಾಗ ಕೂಡ. ಇದೇ ಸ್ವರ ಪ್ರಸ್ಥಾನ ಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇದೂ ಕೂಡ ಆ ಪದ್ಧತಿಯಲ್ಲಿ ಅತ್ಯಂತ ಜನಪ್ರಿಯ ರಾಗ.&lt;/p&gt;&lt;p align="justify"&gt;ಯೂಟ್ಯೂಬಲ್ಲಿ ಹುಡುಕುತ್ತಿರುವಾಗ ಮಾಲಕಂಸ್ ರಾಗದ ಮೇಲೆ ಆಧಾರವಾದ ಎರಡು ಒಳ್ಳೆಯ ಚಿತ್ರಗೀತೆಗಳ ಕ್ಲಿಪ್ ಗಳು ಸಿಕ್ಕವು. ನನಗೆ ಇವು ತುಂಬಾ ಹಿಡಿಸಿದವು. ಬಹುಷ ಎಲ್ಲರಿಗೂ ಇಷ್ಟವಾಗಬಹುದು.&lt;/p&gt;&lt;p align="justify"&gt;ಮೊದಲನೆಯದು ತೆಲುಗಿನ ಪ್ರಸಿದ್ಧ ಚಿತ್ರ "ಶಂಕರಾಭರಣಂ" ಚಿತ್ರದ ಹಾಡು. ತ್ಯಾಗರಾಜರ ಪ್ರಸಿದ್ಧ ಕೀರ್ತನೆಯಾದ "ಸಾಮಜ ವರಗಮನಾ", ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹಿಂದೋಳ ರಾಗದ ಅತ್ಯುತ್ತಮ ನಿದರ್ಶನ ಈ ಹಾಡಿನಲ್ಲಿ ಇದೆ ಅಂದರೆ ತಪ್ಪಾಗಲಾರದು. ಎಷ್ಟು ಸಲ ಕೇಳಿದರೂ, ಮತ್ತೆ ಮತ್ತೆ ಕೇಳುವಂತೆ ಮಾಡುವ ಮೋಡಿ ಈ ಹಾಡಿನಲ್ಲಿದೆ. &lt;/p&gt;&lt;p align="justify"&gt;&lt;object width="463" height="327" class="BLOG_video_class" id="BLOG_video-3460bda79d7c4a01" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v15.nonxt6.googlevideo.com/videoplayback?id%3D3460bda79d7c4a01%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330770%26sparams%3Did,itag,ip,ipbits,expire%26signature%3D671E584101EDB0BF03C5772C5BB3D76DB9BEB937.1339F972195966139A4599C3BCE97682715F5437%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3D3460bda79d7c4a01%26offsetms%3D5000%26itag%3Dw160%26sigh%3DBmT6Wy6VRYYkNbk-me1kVVfM2TI&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="463" height="327" bgcolor="#FFFFFF"flashvars="flvurl=http://v15.nonxt6.googlevideo.com/videoplayback?id%3D3460bda79d7c4a01%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330770%26sparams%3Did,itag,ip,ipbits,expire%26signature%3D671E584101EDB0BF03C5772C5BB3D76DB9BEB937.1339F972195966139A4599C3BCE97682715F5437%26key%3Dck1&amp;iurl=http://video.google.com/ThumbnailServer2?app%3Dblogger%26contentid%3D3460bda79d7c4a01%26offsetms%3D5000%26itag%3Dw160%26sigh%3DBmT6Wy6VRYYkNbk-me1kVVfM2TI&amp;autoplay=0&amp;ps=blogger"allowFullScreen="true" /&gt;&lt;/object&gt;&lt;/p&gt;&lt;p align="justify"&gt;ಎರಡನೆಯದು, ಹಿಂದಿ ಚಿತ್ರವೊಂದರ ಹಾಡು. ಹಾಡಿನಲ್ಲಿ ಇಬ್ಬರು ಕಥಕ ನೃತ್ಯಗಾತಿಯವರ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದು ಯಾವ ಚಿತ್ರ, ಮತ್ತು ಹಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೇ ಹಾಡಿನ ಸಾಹಿತ್ಯ ಮಾತ್ರ ಮನಸೆಳೆಯುತ್ತದೆ. ಮಾಲಕಂಸ್ ರಾಗದ ಪಕಡ್ ಮತ್ತು ರಾಗದ ಸೂಕ್ತ ಪರಿಚಯವನ್ನು ಈ ಹಾಡು ಅತ್ಯಂತ ಸಮರ್ಪಕವಾಗಿ ಮಾಡಿಕೊಡುತ್ತದೆ.ಹಾಡು ಕೇಳುತ್ತಿದಂತೆಯೇ, ಮಾಲಕಂಸ್ ರಾಗದ ಮಾಧುರ್ಯ ನಿಮ್ಮನ್ನು ಮಾಯಾಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ. &lt;/p&gt;&lt;p&gt;&lt;object width="464" height="332" class="BLOG_video_class" id="BLOG_video-d2acf555a75e6d34" classid="clsid:D27CDB6E-AE6D-11cf-96B8-444553540000" codebase="http://download.macromedia.com/pub/shockwave/cabs/flash/swflash.cab#version=6,0,40,0"&gt;&lt;param name="movie" value="http://www.youtube.com/get_player"&gt;&lt;param name="bgcolor" value="#FFFFFF"&gt;&lt;param name="allowfullscreen" value="true"&gt;&lt;param name="flashvars" value="flvurl=http://v19.nonxt7.googlevideo.com/videoplayback?id%3Dd2acf555a75e6d34%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330771%26sparams%3Did,itag,ip,ipbits,expire%26signature%3D6331957D2A89745DF78DAA64C380783CFD1D0C99.1161D0A0522269F07D9C5B6EE6C9C0B14C64ED9E%26key%3Dck1&amp;amp;iurl=http://video.google.com/ThumbnailServer2?app%3Dblogger%26contentid%3Dd2acf555a75e6d34%26offsetms%3D5000%26itag%3Dw160%26sigh%3Dapf14fkR-EusE9NZwkzwRDugH0s&amp;amp;autoplay=0&amp;amp;ps=blogger"&gt;&lt;embed src="http://www.youtube.com/get_player" type="application/x-shockwave-flash"width="464" height="332" bgcolor="#FFFFFF"flashvars="flvurl=http://v19.nonxt7.googlevideo.com/videoplayback?id%3Dd2acf555a75e6d34%26itag%3D5%26app%3Dblogger%26ip%3D0.0.0.0%26ipbits%3D0%26expire%3D1330330771%26sparams%3Did,itag,ip,ipbits,expire%26signature%3D6331957D2A89745DF78DAA64C380783CFD1D0C99.1161D0A0522269F07D9C5B6EE6C9C0B14C64ED9E%26key%3Dck1&amp;iurl=http://video.google.com/ThumbnailServer2?app%3Dblogger%26contentid%3Dd2acf555a75e6d34%26offsetms%3D5000%26itag%3Dw160%26sigh%3Dapf14fkR-EusE9NZwkzwRDugH0s&amp;autoplay=0&amp;ps=blogger"allowFullScreen="true" /&gt;&lt;/object&gt;&lt;/p&gt;&lt;p&gt;ನಿಮಗೆ ಹಾಡುಗಳು ಇಷ್ಟವಾದರೆ ನಾನು ಧನ್ಯ.&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-5978811003081745396?l=madhu-vana.blogspot.com' alt='' /&gt;&lt;/div&gt;</content><link rel='enclosure' type='video/mp4' href='http://www.blogger.com/video-play.mp4?contentId=3460bda79d7c4a01&amp;type=video%2Fmp4' length='0'/><link rel='enclosure' type='video/mp4' href='http://www.blogger.com/video-play.mp4?contentId=d2acf555a75e6d34&amp;type=video%2Fmp4' length='0'/><link rel='replies' type='application/atom+xml' href='http://madhu-vana.blogspot.com/feeds/5978811003081745396/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=5978811003081745396' title='7 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/5978811003081745396'/><link rel='self' type='application/atom+xml' href='http://www.blogger.com/feeds/6035880729059442700/posts/default/5978811003081745396'/><link rel='alternate' type='text/html' href='http://madhu-vana.blogspot.com/2008/02/blog-post_14.html' title='ಮೆಜೆಸ್ಟಿಕ್ ಮಾಲಕಂಸ್'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>7</thr:total></entry><entry><id>tag:blogger.com,1999:blog-6035880729059442700.post-4640462102734313695</id><published>2008-02-09T17:27:00.000-08:00</published><updated>2008-02-09T17:30:42.733-08:00</updated><title type='text'>ಉಡುಪಿ ಬಸ್ಸೂ....ನಿಂಬೂ ಪೆಪ್ಪರ್ಮಿಂಟೂ</title><content type='html'>&lt;div align="justify"&gt;ಸುಶ್ಮಾ ಮತ್ತು ಸುಶಾಂತರಿಗೆ ಟಾಟಾ ಮಾಡಿ, ಚಿಕ್ಕಪ್ಪನ ಸ್ಕೂಟರನ್ನೇರಿ ಪುಟ್ಟ, ಬೆಳಗಾವಿ ಬಸ್ ಸ್ಟಾಂಡ್ ಗೆ ಬಂದಾಗ ಇನ್ನೂ ಬೆಳಿಗ್ಗೆ ೫.೪೫. ಬೆಳಗ್ಗಿನ ಇಬ್ಬನಿಗೆ, ಕೆಂಪು ಸ್ವೆಟರ್ ಮೇಲೆಲ್ಲಾ ಆದ ಸಣ್ಣನೆಯ ನೀರಿನ ಪದರವನ್ನು ಒರೆಸಿಕೊಂಡಾಗ ಪುಟ್ಟನಿಗೆ ಚಡ್ಡಿ ಜೇಬಿನಲ್ಲಿ ಕರ್ಚೀಫ಼್ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಲ್ಲೇ ಹಾಕಿದ್ದ ಕುರ್ಚಿ ಸಾಲುಗಳ ಮೇಲೂ, ಪಕ್ಕದಲ್ಲೂ, ಮೂಟೆಗಳಂತೆ ಉರುಳಿಕೊಂಡು ಗಟ್ಟಿಯಾಗಿ ಹೊದ್ದು ಮಲಗಿದ್ದ ಜನಗಳ ನಡುವೆಯೇ ಹೇಗೋ ದಾರಿಮಾಡಿಕೊಂಡು ಬಸ್ ಸ್ಟಾಂಡ್ ನ ಮುಂಭಾಗಕ್ಕೆ ಪುಟ್ಟ ಚಿಕ್ಕಪ್ಪನ ಕೈ ಹಿಡಿದು ಬಂದಾಗ ೬ ಗಂಟೆಯ ಬೆಳಗಾಂ-ಉಡುಪಿ ಬಸ್ಸು ತಯಾರಾಗಿತ್ತು. ಅಚ್ಚ ಕೆಂಪು ಮೈಯುದ್ದಕ್ಕೂ ಕ.ರಾ.ಸಾ.ಸಂ ಎಂದು ಕಪ್ಪು ಬಣ್ಣದಲ್ಲಿ ಬಳಿದಿದ್ದ ಬಸ್ಸು, ಒಂಟಿ ಸಲಗದ ತರಹ ಮೂಲೆಯಲ್ಲಿ ರಾಜನ ತರಹ ನಿಂತಿತ್ತು.&lt;br /&gt;&lt;br /&gt;ಪುಟ್ಟನನ್ನು ಬಸ್ ಹತ್ತಿಸಿ, ಬಾಗಿಲಲ್ಲೇ ನಿಂತಿದ್ದ ಕಂಡಕ್ಟರನ ಹತ್ತಿರ ಟಿಕೆಟ್ ಮಾಡಿಸಿ, ಪುಟ್ಟನ ಮೇಲೆ ಸ್ವಲ್ಪ ನಿಗಾ ಇಡುವಂತೆಯೂ, ಅವನನ್ನು ಮುಂಡಗೋಡಲ್ಲಿ ಸರಿಯಾಗಿ ಇಳಿಸಿ ಅಂತಲೂ ಹೇಳಿ, ಚಿಕ್ಕಪ್ಪ ತನ್ನ ಕೈಯಲ್ಲಿದ್ದ ಡೆಕ್ಕನ್ ಹೆರ್‍ಆಲ್ಡ್ ಪತ್ರಿಕೆಯನ್ನೂ, ದಾರಿಖರ್ಚಿಗೆಂದು ೫ ರುಪಾಯಿ ನೋಟೊಂದನ್ನು ಪುಟ್ಟನ ಕೈಯಲ್ಲಿ ತುರುಕಿ,ಯಾವುದೋ ಗಡಿಬಿಡಿಯಲ್ಲಿ ಇರುವಂತೆ ಹೋಗಿಬಿಟ್ಟರು. ಪುಟ್ಟ ಅದರಿಂದೇನು ವಿಚಲಿತನಾದಂತೆ ಕಾಣಲಿಲ್ಲ. ಅವನ ಮನಸ್ಸು ಆಗಲೇ ಚಿಕ್ಕಪ್ಪ ಕೊಟ್ಟ ೫ ರುಪಾಯಿಯನ್ನು ಹೇಗೆ ಖರ್ಚು ಮಾಡಬೇಕೆಂದು ಗಿರಕಿ ಹೊಡೆಯುತ್ತಲೇ ಇತ್ತು. ನೋಟನ್ನು ಕಿಸೆಗೆ ತುರುಕಿ,ಸಾಧ್ಯವಾದಷ್ಟು ಮುಂದೆ ಹೋಗಿ, ಒಳ್ಳೆ ಸೀಟೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಟಾನಗೊಂಡುಬಿಟ್ಟ.&lt;br /&gt;&lt;br /&gt;ಈಗೊಂದು ವಾರದ ಹಿಂದೆ, ಚಿಕ್ಕಪ್ಪ ಸಂಸಾರ ಸಮೇತ ಊರಿಗೆ ಬಂದವರು ವಾಪಸ್ ಹೋಗುವಾಗ ಪುಟ್ಟನನ್ನೂ ತಮ್ಮ ಜೊತೆ ಕರೆದುಕೊಂಡು ಬಂದಿದ್ದರು. ಚಿಕ್ಕಪ್ಪನ ಮಕ್ಕಳಾದ ಸುಶ್ಮಾ ಮತ್ತು ಸುಶಾಂತರ ಜೊತೆ ಆಡಲು ಸಿಗುತ್ತದೆ ಎಂಬ ಕಾರಣಕ್ಕೆ ಪುಟ್ಟನೂ ಕೂಡ ಅಮ್ಮನ ನಿರಾಕರಣೆಯ ಮಧ್ಯೆಯೂ, ಹಠ ಮಾಡಿ ಅವರ ಜೊತೆ ಹೊರಟು ಬಂದಿದ್ದ.ಇಡೀ ವಾರ ಹೇಗೆ ಕಳೆಯಿತೆಂದೇ ಪುಟ್ಟನಿಗೆ ಗೊತ್ತಾಗಿರಲಿಲ್ಲ. ಟೀವಿಯಲ್ಲಿ ಬರುತ್ತಿದ್ದ ನಾನಾ ಚಾನೆಲ್ಲಗಳು, ಚಿಕ್ಕಪ್ಪ ಕರೆದುಕೊಂಡು ಹೋಗಿದ್ದ ಥೀಮ್ ಪಾರ್ಕ್, ಸುಶಾಂತ್ ಮತ್ತು ಸುಶ್ಮಾರ ಜೊತೆ ಚಪ್ಪರಿಸಿಕೊಂಡು ತಿಂದಿದ್ದ ಪಿಸ್ತಾ ಐಸ್ ಕ್ರೀಮ್, ಪಕ್ಕದ ಮನೆಯ ಪುಟ್ಟ ಪಮೆರಿಯನ್ ನಾಯಿ, ಇವೆಲ್ಲಗಳ ಮಧ್ಯೆ ಪುಟ್ಟನಿಗೆ ಮನೆ, ಅಮ್ಮ ಮತ್ತು ಅಪ್ಪ ಮರೆತೇ ಹೋಗಿದ್ದರು. ನಿನ್ನೆ ಅಮ್ಮನ ಹತ್ತಿರ ಫೋನಿನಲ್ಲಿ ಮಾತಾಡಿದ ಬಳಿಕ ಚಿಕ್ಕಪ್ಪ, ಚಿಕ್ಕಮ್ಮನ ಹತ್ತಿರ ಪುಟ್ಟನನ್ನು ನಾಳೆ ಬೆಳಿಗ್ಗೆಯ ಬಸ್ಸಿಗೆ ಕಳುಹಿಸಿಕೊಡುವುದಾಗಿ ಹೇಳುತ್ತಿದ್ದಾಗ, ಪುಟ್ಟನಿಗೆ ಒಂಥರಾ ಬೇಸರವಾಗಿತ್ತು. ಇನ್ನೊಂದು ನಾಲ್ಕು ದಿನ ಅಲ್ಲೇ ಉಳಿಯಬೇಕೆಂದು ಮನಸ್ಸಿದ್ದರೂ, ವಿಧಿ ಇಲ್ಲದೆ ಪುಟ್ಟ ಭಾರದ ಹೆಜ್ಜೆಗಳನಿಟ್ಟು ಚಿಕ್ಕಪ್ಪನ ಜೊತೆ ಹೊರಟು ಬಂದಿದ್ದ.&lt;br /&gt;&lt;br /&gt;ನಿಧಾನಕ್ಕೆ ಬಸ್ಸಿನಲ್ಲಿ ಜನ ತುಂಬಲಾರಂಬಿಸಿದರು. ಪುಟ್ಟ ಕುಳಿತ ಸೀಟ್ ನಿಂದ ಡ್ರೈವರ್ ಸೀಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಪುಟ್ಟನಿಗೆ ಮುಂಚಿನಿಂದಲೂ ಬಸ್ ಡ್ರೈವರ್ ಅಂದರೆ ಅದೇನೋ ಖುಶಿ. ಇಡಿ ಬಸ್ಸು ತನ್ನದೆಂಬಂತೆ ಗತ್ತಿನಲ್ಲಿ ಕುಳಿತು, ಆಗಾಗ ಹಾರ್ನ್ ಮಾಡುತ್ತಾ, ದೊಡ್ಡನೆಯ ಸ್ಟೀರಿಂಗ್ ವೀಲ್ ತಿರುಗಿಸುತ್ತಾ ಬಸ್ಸು ಚಲಿಸುತ್ತಿದ್ದ ಡ್ರೈವರಂದಿರು ಪುಟ್ಟನಿಗೆ ಸಿನೆಮಾದಲ್ಲಿ ತೋರಿಸುವ ಹೀರೊಗಳಿಗಿಂತ ಗ್ರೇಟ್ ಅನ್ನಿಸಿಬಿಡುತ್ತಿತ್ತು. ಹಿಂದೊಮ್ಮೆ ಮನೆಗೆ ಬಂದಿದ್ದ ಯಾರೋ ನೆಂಟರು, ಪುಟ್ಟನ ಚುರುಕುತನವನ್ನು ನೋಡಿದ ಬಳಿಕ, ಅಪ್ಪನ ಹತ್ತಿರ ನಿಮ್ಮ ಮಗ ಮುಂದೆ ಡಾಕ್ಟರ್ರೋ, ಎಂಜಿನೀಯರ್ರೋ ಆಗುತ್ತಾನೆ ಎಂದಾಗ ಪುಟ್ಟ ತಟ್ಟನೆ "ಇಲ್ಲಾ, ನಾನು ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗುತ್ತೇನೆ" ಎಂದು ಹೇಳಿ ಅಪ್ಪನ ಕೋಪಕ್ಕೆ ತುತ್ತಾಗಿದ್ದ. ನೆಂಟರು ಹೋದ ಮೇಲೆ ಅಪ್ಪ, ಪುಟ್ಟನಿಗೆ ಚೆನ್ನಾಗಿ ಬೈದ ಮೇಲೆ, ಬಹಿರಂಗವಾಗಿ ಡ್ರೈವರ್ ಆಗುತ್ತೇನೆ ಎಂದು ಹೇಳುವುದನ್ನು ಪುಟ್ಟ ನಿಲ್ಲಿಸಿದ್ದ. ಆದರೂ ಅವನ ಸುಪ್ತಮನಸ್ಸಿನಲ್ಲಿ, ದೊಡ್ಡವನಾದ ಮೇಲೆ ಆದರೆ ಬಸ್ಸಿನ ಅಥವ ಲಾರಿಯ ಡ್ರೈವರ್ರೇ ಆಗಬೇಕು ಎಂದಿತ್ತು.&lt;br /&gt;&lt;br /&gt;ಬಸ್ಸಿನಲ್ಲಿ ಯಾವುದೇ ಖಾಲಿ ಸೀಟ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಂಡಕ್ಟರ್ ಸೀಟಿ ಊದಿದ ತಕ್ಷಣವೇ, ಮಿಲಿಟರಿ ಮೀಸೆ ಹೊತ್ತಿದ್ದ ಡ್ರೈವರು ಬಸ್ಸನ್ನು ಚಾಲೂ ಮಾಡಿ ಪುಟ್ಟ ಬೆರಗುಗಣ್ಣಿಂದ ಗಮನಿಸುತ್ತಿದ್ದಂತೆಯೇ ಗೇರ್ ಬದಲಿಸಿ, ನಿಮಿಷಾರ್ಧದಲ್ಲಿ ಬಸ್ ಸ್ಟಾಂಡ್ ನ ಹೊರಬಿದ್ದಿದ್ದ. "ಹೊಟೇಲ್ ವಂದನಾ ಪ್ಯಾಲೇಸ್" ನ್ನು ದಾಟಿ ಬಸ್ಸು ಪಿ.ಬಿ ರೋಡಿಗೆ ಬಂದು ಸೇರಿದ್ದರೂ, ಪುಟ್ಟನ ಕಣ್ಣುಗಳು ಡ್ರೈವರನನ್ನು ಬಿಟ್ಟು ಕದಲಿರಲಿಲ್ಲ. ಕಾಲಿಗೆ ತೊಟ್ಟಿದ್ದ ಚಪ್ಪಲಿಯನ್ನು ಪಕ್ಕದಲ್ಲಿ ಬಿಚ್ಚಿಟ್ಟು, ಸೀಟಿನ ಮೇಲೆ ಸಣ್ಣ ಮೆತ್ತೆಯೊಂದನ್ನು ಹಾಸಿಕೊಂಡು,ಆಗಾಗ ಕಿಡಕಿಯಿಂದ ಆಚೀಚೆ ನೋಡುತ್ತಾ ನಿರಾಳವಾಗಿ ಬಸ್ಸು ಚಲಿಸುತ್ತಿದ್ದ ಡ್ರೈವರನ ಠೀವಿಯನ್ನು ನೋಡುತ್ತಿದ್ದ ಪುಟ್ಟನಿಗೆ ಅವನೊಬ್ಬ "ಎಕ್ಸ್ ಪರ್ಟ್ ಡ್ರೈವರ್" ಅನ್ನಿಸಿದ ಮೇಲೇ ಅವನ ಕಣ್ಣುಗಳು ಡ್ರೈವರ್ ಸೀಟ್ ನಿಂದ ಕದಲಿದ್ದು.&lt;br /&gt;&lt;br /&gt;ಬಸ್ಸು ಒಂದೇ ವೇಗದಲ್ಲಿ ಹೆದ್ದಾರಿಯನ್ನು ನುಂಗುವಂತೆ ಓಡುತ್ತಿತ್ತು. ಮುಂದಿನ ಸೀಟಿನವರ್ಯಾರೋ ಕಿಡಕಿ ಬಾಗಿಲನ್ನು ಸ್ವಲ್ಪ ಸರಿಸಿದ್ದರಿಂದ,ತಣ್ಣನೆಯ ಗಾಳಿ ಪುಟ್ಟನೆಯ ಮುಖಕ್ಕೆ ರಾಚುತ್ತಿತ್ತು. ಚಿಕ್ಕಪ್ಪ ಕೊಟ್ಟು ಹೋಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯನ್ನು ತಿರುವಿ ಹಾಕಲು ಪುಟ್ಟ ಪ್ರಯತ್ನಿಸಿದ. ಈ ವರ್ಷ ತಾನೇ ಇಂಗ್ಲೀಷ್ ಕಲಿಯಲು ಶುರು ಮಾಡಿದ್ದ ಪುಟ್ಟನಿಗೆ ಅಷ್ಟೊಂದೇನೂ ಇಂಗ್ಲೀಷ್ ಶಬ್ದಗಳು ಗೊತ್ತಿರಲಿಲ್ಲ. ಆದರೂ ಮುಖ್ಯ ಪತ್ರಿಕೆಯ ಜೊತೆಯಿದ್ದ ಬಣ್ಣ ಬಣ್ಣದ ಸಾಪ್ತಾಹಿಕದಲ್ಲಿ, ಮಕ್ಕಳು ಬಿಡಿಸಿದ್ದ ಚಿತ್ರಗಳನ್ನು ನೋಡುತ್ತಾ ಕುಳಿತವನಿಗೆ, ಅದರ ಎರಡನೇ ಪುಟದಲ್ಲಿ, ಅಂಕೆಗಳಿಂದ ಗೆರೆ ಎಳೆದು ಪೂರ್ತಿಮಾಡಬೇಕಾದ ಚಿತ್ರವೊಂದು ಕಂಡಿತು. ಆದರೆ ಗೆರೆ ಎಳೆಯಲು ತನ್ನ ಹತ್ತಿರ ಪೆನ್ಸಿಲ್ ಅಥವ ಪೆನ್ ಇಲ್ಲದಿರುವುದು ಅನುಭವಕ್ಕೆ ಬಂದ ಕೂಡಲೇ, ಸುಮ್ಮನೇ ಮನಸ್ಸಿನಲ್ಲಿ ಆ ಚಿತ್ರದಲ್ಲಿ ಯಾವ ಪ್ರಾಣಿಯಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕುಳಿತ. ಇಂಗ್ಲೀಷ್ ಪತ್ರಿಕೆಯನ್ನು ಹಿಡಿದುಕೊಂಡು ಯೋಚಿಸುತ್ತಿದ್ದನ್ನು ಪುಟ್ಟನನ್ನು ನೋಡಿ, ಅವನ ಪಕ್ಕದಲ್ಲಿ ಕುಳಿತ ಮಧ್ಯವಯಸ್ಸಿನ ಹಿರಿಯರು ಕುತೂಹಲದಿಂದ ಪ್ರಶ್ನಿಸಲು ಶುರು ಮಾಡಿದರು. "ಊರು ಯಾವುದು ? ಇಲ್ಲಿ ಯಾಕೆ ಬಂದಿದ್ದೆ ? ಎಷ್ಟನೇಯ ತರಗತಿ ? ಇಂಗ್ಲೀಷ್ ಮೀಡಿಯಮ್ಮಾ ಅಥವಾ ಕನ್ನಡ ಮೀಡಿಯಮ್ಮಾ ? " ಅಂತೆಲ್ಲಾ ಕೇಳಲು ಶುರು ಮಾಡುತ್ತಿದ್ದಂತೆಯೇ ಪುಟ್ಟನಿಗೆ ಯಾಕೋ ಸ್ವಲ್ಪ ಕಿರಿಕಿರಿಯಾದಂತನಿಸಿ ಅವರ ಪ್ರಶ್ನೆಗಳಿಗೆಲ್ಲಾ ಸರಿಯಾಗಿ ಉತ್ತರಿಸಲಿಲ್ಲ. ಪುಟ್ಟನ ಅನ್ಯಮಸ್ಕತೆಯನ್ನು ಗಮನಿಸಿದ ಹಿರಿಯರು ಮುಂದೆ ಪ್ರಶ್ನೆ ಕೇಳಲು ಹೋಗಲಿಲ್ಲ. ಪುಟ್ಟನಿಗೆ ಮಾತ್ರ ಪತ್ರಿಕೆಯಲ್ಲಿದ್ದ ಚಿತ್ರ ಬಾತುಕೋಳಿಯದ್ದೋ ಅಥವ ನಾಯಿಮರಿಯದ್ದೋ ಎಂದು ಕೊನೆಗೂ ನಿರ್ಧರಿಸಲಾಗದೇ, ರೇಗಿ ಹೋಗಿ ಪತ್ರಿಕೆಯನ್ನು ಮುಚ್ಚಿಬಿಟ್ಟ.&lt;br /&gt;&lt;br /&gt;ಬಸ್ಸು ಈಗ ಹಿರೇಬಾಗೇವಾಡಿಯ ದೊಡ್ಡ ಏರನ್ನು ಹತ್ತಿಳಿದು, ಸುಸ್ತಾದಂತೆ ನಿಧಾನವಾಗಿ ಮತ್ತೆ ಸಮತಟ್ಟಾದ ನೆಲದಲ್ಲಿ ಓಡಲು ಶುರು ಮಾಡಿತ್ತು. ಹೆದ್ದಾರಿಯನ್ನು ವರ್ಷಾನುಗಟ್ಟನೇ ಕಾಲದಿಂದ ಕಾಯುತ್ತಿವೆಯೆನೋ ಅನ್ನಿಸುವಂತೆ ದೈತ್ಯಾಕಾರದ ಹುಣಿಸೇಮರಗಳು ದಾರಿಯ ಎರಡು ಪಕ್ಕದಲ್ಲೂ ಸಾಲಾಗಿ ನಿಂತಿದ್ದವು. ನಿಧಾನಕ್ಕೆ ಮೇಲೇರುತ್ತಿದ್ದ ಸೂರ್ಯ, ಪುಟ್ಟನನ್ನು ನೋಡಲು ನಾಚಿಕೆಯಾಗುತ್ತಿದೆಯೋ ಎಂಬಂತೆ ಆಗಾಗ ಈ ಮರಗಳ ಮಧ್ಯದಿಂದ ಇಣುಕಿ, ಪುಟ್ಟನ ಮುಖದ ಮೇಲೆ ಲಾಸ್ಯವಾಡುತ್ತಿದ್ದ. ಬಸ್ ಡ್ರೈವರ್, ನಿಮಿಷಕೊಮ್ಮೆ ವೇಗ ನಿಯಂತ್ರಕರಂತೆ ಅಡ್ಡಡ್ಡವಾಗುತ್ತಿದ್ದ ಲಾರಿಗಳನ್ನು ಅತ್ಯುತ್ಸಾಹದಿಂದ ಹಿಂದಿಕ್ಕುವುದರಲ್ಲಿ ಮಗ್ನನಾಗಿದ್ದ. ಪ್ರತಿಯೊಂದು ಲಾರಿಯನ್ನು ಹಿಂದೆ ಹಾಕುತ್ತಿದಂತೆಯೂ, ಪುಟ್ಟನಿಗೆ ತಾನೇ ಆ ಲಾರಿಯನ್ನು ಹಿಂದೆ ಹಾಕಿದಂತೆ ಸಂಭ್ರಮವಾಗುತ್ತಿತ್ತು. ಪಕ್ಕದಲ್ಲಿ ಕುಳಿತಿದ್ದ ಹಿರಿಯರು, ಆಗಲೇ ಬಾಯಿ ಕಳೆದುಕೊಂಡು ನಿದ್ದೆ ಮಾಡಲು ಶುರು ಮಾಡಿಬಿಟ್ಟಿದ್ದರು. ಪುಟ್ಟ ಒಮ್ಮೆ ಬಸ್ಸಿನ ಸುತ್ತೆಲ್ಲಾ ಕಣ್ಣಾಡಿಸಿದ. ಎಲ್ಲರೂ ಕಣ್ಣುಮುಚ್ಚಿಕೊಂಡು ಸಣ್ಣ ಗೊರಕೆ ಹೊಡೆಯುತ್ತಲೋ, ಅಥವಾ ಅರೆನಿದ್ರೆಯಲ್ಲಿಯೋ ಇದ್ದಂತೆ ಕಂಡಿತು. ಒಂದು ಕ್ಷಣ, ಪುಟ್ಟನಿಗೆ ಇಡೀ ಬಸ್ಸಿನಲ್ಲಿ ತಾನೊಬ್ಬನೇ ಎಚ್ಚರವಾಗಿ ಇದ್ದಿರುವಂತೆ ಅನುಭವವಾಗಿ ವಿಲಕ್ಷಣ ಭಯವಾಯಿತು. ತಕ್ಷಣವೇ ಸಾವರಿಸಿಕೊಂಡು, ಡ್ರೈವರ್ ನನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತ.&lt;br /&gt;&lt;br /&gt;ಸ್ವಲ್ಪ ಸಮಯದಲ್ಲೇ ಬಸ್ಸು ಕಿತ್ತೂರಿನ ಬಸ್ ಸ್ಟಾಂಡ್ ನಲ್ಲಿ "ಯು" ಟರ್ನ್ ಹೊಡೆದು, "ಉಪಹಾರ ದರ್ಶಿನಿ"ಯ ಮುಂದೆ ನಿಂತಿತು. ಕಂಡಕ್ಟರು "೨೦ ನಿಮಿಷ ಟೈಮ್ ಇದೆ ನೋಡ್ರಿ, ತಿಂಡಿ ಮಾಡೋರು ಮಾಡಿಬನ್ನಿ" ಎಂದು ದೊಡ್ಡ ದನಿಯಲ್ಲಿ ಕೂಗಿ ಡ್ರೈವರ್ ನ ಜೊತೆ ಇಳಿದುಹೋದ. ನಿದ್ರೆಯಲ್ಲಿದ್ದ ಪ್ರಯಾಣಿಕರೆಲ್ಲರೂ, ಆಕಳಿಸುತ್ತಾ, ಒಬ್ಬೊಬ್ಬರಾಗಿ ಇಳಿದುಹೋದರು. ಪುಟ್ಟನಿಗೆ ಯಾಕೋ ಕೆಳಕ್ಕಿಳಿವ ಧೈರ್ಯವಾಗಲಿಲ್ಲ. ಚಿಕ್ಕಮ್ಮ ಬೆಳಿಗ್ಗೆ ಬೆಳಿಗ್ಗೆ ಮಾಡಿಕೊಟ್ಟಿದ್ದ ೩ ಇಡ್ಲಿಗಳು ಅವನ ಹೊಟ್ಟೆಯಲ್ಲಿನ್ನೂ ಭದ್ರವಾಗಿ ಕುಳಿತಿದ್ದವು. ಹಾಗೇ ಬಸ್ ಸ್ಟಾಂಡ್ ಗೋಡೆಗಳ ಮೇಲೆಲ್ಲಾ ಕಲ್ಲಿನಲ್ಲಿ ಕೆತ್ತಿದ್ದ "ದ.ಸಂ.ಸ" ನ ಘೋಷಣೆಗಳನ್ನೂ, ಸವದತ್ತಿ ಎಲ್ಲಮ್ಮನ ಜಾತ್ರೆಯ ಪೋಸ್ಟರಗಳನ್ನೇ ನೋಡುತ್ತಾ ಕುಳಿತ. ನಿಧಾನವಾಗಿ ಪ್ರಯಾಣಿಕರೆಲ್ಲರೂ ಉಪಹಾರ ಮುಗಿಸಿಕೊಂಡು ಸ್ವಸ್ಥಾನ ಸೇರುತ್ತಿದಂತೆಯೇ, ಬಸ್ಸು ಕಿತ್ತೂರನ್ನು ಹಿಂದೆ ಹಾಕಿ ಓಡಲಾರಂಭಿಸಿತು. ಪುಟ್ಟ ಮತ್ತೊಮ್ಮೆ ಬಸ್ಸಿನ ತುಂಬೆಲ್ಲಾ ಕಣ್ಣಾಡಿಸಿದ. ಬಹಳಷ್ಟು ಪ್ರಯಾಣಿಕರು ಎಚ್ಚರದಿಂದಿದ್ದು, ಮೊದಲಿಗಿಂತ ಉತ್ಸಾಹದಲ್ಲಿದ್ದ ಹಾಗೆ ಕಂಡರು.&lt;br /&gt;&lt;br /&gt;ವಿಶಾಲವಾದ ಬಯಲನ್ನು ಸೀಳಿಕೊಂಡು ನಿಂತಿದ್ದ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಪುಟ್ಟನಿಗೆ ಆಕರ್ಷಣೀಯವಾಗಿದ್ದೇನೂ ಕಾಣದೇ ಸ್ವಲ್ಪ ಬೇಜಾರಗತೊಡಗಿತು. ಹಾಗೆ ಕಿಟಕಿಯನ್ನು ಸ್ವಲ್ಪ ತೆರೆದು, ತಣ್ಣಗೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕಣ್ಣು ಮುಚ್ಚಿದವನಿಗೆ, ಸಣ್ಣ ಜೊಂಪು ಆವರಿಸಿಕೊಂಡಿದ್ದು ಗೊತ್ತಾಗಲೇ ಇಲ್ಲ. ಜನರ ಗಲಾಟೆ ಕೇಳಿ ತಟ್ಟನೇ ಎಚ್ಚರವಾದವನಿಗೆ ಮೊದಲು ಕಂಡಿದ್ದು, "ಧಾರವಾಡ ಬಸ್ ನಿಲ್ದಾಣ" ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡು. ಬಸ್ಸಿನಲ್ಲಿ ಇದ್ದ ಬಹಳಷ್ಟು ಪ್ರಯಾಣಿಕರು ಆಗಲೇ ಇಳಿದುಹೋಗಿ, ಅವರ ಜಾಗಕ್ಕೆ ಬೇರೆಯವರು ಬಂದಿದ್ದರು. ಪುಟ್ಟನ ಪಕ್ಕಕ್ಕೆ ಈಗ ಯಾವುದೋ ಹೆಂಗಸು ತನ್ನ ಪುಟ್ಟ ಮಗುವಿನ ಜೊತೆ ಬಂದು ಕುಳಿತಿದ್ದಳು. ಅವಳ ಗಂಡ ಕಿಟಕಿ ಪಕ್ಕದಲ್ಲಿ ನಿಂತು ಅವಳಿಗೆ ಏನೇನೋ ಸೂಚನೆಗಳನ್ನು ನೀಡುತ್ತಿದ್ದ. ಪುಟ್ಟನಿಗೆ ಸ್ವಲ್ಪ ಬಾಯಾರಿಕೆ ಆದಂತೆ ಅನಿಸಿತು. ನಿಲ್ದಾಣದ ತುಂಬೆಲ್ಲಾ, ಅವನದೇ ವಯಸ್ಸಿನ ಹುಡುಗರು ಸಣ್ಣ ಬುಟ್ಟಿಗಳಲ್ಲಿ ಶೇಂಗಾ, ಕಡಲೇಕಾಳು,ಹೆಚ್ಚಿದ್ದ ಸವತೇಕಾಯಿ ಮುಂತಾದವುಗಳನ್ನು ಇಟ್ಟುಕೊಂಡು ಓಂದು ಬಸ್ಸಿನಿಂದ ಇನ್ನೊಂದು ಬಸ್ಸಿಗೆ ಅಲೆಯುತ್ತಿದ್ದರು. ಅವರನ್ನು ನೋಡಿ, ಪುಟ್ಟನಿಗೆ ಒಂದು ಸಲ ಅಯ್ಯೋ ಅನಿಸಿತು. ಹಾಗೇ, ಸರಿಯಾಗಿ ಓದದಿದ್ದಾಗ ಅಮ್ಮ "ಓದದೇ ಹೋದರೆ, ಮುಂದೆ ಕೆಲಸ ಸಿಗದೇ, ನೀನೂ ಅವರ ತರಾನೇ ಬಸ್ಸಿಂದ ಬಸ್ಸಿಗೆ ಅಲೆಯಬೇಕಾಗುತ್ತೆ ನೋಡು" ಎಂದು ಹೆದರಿಸಿದ್ದು ನೆನಪಾಯ್ತು.&lt;br /&gt;&lt;br /&gt;ಇಷ್ಟರಲ್ಲಿ ಪುಟ್ಟನಿಗೆ ಜೇಬಿನಲ್ಲಿದ್ದ ೫ ರುಪಾಯಿಯ ನೋಟು ಜ್ನಾಪಕಕ್ಕೆ ಬಂತು.ಅದನ್ನು ಹೇಗೆ ಬಳಸಬೇಕೆಂದು ಅವನಿನ್ನೂ ನಿರ್ಧರಿಸಿರಲಿಲ್ಲ. ಬಸ್ಸಿನ ಪಕ್ಕದಲ್ಲೇ ಇದ್ದ ಅಂಗಡಿಯೊಂದರಲ್ಲಿ, ಉದ್ದ ಬಾಟಲಿಗಳಲ್ಲಿ ಶೇಖರಿಸಿಟ್ಟಿದ್ದ ಬಣ್ಣ ಬಣ್ಣದ ಶರಬತ್ತನ್ನು ಕುಡಿಯಬೇಕೆಂದು ಅವನಿಗೆ ತೀವ್ರವಾಗಿ ಅನಿಸಿದರೂ, ಯಾಕೋ ಕೆಳಗಿಳಿದು ಹೋಗಿ ಬರಲು ಹಿಂಜರಿಕೆಯಾಯಿತು.ಬಸ್ಸಿನೊಳಗೇ ಹತ್ತಿ ಮಾರುತ್ತಿದ್ದ ಹುಡುಗನ ಬಳಿಯಲ್ಲಿ, ೮-೧೦ ನಿಂಬೂ ಪೆಪ್ಪರ್ಮಿಂಟ್ ಗಳ ಪ್ಯಾಕೆಟೊಂದನ್ನು ಕೊಂಡು, ಅವನು ವಾಪಸ್ ಮಾಡಿದ ೨ ರುಪಾಯಿ ನೋಟು ಮತ್ತೆ ೧ ರುಪಾಯಿಯ ನಾಣ್ಯವನ್ನು ಭದ್ರವಾಗಿ ಜೇಬಿಗೆ ಸೇರಿಸಿದ. ತಿಳಿ ಕೆಂಪು ಬಣ್ಣದ ಪೆಪ್ಪರ್ ಮಿಂಟ್ ಗಳು ನಿಧಾನವಾಗಿ ಪುಟ್ಟನ ಬಾಯಲ್ಲಿ ಒಂದೊಂದಾಗಿ ಕರಗಿ, ಅವನ ನಾಲಿಗೆಯನ್ನೆಲ್ಲಾ ರಂಗೇರಿಸುತ್ತಿದ್ದಂತೆಯೇ ಬಸ್ಸು ನಿಧಾನವಾಗಿ ಮುಂದೆ ಚಲಿಸಿತು.&lt;br /&gt;&lt;br /&gt;ಸ್ವಲ್ಪ ಸಮಯದಲ್ಲೇ, ಬಸ್ಸು ಮುಖ್ಯ ರಸ್ತೆಯನ್ನು ಬಿಟ್ಟು ಬಲಕ್ಕೆ ತಿರುಗಿ, ಹೆಚ್ಚು ಜನವಸತಿಯಿಲ್ಲದಿದ್ದ ಜಾಗದಲ್ಲಿ ಮುಂದುವರಿಯತೊಡಗಿತು. ಗುಡ್ಡಗಳನೆಲ್ಲಾ ಕಡಿದು ಮಾಡಿದ್ದ ಅಗಲವಾದ ರಸ್ತೆಯಲ್ಲಿ ಬಸ್ಸು ಈಗ ಇನ್ನೂ ವೇಗವಾಗಿ ಸಾಗುತ್ತಿತ್ತು. ಡ್ರೈವರ್ ಈಗ ಬರೀ ಒಂದೇ ಕೈಯನ್ನು ಸ್ಟೀರಿಂಗ್ ಮೇಲೆ ಇಟ್ಟು, ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೊತೆ ಮಾತಾಡಲು ಶುರು ಮಾಡಿದ್ದ. ಪಕ್ಕದಲ್ಲಿ ಕುಳಿತಿದ್ದ ಮಗು, ಪುಟ್ಟನನ್ನು ನೋಡಿ ಸಣ್ಣಗೆ ನಗುತ್ತಿತ್ತು.ಅದರ ಜೊತೆ ಆಟವಾಡುತ್ತಾ ಪುಟ್ಟನಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ.&lt;br /&gt;&lt;br /&gt;ಬಸ್ಸು ಈಗ ಮತ್ತೆ ಪಟ್ಟಣದ ಒಳಗೆ ನುಗ್ಗಿ, ವಿಶಾಲವಾದ ಬಸ್ ಸ್ಟಾಂಡ್ ಒಳಕ್ಕೆ ಪ್ರವೇಶಿಸಿತು. ಬೆಳಗಾವಿಗೆ ಹೋಗುವಾಗ ಪುಟ್ಟ, ಹುಬ್ಬಳ್ಳಿಯ ಈ ಹೊಸ ಬಸ್ ಸ್ಟಾಂಡನ್ನು ಚಿಕ್ಕಪ್ಪನ ಜೊತೆ ಒಂದು ರೌಂಡ್ ಹಾಕಿದ್ದ. ಧೂಳೆಬ್ಬಿಸುತ್ತಾ ಬಸ್ಸು ಒಳನುಗ್ಗುತ್ತಿದ್ದಂತೆಯೇ, ನೂರಾರು ಜನರು ಬಸ್ಸಿನ ಹಿಂದೆಯೇ ಓಡಿಬಂದರು. ನಾ ಮುಂದೆ, ತಾ ಮುಂದೆ ಎಂದು ನುಗ್ಗಿ, ಸೀಟ್ ಹಿಡಿಯಲು ಜನರು ಹರಸಾಹಸ ಪಡುತ್ತಿದ್ದರು. ಕೆಳಕ್ಕಿಳಿಯುತ್ತಿದ್ದ ಪ್ರಯಾಣಿಕರಿಗೂ, ಮೇಲೇರಿ ಬರಲು ಹವಣಿಸುತ್ತಿದ್ದ ಪ್ರಯಾಣಿಕರಿಗೂ ಮಧ್ಯ ಸಣ್ಣ ಘರ್ಷಣೆ ಉಂಟಾಗಿದ್ದು, ಅವರು ಮಾಡುತ್ತಿದ್ದ ಗಲಾಟೆಯಿಂದಲೇ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಸಂಪೂರ್ಣವಾಗಿ ತುಂಬಿಹೋಯಿತು. ಮೇಲಿಂದ ಒಂದು ಸೂಜಿ ಬಿದ್ದರೂ, ಅದು ನೆಲಕ್ಕೆ ಬೀಳದಷ್ಟು ಒತ್ತೊತ್ತಾಗಿ ಜನರು ನಿಂತುಕೊಂಡಿದ್ದರು. ಪುಟ್ಟನಿಗೆ ಯಾಕೋ ಉಸಿರಾಡಲೂ ಕಷ್ಟವಾದಂತೆ ಅನಿಸಿ, ಬಸ್ಸು ಮುಂದೆ ಹೋದರೇ ಸಾಕು ಅನ್ನುವಂತ ಪರಿಸ್ಥಿತಿ ಬಂತು.&lt;br /&gt;&lt;br /&gt;ಒಂದು ರೌಂಡ್ ಟಿಕೆಟ್ ಮಾಡಿ ಹೋದ ಮೇಲೆ ಅರ್ಧ ತಾಸಾದರೂ, ಕಂಡಕ್ಟರ್ ಮತ್ತು ಡ್ರೈವರ್ ರ ಪತ್ತೆಯೇ ಇರಲಿಲ್ಲ. ಬಸ್ಸು ಈಗ ಕಿಕ್ಕಿರಿದು ತುಂಬಿತ್ತು. ಕಿಟಕಿ ತೆಗೆದಿದ್ದರೂ, ಅದರಿಂದ ಬರುತ್ತಿದ್ದ ತಂಗಾಳಿಯೆಲ್ಲವೂ, ಅರೆಕ್ಷಣದಲ್ಲಿ ಬಿಸಿಗಾಳಿಯಾಗಿ ಬಿಡುತ್ತಿತ್ತು. ಬಸ್ಸಿನೊಳಗಿದ್ದ ಪ್ರಯಾಣಿಕರ ಸಹನೆ ಮೀರುತ್ತಿದ್ದಿದ್ದು ಅವರ ಗೊಣಗಾಟಗಳಿಂದ ಪುಟ್ಟನಿಗೆ ಅನುಭವಕ್ಕೆ ಬಂತು. ತಾಳ್ಮೆಗೆಟ್ಟ ಒಂದಿಬ್ಬರು ಪ್ರಯಾಣಿಕರು ಕಂಟ್ರೋಲ್ ರೂಮ್ ಗೆ ಹೋಗಿ ಗಲಾಟೆ ಮಾಡಿ, ಅಂತೂ ಕಂಡಕ್ಟರ್ ಮತ್ತು ಡ್ರೈವರ್ ನನ್ನು ಕರೆದುಕೊಂಡು ಬಂದರು. ಬಸ್ಸು ನಿಧಾನಕ್ಕೆ ಮುಂದೆ ಹೊರಡುತ್ತಿದ್ದಂತೆಯೇ, ಎಲ್ಲಾ ಪ್ರಯಾಣಿಕರಂತೆ ಪುಟ್ಟನೂ ಸಮಾಧಾನದ ನಿಟ್ಟುಸಿರು ಬಿಟ್ಟ.&lt;br /&gt;&lt;br /&gt;ಚೆನ್ನಮ್ಮನ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಇನ್ನೊಂದು ನಾಲ್ಕಾರು ಜನರು ಬಸ್ಸನ್ನು ನಿಲ್ಲಿಸಿ ಹತ್ತಿಕೊಂಡರು. ಪುಟ್ಟನಿಗೆ ತಾನು ಯಾವುದೋ ಸಂತೆಯಲ್ಲಿ ಸಿಕ್ಕಿಕೊಂಡ ಹಾಗೆ ಅನುಭವವಾಯಿತು. ಸ್ವಲ್ಪ ಸಮಯದಲ್ಲೇ, ಹಿಂದಿನ ಸೀಟಿನಲ್ಲಿ ಕುಳಿತವರಿಬ್ಬರಿಗೂ, ಕಂಡಕ್ಟರ್ ನಿಗೂ ಲಗೇಜ್ ವಿಷಯದಲ್ಲಿ ಜಗಳ ಶುರುವಾಯಿತು. ಎರಡು ಕಡೆಯವರೂ ಸುಮಾರು ಹೊತ್ತು ತಾರಕ ಸ್ವರದಲ್ಲಿ ಕೂಗಾಡಿ, ಪುಟ್ಟನ ನೆಮ್ಮದಿ ಕೆಡಿಸಿದರು. ಗಾಯದ ಮೇಲೆ ಬರೆಯಿಟ್ಟಂತೆ, ಚಿತ್ರ ವಿಚಿತ್ರ ವೇಷ ಧರಿಸಿ ಪಕ್ಕದಲ್ಲಿ ಕುಳಿತಿದ್ದ ಲಂಬಾಣಿ ಹೆಂಗಸು, ತನ್ನ ಜೊತೆ ತನ್ನಿಬ್ಬರು ಮಕ್ಕಳನ್ನೂ ಅದೇ ಸೀಟಿನಲ್ಲಿ ಕುಳಿಸಿಕೊಂಡಳು. ಪುಟ್ಟನಿಗೆ ಈಗ ಮಿಸುಕಾಡಲೂ ಆಗದಷ್ಟು ಜಾಗದ ಕೊರತೆಯಾಯಿತು.ಬಸ್ಸು ಆದಷ್ಟು ಬೇಗ ಮುಂಡಗೋಡು ಸೇರಲೆಂದು ಅವನು ಮನಸ್ಸು ತವಕಿಸಿತು.&lt;br /&gt;&lt;br /&gt;ನುಣುಪಾದ ಹೆದ್ದಾರಿಯನ್ನು ಬಿಟ್ಟು, ಬಸ್ಸು ತಡಸ ಕ್ರಾಸಲ್ಲಿ ಬಲಕ್ಕೆ ತಿರುಗಿ ಕಚ್ಚಾ ರಸ್ತೆಯನ್ನು ಪ್ರವೇಶಿಸಿದ್ದು ಬಸ್ಸು ಮಾಡುತ್ತಿದ್ದ ಕುಲುಕಾಟಗಳಿಂದಲೇ ಗೊತ್ತಾಗುತ್ತಿತ್ತು. ಬರಗಾಲದಿಂದ ಈಗ ಚೇತರಿಸಿಕೊಂಡಿದೆಯೆನೋ ಅನ್ನುವಂತೆ ನೆಲವೆಲ್ಲಾ ಬರೀ ಕುರುಚಲು ಗಿಡಗಳಿಂದಲೇ ತುಂಬಿ ಹೋಗಿತ್ತು. ಇನ್ನೇನು ನೆತ್ತಿಯ ಮೇಲೆ ಬಂದಿದ್ದ ಸೂರ್ಯ ಉತ್ಸಾಹದಿಂದ ಬೆಳಗುತ್ತಿದ್ದ. ಪ್ರಖರವಾದ ಬಿಸಿಲು ಪುಟ್ಟನ ಮುಖವನ್ನು ಸುಡುತ್ತಾ ಇತ್ತು. ಪುಟ್ಟನಿಗೆ ತಾನು ಬಸ್ಸಿನ ಆಚೆ ಬದಿಗೆ ಕುಳಿತಿಕೊಂಡಿರಬೇಕಿತ್ತು ಅಂತ ಬಲವಾಗಿ ಅನ್ನಿಸಲು ಶುರುವಾಯಿತು. ಕೈಕಾಲುಗಳನ್ನು ಅಲ್ಲಾಡಿಸಲೂ ಆಗದೇ, ಬಿಸಿಲಿಗೆ ಬಾಡುತ್ತಾ, ನಿರುತ್ಸಾಹದಲ್ಲಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತ.&lt;br /&gt;&lt;br /&gt;ಬೆಳಿಗ್ಗೆ ತಿಂದಿದ್ದ ಇಡ್ಲಿಗಳು ಈಗ ಕರಗಿ ಪುಟ್ಟನ ಹೊಟ್ಟೆ ಚುರುಗುಡಲು ಶುರುವಾಗಿತ್ತು. ಹಿಂದೆ ತೆಗೆದುಕೊಂಡಿದ್ದ ನಿಂಬೂ ಪೆಪ್ಪರ್ಮಿಂಟ್ ಗಳಲ್ಲಿ ಒಂದಷ್ಟಾದರನ್ನಾದರೂ ಉಳಿಸಿಕೊಳ್ಳಬೇಕಾಗಿತ್ತು ಅಂತ ಪುಟ್ಟನಿಗೆ ಅನಿಸಿತೊಡಗಿತು. ಬಸ್ಸು ಸಧ್ಯದಲ್ಲೇನಾದರೂ ನಿಲ್ಲುತ್ತದೆಯೋ ಅಂದರೆ ಹಲವಾರು ಮೈಲಿಗಳಿಂದ ಜನವಸತಿಯ ಕುರುಹನ್ನೇ ಕಂಡಿರಲಿಲ್ಲ ಅವನು. ಮುಂದೆ ಕುಳಿತಿದ್ದ ಹಲವರ ಬಳಿ ಪುಟ್ಟ, ಮುಂಡಗೋಡು ತಲುಪಲು ಇನ್ನೂ ಎಷ್ಟು ಹೊತ್ತು ಬೇಕಾಗಬಹುದೆಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ. ಯಾರಿಗೂ ಅದರ ಅಂದಾಜಿದ್ದಂತೆ ತೋರಲಿಲ್ಲ. ಒಬ್ಬರು ಇನ್ನೂ ಅರ್ಧ ತಾಸಿದೆ ಅಂದರೆ ಇನ್ನೊಬ್ಬರು ಒಂದೂವರೆ ತಾಸಿದೆ ಎಂದು ಹೇಳಿ ಪುಟ್ಟನ ನಿರುತ್ಸಾಹಕ್ಕೆ ತುಪ್ಪ ಸುರಿದರು. ಇನ್ನೊಮ್ಮೆ ಹೀಗೆ ಒಬ್ಬನೇ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಪುಟ್ಟ ನಿರ್ಧರಿಸಿದ.&lt;br /&gt;&lt;br /&gt;ಸುಮಾರು ಮುಕ್ಕಾಲು ಗಂಟೆಗಳ ನಂತರ ಬಸ್ಸು ಅಂತೂ ಮುಂಡಗೋಡು ತಲುಪಿತು. ಈ ನರಕದಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದನ್ನಿಸಿದ್ದ ಪುಟ್ಟನಿಗೆ, ಬಸ್ಸು ಪಟ್ಟಣದ ಸರಹದ್ದನ್ನು ತಲುಪುತ್ತಿದ್ದಂತೆಯೇ ನಿರಾಳವಾಯಿತು. ಲವಲವಿಕೆಯಿಂದ ಕಿಟಕಿ ಆಚೆ ಕಣ್ಣಾಡಿಸಲು ಶುರು ಮಾಡಿದ. ಪುಟ್ಟನ ಮನೆ ಬಸ್ ಸ್ಟಾಂಡಿಂದ ಕಾಲ್ನಡಿಗೆ ದೂರದಲ್ಲೇ ಇತ್ತು. ದಾರಿಯಲ್ಲೇ ಇದ್ದ ಪೈ ಬೇಕರಿಯಿಂದ, ತನ್ನ ಬಳಿ ಇದ್ದ ಮೂರು ರುಪಾಯಿಯಲ್ಲಿ ಎನೇನು ತೆಗೆದುಕೊಳ್ಳಬಹುದು ಎಂಬ ಆಲೋಚನೆಯಲ್ಲೇ ಮುಳುಗಿದ್ದವನಿಗೆ, ಬಸ್ಸು ಸ್ಟಾಂಡ್ ಗೆ ಬಂದು ನಿಂತರೂ, ಕಂಡಕ್ಟರ್ ಎಚ್ಚರಿಸಿದ ಮೇಲೆಯೇ ಅದರ ಅನುಭವವಾಗಿದ್ದು. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-4640462102734313695?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/4640462102734313695/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=4640462102734313695' title='9 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/4640462102734313695'/><link rel='self' type='application/atom+xml' href='http://www.blogger.com/feeds/6035880729059442700/posts/default/4640462102734313695'/><link rel='alternate' type='text/html' href='http://madhu-vana.blogspot.com/2008/02/blog-post_09.html' title='ಉಡುಪಿ ಬಸ್ಸೂ....ನಿಂಬೂ ಪೆಪ್ಪರ್ಮಿಂಟೂ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>9</thr:total></entry><entry><id>tag:blogger.com,1999:blog-6035880729059442700.post-3084294310471899114</id><published>2008-02-05T16:08:00.000-08:00</published><updated>2008-02-05T16:14:15.360-08:00</updated><title type='text'>ನಾಗರ ಹಾವೇ, ಹಾವೊಳು ಹೂವೇ...</title><content type='html'>&lt;div align="justify"&gt;&lt;br /&gt;ಮಲೆನಾಡಿನಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ಹಾವಿನ ಜೊತೆ ಒಡನಾಟ ಸರ್ವೇಸಾಮಾನ್ಯವಾದರೂ, ನನ್ನ ವಿಷಯದಲ್ಲಿ ಅದು ಯಾಕೋ ಸ್ವಲ್ಪ  ಜಾಸ್ತಿಯೇ ಆಗಿದೆ ಅಂತ ನನಗೆ ಅನ್ನಿಸಲು ಬಹಳಷ್ಟು ಕಾರಣಗಳಿವೆ.&lt;br /&gt;&lt;br /&gt;ಮುಖ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿದರೂ, ನಮ್ಮ ಮನೆಯ ಸುತ್ತ ಮುತ್ತ ಬೇಕಾದಷ್ಟು ಗಿಡಮರಗಳಿದ್ದು, ಹಾವು,ಚೇಳು, ಗೆದ್ದಲು, ಇರುವೆ, ಓತಿಕ್ಯಾತ ಮುಂತಾದುವಗಳ ಹಾವಳಿ ಅವ್ಯಾಹತವಾಗಿ ನಡೆದೇ ಇತ್ತು. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎಂಬ ಅಕ್ಕನ ವಚನದಂತೆ ನಾವು ಅವುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೇ, ನೆಮ್ಮದಿಯಾಗಿದ್ದೆವು. ಆದರೆ ಅಮ್ಮನಿಗೆ ಹಾವು ಕಂಡರೆ ಮಾತ್ರಾ, ಎಲ್ಲಿಲ್ಲದ ದಿಗಿಲು. ಹಾವಿನ ಹೆಸರೆತ್ತಿದರೇ ಮೂರು ಮಾರು ದೂರ ಓಡುತ್ತಿದ್ದ ಅವಳು, ಟೀವಿಯಲ್ಲಿ ಹಾವನ್ನು ತೋರಿಸಿದರೂ ನೋಡಲು ಹೆದರುತ್ತಿದ್ದರು.&lt;br /&gt;&lt;br /&gt;ಆ ಕಾಲದಲ್ಲಿ ನಮ್ಮ ಮನೆ ಅಟ್ಟಕ್ಕೆ ಅಡಿಕೆಯ ದಬ್ಬೆಯೇ ಆಧಾರ. ಆಗೆಲ್ಲಾ ಮನೆಯೆ ಮಾಡಿಗೆ ಇನ್ನೇನು ತಾಗಿಕೊಂಡೇ ಇದ್ದ ಬಿದಿರು ಮೆಳೆಗಳ ಸಹಾಯದಿಂದ, ಹಾವುಗಳು ಅಟ್ಟದ ಮೇಲಿರಬಹುದಾದ ಇಲಿಗಳ ಬೇಟೆಗೆ ಮನೆಯೊಳಗೆ ಬರುತ್ತಿದ್ದವು. ಕೆಲವೊಮ್ಮೆ ದಾರಿತಪ್ಪಿ ಅಟ್ಟದಿಂದ ಕೆಳಗಿಳಿದು, ಮನೆಯ ಸಿಮೆಂಟ್ ನೆಲದಲ್ಲಿ ತೆವಳಲಾಗದೇ, ವಿಲಿ ವಿಲಿ ಒದ್ದಾಡುತ್ತಿದ್ದವು. ಅವುಗಳನ್ನು ಹಾಗೆ ಹಿಡಿದು ಹೊರಗೆ ಬಿಡೋಣ ಅಂದ್ರೆ, ಎಲ್ಲಾದ್ರು ಕಚ್ಚಿ ಬಿಟ್ರೆ ಅಂತ ಭಯ. ಅಮ್ಮ ಬೇರೆ, ಬೇಗ ಕೊಂದು ಹಾಕಲು ತಾಕೀತು ಮಾಡುತ್ತಿದ್ದಳು. ಸಿಮೆಂಟ್ ನೆಲ ನುಣುಪಾಗಿರುವುದರಿಂದ ಹಾವುಗಳಿಗೆ ಓಡಿ ತಪ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಉಪಾಯವಿಲ್ಲದೇ, ಅವುಗಳನ್ನು ಕೊಲ್ಲಬೇಕಾಗುತ್ತಿತ್ತು. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಎಷ್ಟೋ ಮರಿಹಾವುಗಳನ್ನು ನಾನೂ ಹೊಡೆದಿದ್ದಿದೆ.ಅವುಗಳಲ್ಲಿ ಬಹುಪಾಲು ಹಾವುಗಳು, ನಿರುಪದ್ರವಿಯಾದ ಕೇರೆ ಹಾವುಗಳು.&lt;br /&gt;&lt;br /&gt;ಆದರೆ ಸರಾಸರಿಯಾಗಿ ವರ್ಷಕ್ಕೊಂದು ಸಲ, ನಾವು "ಕುದುರೆಬಳ್ಳ" ಅಂತ ಕರೆಯೋ ವಿಷದ ಹಾವುಗಳು ಮನೆಗೆ ಭೇಟಿಕೊಡುತ್ತಿದ್ದವು. ಕಪ್ಪಗೆ ಮೈತುಂಬ ಬಳೆಗಳಿದ್ದ ಈ ಹಾವುಗಳು ನೋಡಲು ಮಾತ್ರ ಭಯಂಕರವಾಗಿರುತ್ತಿದ್ದವು.ಆವಾಗೆಲ್ಲ ನಾವು ಬಾಗಿಲ ಹಿಂದೆ ನಿಂತುಕೊಂಡು ಅಪ್ಪ ಅದನ್ನು ಹೊಡಿಯೋದನ್ನು ನೋಡುತ್ತಿದ್ದವೇ ಹೊರತು ಹತ್ತಿರದೆಲ್ಲೆಲ್ಲೂ ಸುಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ, ಒಂದು ರವಿವಾರ ರಾತ್ರಿ ಸುಮಾರು ೯.೩೦ ರ ಹಾಗೆ, ನಾನು ದೂರದರ್ಶನ ದಲ್ಲಿ ಬರುತ್ತಿದ್ದ "ಸುರಭಿ" ನೋಡ್ತಾ ಇದ್ದೆ. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಮೇಲೆ ಅಟ್ಟದಲ್ಲಿ ಇಲಿಗಳು ಜೋರಾಗಿ ಸದ್ದು ಮಾಡುತ್ತಾ ಓಡಾಡುವುದು ಕೇಳಿಸಿತು. ಜೋರಾಗಿ ಒಂದು ಸಲ "ಶ್" ಅಂದು ಕೂಗಿ, ನಾನು ಟೀವಿ ನೋಡುವುದನ್ನು ಮುಂದುವರಿಸಿದೆ. ಮರುಕ್ಷಣದಲ್ಲೇ ಅಟ್ಟದಿಂದ ಎರಡು ಕಪ್ಪು ಹಾವುಗಳು, ಕುರ್ಚಿಯ ಮೇಲೆ ಕುಳಿತು ನೋಡುತ್ತಿದ್ದ ನನ್ನ ಕಾಲ ಮೇಲೆಯೆ ಬಿದ್ದವು. ನಾನು ಹೌಹಾರಿ, ಸಟ್ಟನೆ ಕಾಲನ್ನು ಮೇಲೆಳೆದುಕೊಂಡು, ಜೋರಾಗಿ ಕೂಗಿದೆ. ಮಲಗಿದ್ದ ಅಪ್ಪ ಎದ್ದು ಬಂದು, ಅವೆರಡೂ ಹಾವುಗಳಿಗೆ ಗತಿ ಕಾಣಿಸಿದರು. ಮಾರನೆಯ ದಿನ ಅಟ್ಟದ ಮೇಲೆ ಸರಿಯಾಗಿ ಹುಡುಕಿದಾಗ, ಒಂದೆಲ್ಲ, ಎರಡಲ್ಲ, ಅನಾಮತ್ತಾಗಿ ೫ ಮರಿ ಕುದುರೆಬಳ್ಳ ಹಾವುಗಳು, ಅವುಗಳ ತಾಯಿಯ ಜೊತೆ ಸಿಕ್ಕಿಬಿದ್ದವು.&lt;br /&gt;&lt;br /&gt;ಇದಾದ ಸ್ವಲ್ಪ ದಿನಕ್ಕೇ, ಅಪ್ಪ ಒಂದು ನಿರ್ಧಾರಕ್ಕೆ ಬಂದು, ಹೇಗೋ ಒಂದಷ್ಟು ಹಣ ಹೊಂದಿಸಿ ಅಟ್ಟಕ್ಕೆ ಆರ್.ಸಿ.ಸಿ ಜಂತಿಗಳನ್ನು ಕೂಡಿಸಿದರು. ಅಲ್ಲದೇ, ದೈತ್ಯಾಕಾರವಾಗಿ ಬೆಳೆದುಕೊಂಡಿದ್ದ ಬಿದಿರಿನ ಮೆಳೆಗಳನ್ನು ಕಡಿದು ಹಾಕಿದರು. ಅವತ್ತಿನಿಂದ ಮನೆಯೊಳಗೆ ಹಾವು ಬರುವುದು ನಿಂತುಹೋಯಿತು. ಆಗಾಗ ಅಮ್ಮನಿಗೆ ಮಾತ್ರ ಒರಳುಕಲ್ಲಿನ ಹತ್ತಿರವೋ, ಅಡುಗೆಮನೆಯ ಮಾಡಿನ ತುದಿಯಲ್ಲಿಯೋ ಕಾಣಿಸಿಕೊಳ್ಳುತ್ತಿದ್ದವು. ನಮಗೆ ಯಾರಿಗೂ ಅಷ್ಟು ಸಲೀಸಾಗಿ ಕಾಣಿಸಿಕೊಳ್ಳದೇ ಇದ್ದ ಹಾವುಗಳು, ಅಮ್ಮನ ಕಣ್ಣಿಗೆ ಮಾತ್ರ ಬೀಳುವುದು ನಮಗೆ ತುಂಬಾ ಸೋಜಿಗವನ್ನು ತರುತ್ತಿತ್ತು. ಅಮ್ಮ ತೋರಿಸಿದ ನಂತರ ನಾವು ಅವುಗಳನ್ನು ಹೆದರಿಸಿ ಓಡಿಸುತ್ತಿದ್ದೆವು. ಎಷ್ಟೋ ಸಲ ದೈತ್ಯಾಕಾರದ ಕೇರೆ ಹಾವುಗಳು, ಮಾಡಿನ ತುದಿಯಿಂದ ಧೊಪ್ಪನೇ ಹಾರಿ, ಓಡಿಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿತ್ತು. ಒಂದು ಮುದಿ ನಾಗರಹಾವೊಂದು ಮಾತ್ರ, ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಿತ್ತೇ ಹೊರತು ಇನ್ನೆಲ್ಲೂ ಸುಳಿಯುತ್ತಿರಲಿಲ್ಲ. ನಾನು, ಅಕ್ಕ ಅದ್ಯಾವುದೋ ನಿಧಿಯನ್ನು ಕಾಯುತ್ತಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದವು. ಮನೆಯ ಸುತ್ತಲೂ ಇದ್ದ ಚದರಂಗಿ ಗಿಡಗಳ ಹಣ್ಣನ್ನು ಕೊಯ್ಯಲು ಹೋಗುತ್ತಿದ್ದ ನಮ್ಮನ್ನು ಅಮ್ಮ ಆ ಹಾವಿನ ಬಗ್ಗೆ ಎಚ್ಚರಿಸುತ್ತನೇ ಇದ್ದಳು.&lt;br /&gt;&lt;br /&gt;ಎರಡನೇ ಬಾರಿ ಹಾವಿನೊಂದಿಗೆ ಮುಖಾಮುಖಿಯಾಗಿದ್ದು, ಈಗೊಂದು ೬-೭ ವರ್ಷದ ಹಿಂದೆ. ರಜೆಗೆ ಶಿರಸಿಗೆ ಬಂದಿದ್ದ ನಾನು ಅವತ್ತು ಅಮ್ಮನ ಜೊತೆ, ನಮ್ಮ ಮೂಲ ಊರಿಗೆ ಹೋಗಿದ್ದೆ. ಮಧ್ಯಾಹ್ನ ಊಟ ಆದ ಮೇಲೆ ಸಣ್ಣದೊಂದು ನಿದ್ದೆ ತೆಗೆದು, ಸುಮಾರು ೩ ಗಂಟೆಯ ಹೊತ್ತಿಗೆ ನಾನು, ತೋಟಗಳ ಬದಿಗೆ ಒಂದು ಸುತ್ತು ತಿರುಗಿ ಬರಲು ಹೋದೆ. ಹಾಗೆ ತೋಟದಲ್ಲಿ ತಿರುಗುತ್ತಿರುವಾಗ, ನಮ್ಮನೆ ಬಣ್ಣದ ತುದಿಯಲ್ಲಿ ಹರಿಯುತ್ತಿರುವ ಸಣ್ಣ ಝರಿಯಲ್ಲಿ ಒಂದು ತೆಂಗಿನಕಾಯಿ ಬಿದ್ದಿರುವುದು ಕಂಡಿತು. ಸರಿ, ಮನೆಗೆ ವಾಪಸ್ ಹೋಗುತ್ತಾ ತೆಗೆದುಕೊಂಡು ಹೋದರಾಯಿತು ಎಂದು ಕೆಳಗೆ ಇಳಿದು, ನೀರಿನಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಎರಡೂ ಕೈಯಲ್ಲಿ ಹಿಡಿದು ಎತ್ತಲು ಪ್ರಯತ್ನಿಸಿದೆ. ತಟ್ಟನೇ, ಬಲಗೈಯ ಹೆಬ್ಬಟ್ಟಿಗೆ ಎನೋ ಕುಟುಕಿದ ಅನುಭವವಾಯಿತು. ತಕ್ಷಣವೇ ನಾನು ಬಲಗೈಯನ್ನು ಮೇಲೆತ್ತಿ ಗಟ್ಟಿಯಾಗಿ ಕೊಡವಿದೆ. ಮುಂದಿನ ಕ್ಷಣದಲ್ಲಿ ನನಗೆ ಕಂಡಿದ್ದು ಸುಮಾರು ೧೦ ಅಡಿ ಉದ್ದ, ಅರ್ಧ ಒನಕೆಯಷ್ಟು ದಪ್ಪಗಿದ್ದ, ಕರಿ ಹಾವೊಂದು ಓಡಿಹೋಗುತ್ತಿರುವುದು. ನಾನು ಕಣ್ಣು ಮಿಟುಕಿಸುವುದರೊಳಗೆ ಇವೆಲ್ಲ ನಡೆದುಹೋಗಿತ್ತು. ನಾನು ಕೈ ಮೇಲೆತ್ತಿ ಕೊಡವಿದ ರಭಸಕ್ಕೂ, ಹಾವಿನ ಭಾರಕ್ಕೂ, ನನ್ನ ಬಲಗೈ ಹೆಬ್ಬಟ್ಟಿನ ಸುಮಾರು ಚರ್ಮ ಹಿಸಿದುಹೋಗಿತ್ತು. ಗಾಯದ ನೋವಿಗಿಂತಲೂ, ಆ ಹಾವಿನ ಗಾತ್ರವನ್ನು ನೋಡಿದ ನನ್ನ ಜಂಘಾಬಲವೇ ಉಡುಗಿಹೋಯಿತು. ನನ್ನ ಹೆಬ್ಬಟ್ಟನ್ನು ನೋಡಿ ಮೀನೆಂದು ತಿಳಿದುಕೊಂಡಿತೇನೋ ಆ ಹಾವು.&lt;br /&gt;&lt;br /&gt;ಹೇಗೋ ಆ ಆಘಾತದಿಂದ ಸಾವರಿಸಿಕೊಂಡು ಮನೆಯ ಕಡೆ ಓಡಿದೆ. ಅಲ್ಲೇ ಗೋಟಡಿಕೆ ಹೆಕ್ಕುತ್ತಿದ್ದ ಮಾಬ್ಲಣ್ಣ, ನನ್ನ ಗಾಬರಿ ನೋಡಿ ಏನಾಯ್ತೆಂದು ಕೇಳಿದ. ನಾನು ನಡೆದಿದ್ದನ್ನು ಹೇಳಿದೆ. ಅವನು ಅದು ನೀರುಕೇರೆ ಹಾವೆಂದು, ತಾನು ಅದನ್ನು ಬೇಕಾದಷ್ಟು ಸಲ ಅದೇ ಝರಿಯಲ್ಲಿ ನೋಡಿರುವುದಾಗಿಯೂ, ಅದು ವಿಷದ ಹಾವಲ್ಲ ಎಂದು ಹೇಳಿದ ಮೇಲೆಯೇ ನನ್ನ ಗಾಬರಿ ಸ್ವಲ್ಪ ಕಡಿಮೆಯಾಗಿದ್ದು. ಮನೆಗೆ ತಲುಪಿ, ಅಮ್ಮನಿಗೆ ಹೇಳಿದಾಗ ಅಮ್ಮ ತುಂಬಾ ಗಾಬರಿ ಬಿದ್ದಳು. ಆಗಿನ್ನೂ ೩.೩೦. ಮುಂದಿನ ಬಾಳೇಸರ ಬಸ್ಸು ಬರುವುದು ಇನ್ನು ೪.೩೦ ಕ್ಕೆ. ಸರಿ, ಕಾನಸೂರಿಗೆ ಫೋನ್ ಮಾಡಿ ಬಾಡಿಗೆ ಬೈಕ್ ಗೆ ಬರಲು ಹೇಳಿದ್ದಾಯಿತು. ಅದು ಬಂದು ಮುಟ್ಟುವುದರಲ್ಲಿ ೪.೧೫ ಆಗಿತ್ತು. ನನಗೇನಾದರೂ ವಿಷದ ಹಾವು ಕಚ್ಚಿರುತ್ತಿದ್ದರೆ ನನ್ನ ಪರಿಸ್ಥಿತಿ ಗಂಭೀರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಗಾಯದಿಂದ ಸ್ವಲ್ಪ ಜಾಸ್ತಿಯೇ ರಕ್ತ ಹರಿದಿದ್ದನ್ನು ಬಿಟ್ಟರೆ, ನಾನು ಚೆನ್ನಾಗಿಯೆ ಇದ್ದೆ.&lt;br /&gt;&lt;br /&gt;ಐದು ಗಂಟೆಯ ಹಾಗೆ ಶಿರಸಿ ತಲುಪಿದ್ದಾಯ್ತು. ಹಾವು ಕಚ್ಚಿದ್ದರಿಂದ ಯಾವುದೇ ಖಾಸಗಿ ಅಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳುವುದಿಲ್ಲ. ಸರಿ, ಸರ್ಕಾರಿ ಆಸ್ಪತ್ರೆಗೇ ಹೋದೆವು. ಒಂದೆರಡು ಪೇನ್ ಕಿಲ್ಲರ್ ಗಳನ್ನು ಮಾತ್ರ ಕೊಟ್ಟಿದ್ದರು ಅಂತ ನೆನಪು ನನಗೆ. ಗಾಯ ಸ್ವಲ್ಪ ಊದಿಕೊಂಡಿತ್ತು, ನಾನು ಎಲ್ಲರ ಜೊತೆ ಮಾತಾಡುತ್ತಾ ಆರಾಮಿದ್ದೆ. ಸಂಜೆ ಪೋಲೀಸ್ ಪೇದೆಯೊಬ್ಬ ಬಂದು, ನನ್ನನ್ನು ಒಂದಷ್ಟು ಪ್ರಶ್ನೆ ಕೇಳಿ, ನನ್ನ ಸಹಿ ತೆಗೆದುಕೊಂಡು ಹೋದ. ಹಾವು ಕಚ್ಚಿದಾಗ ಪೋಲಿಸ್ ಕೇಸ್ ದಾಖಲಾಗುವುದು ಕಡ್ಡಾಯ ಅಂತ ಗೊತ್ತಾಯಿತು. ನಾನು ಒಂದು ದಿನ ಸರ್ಕಾರೀ ಆಸ್ಪತ್ರೆಯಲ್ಲಿದ್ದು ಮರುದಿನ ಮನೆಗೆ ಬಂದೆ. ಗಾಯದ ಗುರುತುಗಳೇನೂ ಈಗ ಹೆಬ್ಬಟ್ಟಿನಲ್ಲಿ ಉಳಿದಿಲ್ಲ.&lt;br /&gt;&lt;br /&gt;ವರ್ಷದ ಹಿಂದೆ ಆಫ಼ೀಸ್ ನಲ್ಲಿ ಇ.ಅರ್.ಟಿ (Emergency Rescue Team. Emergency runaway team ಅಂತಲೂ ನಾವು ತಮಾಷೆ ಮಾಡುವುದಿದೆ) ಟ್ರೇನಿಂಗ್ ನಡೆಯುತ್ತಿದ್ದಾಗ, ಅದರ ನಿರ್ವಾಹಕರು, ಇಲ್ಲಿ ಯಾರಾದರೂ ಹಾವು ಕಚ್ಚಿಸಿಕೊಂಡವರು ಇದ್ದಾರೆಯೇ ? ಎಂದು ಕೇಳಿದಾಗ ನಾನೊಬ್ಬನೇ ಕೈ ಎತ್ತಿದ್ದೆ. ನನ್ನ ಕೊಲೀಗ್ಸ್ ಎಲ್ಲ, ನಾನು ಯಾವುದೋ ಬೇರೆ ಗ್ರಹದಿಂದ ಬಂದಿಳಿದವನ ತರ ನೋಡುತ್ತಿದ್ದರು. ನನಗ್ಯಾಕೋ ನಾನು ವಿಶೇಷ ವ್ಯಕ್ತಿ ಎಂದೆನಿಸಿ ಸ್ವಲ್ಪ ಹೆಮ್ಮೆಯಾಯಿತು.  &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-3084294310471899114?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/3084294310471899114/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=3084294310471899114' title='2 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/3084294310471899114'/><link rel='self' type='application/atom+xml' href='http://www.blogger.com/feeds/6035880729059442700/posts/default/3084294310471899114'/><link rel='alternate' type='text/html' href='http://madhu-vana.blogspot.com/2008/02/blog-post.html' title='ನಾಗರ ಹಾವೇ, ಹಾವೊಳು ಹೂವೇ...'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>2</thr:total></entry><entry><id>tag:blogger.com,1999:blog-6035880729059442700.post-7677306023307181647</id><published>2008-01-31T07:24:00.000-08:00</published><updated>2008-01-31T09:02:28.584-08:00</updated><title type='text'>ಅಬ್ಬಲಿಗೆ ದಂಡೆ</title><content type='html'>&lt;div align="justify"&gt;&lt;br /&gt;ಸಂಧ್ಯಾಳಿಗೆ ಆವತ್ತು ಶಾಲೆಯಿಂದ ಮನೆ ತಲುಪಲು ಎಲ್ಲಿಲ್ಲದ ಅವಸರ. ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದ ತಮ್ಮನಿಗೆ ಬೈದು, ಅವನ ಕೈಹಿಡಿದುಕೊಂಡು ಸ್ವಲ್ಪ ಜೋರಾಗಿ ಹೆಜ್ಜೆ ಹಾಕಿದಳು. ದಿನವೂ, ರಸ್ತೆ ಬದಿ ಇದ್ದ ಕೌಳಿ ಮಟ್ಟಿಗಳನೆಲ್ಲಾ ಹುಡುಕಿ ಇದ್ದ ಬದ್ದ ಹಣ್ಣುಗಳನೆಲ್ಲಾ ಕೊಯ್ದುತಿಂದು, ನಿಧಾನಕ್ಕೆ ಅಕ್ಕ-ತಮ್ಮ ಮನೆ ತಲುಪುತ್ತಿದ್ದರಿಂದ, ಇವತ್ತು ಅಕ್ಕ ಅವಸರ ಮಾಡಿದೊಡನೆಯೇ ಮನೆಯಲ್ಲಿ ಎನೋ ವಿಶೇಷವಿರಬೇಕೆಂದು ತಮ್ಮನಿಗೆ ಅನಿಸಿತು. ಆದರೂ ಅಕ್ಕನನ್ನು ಕೇಳಲು ಧೈರ್ಯ ಸಾಕಾಗದೇ, ಸುಮ್ಮನೇ ಅವಳ ಜೊತೆ ಕಾಲುಹಾಕಿದ.&lt;/div&gt;&lt;br /&gt;&lt;div align="justify"&gt;&lt;br /&gt;ಈಗೊಂದು ೮ ವರ್ಷದ ಹಿಂದೆ ಸಂಧ್ಯಾಳ ತಂದೆ, ರಾಂಭಟ್ಟರ ತೋಟದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಲು ಘಟ್ಟದ ಕೆಳಗಿನಿಂದ ಸಂಸಾರ ಸಮೇತ ಬಂದಿದ್ದವನು, ವರುಷದ ಮೂರೂ ಕಾಲವೂ ಕೈತುಂಬ ಕೆಲಸವಿದ್ದರಿಂದ, ಭಟ್ಟರ ತೋಟದ ಮೂಲೆಯಲ್ಲಿರುವ ಪಂಪ್ ಹೌಸ್ ಪಕ್ಕದಲ್ಲೆ ಒಂದು ಸಣ್ಣ ಗುಡಿಸಲಿನಂತ ಮನೆ ಕಟ್ಟಿಕೊಂಡು ಅಲ್ಲೇ ಉಳಿದುಕೊಂಡಿದ್ದನು. ಸಂಧ್ಯಾಳ ಅಮ್ಮ, ರಾಂಭಟ್ಟರ ಮನೆಯಲ್ಲೇ ಖಾಯಂ ಕೆಲಸಕ್ಕೆ ಸೇರಿಕೊಂಡಿದ್ದಳು. ಭಟ್ಟರ ಮನೆ ಸದಾ ಮೂರು ಹೊತ್ತು ಆಳುಗಳಿಂದ ಗಿಜಿಗಿಜಿಗುಡುತ್ತಿತ್ತು. ಎಂಟು ಎಕರೆ ತೋಟ, ಸುಮಾರು ೨೫-೩೦ ದನಗಳಿದ್ದ ಕೊಟ್ಟಿಗೆ ಇದ್ದ ಮನೆಗೆ ಒಂದಷ್ಟು ಆಳುಗಳ ಅವಶ್ಯಕತೆ ಸದಾ ಇದ್ದೇ ಇರುತ್ತಿತ್ತು.&lt;/div&gt;&lt;br /&gt;&lt;div align="justify"&gt;&lt;br /&gt;ತೋಟದ ಮೂಲೆಯಲ್ಲಿ, ಮನೆ ಪಕ್ಕ ಸಂಧ್ಯಾಳ ಅಮ್ಮ ಬೇಸಿಗೆಯಲ್ಲಿ ಒಂದಷ್ಟು ತರಕಾರಿ ಪಾತಿಗಳನ್ನೂ, ಹೂವಿನ ಗಿಡಗಳನ್ನು ಬೆಳೆಸುತ್ತಿದ್ದಳು. ತೋಟದಲ್ಲಿ ಧಾರಾಳವಾಗಿ ಸಿಗುತ್ತಿದ್ದ ನೀರು, ಗೊಬ್ಬರಗಳನ್ನು ಉಪಯೋಗಿಸಿಕೊಂಡು ತರಕಾರಿ, ಹೂಗಿಡಗಳು ಸೊಕ್ಕಿ ಬೆಳೆಯುತ್ತಿದ್ದವು. ಈ ವರ್ಷ, ಸಂಧ್ಯಾಳ ಅಮ್ಮ ಬೆಂಡೆ ಗಿಡಗಳ ಜೊತೆ ಒಂದಷ್ಟು ಅಬ್ಬಲಿಗೆ ಗಿಡಗಳನ್ನೂ ನೆಟ್ಟಿದ್ದರು. ಮೊದಲೊಂದಷ್ಟು ದಿನ ಬೆಳೆಯಲೋ ಬೇಡವೋ ಎಂಬಂತೆ ಪಿರಿಪಿರಿಯಾಗಿ ಎದ್ದು ನಿಂತಿದ್ದ ಅಬ್ಬಲಿಗೆ ಗಿಡಗಳು, ತಿಂಗಳು ಕಳೆಯುತ್ತಿದಂತೆಯೇ ಹಲವಾರು ಹೂಬಿಡಲು ಶುರು ಮಾಡಿದವು. ಸಂಧ್ಯಾಳಿಗೆ ಮೊದಲಿನಿಂದಲೂ ಅಬ್ಬಲಿಗೆ ಹೂಗಳೆಂದರೆ ಪಂಚಪ್ರಾಣ. ಇವತ್ತು ಸಂಜೆ ಅಮ್ಮ ಅಬ್ಬಲಿಗೆ ಹೂವಿನ ದಂಡೆ ಮಾಡಿಕೊಡುವುದಾಗಿ ಹೇಳಿದ್ದುದರಿಂದಲೇ, ಸಂಧ್ಯಾ ಮನೆ ಸೇರಲು ಅಷ್ಟು ತವಕಿಸುತ್ತಿದ್ದುದು.&lt;/div&gt;&lt;br /&gt;&lt;div align="justify"&gt;&lt;br /&gt;ಆನುವಂಶೀಯವಾಗಿಯೋ ಏನೋ, ಸಂಧ್ಯಾಳ ತಲೆಕೂದಲು ರೇಷ್ಮೆಯ ತರ ನುಣುಪು ನುಣುಪಾಗಿದ್ದು, ಅಚ್ಚಕಪ್ಪು ಬಣ್ಣದಿಂದ ಕಂಗೊಳಿಸುತ್ತಿದ್ದವು. ದಪ್ಪಗೆ, ಮೊಳಕಾಲಿನ ತನಕ ಬರುತ್ತಿದ್ದ ಅವಳ ಕೂದಲುಗಳು, ಅವಳ ಸಹಪಾಠಿಗಳೆಲ್ಲರಲ್ಲೂ ಅಸೂಯೆ ಹುಟ್ಟಿಸುತ್ತಿದ್ದದು ಸಂಧ್ಯಾಳಿಗೆ ಎಷ್ಟೋ ಸಲ ಅನುಭವಕ್ಕೆ ಬಂದಿತ್ತು. ಸಂಧ್ಯಾಳ ಅಮ್ಮನಿಗೂ ಹಿಂದೆ ಇದೇ ತರಹ ಉದ್ದನೆಯ ಕೂದಲು ಇತ್ತಂತೆ. ಆದರೆ ಅವಳಮ್ಮ ಅದನ್ನು ಸರಿಯಾಗಿ ಆರೈಕೆ ಮಾಡದೇ ಬರ್ತಾ ಬರ್ತಾ ಕೂದಲೆಲ್ಲಾ ಉದುರಿ, ಈಗ ಮೋಟು ಜಡೆಯಾಗಿತ್ತು. ಸಂಧ್ಯಾಳಿಗೆ ಮಾತ್ರ ತನ್ನ ಉದ್ದನೆಯ ತಲೆಕೂದಲಿನ ಬಗ್ಗೆ ತುಂಬಾ ಹೆಮ್ಮೆ. ಪ್ರತೀ ೧೫ ದಿನಕ್ಕೊಮ್ಮೆ ಮತ್ತಿ ಗಿಡದ ಎಲೆಗಳನ್ನು ಕೊಯ್ದು ತಂದು, ನೀರಿನಲ್ಲಿ ನೆನೆಸಿ, ಆ ಎಲೆಗಳಿಂದ ಒಂದು ತರಹದ ಲೋಳೆ ಲೋಳೆಯಾದ ದ್ರಾವಣವನ್ನು ತಯಾರಿಸಿ ಅದನ್ನು ತಲೆಕೂದಲಿಗೆ ಹಾಕಿ ಸ್ನಾನ ಮಾಡುತ್ತಿದ್ದಳು. ಅವಳ ಕ್ಲಾಸ್ ಮೇಟ್ ಆದ ಮೇಷ್ಟ್ರ ಮಗಳು ನಯನಾ ವಾರಕ್ಕೊಮ್ಮೆ "ಸನ್ ಸಿಲ್ಕ್" ಶಾಂಪೂ ಹಾಕಿ ಸ್ನಾನ ಮಾಡುತ್ತಿದ್ದರೂ, ಅವಳ ಕೂದಲು ಸಂಧ್ಯಾಳಷ್ಟು ಹೊಳಪಿಲ್ಲದಕ್ಕೆ, ತಾನು ಬಳಸುವ ಮತ್ತಿ ಎಲೆಯ ನ್ಯಾಚುರಲ್ ಶಾಂಪುವೇ ಕಾರಣವೆಂದು ಸಂಧ್ಯಾ ಬಲವಾಗಿ ನಂಬಿದ್ದಳು. ತಲೆಸ್ನಾನ ಮಾಡಿದ ೧೫ ದಿನಕ್ಕೊಮ್ಮೆ ಮಾತ್ರ, ಸಂಧ್ಯಾ ಸ್ವಲ್ಪ ಕಿರಿಕಿರಿ ಅನುಭವಿಸಬೇಕಿತ್ತು. ಒದ್ದೆಯಾದ ತಲೆಕೂದಲನೆಲ್ಲಾ ಚೆನ್ನಾಗಿ ಉಜ್ಜಿ, ಸ್ವಲ್ಪ ಹೊತ್ತು ಬಿಸಿಲನಲ್ಲಿ ಹರಡಿ, ನಂತರ ತೆಳ್ಳನೆಯ ಟವೆಲ್ ಉಪಯೋಗಿಸಿ ಕೂದಲನೆಲ್ಲಾ ಮೇಲೆತ್ತಿ ತುರುಬು ಕಟ್ಟಿಕೊಂಡರೂ, ಕೆಲವೊಮ್ಮೆ ಸಂಜೆಯಾದರೂ ಕೂದಲು ಒಣಗುತ್ತಿರಲಿಲ್ಲ. ಆಗೆಲ್ಲ ಸಂಧ್ಯಾಳಿಗೆ ಸಂಜೆಯಾದಂತೆ ಅಸಾಧ್ಯ ತಲೆನೋವು ಬಂದುಬಿಡುತ್ತಿತ್ತು. ಹಾಗೆ ತಲೆನೋವಿನ ಶೂಲೆ ಅವಳನ್ನು ಬಾಧಿಸಿದಾಗಲೆಲ್ಲಾ, ತಲೆಕೂದಲನ್ನೆಲ್ಲ ಕತ್ತರಿಸಿ ಭಟ್ಟರ ಮನೆಯ ಸುಮಾಳಂತೆ "ಬಾಬ್ ಕಟ್" ಮಾಡಿಕೊಳ್ಳಬೇಕೆಂದು ಸಂಧ್ಯಾಗೆ ಅನ್ನಿಸುವುದಿತ್ತು.&lt;/div&gt;&lt;br /&gt;&lt;div align="justify"&gt;&lt;br /&gt;ಇವತ್ತು ಶಾಲೆಯಲ್ಲಿ ಸಂಧ್ಯಾ ಅಬ್ಬಲಿಗೆ ಹೂವಿನ ವಿಷಯ ಎತ್ತಿದಾಗ, ಅವಳ ಬೆಂಚ್ ಮೇಟ್ ಆಗಿದ್ದ ಶಾಲಿನಿ ಕೂಡ, ತನಗೊಂದು ಅಬ್ಬಲಿಗೆ ದಂಡೆ ತಂದುಕೊಡೆಂದು ದುಂಬಾಲು ಬಿದ್ದಳು. ಸಂಧ್ಯಾಳಿಗೆ ಮೊದಲು ಸ್ವಲ್ಪ ಕಸಿವಿಸಿಯಾಗಿ ನಿರಾಕರಿಸಿದರೂ, ಶಾಲಿನಿ ತಾನು ತಿಂಗಳ ಹಿಂದೆ ತಂದುಕೊಟ್ಟ, ಎರಡು ಸಂಪಿಗೆ ಹೂವುಗಳ ನೆನಪು ಮಾಡಿದ ಮೇಲೆ ವಿಧಿಯಲ್ಲದೆ ಒಪ್ಪಬೇಕಾಯಿತು. ಆದರೂ ಒಳಗೊಳಗೇ, ಎರಡು ಸಂಪಿಗೆ ಹೂವುಗಳಿಗೆ ಒಂದು ಅಬ್ಬಲಿಗೆ ದಂಡೆ ಯಾವುದರಲ್ಲೂ ಸಮವಲ್ಲವೆಂದು ಅವಳ ಮನಸ್ಸು ಒಂದೇಸಲ ರೋದಿಸುತ್ತಲೇ ಇತ್ತು. ಒಲ್ಲದ ಮನಸ್ಸಿನಿಂದಲೇ, ತನ್ನ ಎರಡು ಜಡೆಗಳಿಗೊಂದರಂತೆ ಎರಡು ದಂಡೆ, ಶಾಲಿನಿಗೊಂದು ಸೇರಿ ಮೂರು ದಂಡೆ ಮಟ್ಟಲು ಅಮ್ಮನಿಗೆ ಹೇಳಬೇಕೆಂದು ಸಂಧ್ಯಾ ನಿರ್ಧರಿಸಿಕೊಂಡಳು.&lt;/div&gt;&lt;br /&gt;&lt;div align="justify"&gt;&lt;br /&gt;ಸಂಧ್ಯಾಳ ಕೂದಲು ದಪ್ಪಕ್ಕೆ, ಉದ್ದವಿದ್ದುದರಿಂದ, ಅವಳಮ್ಮ ಸದಾ ಎರಡು ಜಡೆಗಳನ್ನು ಹೆಣೆದು, ಅದನ್ನು ನಾಲ್ಕು ಮಡಿಕೆಗಳಾಗಿ ಮಡಿಸಿ, ತುದಿಯಲ್ಲಿ ರಿಬ್ಬನ್ ಕಟ್ಟುತ್ತಿದ್ದರು. ಶನಿವಾರದಂದು ಮಾತ್ರ ಯುನಿಫ಼ಾರ್ಮ ಇಲ್ಲವಾಗಿದ್ದರಿಂದ, ಅಮ್ಮ ಒಂದೇ ಜಡೆ ಹೆಣೆದು ಅವಳ ಶ್ರಮವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಳು. ದಿನಾ ಬೆಳಿಗ್ಗೆ ೭.೪೫ ಕ್ಕೆ ಆಕಾಶವಾಣಿಯಲ್ಲಿ ಚಿತ್ರಗೀತೆಗಳು ಶುರು ಆಗುತ್ತಿದ್ದಂತೆಯೇ, ಸಂಧ್ಯಾ ರಿಬ್ಬನ್ ಮತ್ತು ಬಾಚಣಿಕೆ ಹಿಡಿದು ಅಮ್ಮನ ಮುಂದೆ ಪ್ರತ್ಯಕ್ಷವಾಗುತ್ತಿದ್ದಳು. ಎರಡನೇ ಚಿತ್ರಗೀತೆ ಮುಗಿದು "ಫಿನೊಲೆಕ್ಸ್" ಪೈಪಿನ ಜಾಹಿರಾತು ಬರುವಷ್ಟರಲ್ಲಿ, ಅಮ್ಮ ಜಡೆ ಹೆಣೆದು ಮುಗಿಸುತ್ತಿದ್ದರು. ಬೆಳಗ್ಗಿನ ಹೊತ್ತು, ಕೆಲಸದ ಒತ್ತಡದಲ್ಲಿ ಸ್ವಲ್ಪವೂ ಪುರುಸೊತ್ತಿರದ ಸಂಧ್ಯಾಳ ಅಮ್ಮ, ಮಗಳಿಗಾಗಿ ಹೇಗೋ ಒಂದು ೧೦ ನಿಮಿಷ ಹೊಂದಿಸಿಕೊಳ್ಳುತ್ತಿದ್ದಳು.&lt;/div&gt;&lt;div align="justify"&gt;&lt;br /&gt;ದಿನಕ್ಕಿಂತಲೂ ಬೇಗ ಮನೆ ಮುಟ್ಟಿದ ಮೇಲೆ ಸಂಧ್ಯಾ, ಕೈಕಾಲು ತೊಳೆದದ್ದೇ, ತಮ್ಮನನ್ನು ಒಬ್ಬನೇ ಮನೆಯಲ್ಲೇ ಬಿಟ್ಟು, ಅಬ್ಬಲಿಗೆ ಗಿಡಗಳ ಬಳಿಗೆ ಹೂಬುಟ್ಟಿ ಹಿಡಿದುಕೊಂಡು ಓಡಿದಳು. ಅಮ್ಮ ಭಟ್ಟರ ಮನೆಯ ಕೊಟ್ಟಿಗೆ ಕೆಲಸ ಮುಗಿಸಿಬರುವುದರೊಳಗೆ, ಒಳ್ಳೆಯ ಅಬ್ಬಲಿಗೆ ಮೊಗ್ಗುಗಳನ್ನು ಕೊಯ್ದು ರಾಶಿ ಹಾಕಿಕೊಂಡು ಬಂದಳು. ದಂಡೆ ಕಟ್ಟಲು, ತೋಟದ ಬುಡದಲ್ಲಿದ್ದ ಕಾಡುಬಾಳೆ ಗಿಡದ ನಾರುಪಟ್ಟೆಯನ್ನು ಹಿಂದಿನ ದಿನವೇ, ಸಂಧ್ಯಾಳ ಅಮ್ಮ ತಂದು ನೀರಿನಲ್ಲಿ ನೆನೆಸಿ ಇಟ್ಟಿದ್ದಳು. ಅಮ್ಮ ಮನೆಗೆ ಬಂದ ಕೂಡಲೇ, ಅವಳಿಗೆ ದುಂಬಾಲು ಬಿದ್ದು ಎರಡು ಉದ್ದನೆಯ ಮತ್ತು ಒಂದು ಸ್ವಲ್ಪ ಗಿಡ್ಡನೆಯ ದಂಡೆ ಕಟ್ಟಿಸಿಕೊಂಡಳು. ಚಕ ಚಕನೆ ಹೂವುಗಳನ್ನು ಪೋಣಿಸುತ್ತಿದ್ದ ಅಮ್ಮನ ಕೈಗಳನ್ನೇ ಸಂಧ್ಯಾ ಬೆರಗಿನಿಂದ ನೋಡುತ್ತಿದ್ದಂತೆಯೇ, ಅಮ್ಮ ಮೂರೂ ದಂಡೆಗಳನ್ನು ಕಟ್ಟಿಮುಗಿಸಿಬಿಟ್ಟಿದ್ದಳು. ಒಂದು ಸಲ ದಂಡೆಗಳನ್ನು ಮನತೃಪ್ತಿಯಾಗುವಂತೆ ನೋಡಿ, ತಾನು ಆ ದಂಡೆಗಳನ್ನು ಮುಡಿದುಕೊಂಡರೆ ಹೇಗೆ ಕಾಣಿಸಬಹುದೆಂದು ಕಲ್ಪಿಸಿಕೊಂಡು ಸಂಧ್ಯಾ ರೋಮಾಂಚನಗೊಂಡಳು. ನಂತರ ಮೆಲ್ಲಗೆ ದಂಡೆಗಳನ್ನು ಎತ್ತಿಕೊಂಡು, ಬಾವಿಕಟ್ಟೆಯ ಪಕ್ಕದಲ್ಲಿ ಕಟ್ಟಿಹಾಕಿದ್ದ ಬಿದಿರಿನ ಗಳಕ್ಕೆ ನೇತುಹಾಕಿದಳು. ಬೆಳಿಗ್ಗೆ ಮುಂಚೆ ಬೀಳುವ ಇಬ್ಬನಿಗೆ ಅಬ್ಬಲಿಗೆ ಹೂವುಗಳು ಸರಿಯಾಗಿ ಅರಳಿ, ಫ಼್ರೆಶ್ ಆಗಿ ಕಾಣಲಿ ಅಂತಲೇ ಅವಳು ಹಾಗೆ ಮಾಡಿದ್ದು.&lt;/div&gt;&lt;br /&gt;&lt;div align="justify"&gt;&lt;br /&gt;ರಾತ್ರಿಯಾದರೂ ಇನ್ನೂ ಸಂಧ್ಯಾಳ ಅಪ್ಪ ಮನೆಗೆ ಬಂದಿರಲಿಲ್ಲ. ಸಂಧ್ಯಾ ಮತ್ತು ಅವಳ ತಮ್ಮ ಊಟ ಮುಗಿಸಿ, ಬೇಗನೇ ಮಲಗಿಕೊಂಡರು. ಅಮ್ಮ ಊಟ ಮಾಡದೇ, ಬಾಗಿಲ ಬಳಿಯೇ ಚಾಪೆ ಹಾಸಿಕೊಂಡು ಕಾಯುತ್ತಿದ್ದಳು. ಸಂಧ್ಯಾಳಿಗೆ ಹಾಸಿಗೆಗೆ ತಲೆ ಕೊಟ್ಟ ಕೂಡಲೇ ನಿದ್ರಾದೇವಿ ಆವರಿಸಿಕೊಂಡಳು. ರಾತ್ರಿ ನಿದ್ದೆಯಲ್ಲಿ ಸಂಧ್ಯಾಳಿಗೆ, ತಾನು ಅಬ್ಬಲಿಗೆ ದಂಡೆ ಮುಡಿದುಕೊಂಡು ಇಡೀ ಶಾಲೆಯಲ್ಲೆಲ್ಲಾ ಮೆರೆದಂತೆಯೂ, ಅವಳ ಸಹಪಾಠಿಗಳೆಲ್ಲಾ ಅವಳನ್ನು ನೋಡೀ ಕರುಬಿದಂತೆಯೂ, ಶಾಲಿನಿ ಕೂಡ ತನ್ನ ಮೋಟು ಜಡೆಗೆ ಸಂಧ್ಯಾ ತಂದು ಕೊಟ್ಟ ಅಬ್ಬಲಿಗೆ ದಂಡೆಯನ್ನು ಮುಡಿದುಕೊಂಡು ಹೆಮ್ಮೆ ಪಡುತ್ತಿರುವಂತೆಯೂ ಕನಸುಬಿತ್ತು. ಪಾಠ ಮಾಡುತ್ತಿದ್ದ ಸುಶೀಲಾ ಟೀಚರ್ ಕೂಡ ಸಂಧ್ಯಾಳನ್ನು ತನಗೊಂದು ಅಬ್ಬಲಿಗೆ ದಂಡೆ ತಂದುಕೊಡೆಂದು ಕೇಳಿಕೊಂಡಾಗ, ನಿದ್ದೆಯಲ್ಲಿಯೇ ಸಂಧ್ಯಾಳಿಗೆ ತುಟಿಯ ಮೇಲೊಂದು ಕಿರುನಗೆ ಅಪ್ರಯತ್ನಪೂರ್ವಕವಾಗಿ ಸುಳಿಯಿತು. ಇದ್ದಕಿದ್ದ ಹಾಗೆ, ಯಾರೋ ಜೋರಾಗಿ ಅಳುತ್ತಿದ್ದ ಶಬ್ದ ಕೇಳಿ ತಟ್ಟನೇ ಅವಳಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ನೋಡಿದರೆ, ಅಮ್ಮ ಚಾಪೆಯ ಮೇಲೆ ಕುಳಿತಿಕೊಂಡು ದೊಡ್ಡ ಸ್ವರದಲ್ಲಿ ಅಳುತ್ತಿದ್ದಳು. ಅವಳ ಕೈಯಲ್ಲಿದ್ದ ಕೆಲವು ಕೆಂಪು ಗಾಜಿನ ಬಳೆಗಳು ಬಾಗಿಲಿನ ಬುಡದಲ್ಲಿ ಚೂರುಚೂರಾಗಿ ಬಿದ್ದಿರುವುದು ಸಂಧ್ಯಾಳ ಕಣ್ಣಿಗೆ ದೀಪದ ಬೆಳಕಿನಲ್ಲಿ ಗೋಚರವಾಯಿತು. ತೂರಾಡುತ್ತಾ ಮಂಚದ ಮೇಲೆ ಕುಳಿತಿಕೊಂಡು ಅಪ್ಪ, ಅವಾಚ್ಯ ಶಬ್ದಗಳಿಂದ ಅಮ್ಮನನ್ನು ನಿಂದಿಸುತ್ತಿದ್ದರು. ಅಪರೂಪಕೊಮ್ಮೆ ಹೀಗೆ ಕುಡಿದುಕೊಂಡು ಬಂದಾಗ ಸಂಧ್ಯಾಳ ಅಪ್ಪ, ವಿನಾಕಾರಣ ಅಮ್ಮನ ಮೇಲೆ ಕೈಮಾಡಿ ಯಾವುದೋ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು. ಸಂಧ್ಯಾಳಿಗೆ ತುಂಬಾ ಬಾಯಾರಿಕೆಯಾಗುತ್ತಿತ್ತು. ಎದ್ದು ಅಡುಗೆಮನೆಗೆ ಹೋಗಬೇಕಂದವಳು ಪಕ್ಕದಲ್ಲೇ ಅಪ್ಪ ಕುಳಿತಿರುವುದನ್ನು ನೋಡಿ ಧೈರ್ಯ ಸಾಲದೇ ಮಗ್ಗಲು ಬದಲಿಸಿದಳು. ತಮ್ಮ, ಪಕ್ಕದಲ್ಲಿ ಕೈಕಾಲುಗಳನ್ನು ಎರಡೂ ದಿಕ್ಕಿಗೆ ಬೀಸಾಡಿ ಮಲಗಿದ್ದುದು ಕಂಡಿತು. ಸ್ವಲ್ಪ ಹೊತ್ತಿನಲ್ಲೇ ಅಪ್ಪ, ಮಂಚದ ಮೇಲೆಯೇ ಮಲಗಿ ಗೊರಕೆ ಹೊಡೆಯಲು ಶುರು ಮಾಡಿದರು. &lt;/div&gt;&lt;br /&gt;&lt;div align="justify"&gt;&lt;br /&gt;ಸಂಧ್ಯಾಳ ಕನಸೆಲ್ಲಾ ಹಾರಿಹೋಗಿತ್ತು . ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಲು ಪ್ರಯತ್ನಿಸಿದರೂ, ಒಂದೇ ಶ್ರುತಿಯಲ್ಲಿ ಬಿಕ್ಕಳಿಸುತ್ತಿದ್ದ ಅಮ್ಮನ ಧ್ವನಿ ಆ ನಡುರಾತ್ರಿಯಲ್ಲಿ ಕಿವಿಯನ್ನು ಕೊರೆಯುತ್ತಿತ್ತು. ತನ್ನ ಮತ್ತು ಅಮ್ಮನ ನಿದ್ದೆ ಹಾಳು ಮಾಡಿ, ತಣ್ಣಗೆ ಮಲಗಿ ಗೊರಕೆ ಹೊಡೆಯುತ್ತಿದ್ದ ಅಪ್ಪನ ಮೇಲೆ ಅವಳಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಅಳುತ್ತಿದ್ದ ಅಮ್ಮನನ್ನು ಸಮಾಧಾನ ಪಡಿಸಬೇಕೆಂದು ಒಂದು ಕ್ಷಣ ಅನ್ನಿಸಿದರೂ, ಅವಳ ಪಾಡಿಗೆ ಅವಳನ್ನು ಬಿಡುವುದು ಲೇಸೆನಿಸಿ ಸುಮ್ಮನಾದಳು. ಇದೇ ಗುಂಗಿನಲ್ಲೇ ಇದ್ದವಳಿಗೆ ನಿದ್ದೆ ಬಂದು ಆವರಿಸಿಕೊಂಡಿದ್ದು ಗೊತ್ತೇ ಆಗಲಿಲ್ಲ.&lt;/div&gt;&lt;br /&gt;&lt;div align="justify"&gt;&lt;br /&gt;ಬೆಳಿಗ್ಗೆ ಸ್ವಲ್ಪ ತಡವಾಗಿಯೇ ಎದ್ದ ಸಂಧ್ಯಾಳಿಗೆ, ಅಮ್ಮ ನೀರೊಲೆಗೆ ಬೆಂಕಿಯೊಡ್ಡುವುದರಲ್ಲಿದ್ದುದು ಕಾಣಿಸಿತು. ಚಳಿ ಕಾಯಿಸಿಕೊಳ್ಳಲು ಒಲೆಯ ಬುಡದ ಬಳಿಗೆ ಹೋಗಿ ಕುಳಿತುಕೊಂಡಾಗ ಮೆಲ್ಲಗೆ ತಲೆಸವರಿದ ಅಮ್ಮನ ಕೈ ಮೇಲೆ, ಗಾಜಿನ ಬಳೆಗಳಿಂದಾದ ಸಣ್ಣ ಗೀರು ಕಂಡಿತು. ಬೆಂಕಿ ಕಾಯಿಸುತ್ತಾ, ಅಮ್ಮನ ಮೊಗದ ಮೇಲೆ ನಿನ್ನೆಯ ದುಃಖದ ಛಾಯೆಯೇನಾದರೂ ಕಾಣಿಸಬಹುದೇ ಎಂದು ಹುಡುಕಿದವಳಿಗೆ ನಿರಾಶೆಯಾಯಿತು. ಅಮ್ಮ ಎಂದಿನಂತೆ ನಗುನಗುತ್ತಾ ಲವಲವಿಕೆಯಿಂದ ಇದ್ದ ಹಾಗೆ ಕಾಣಿಸಿತು. ಎಂಥಾ ನೋವನ್ನೂ ನುಂಗಿ ಸದಾ ನಗುತ್ತಾ, ಮಕ್ಕಳನ್ನೂ ನಗಿಸುತ್ತಾ ಇದ್ದ ಅಮ್ಮನ್ನನ್ನು ನೋಡಿ ಸಂಧ್ಯಾಳಿಗೆ ಬಹಳ ಹೆಮ್ಮೆಯೆನಿಸಿತು.&lt;/div&gt;&lt;br /&gt;&lt;div align="justify"&gt;&lt;br /&gt;ಮರುಕ್ಷಣವೇ, ಬಾವಿಕಟ್ಟೆಯ ಪಕ್ಕ ನೇತುಹಾಕಿದ್ದ ಅಬ್ಬಲಿಗೆ ದಂಡೆಗಳ ನೆನಪಾಗಿ, ಹಿಂಬಾಗಿಲಿನ ಕಡೆ ಓಡಿದಳು. ಅವಳ ಆಶ್ಚರ್ಯಕ್ಕೆ, ಅಬ್ಬಲಿಗೆ ದಂಡೆಗಳು ಅಲ್ಲಿಂದ ಕಣ್ಮರೆಯಾಗಿದ್ದವು. ಸಂಧ್ಯಾಳಿಗೆ ಒಮ್ಮೆ ಹೃದಯವೇ ಬಾಯಿಗೆ ಬಂದಂತಾಯಿತು. ಗಾಳಿಗೇನಾದರೂ ಹಾರಿ ಅತ್ತಿತ್ತ ಬಿದ್ದಿರಬಹುದೇ ಎಂದು ಸುತ್ತಮುತ್ತಲೆಲ್ಲಾ ಹುಡುಕಿದಳು. ಎಲ್ಲಿಯೂ ದಂಡೆಗಳ ಪತ್ತೆ ಇರಲಿಲ್ಲ. ತಕ್ಷಣ ಅಮ್ಮನ ಬಳಿ ಒಡಿ, ಅವಳನ್ನು ಕೇಳಿದಳು. ಅಮ್ಮನಿಂದ ಯಾವುದೇ ಉತ್ತರ ಬರಲಿಲ್ಲ. ಇನ್ನೂ ಎರಡು ಸಲ ಜೋರಾಗಿ ಕೂಗಿ ಕೇಳಿದಾಗ, ಅಮ್ಮನಿಂದ ಶುಷ್ಕ ನೋಟವೊಂದನ್ನು ಬಿಟ್ಟರೆ ಇನ್ಯಾವುದೇ ಪ್ರತಿಕ್ರಿಯೆ ಬರದ್ದರಿಂದ, ಸಂಧ್ಯಾಳಿಗೆ ದುಃಖ ತಡೆಯಲಾರದೇ ಅಳುವೇ ಬಂದುಬಿಟ್ಟಿತು. ಅಳುತ್ತಿದ್ದ ಸಂಧ್ಯಾಳನ್ನು ಸಮಾಧಾನ ಪಡಿಸಲಾಗದೇ, ಅವಳಮ್ಮ ಹಿಂಬಾಗಿಲಿಗೆ ಕರೆದುಕೊಂಡು ಬಂದು, ಬಾವಿಯಲ್ಲಿ ತೇಲುತ್ತಿರುವ, ಚೂರುಚೂರಾಗಿದ್ದ ಅಬ್ಬಲಿಗೆ ದಂಡೆಗಳನ್ನು ತೋರಿಸಿದಳು. ರಾತ್ರಿ ಕುಡಿದುಬಂದ ಅಪ್ಪನ ದೃಷ್ಟಿಗೆ ಬಿದ್ದ ಅಬ್ಬಲಿಗೆ ದಂಡೆಗಳು, ಅವನ ಆವೇಶಕ್ಕೆ ಸಿಕ್ಕಿ, ನಲುಗಿಹೋಗಿದ್ದವು. ಸಂಧ್ಯಾಳ ಅಮ್ಮನ ಅಸಹಾಯಕತೆಯನ್ನು ಸಾಂಕೇತಿಕವಾಗಿ ಬಿಂಬಿಸುತ್ತಿವೆಯೋ ಎಂಬಂತೆ, ಶುಭ್ರ ಸ್ಪಟಿಕದಂತಿದ್ದ ಬಾವಿನೀರಿನಲ್ಲಿ ನಿರ್ವಿಣ್ಣವಾಗಿ ತೇಲುತ್ತಿದ್ದ ದಂಡೆಗಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಸಂಧ್ಯಾಳಿಗೆ, ಅಮ್ಮ "ಅಳಬೇಡ ಮರಿ, ಮುಂದಿನ ವಾರ ಮತ್ತೆ ದಂಡೆಕಟ್ಟಿದರಾಯಿತು ಬಿಡು" ಎಂದಿದ್ದು, ಕಿವಿಗೆ ಬೀಳಲೇ ಇಲ್ಲ.&lt;/div&gt;&lt;br /&gt;&lt;div align="justify"&gt;&lt;br /&gt;ಅಬ್ಬಲಿಗೆ ಹೂವು - ಕನಕಾಂಬರ ಹೂವು&lt;/div&gt;&lt;br /&gt;&lt;div align="justify"&gt;ದಂಡೆ - ಒತ್ತೊತ್ತಾಗಿ ಪೋಣಿಸಿದ ಸಣ್ಣ ಹೂವಿನ ಮಾಲೆ&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6035880729059442700-7677306023307181647?l=madhu-vana.blogspot.com' alt='' /&gt;&lt;/div&gt;</content><link rel='replies' type='application/atom+xml' href='http://madhu-vana.blogspot.com/feeds/7677306023307181647/comments/default' title='Post Comments'/><link rel='replies' type='text/html' href='http://www.blogger.com/comment.g?blogID=6035880729059442700&amp;postID=7677306023307181647' title='4 Comments'/><link rel='edit' type='application/atom+xml' href='http://www.blogger.com/feeds/6035880729059442700/posts/default/7677306023307181647'/><link rel='self' type='application/atom+xml' href='http://www.blogger.com/feeds/6035880729059442700/posts/default/7677306023307181647'/><link rel='alternate' type='text/html' href='http://madhu-vana.blogspot.com/2008/01/blog-post_31.html' title='ಅಬ್ಬಲಿಗೆ ದಂಡೆ'/><author><name>madhusoodan hegde</name><uri>https://profiles.google.com/100225260496018088516</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='32' src='//lh5.googleusercontent.com/-TCvzGHxx8GQ/AAAAAAAAAAI/AAAAAAAAAAA/UjJ_MlZqm3w/s512-c/photo.jpg'/></author><thr:total>4</thr:total></entry><entry><id>tag:blogger.com,1999:blog-6035880729059442700.post-5361275488387808076</id><published>2008-01-29T13:59:00.000-08:00</published><updated>2008-01-29T18:57:07.903-08:00</updated><title type='text'>ಶ್ವಾನಪುರಾಣ</title><content type='html'>&lt;div align="justify"&gt;ದೇರಾಜೆಯವರ ಬ್ಲಾಗಲ್ಲಿ "ಮುಮ್ಮಡಿ ಟಾಮಿಯ ಸ್ಮರಣೆ’ ಲೇಖನ ನೋಡಿದಾಗ ಯಾಕೋ ನಮ್ಮನೆ "ಗ್ರೇಸಿ" ಯ ಬಗ್ಗೆ ಬರೆಯದೇ ಇರಲು ಆಗಲಿಲ್ಲ ನನಗೆ.&lt;br /&gt;&lt;br /&gt;ಪೂರ್ಣಚಂದ್ರ ತೇಜಸ್ವಿಯವರು ಎಲ್ಲೋ ಹೇಳಿದ್ದ ನೆನಪು " ಮಲೆನಾಡಿನ ಗಂಡಸರಿಗೆಲ್ಲಾ ನಾಯಿ ಸಾಕೋದು ಒಂದು ತರ ತೆವಲು" ಅಂತ. ಬಹಳಷ್ಟು ಸಲ ಅದು ನಿಜ ಅನ್ನಿಸಿದ್ದಿದೆ. ಆದರೆ ನಾನು ಇದ್ದ ಪರಿಸರದಲ್ಲಿ, ಅರ್ಧ ಕಿಲೋಮೀಟರ್ ಸುತ್ತಳತೆಯಲ್ಲಿ ಒಂಟಿಭೂತದ ತರ ನಿಂತ ನಮ್ಮನೆಗೆ ನಾಯಿ ಅತ್ಯವಶ್ಯಕವಾಗಿತ್ತು. ದೊಡ್ಡ ಮನೆಯ ಯಾವುದೋ ಕೋಣೆಯಲ್ಲೋ, ಹಿತ್ತಿಲಿನ ತುದಿಯಲ್ಲೋ ಇರುತ್ತಿದ್ದ ನಮ್ಮನ್ನು, ಮನೆಗೆ ಯಾರು ಬಂದರೂ ಎಚ್ಚರಿಸಲು, ಅಗಾಗ ತೆಂಗಿನಕಾಯಿ ಕದಿಯಲು ಬರುತ್ತಿದ್ದ ಕಳ್ಳರನ್ನು ಓಡಿಸಲು ನಾಯಿಗಳು ತುಂಬಾ ಸಹಾಯಕವಾಗಿದ್ದವು. ಈ ಹಲವಾರು ವರ್ಷಗಳಲ್ಲಿ ನಮ್ಮ ಮನೆಯಲ್ಲಿ ಇದ್ದು ಸತ್ತುಹೋದ ನಾಯಿಗಳನ್ನು ನೆನಪಿಸಿಕೊಂಡರೆ, ಬರೆದಷ್ಟೂ ಸಾಲುವುದಿಲ್ಲ.&lt;br /&gt;&lt;br /&gt;ಹೊಸ ಜಾಗದಲ್ಲಿ ಮನೆ ಕಟ್ಟಿ ವರುಷವಾಗುವುದರೊಳಗೇ, ಮುಂಡಿಗೇಸರದವರ ಗದ್ದೆ ಕಾಯಲು ಬರುತ್ತಿದ್ದ ಗೌಡ ಎಲ್ಲಿಂದಲೋ ತಂದುಕೊಂಡಿದ್ದ ಕೆಂಪು ನಾಯಿ, ನಾವು ಕೊಡುವ ದೋಸೆಯ ಆಸೆಗೆ ಮೊದ ಮೊದಲು ಬಂದು ಹೋಗಿ ಮಾಡುತ್ತಿದ್ದದ್ದು, ಕ್ರಮಕ್ರಮೇಣ ಪೂರ್ತಿಯಾಗಿ ನಮ್ಮ ಮನೆಯಲ್ಲೇ ಠಿಕಾಣಿ ಹೂಡಿ ಬಿಡ್ತು. ಅಪ್ಪ ಅದಕ್ಕೆ ಹೆಸರೇನಂದು ಇಡಲು ತೋಚದೇ "ಶ್ವಾನಪ್ಪಾ" ಅಂತ ಕರೀತಿದ್ರು. ನಮ್ಮ ಮನೆಯ ಕಾವಲು ಕಾಯ್ದ ಮೊದಲ ನಾಯಿ ಅದು. ಆಗ ನಾನು, ಅಕ್ಕ ತುಂಬ ಚಿಕ್ಕವರಿದ್ದೆವು. ಅಮ್ಮ ನಮಗೆ ಕೊಟ್ಟ ದೋಸೆಯಲ್ಲಿ ಅರ್ಧ ಶ್ವಾನಪ್ಪನಿಗೆ ಕೊಟ್ಟು ನಾವು ಕೃತಾರ್ಥರಾಗುತ್ತಿದ್ದೆವು. ವರ್ಷಗಟ್ಟಳೇ ಅಲ್ಲೇ ಒಡಾಡಿಕೊಂಡು ಇದ್ದ ಶ್ವಾನಪ್ಪ ಒಂದು ದಿನ ಮಾತ್ರ ನಾಪತ್ತೆ. ಅದಕ್ಕೆ ಏನು ಆಯಿತೆಂಬುದು ನಮಗೆ ಗೊತ್ತೇ ಆಗಲಿಲ್ಲ. ನನಗೆ, ಅಕ್ಕನಿಗೆ ಸ್ವಲ್ಪ ನಿರಾಶೆಯಾದರೂ, ಅಪ್ಪ ಇನ್ನೊಂದು ನಾಯಿಮರಿ ತಗೊಂಡುಬಂದರಾಯ್ತು ಅಂತ ಸಮಾಧಾನ ಮಾಡಿದಾಗ ಖುಶಿಯಾಗಿತ್ತು.&lt;br /&gt;&lt;br /&gt;ವಾರದೊಳಗೇ ಅಪ್ಪ ಹೀಪನಳ್ಳಿ ಈರನ ಮನೆಯಿಂದ ೨ ತಿಂಗಳ ಕಪ್ಪು ಮೈಯ, ಬಿಳಿ ಬಿಳಿ ಚುಕ್ಕಿಯಿದ್ದ ನಾಯಿಮರಿಯನ್ನು ತಂದರು. ನಾವು ಅಧಿಕೃತವಾಗಿ "ರಾಜು" ಅಂತ ನಾಯಿಮರಿಗೆ ನಾಮಕರಣ ಮಾಡಿದೆವು. ಕಂತ್ರಿನಾಯಿಯಾಗಿದ್ದರೂ ರಾಜು ಬಹಳ ಚುರುಕಾಗಿತ್ತು. ಆದರೆ ಬೆಳೆದಂತೆಲ್ಲಾ ಅದರ ನಿಯತ್ತು ಸ್ವಲ್ಪ ಕಮ್ಮಿ ಎಂದು ತಿಳಿದುಕೊಳ್ಳಲು ಅಪ್ಪ ಅಮ್ಮನಿಗೆ ಬಹಳ ದಿನ ಬೇಕಾಗಲಿಲ್ಲ. ಕಟ್ಟಿ ಹಾಕಿದ ಸರಪಳಿಯನ್ನು ಎಳೆದೂ ಎಳೆದು ಗಂಟು ಮಾಡಿ ಸಿಕ್ಕಾಪಟ್ಟೆ ಗಲಾಟೆ ಎಬ್ಬಿಸುತ್ತಿದ್ದ ಅದು, ಅದರ ಕಾಟ ತಡೆಯಲಾಗದೇ ಅಮ್ಮ ಸರಪಳಿ ಬಿಚ್ಚಿದ ಕೂಡಲೇ, ನಾಗಾಲೋಟದಲ್ಲಿ ಒಡಿ ಪರಾರಿಯಾಗುತ್ತಿತ್ತು. ಅಗಾಗ ಸಿಗುತ್ತಿದ್ದ ದೋಸೆಯ ಆಸೆಗೆ ಅದು ಶಂಕರಣ್ಣನ ಮನೆಗೆ ಹೋಗುತ್ತಿದೆ ಅಂದು ತಿಳಿದುಕೊಳ್ಳಲು ಬಹಳ ಕಷ್ಟವಾಗಲಿಲ್ಲ . ನಾವು ಶಾಲೆಗೆ ಹೋಗುವ ದಾರಿಯಲ್ಲೇ ಶಂಕರಣ್ಣನ ಮನೆ ಇರುತ್ತಿದ್ದರಿಂದ, ನಮ್ಮನ್ನು ಕಂಡ ಕೂಡಲೆ ರಾಜು, ಬಾಲ ಆಡಿಸಿಕೊಂಡು ಬರುತ್ತಿತ್ತು. ರಾತ್ರಿಯೇನಾದರೂ ಕಟ್ಟಿ ಹಾಕಿದರೆ, ಇಡೀ ರಾತ್ರಿ ತಾರಕ ಸ್ವರದಲ್ಲಿ ಊಳಿಟ್ಟು, ನಮ್ಮ ನಿದ್ದೆಯನ್ನೆಲ್ಲ ಹಾಳುಮಾಡುತ್ತಿದ್ದ ರಾಜುವಿನ ಬಗ್ಗೆ ನಮಗೆ ಅಷ್ಟೊಂದೇನೂ ಪ್ರೀತಿ ಉಳಿದಿರಲಿಲ್ಲ. ಎರಡು ಹೊತ್ತಿನ ಊಟದ ಹೊತ್ತಿಗೆ ಮಾತ್ರ, ಮನೆಗೆ ತಪ್ಪದೇ ಹಾಜರಾಗಿ ಎನಾದ್ರೂ ತಿನ್ನಲು ಸಿಗುತ್ತದೆಯೋ ಎಂದು ಕಾಯುತ್ತಿದ್ದ ರಾಜುವನ್ನು ನಂಬಿ ಒಂಟಿ ಮನೆಯಲ್ಲಿ ಇರಲು ಅಮ್ಮ ಸುತಾರಂ ಒಪ್ಪಲಿಲ್ಲ. ಇದೇ ಸಮಯದಲ್ಲಿ ಊರಲ್ಲಿ ಒಂದೆರಡು ಕಳ್ಳತನದ ಘಟನೆಗಳೂ ಹೆಚ್ಚಿದ್ದರಿಂದ, ಅಮ್ಮ ಸಹಜವಾಗಿ ಇನ್ನೊಂದು ನಾಯಿ ತರಲು ಅಪ್ಪನ ಮೇಲೆ ಒತ್ತಡ ತರತೊಡಗಿದರು.&lt;br /&gt;&lt;br /&gt;ಮುಂದೆ ಸುಮಾರು ೪ ವರ್ಷಗಳ ಕಾಲ, ನಮ್ಮ ಮನೆಯಲ್ಲಿ ತಂದ ಯಾವುದೇ ನಾಯಿಗಳು ಬಹಳ ದಿನ ಬಾಳಲಿಲ್ಲ. ಒಂದೆರಡು ಒಳ್ಳೇ ಜಾತಿಯ ನಾಯಿಮರಿಗಳನ್ನು ಅಪ್ಪ ಕಷ್ಟಪಟ್ಟು ಹುಡುಕಿ ತಂದರೂ, ಆಗಾಗ ಮನೆಗೆ ಬರುತ್ತಿದ್ದ ರಾಜು ಅವುಗಳನ್ನ ಕಚ್ಚಿ ಸಾಯಿಸಿಬಿಡುತ್ತಿತ್ತು. ಕೆಲವು ನಾಯಿಗಳು ಮನೆಯ ಹತ್ತಿರವೇ ಇದ್ದ ರಸ್ತೆಯಲ್ಲಿ, ಬಸ್ಸುಗಳ ಅಡಿಗೆ ಸಿಲುಕಿ ಸತ್ತು ಹೋದವು. ಇನ್ನೂ ಕೆಲವು ಉಣುಗುಗಳ ಕಾಟ ತಡೆಯಲಾರದೇ ಸತ್ತು ಹೋದವು. ನನಗಂತೂ ಹೀಗೆ ಸತ್ತ ನಾಯಿಮರಿಗಳ ಲೆಕ್ಕವೇ ಈಗ ಸಿಗುತ್ತಿಲ್ಲ. ಟಾಮಿ, ಜೂಲಿ, ಪಿಂಕಿ, ಪಾಂಡು, ಟೈಗರ್‍, ಪಕ್ಕಿ, ಅಬ್ಬಬ್ಬಾ ಎಷ್ಟೊಂದಿವೆ!.&lt;br /&gt;&lt;br /&gt;ಚಿಕ್ಕವನಿದ್ದಾಗ ನಮ್ಮ ಆಟದ ಬಹಳಷ್ಟು ಭಾಗ ಈ ನಾಯಿಗಳೊಂದಿಗೇ ಕಳೆಯುತ್ತಿತ್ತು. ಸ್ವಲ್ಪ ತುಂಟನಾಗಿದ್ದ ನಾನು ಅವುಗಳ ಕಿವಿ ಹಿಡಿದು ಎಳೆದೋ, ಬಾಲ ಹಿಡಿದು ಎಳೆದೋ ತೊಂದರೆ ಕೊಡುತ್ತಿದ್ದೆ. ಹಾಗಾಗ
